ಬೆಂಗಳೂರು:- ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಟೀಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಳಿ ಕೂದಲು ಕಪ್ಪಾಗಬೇಕಾ!? ಹಾಗಿದ್ರೆ ರಾತ್ರಿ ಮಲಗುವ ಮುನ್ನ ಈ ಎಣ್ಣೆ ಹಚ್ಚಿ.. ಆಮೇಲೆ ನೋಡಿ ಚಮತ್ಕಾರ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಾನು ಡರ್ಟಿ ಪಾಲಿಟಿಕ್ಸ್ ಎಂದೂ ಮಾತಾಡಲ್ಲ.. ನನ್ನ ರಾಜೀನಾಮೆ ಕೇಳೋಕೆ ನಾನೇನು ಕ್ರೈಂ ಮಾಡಿದ್ದೀನಿ? ಎಂದು ಪ್ರಶ್ನಿಸಿದರು. ನನ್ನ ರಾಜೀನಾಮೆ ಕೇಳ್ತಿದ್ದಾರೆ, ಅವರ ಆಸೆ ಈಡೇರಿಸೊಣ. ನಾನು ಹೆಣದ ಮೇಲೆ ರಾಜಕೀಯ ಮಾಡಲ್ಲ. ನಾನು ಆರ್ಸಿಬಿ ಆಟಗಾರರನ್ನು ಕನ್ನಡ ಧ್ವಜ ಕೊಟ್ಟು ವೆಲ್ ಕಮ್ ಮಾಡಿದ್ದೇನೆ. ಇದರಲ್ಲಿ ನಾನೇನು ಕ್ರೈಂ ಮಾಡಿದ್ದೇನೆ ಎಂದು ಪ್ರಶ್ನಿಸಿದ್ದಾರೆ.
ಅವರು ಹೋಗೋದಕ್ಕೂ ಕೂಡ ಜಾಗ ಇರಲಿಲ್ಲ. ಅವರನ್ನ ನಾನು ಕಾರಿನಲ್ಲಿ ಕೂರಿಸಿಕೊಂಡು ಹೋದೆ. ಇನ್ನು ದುರಂತದ ಬಗ್ಗೆ ಮಾಧ್ಯದವರು ಹೇಳಿದ ಬಳಿಕವೇ ನಮಗೆ ಗೊತ್ತಾಯ್ತು. ಸದನದಲ್ಲಿ ಎಲ್ಲವೂ ಬರಲಿದೆ. ಡಾ. ರಾಜ್ ಕುಮಾರ್ ಮೃತಪಟ್ಟಾಗ ಏನಾಯ್ತು ಅಂತ ಗೊತ್ತಿದೆ ಎಂದು ಹೆಚ್.ಡಿ ಕುಮಾರಸ್ವಾಮಿಯವರಿಗೆ ಕುಟುಕಿದ್ದಾರೆ.
ನಾನು ಡರ್ಟಿ ಪಾಲಿಟಿಕ್ಸ್ ಮಾತಾಡಲ್ಲ. ಯಾರೇ ಮಾಡಿದರೂ ಕೂಡ ಸರ್ಕಾರ ಜವಬ್ದಾರಿ ತೆಗೆದುಕೊಳ್ಳುತ್ತದೆ. ಇದು ನಮ್ಮ ಮನೆಯ ನೋವಾಗಿದೆ. ಒಂದು ತಾಯಿ ಹೇಳ್ತಾರೆ, ಪೋಸ್ಟ್ ಮಾರ್ಟಮ್ ಮಾಡಬೇಡಿ ಅಂತ, ಎಷ್ಟು ಹೊಟ್ಟೆ ಉರಿಯಬೇಕು ಅಲ್ವ? ರಾಜಕೀಯ ಮಾಡೋದು ಬೇಡ ಎಂದಿದ್ದಾರೆ.