Close Menu
Ain Live News
    Facebook X (Twitter) Instagram YouTube
    Friday, June 27
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಎಲ್ಲಾ ಓಕೆ.. ಕಾರು ತೆರವು ಮಾಡದೇ ರಸ್ತೆ ಕಾಮಗಾರಿ ಬೇಕಿತ್ತಾ!? ಇದೆಂಥಾ ನಿರ್ಲಕ್ಷ್ಯ ಮರ್ರೆ!

    By AIN AuthorApril 17, 2025
    Share
    Facebook Twitter LinkedIn Pinterest Email
    Demo

    ಆಂಧ್ರಪ್ರದೇಶ:- ಗುತ್ತಿಗೆದಾರನೊಬ್ಬ ಪಾರ್ಕ್ ಮಾಡಲಾದ ಕಾರನ್ನು ತೆರವುಗೊಳಿಸದೇ ಅದಕ್ಕೂ ಸೇರಿ ಕಾಂಕ್ರಿಟ್ ಹಾಕಿಕೊಂಡು ರಸ್ತೆ ನಿರ್ಮಾಣ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ಜರುಗಿದೆ.

    ‘ಡೆವಿಲ್’ ಹೆಸರಿನಲ್ಲಿ ಮತ್ತೊಂದು ಸಿನಿಮಾ..ಹೀರೋ ಯಾರು ಗೊತ್ತಾ?

    ಬಾಪಟ್ಲಾ ಜಿಲ್ಲೆಯ ವೆಟಪಾಲೇಂ ಮಂಡಲದ ಅಮೋದಗಿರಿಟಪ್ಣಂ ಎಂಬಲ್ಲಿ ಈ ಘಟನೆ ನಡೆದಿದೆ. ಬುದ್ದಿ ವೆಂಕಟರಮಣ ಎಂಬ ವ್ಯಕ್ತಿ ಮನೆಯ ಮುಂದೆ ನಡೆದಿದೆ. ಬುದ್ದಿ ವೆಂಕಟರಮಣ ಅವರ ಮನೆಯಿಂದ ಚೆನ್ನಮ್ ಸೆಟ್ಟಿ ಸುಬ್ಬರಾಮ್ ಎಂಬವರ ಮನೆಯವರೆಗೆ ದೇಶಾಯಿಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 4.10 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದೆ. ಹೊಸ ರಸ್ತೆ ನಿರ್ಮಾಣ ಮಾಡುವಾಗ ಅಡ್ಡಲಿರುವ ಕಲ್ಲು, ಕಸ, ಕಡ್ಡಿ ವಸ್ತುಗಳನ್ನು ತೆರವುಗೊಳಿಸುವುದು ಗುತ್ತಿಗೆದಾರರ ಮೊದಲ ಜವಾಬ್ದಾರಿಯಾಗಿರುತ್ತದೆ. ಆದರೆ ಇಲ್ಲಿ ಹಾಗಾಗಲಿಲ್ಲ. ಈ ರಸ್ತೆ ನಿರ್ಮಾಣ ಮಾಡುತ್ತಿದ್ದಾಗ ವೆಂಕಟ ರಮಣ ಅವರ ಮನೆ ಮುಂದೆ ಒಂದು ಹಳೆಯ ಕಾರನ್ನು ನಿಲ್ಲಿಸಲಾಗಿತ್ತು. ಇದನ್ನು ರಸ್ತೆ ನಿರ್ಮಾಣ ಮಾಡುವಾಗ ತೆರವುಗೊಳಿಸಲೇ ಇಲ್ಲ. ಗುತ್ತಿಗೆದಾರ ಕಾರನ್ನು ತೆಗೆಯದೇ ಅದಕ್ಕೂ ಸೇರಿ ಕಾಂಕ್ರಿಟ್ ಹಾಕಿಕೊಂಡು ಹೋಗಿದ್ದಾನೆ. ಹೀಗಾಗಿ ಕಾರು ಇದೀಗ ಹೊಸ ರಸ್ತೆಗೆ ಬಲವಾಗಿ ಅಂಟಿಕೊಂಡಿದೆ.

    ಈ ಕುರಿತು ಪಂಚಾಯತ್ ಕಾರ್ಯದರ್ಶಿಯನ್ನು ಪ್ರಶ್ನಿಸಿದಾಗ, “ಕಳೆದ ಒಂದು ವರ್ಷದಿಂದ ಈ ಕಾರು ಅಲ್ಲೇ ನಿಂತಿದೆ. ಕಾರು ತೆಗೆಯುವಂತೆ ಅದರ ಮಾಲೀಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ಬೇರೆ ಆಯ್ಕೆಗಳಿಲ್ಲದೇ, ಗುತ್ತಿಗೆದಾರ ಕಾರಿಗೂ ರಸ್ತೆಗೆ ಕಾಂಕ್ರಿಟ್ ಹಾಕಿದ್ದಾರೆ” ಎಂದು ತಿಳಿಸಿದರು.

    Demo
    Share. Facebook Twitter LinkedIn Email WhatsApp

    Related Posts

    Jagannath Rath Yatra 2025: ಇಂದಿನಿಂದ ವಿಶ್ವಪ್ರಸಿದ್ಧ ಐತಿಹಾಸಿಕ ಪುರಿಯ ಶ್ರೀ ಜಗನ್ನಾಥ ರಥಯಾತ್ರೆ ಪ್ರಾರಂಭ..!

    June 27, 2025

    ಇನ್ಮುಂದೆ ಭಾರತದಲ್ಲಿ ಈ ಕಂಪನಿಯ ಫ್ರಿಡ್ಜ್, ವಾಷಿಂಗ್ ಮಿಷನ್ ಬ್ಯಾನ್..!

    June 27, 2025

    Donald Trump: ಭಾರತದೊಂದಿಗೆ ದೊಡ್ಡ ಡೀಲ್: ವ್ಯಾಪಾರ ಒಪ್ಪಂದದ ಬಗ್ಗೆ ಟ್ರಂಪ್ ಸುಳಿವು

    June 27, 2025

    ಮಗಳ ಮೇಲೆ ಅತ್ಯಾಚಾರ: ಮಲತಂದೆಯಿಂದಲೇ ನಡೆಯಿತು ಘನಘೋರ ಕೃತ್ಯ!

    June 27, 2025

    ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್​​ನಲ್ಲಿ ಕೊಳೆತ ಶವ ಪತ್ತೆ!

    June 27, 2025

    UPI ಬಳಕೆದಾರರಿಗೆ ಗಮನಿಸಿ: ಜುಲೈ 15 ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

    June 27, 2025

    Shubhanshu Shukla: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲಾ..!

    June 26, 2025

    Supreme Court: ಆರೋಪಿಗೆ ಜಾಮೀನು: ಬಿಡುಗಡೆ ಮಾಡದ ಸರ್ಕಾರಕ್ಕೆ ‘ಸುಪ್ರೀಂ’ ದಂಡ

    June 26, 2025

    Shubhanshu Shukla: ನಡೆಯಲು ಕಲಿಯುತ್ತಿರುವ ಮಗುವಿನಂತೆ.. ಬಾಹ್ಯಾಕಾಶದಲ್ಲಿರುವ ಶುಭಾಂಶು ಶುಕ್ಲಾ ಕಳುಹಿಸಿದ ಮೊದಲ ಸಂದೇಶ!

    June 26, 2025

    ಬಾಹ್ಯಾಕಾಶದಲ್ಲಿ ʼಬೀಜ ಮೊಳಕೆʼ ಅಧ್ಯಯನಕ್ಕೆ ನಾಂದಿ ಹಾಡಿದ ಧಾರವಾಡ: ಸಚಿವ ಪ್ರಲ್ಹಾದ ಜೋಶಿ

    June 26, 2025

    Bus Falls Into River: ಅಲಕನಂದಾ ನದಿಗೆ ಬಿದ್ದ ಬಸ್: ಓರ್ವ ಸಾವು..! ಹಲವರು ನಾಪತ್ತೆ

    June 26, 2025

    Indian railways: RAC, ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲ್ವೆ ಇಲಾಖೆಯಿಂದ ಭಾರೀ ಬದಲಾವಣೆ

    June 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.