ಹುಬ್ಬಳ್ಳಿ: ಕಾರ್ಮಿಕರು ನಮ್ಮ ಜೀವನಾಡಿ ಅವರ ನೋವು ನಲಿವುಗಳಿಗೆ ನಾನು ಹಾಗೂ ನಮ್ಮ ಸಂಸ್ಥೆ ಸದಾ ಸ್ಪಂದನೆ ಮಾಡುವುದಾಗಿ ವಿ.ಎ.ಕೆ.ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಕಾಟವೆ ಭರವಸೆ ನೀಡಿದರು.ಹುಬ್ಬಳ್ಳಿ ಸಮೀಪದ ಬೈರಿದೇವರಕೊಪ್ಪದ ಸದಾಶಿವಾನಂದ ಕಲ್ಯಾಣ ಮಂಟಪದಲ್ಲಿ ಸೇವಕ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ( ನೋಂದಾಯಿತ) ಹಾಗೂ ತೇಜಸ್ಸು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಂಸ್ಥಾಪನಾ ದಿನಾಚರಣೆ, ಸ್ಮರಣೆ ಸಂಚಿಕೆ ಬಿಡುಗಡೆ ಹಾಗೂ ಕಾರ್ಮಿಕರ ಮಕ್ಕಳಿಗೆ ಶಾಲಾ ಬ್ಯಾಗ್ , ನೋಟ್ ಪುಸ್ತಕ, ಶಾಲಾ ಸಾಮಾಗ್ರಿಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು,
ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ
ಕಾರ್ಮಿಕ ವರ್ಗ ಹಾಗೂ ಅವರ ಕುಟುಂಬದ ಶ್ರೇಯಸ್ಸಿಗಾಗಿ ಹಕ್ಕು ಭಾಧ್ಯತೆಗಾಗಿ ಗಣೇಶ ರಾಶಿನಕರ ಮತ್ತು ಅವರ ಸಹೋದ್ಯೋಗಿಗಳು ಶ್ರಮಿಸುತ್ತಿದ್ದಾರೆ ಎಂದರು. ವಕೀಲ ಅಶೋಕ ಬಡಿಗೇರ, ಸಾಮಾಜಿಕ ಕಾರ್ಯಕರ್ತರಾದ ರಮೇಶ ಮಹಾದೇವಪ್ಪನವರ, ಸಂತೋಷ ವೇರ್ಣೇಕರ, ಡಾ. ಸುಬ್ಬಾಸ ಬಬ್ರುವಾಡ, ಶಿವಶಂಕರ ಐಹೊಳಿ, ತುಷಾರ ಬದ್ದಿ ಮಾತನಾಡಿದರು.
ಇದೇ ಸಂದರ್ಭದಲ್ಲಿಕಾರ್ಮಿಕರ ಮಕ್ಕಳಿಗೆ ಶಾಲಾ ಬ್ಯಾಗ್ , ನೋಟ್ ಪುಸ್ತಕ, ಶಾಲಾ ಸಾಮಾಗ್ರಿಗಳ ವಿತರಣೆಯನ್ನ ವೆಂಕಟೇಶ ಕಾಟವೆ ಮಾಡಿದರು. ಸಂಘದ ಅಧ್ಯಕ್ಷ ಗಣೇಶ ರಾಶಿನಕರ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಮಿಕರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕಾರ್ಮಿಕ ಕಾರ್ಡ್ ನೋಂದಾವಣೆ ಅದರ ಮಹತ್ವ ಹಾಗೂ ಪ್ರಯೋಜನ ಕುರಿತು ತಿಳುವಳಿಕೆ ನೀಡಿದರು. ಸ್ವಾಗತ ರಾಮಚಂದ್ರ ಹದಗಲ್ಲ, ಕಾರ್ಯಕ್ರಮ ನಿರೂಪಣೆ ಚನ್ನಬಸಪ್ಪ ಕುಬುಸದ, ಶಾಮಸುಂದರ ಉತ್ತರಕರ್ ವಂದನಾರ್ಪಣೆ ಮಾಡಿದರು.