ಬೆಂಗಳೂರು ಗ್ರಾಮಾಂತರ: ರೈಲ್ವೆ ಸ್ಟೆಷನ್ ಗೆ ತೆರಳುತ್ತಿದ್ದ ವ್ಯಕ್ತಿ ಪಾಳು ಬಾವಿಗೆ ಬಿದ್ದು ಪರದಾಟ ನಡೆಸಿದ ಘಟನೆ ಯಲಹಂಕ ತಾಲೂಕಿನ ರಾಜನುಕುಂಟೆ ಸಮೀಪ ನಡೆದಿದೆ. ಕೊಪ್ಪಳ ಮೂಲದ ಶಿವರಾಜ್ ಪೂಜಾರ್ (28) ಪಾಳು ಬಾವಿಗೆ ಬಿದ್ದ ವ್ಯಕ್ತಿಯಾಗಿದ್ದು,
ರೈಲ್ವೆ ಸ್ಟೇಷನ್ ಹಿಂಭಾಗದಿಂದ ಕಾಲುದಾರಿಯಲ್ಲಿ ಸ್ಟೆಷನ್ ಬಳಿ ಬರುತ್ತಿರುವ ವೇಳೆ ಪಾಳು ಬಾವಿ ನೋಡರೆ ಒಳಗೆ ಬಿದ್ದಿದ್ದಾನೆ. ಪಾಳು ಬಾವಿಗೆ ಬಿದ್ದವನ ಕಂಡು ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು,
ಬಿಳಿ ಕೂದಲು ಬುಡದಿಂದಲೇ ಕಡು ಕಪ್ಪಾಗ್ಬೇಕಾ!? ಈ ಹಣ್ಣಿನ ಗಿಡದ ಎಲೆಯನ್ನು ನೀರಲ್ಲಿ ಕುದಿಸಿ ತಲೆಗೆ ಹಚ್ಚಿ ಸಾಕು!
ಸ್ಥಳಕ್ಕೆ ದೊಡ್ಡಬಳ್ಳಾಪುರ ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಪಾಳುಬಾವಿಗೆ ಬಿದ್ದಿದ್ದ ಶಿವರಾಜ್ ಪೂಜಾರ್ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನೀಕರ ಮೆಚ್ಚುಗೆ ವ್ಯಕ್ತವಾಗಿದೆ.