ಕೊಪ್ಪಳ:- ಹಾಡಹಗಲೇ ವ್ಯಕ್ತಿಯೋರ್ವನನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವೆಂಕಟಗಿರಿ ಬಳಿ ಜರುಗಿದೆ.
ಆರ್ ಸಿಬಿ ವೇಗಿ ವಿರುದ್ಧ ಕೇಳಿಬಂತು ಗಂಭೀರ ಆರೋಪ: ದೈಹಿಕ ಕಿರುಕುಳದ ದೂರುಕೊಟ್ಟ ಮಹಿಳೆ!
ಗಂಗಾವತಿ ತಾಲೂಕಿನ ವಿಠ್ಠಲಾಪೂರ ಗ್ರಾಮದ ನಿವಾಸಿ 32 ವರ್ಷದ ಯುವಕ ನಾಗರಾಜ್ ಈರಪ್ಪ ಬೂದನೂರ ಕೊಲೆಯಾದ ಯುವಕ. ವೆಂಕಟಗಿರಿ ಜಮೀನೊಂದರಲ್ಲಿ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ. ಅನೈತಿಕ ಸಂಬಂದಿಂದ ಬೇಸತ್ತು ಹನುಮಂತ ಹಾಗೂ ಸಿದ್ದರಾಮೇಶ್ ಎಂಬುವರಿಂದ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.
ಹನುಮಂತನ ಹೆಂಡತಿಯೊಂದಿಗೆ ನಾಗರಾಜ್ ಅನೈತಿಕ ಸಂಭಂದ ಹೊಂದಿದ್ದ. ಎರಡು ಮೂರು ಬಾರಿ ಕನಕಗಿರಿ ಪೊಲೀಸ್ ಠಾಣೆಯಲ್ಲಿ ರಾಜಿಯಾದರೂ ಮಾತು ಕೇಳದ ಹಿನ್ನಲೆ ಕೊಲೆ ಮಾಡಲಾಗಿದೆ.
ಕೊಲೆ ಮಾಡಿ ಕನಕಗಿರಿ ಪೊಲೀಸ್ ಠಾಣೆಗೆ ಹನುಮಂತ ಶರಣಾಗಿದ್ದಾನೆ. ಇನ್ನೋರ್ವ ಆರೋಪಿ ಸಿದ್ದರಾಮೇಶ್ ನಾಪತ್ತೆ ಆಗಆಗಿದ್ದ ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮೀಣ ಪೊಲೀಸರು ಆರೋಪಿಗಾಗಿ ತಲಾಶ್ ನಡೆಸಿದ್ದಾರೆ.