ನಂಜನಗೂಡು : ರೈತರೊಬ್ಬರಿಗೆ ಕಳಪೆ ಗುಣಮಟ್ಟದ ಎಲೆಕೋಸು ಪೈರು ಮಾರಿ ಪಂಗನಾಮ ಹಾಕಿದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ರಾಂಪುರ ಗ್ರಾಮದ ನಾಗೇಶ್ವರ ಹೈಟೆಕ್ ನರ್ಸರಿ ಮಾಲೀಕನಿಂದ ಖರೀದಿಸಿದ ಪೈರು ಫಸಲು ನೀಡದೆ ನೆಲಕಚ್ಚಿದೆ.ಲಕ್ಷಾಂತರ ಸಾಲ ಮಾಡಿ ನಷ್ಟ ಅನುಭವಿಸಿದ ರೈತ ಕಂಗಾಲಾಗಿದ್ದಾನೆ.ನರ್ಸರಿ ಮಾಲೀಕನ ವಂಚನೆಗೆ ಬೇಸತ್ತ ರೈತ ಆತ್ಮಹತ್ಯೆಗೆ ನಿರ್ಧರಿಸಿದ್ದಾನೆ.
ಚಾಮರಾಜನಗರ ಮೂಲದ ಗುರುಕಾರಪ್ಪ ಎಂಬುವರು ಹುಲ್ಲಹಳ್ಳಿಯಲ್ಲಿ ಜಮೀನು ಭೋಗ್ಯಪಡೆದು ಎಲೆಕೋಸು ಪೈರು ಹಾಕಿದ್ದಾರೆ.ರಾಂಪುರ ಗ್ರಾಮದ ಬಳಿ ಇರುವ ನಾಗೇಶ್ವರ ಹೈಟೆಕ್ ನರ್ಸರಿಯಿಂದ ಖರೀದಿಸಿದ ಪೈರನ್ನ ಹಾಕಿದಾಗ ನಿಗದಿತ ಅವಧಿಯಲ್ಲಿ ಬೆಳೆ ಬಂದಿಲ್ಲ.ಸುಮಾರು ಮೂರು ತಿಂಗಳಿಗೆ ಬರಬೇಕಿದ್ದ ಬೆಳೆ 5 ತಿಂಗಳಾದ್ರೂ ಬಂದಿಲ್ಲ. ಕಳಪೆಗುಣಮಟ್ಟದ ಪೈರು ನೀಡಿದ್ದಾರೆಂದು ಗುರುಕಾರಪ್ಪ ಆರೋಪಿಸಿದ್ದು,
500 Note Update: ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್
ಈ ಬಗ್ಗೆ ನರ್ಸರಿ ಮಾಲೀಕನ ಬಳಿ ನ್ಯಾಯ ಕೇಳಿದಾಗ ಉಡಾಫೆಯಿಂದ ಮಾತನಾಡಿ ಕಳಿಸಿದ್ದಾನೆ.ಸಧ್ಯ ಕಳಪೆ ಗುಣಮಟ್ಟದ ಪೈರಿನಿಂದ ಉಂಟಾದ ನಷ್ಟಕ್ಕೆ ಕಂಗಾಲಾದ ರೈತ ಆತ್ಮಹತ್ಯೆಯೇ ದಾರಿ ಎಂದು ಅಳಲು ತೋಡಿಕೊಂಡಿದ್ದಾರೆ. ಮಾಹಿತಿ ಅರಿತ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ರೈತನ ಜಮೀನಿಗೆ ಭೇಟಿ ನೀಡಿ ನರ್ಸರಿ ಮಾಲೀಕನ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿ ಸರ್ಕಾರದಿಂದ ದೊರೆಯಬಹುದಾದ ಪರಿಹಾರ ನೀಡುವ ಬಗ್ಗೆ ಅಭಯ ನೀಡಿ ಗುರುಕಾರಪ್ಪರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ..