ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪುಡಿರೌಡಿಗಳನ್ನ ಬಿಟ್ಟು ಕಾಂಗ್ರೆಸ್ ಮುಖಂಡನೋರ್ವ ದಾಂದಲೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ಮುಖಂಡ ಧನಂಜಯ್ ಸೇರಿ ಹಲವರ ಮೇಲೆ ದೂರು ನೀಡಲಾಗಿದ್ದು, ವಿದ್ಯಾರಣ್ಯ ಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಕಳೆದ ಬಾರಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ನಿಂದ ಧನಂಜಯ ಸ್ಪರ್ದೆ ಮಾಡಿದ್ದ. ದಾಂದಲೆಗೆ ಶಾಲೆಯ ಕಿಟಕಿ ಬಾಗಿಲು ಸಿಸಿ ಕ್ಯಾಮರಾಗಳು ದ್ವಂಸ ಮಾಡಿದ್ದಾರೆ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಶಾರದಾ ವಿದ್ಯಾ ನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ಘಟನೆ ಜರುಗಿದೆ.
ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ ಈ ಘಟನೆ ಜರುಗಿದೆ. ಶಾರದ ಸ್ಕೂಲ್ ಪಕ್ಕದಲ್ಲೆ ಇರೊ ದನಂಜಯ್ ಮಾಲಿಕತ್ವದ NPS ಸ್ಕೂಲ್ ಇದಾಗಿದೆ. ಆದ್ರೆ NPS ಶಾಲೆ ನಡೆಸಲು ಇತ್ತೀಚೆಗೆ ಕಾನೂನಿನ ತೊಡಕಾಗಿತ್ತು. ಈ ಹಿನ್ನಲೆ ಶಾರದಾ ವಿದ್ಯಾನಿಕೇತನ ಸ್ಕೂಲ್ ಮೇಲೆ ದನಂಜಯ್ ಕಣ್ಣು ಹಾಕಿದ್ದ. ಶಾರದ ವಿದ್ಯಾನಿಕೇತನ ಸೊಸೈಟಿಗೆ ಜಾಗವನ್ನ ಸರ್ಕಾರ ಲೀಸ್ ಗೆ ಕೊಟ್ಟಿತ್ತು. ಆದ್ರೆ ಈಗ ಅದೇ ಸೊಸೈಟಿಗೆ ದನಂಜಯ್ ಅಧ್ಯಕ್ಷರಾಗಿದ್ದಾರೆ. ಶಾರದ ವಿದ್ಯಾನಿಕೇತನ ಸ್ಕೂಲ್ ಗೆ 2033 ರ ವರೆಗೂ ಲೀಸ್ ಅವದಿಯಿದೆ.
ಹಾಗಿದ್ರು ಶಾಲೆಯನ್ನ ಅತಿಕ್ರಮಣ ಮಾಡಲು ದನಂಜಯ್ ಸಂಚು ಹಾಕಿರುವ ಆರೋಪ ಕೇಳಿ ಬಂದಿದೆ. ಯಾವುದೆ ತೆರವು ಮಾಡದಂತೆ ಕೋರ್ಟ್ ಸ್ಟೇ ಇದ್ರೂ ಕೂಡ ದನಂಜಯೇ ಕೇರ್ ಮಾಡಿಲ್ಲ. ಇದೇ ತಿಂಗಳ 2 ನೇ ತಾರೀಖು ಕೂಡ ದನಂಜಯ್ ಹುಡುಗರ ಜೊತೆ ಬಂದು ಗಲಾಟೆ ಮಾಡಿದ್ದ ಆರೋಪ ಕೇಳಿ ಬಂದಿದೆ. ಆಗಲೂ ದನಂಜಯ್ ಮೇಲೆ ವಿಧ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನ್ನ ಪ್ರಭಾವವನ್ನು ಬಳಸಿ ನಿನ್ನೆ ಮತ್ತೆ ದೊಡ್ಡ ಮಟ್ಟದಲ್ಲಿ ದಾಂದಲೆ ನಡೆಸಿದ್ದಾನೆ. ಶಾಲೆಯಲ್ಲಿದ್ದ ಮಕ್ಕಳ ದಾಖಲೆ,ಹಣ ಸೇರಿ ಇನ್ನಿತರ ವಸ್ತುಗಳನ್ನು ಪುಂಡರ ಗ್ಯಾಂಗ್ ಕದ್ದೋಯ್ದಿದೆ. ದನಂಜಯ್ ಮಾಲಿಕತ್ವದ ಶಾಲೆ ಕಾಂಪೌಂಡ್ ಜಿಗಿದು ಬಂದು ಪುಂಡರು ದಾಂದಲೆ ನಡೆಸಿದ್ದಾರೆ.
ಘಟನೆ ಕುರಿತು ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.