ಕಲಬುರಗಿ:- ಇಸ್ರೇಲ್- ಇರಾನ್ ಯುದ್ದ ವಿಚಾರವಾಗಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಯಾವ ದೇಶಗಳ ಮಧ್ಯೆಯೂ ಯುದ್ದ ಒಳ್ಳೆಯದಲ್ಲ. ಯಾರು ಯಾರ ಮೇಲೂ ಯುದ್ದ ಮಾಡಬಾರದು. ಎಂಥದ್ದೆ ಸಮಸ್ಯೆ ಇರಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಯುದ್ದ ಮಾಡಿ ಎಲ್ಲಾ ನಾಶ ಆದ್ರೆ ಎಲ್ಲಿ ಬದುಕಿತ್ತಿರಿ.? ಅಮೇರಿಕಾ ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು. ಈ ಹಿಂದಿನಿಂದಲೂ ನಮ್ಮ ಜೊತೆ ಇರಾನ್ ಒಳ್ಳೆಯ ಸಂಬಂಧ ಹೊಂದಿದೆ.
ತೈಲ ಆಮದು ಸೇರಿದಂತೆ ಒಳ್ಳಯ ಸಂಬಂಧ ಹೊಂದಿದೆ. ಭಾರತ- ಪಾಕಿಸ್ತಾನ ಯುದ್ದ ವೇಳೆ ಎಲ್ಲರೂ ಒಂದಾಗಿ ಅಂದ್ರು. ಕಾಶ್ಮೀರದಿಂದ- ಕನ್ಯಾಕುಮಾರಿಯವರೆಗೂ ಒಂದಾಗಿದ್ದೆವು. ಆದ್ರೆ ಮೋದಿಯವರೇ ಸರ್ವಪಕ್ಷ ಸಭೆಗೆ ಬರಲಿಲ್ಲ. ಇದೇನು ತೋರಿಸುತ್ತೆ ಅಂದ್ರೆ ಮೋದಿಯವರ ಅಹಾಂಕರ ತೋರಿಸುತ್ತೆ.ಎಲ್ಲರೂ ಒಂದಾಗಿರೋ ಸಂದೇಶ ಕೊಟ್ರೆ ಒಳ್ಳೆಯದು. ಆದ್ರೆ ಅವರೇ ಕರೆದ ಸಭೆಗೆ ಮೋದಿನೇ ಬರೋದಿಲ್ಲ. ಇಡೀ ವಿಶ್ವಕ್ಕೆ ಬುದ್ದನ ಶಾಂತಿ ಬೇಕು..? ಯುದ್ದ ಬೇಕಾಗಿಲ್ಲ.
ಮಹಾರಾಷ್ಟ್ರ ಚುನಾವಣೆಯ ಬಗ್ಗೆ ನಾವ ಆವಗಲೇ ಹೇಳಿದ್ದೆವು. ಅಲ್ಲಿ ಪಾರದರ್ಶಕ ಚುನಾವಣೆ ಆಗಿಲ್ಲ ಅಂತ. ಅದನ್ನೆ ರಾಹುಲ್ ಪ್ರಶ್ನೆ ಮಾಡ್ತಿದ್ದಾರೆ ಎಂದರು.
ರಾಜ್ಯದಲ್ಲಿ ಶಾಸಕರ ಅಸಮಾಧಾನ ವಿಚಾರದ ಪ್ರತಿಕ್ರಿಯೆ ನಿಡೋಕೆ ಖರ್ಗೆ ನಿರಾಕರಿಸಿದರು. ರಾಜ್ಯ ನಾಯಕರನ್ನೆ ಕೇಳಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.