ಸ್ಯಾಂಡಲ್ವುಡ್ ನಟಿ ಅರ್ಚನಾ ಕೊಟ್ಟಿಗೆ ಸ್ಟಾರ್ ಕ್ರಿಕೆಟರ್ ಶರತ್ ಬಿಆರ್ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ. ಎಂಟು ವರ್ಷದ ಪ್ರೀತಿಗೆ ಈ ಜೋಡಿ ಇಂದು ಮದುವೆ ಮುದ್ರೆ ಒತ್ತಿದೆ. ಕನಕಪುರ ರೋಡ್ ಖಾಸಗಿ ರೆಸಾರ್ಟ್ ವೊಂದರಲ್ಲಿ ಅರ್ಚನಾ-ಶರತ್ ಕಲ್ಯಾಣೋತ್ಸವ ನಡೆದಿದೆ.
ನಿನ್ನೆ ರಾತ್ರಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ಕನ್ನಡ ಚಿತ್ರರಂಗದ ತಾರೆಯರು ಹಾಗೂ ಕ್ರಿಕೆಟರ್ ಗಳು ಈ ನವ ಜೋಡಿಗೆ ಶುಭ ಹಾರೈಸಿದ್ದಾರೆ. ರಿಸೆಪ್ಷನ್ಗೆ ಸುದೀಪ್ ಪುತ್ರಿ ಸಾನ್ವಿ ಸುದೀಪ್, ನಟಿ ಹಿತಾ ದಂಪತಿ , ಸಾನ್ಯಾ ಅಯ್ಯರ್, ಸಪ್ತಮಿ ಗೌಡ, ಆಶಿಕಾ ರಂಗನಾಥ್, ಅಮೃತಾ ಅಯ್ಯಂಗರ್, ಯುವರಾಜ್ ಕುಮಾರ್ ಸೇರಿದಂತೆ ಅನೇಕ ನಟ, ನಟಿಯರು, ಭಾಗಿಯಾಗಿದ್ದಾರೆ. ಕ್ರಿಕೆಟರ್ ಗಳಾದ ದೇದವತ್ ಪಡಿಕಲ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಹಲವರು ಅರ್ಚನಾ ಶರತ್ ಆರತಕ್ಷತೆಯಲ್ಲಿ ಭಾಗಿಯಾಗಿ ನಟ ಜೋಡಿಗೆ ಶುಭ ಹಾರೈಸಿದ್ದಾರೆ.
ಶರತ್ ಹಿನ್ನೆಲೆ!
ಶರತ್ ಅವರು 2018ರಲ್ಲಿ ಕೋಲ್ಕತ್ತಾದಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ಪರ ಟ್ವೆಂಟಿ20 ಪಂದ್ಯಕ್ಕೆ ಶರತ್ ಪಾದಾರ್ಪಣೆ ಮಾಡಿದರು. ಶರತ್ ಬಲಗೈ ಬ್ಯಾಟ್ಸ್ಮನ್ ಆಗಿದ್ದು, ಭಾರತೀಯ ದೇಶೀಯ ಕ್ರಿಕೆಟ್ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.
ಅರ್ಚನಾ ಸಿನಿಮಾಗಳು
ಅರ್ಚನಾ ಡಿಯರ್ ಸತ್ಯʼ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ʻಹೊಂದಿಸಿ ಬರೆಯಿರಿʼ, ʻಶಬರಿ ಸರ್ಚಿಂಗ್ ರಾವಣʼ, ʻರಾಕ್ಷಸʼ, ʻಅಲಂಕಾರ್ ವಿದ್ಯಾರ್ಥಿʼ, ʻಟ್ರಿಪಲ್ ರೈಡಿಂಗ್ʼ, ʻಅರಣ್ಯ ಕಾಂಡʼ, ʻಫಾರೆಸ್ಟ್ʼ, ʻಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸೇರಿ ಸುಮಾರು ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಪ್ರೀತಿಸಿ ಕೈ ಹಿಡಿದ ಜೋಡಿ!
ಅರ್ಚನಾ ಕೊಟ್ಟಿಗೆ ಮತ್ತು ಶರತ್ ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಅರ್ಚನಾಗೆ ಶರತ್ ಕಾಲೇಜಿನಿಲ್ಲಿ ಸೀನಿಯರ್ ಆಗಿದ್ದರು. 2018ರಲ್ಲಿ, ಸ್ನೇಹಿತನ ಮೂಲಕ ಭೇಟಿಯಾದ ಈ ಜೋಡಿಗೆ ಮೊದಲ ಭೇಟಿಯಲ್ಲಿ ಪ್ರೀತಿ ಹುಟ್ಟಿತ್ತು. ಎಂಟು ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇಷ್ಟು ವರ್ಷಗಳ ಪ್ರೀತಿಗೆ ಇದೀಗೆ ಮದುವೆಯ ಮುದ್ರೆ ಒತ್ತಿದ್ದಾರೆ.