ಚಾಮರಾಜನಗರ : ರಾಮಸಮುದ್ರ ಗ್ರಾಮದಲ್ಲಿ ಇಂದು ಯುಗಾದಿ ಹಬ್ಬದ ಪ್ರಯುಕ್ತ ಮಂಟೇಸ್ವಾಮಿ ಕೊಂಡೋತ್ಸವವು ವಿಜೃಂಭಣೆಯಿಂದ ಜರುಗಿತು.
ರಾಮಸಮುದ್ರದ ದುರ್ಗೀಗುಡಿ ಬೀದಿಯಲ್ಲಿರುವ ಮಂಟೇಸ್ವಾಮಿ ದೇವಾಲಯದ ಮುಂಭಾಗ ಸೋಮವಾರ ಮುಂಜಾನೆ 6 ಗಂಟೆಯಲ್ಲಿ ಕೊಂಡೋತ್ಸವ ನಡೆಯಿತು.
ಗದಗದಲ್ಲಿ ಸಮಾನತೆ ರಥಯಾತ್ರೆ, ಸಮಾನತೆ ಬುತ್ತಿ ಕಾರ್ಯಕ್ರಮಕ್ಕೆ ಸಿದ್ದತೆ
ಯುಗಾದಿ ಹಬ್ಬದ ರಾತ್ರಿ ಭಾನುವಾರ ರಾತ್ರಿ 11 ಗಂಟೆಯಲ್ಲಿ ಮಂಟೇಸ್ವಾಮಿ ಒಕ್ಕಲಿನವರು ಸಂಗ್ರಹಿಸಿದ್ದ ಮರದ ಕಟ್ಟಿಗೆಗಳಿಗೆ ಪೂಜೆ ಸಲ್ಲಿಸಿ ಕೊಂಡಕ್ಕೆ ಸಿದ್ದತೆ ನಡೆಸಿ ಭಕ್ತಿಯಿಂದ ಪೂಜೆ ಸಲ್ಲಿಸಿ ಬೆಂಕಿ ಹಚ್ಚಿದರು. ಮುಂಜಾನೆಯವರಿಗೂ ಉರಿಯಿತು. ಬಳಿಕ ಮಂಟೇಸ್ವಾಮಿ ಗುಡ್ಡರು ಕೆಂಡಕ್ಕೆ ಸೋಮವಾರ ನಸುಕಿನ ಜಾವ ಭಕ್ತಿಭಾವದಿಂದ ಪೂಜೆ ಸಲ್ಲಿಸಿ ಮುಂಗಾರು ಮಳೆ ಉತ್ತಮವಾಗಿ ರೈತಾಪಿ ವರ್ಗಕ್ಕೆ ಒಳಿತಾಗಲಿ ಎಂದು ಹರಸಿ ಕೊಂಡೋತ್ಸವದಲ್ಲಿ ಪಾಲ್ಗೊಂಡರು.
ಮಂಟೇಸ್ವಾಮಿ ಕೊಂಡೋತ್ಸವದಲ್ಲಿ ಗ್ರಾಮದ ನೂರಾರು ಭಕ್ತರು ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.