ಬೆಂಗಳೂರು:- ಕಾರ್ಯಕ್ರಮಕ್ಕೆ ಅಂತಾ ಹೋದ ಯುವಕ ಕೇರಳದ ಕೊಳದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಜರುಗಿದೆ. ಬೆಂಗಳೂರಿನ ಡಿ.ಜೆ.ಹಳ್ಳಿ ಮೂಲದ ಫೈಸಾನ್ (22) ಮೃತ ಯುವಕ..
ಕೆಆರ್ ಪುರದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ!
ಮಾಲಿಕ್ ದಿನಾರ್ ಮಸೀದಿಯಲ್ಲಿ ನಡೆದ ಸಿಯಾರತ್ ಕಾರ್ಯಕ್ರಮದಲ್ಲಿ ಮೃತ ಯುವಕ ಭಾಗಿಯಾಗಿದ್ದ. ಕೊಳದಲ್ಲಿ ಸ್ನಾನ ಮಾಡುವಾಗ ಮೃತನ ಸ್ನೇಹಿತ ಮುಳುಗಿದ್ದ. ಆತನನ್ನ ರಕ್ಷಣೆ ಮಾಡಲು ಹೋಗಿ ಸಾವನ್ನಪ್ಪಿರುವ ಘಟನೆ ಜರುಗಿದೆ. ಸ್ಥಳೀಯ ಆಸ್ಪತ್ರೆಗೆ ಮೃತದೇಹ ರವಾನಿಸಿ ಕುಟುಂಬಸ್ಥರಿಗೆ ಮಾಹಿತಿ ರವಾನೆ ಮಾಡಲಾಗಿದೆ.
ಸ್ಥಳೀಯ ಪೊಲೀಸ್ರಿಂದ ಬೆಂಗಳೂರಿನಲ್ಲಿರುವ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.