ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡಾನೆಗಳ ಹಾವಳಿ ಮಾಮೂಲು. ಇದೀಗ ಹುಲಿರಾಯನ ಕಾಟ ಶುರುವಾಗಿದೆ. ಇಷ್ಟು ದಿನ ಕಾಡಿನಲ್ಲಿ ಓಡಾಡಿಕೊಂಡಿ ವ್ಯಾಘ್ರ್ಯರಾಜ ಹುಲಿಗೆ ಕಾಡು ಜೀವ ಜೀವ ಸಾಕಾಗಿ ಬೇಕಾಯ್ತಾ ನಾಡಿನ ನಂಟು ಎಂಬ ಸ್ಥಳೀಯರಲ್ಲಿ ಕೇಳಿ ಬರ್ತಿದೆ.
ಹೌದು, ದೇಶದಲ್ಲಿಯೇ ಹೆಚ್ಚು ಹುಲಿ ವಾಸಸ್ಥಾನ ಎಂಬ ಪ್ರಸಿದ್ದಿ ಪಡೆದಿರುವ ಚಾಮರಾಜನಗರ ಜಿಲ್ಲೆ ಹೆಸರು ಉಳಿಸಲು ಬಂತಾ ಹುಲಿ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ. ಚಾಮರಾಜನಗರ ಪಟ್ಟಣದ ಕಾಳನಹುಂಡಿ ಸಮೀಪದ ಕಟ್ಟೆಪುರದ ಎಸ್ ಪಿ ಕೆ ತೋಟ ಹಾಗೂ ಎಸ್ಪಿಎಸ್ ತೋಟ ಮಧ್ಯದಲ್ಲಿ ಭಾರಿ ಗಾತ್ರದ ಹುಲಿಯೊಂದು ಓಡಿ ಹೋಗಿರೋದನ್ನ ಗ್ರಾಮಸ್ಥರು ಕಣ್ಣಾರೆ ನೋಡಿದ್ದಾರಂತೆ.
ಕಳೆದ ಹಲವು ದಿನಗಳಿಂದಲೂ ಚಾಮರಾಜನಗರ ಜಿಲ್ಲಾ ಕೇಂದ್ರದ ಐದಾರು ಕಿಲೋಮಿಟರ್ ಹತ್ತಿರದ ಪ್ರದೇಶದಲ್ಲಿಯೇ ಭಾರಿ ಗಾತ್ರದ ಹುಲಿ ಬೀಡು ಬಿಟ್ಟಿದೆ. ಸುತ್ತಮುತ್ತಲಿನ ಜಮೀನುಗಳಲ್ಲಿ ಜಾನುವಾರುಗಳನ್ನು ತಿಂದು ಹಳ್ಳ ಹಾಗೂ ಪೊದೆಗಳಲ್ಲಿ ಅವಿತು ಕುಳಿತಿದೆಯಂತೆ. ಒಂದು ವರ್ಷದಿಂದಲೂ ಕೂಡ ಚಾಮರಾಜನಗರ ಜಿಲ್ಲಾಸ್ಪತ್ರೆ ಸಿಮ್ಸ್ ಸುತ್ತಾಮುತ್ತಾ ಕಾಣಿಸಿಕೊಂಡು ಜಾನುವಾರುಗಳನ್ನು ಕೊಂದು ರೈತರಲ್ಲಿ ಆತಂಕ ಮೂಡಿಸಿದ್ದ ಹುಲಿರಾಯ, ಇದೀಗ ಕಾಳನಹುಂಡಿ ಸಮೀಪ ಬೀಡುಬಿಟ್ಟಿದೆ.
ಹುಲಿ ಬೀಡುಬಿಟ್ಟಿದ್ದರಿಂದ ಈ ಭಾಗದ ರೈತರು ಬಾಳೆ, ಕಬ್ಬು, ಮುಸುಕಿಮ ಜೋಳ ಕೃಷಿಗೆ ಹೋಗಲು ಬೆದರುವಂತಾಗಿದೆ. ಮಂಗಳವಾರ ಮುಂಜಾನೆ ಹುಲಿ ಕಂಡು ರೈತರು ಹೌಹಾರಿದ್ದಾರೆ.
ಸ್ಥಳೀಯರ ಮುಂದೆನೆ ಭಾರಿ ಗಾತ್ರದ ಹುಲಿಯು ಶರವೇಗದಲ್ಲಿ ಸಂಚರಿಸುವ ಮೂಲಕ ಭಯ ಮೂಡಿಸಿದೆ. ಶರವೇಗದಲ್ಲಿ ಹುಲಿ ಸಂಚರಿಸುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.
ವಿಷಯ ತಿಳಿಸಿದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರಂರೆ. ಆದರೆ ಅನಾಹುತ ಸಂಭವಿಸುವ ಮುನ್ನಾ ಹುಲಿಯನ್ನು ಸೆರೆ ಹಿಡಿಯುಂತೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.