ಚಿಕ್ಕಮಗಳೂರು:– ಇಲ್ಲಿನ ಕಲ್ಲತ್ತಿಗಿರಿಯಲ್ಲಿ ಭಾರೀ ಗಾಳಿಗೆ ಅನಾಹುತವೊಂದು ಸಂಭವಿಸಿದೆ. ಭಾರೀ ಗಾಳಿಗೆ ಬೃಹದಾಕಾರದ ಮರ ಧರೆಗುರುಳಿದಿದೆ. ಘಟನೆಯಲ್ಲಿ ಆಟೋ ಹಾಗೂ ಕಾರು ಜಖಂಗೊಂಡಿದೆ.
ಆಟೋ ಹಾಗೂ ಕಾರಿನಲ್ಲಿದ್ದವರು ಅದೃಷ್ಟವಶಾತ್ ಜೀವಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಚಾಲಕ ತರೀಕೆರೆ ತಾಲೂಕಿನ ಗೇರಮರಡಿ ಮೂಲದವರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ದಾವಣಗೆರೆ ಮೂಲಪಾರಾಗಿದ್ದಾರೆ ಎನ್ನಲಾಗಿದೆ.