ಚಿತ್ರದುರ್ಗ:- ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ನಡೆದಿದೆ. ಹೆರಿಗೆ ಆದ ಕೆಲವೇ ಕ್ಷಣದಲ್ಲಿ ಹೆಣ್ಣು ಮಗು ಸಾವನ್ನಪ್ಪಿದ್ದು, ಸತ್ತ ಮಗುವಿನ ಮುಖವನ್ನು ಹೆತ್ತ ತಾಯಿಗೆ ಎಂಟು ದಿನ ಕಳೆದರೂ ತೋರಿಸಿಲ್ಲ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಮಗು ಸಾವಿನ ಕುರಿತು ಮಗುವಿನ ಪೋಷಕರಲ್ಲಿ ಬಾರಿ ಅನುಮಾನ ಮೂಡಿದ್ದು, ವೈಧ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾಳಗೊಂಡನಹಳ್ಳಿ ನಿವಾಸಿ ಸಾಲಮ್ಮ ಎಂಬ ಮಹಿಳೆ ಕಳೆದ ಎಂಟು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗು ಮೃತಪಟ್ಟಿದ್ದು, ಜೀವಂತ ಮಗು ಕೊಡಿ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಎಂಟು ದಿನಗಳಿಂದ ಮಗು ಎಲ್ಲಿದೆ, ಹೇಗಿದೆ ಎಂದು ವೈಧ್ಯರು ತೋರಿಸಿಲ್ವಂತೆ. ಡಾ. ಉಮಾ ಹಾಗೂ ಆಸ್ಪತ್ರೆ ಅಧಿಕಾರಿಗಳ ವಿರುದ್ದ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಆಸ್ಪತ್ರೆಗೆ ದಾಖಲಾಗಿ 30 ಗಂಟೆಗೆ ವೈದ್ಯರು ಹೆರಿಗೆ ಮಾಡಿಸಿದ್ದರು. ಅದಾದ ಬಳಿಕ ಮಗು ಮೃತಪಟ್ಟಿದೆ. ಇದೀಗ ಡಾ.ಉಮಾ ಅವರ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ನ್ಯಾಯ ಸಿಗುವವರೆಗೂ ಮಗು ಬೇಡ ಎಂದು ಪೋಷಕರು ಒತ್ತಾಯ ಮಾಡಿದ್ದಾರೆ.