ಹಾವೇರಿ : ಆಕಸ್ಮಿಕವಾಗಿ ಬೆಂಕಿ ತಗುಲಿ ಎಂಟು ಮೇವಿನ ಬಣವೆಗಳು ಸುಟ್ಟು ಕರಕಲಾಗಿದ್ದು, ನಾಲ್ಕು ಮನೆಗಳು ಹಾಗೂ ಕೃಷಿಉಪಕರಣಗಳು ಹಾನಿಗೊಳಗಾಗಿವೆ. ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಈ ಅವಘಡ ನಡೆದಿದೆ.
ನಾಗಪ್ಪ ಮಣ್ಣೂರು, ಪುಟ್ಟಪ್ಪ, ಚನ್ನಪ್ಪ ದೊಡ್ಡ ನಿಂಗಪ್ಪ ಕಡೆಮನಿ, ಬಸಪ್ಪ ಬರಮಪ್ಪ ಮಣ್ಣೂರ ಮತ್ತು ಮುತ್ತಣ್ಣ ಎಂಬ ರೈತರಿಗೆ ಸೇರಿದ ಮೇವಿನ ಬಣವೆಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ಮೇವಿನ ಬಣವೆಗಳ ಸಮೀಪದಲ್ಲಿಯೇ ಇದ್ದ ಮನೆಗಳಿಗೆ ಬೆಂಕಿ ಆವರಿಸಿ ಸಾಕಷ್ಟು ಹಾನಿ ಸಂಭವಿಸಿದೆ.
ಮೊದಲಿಗೆ ಮೇವಿನ ಬಣವೆಗಳಿಗೆ ಬೆಂಕಿ ತಗಲಿದ್ದು, ನಂತರ ಪಕ್ಕದಲ್ಲೇ ಇದ್ದ ರೈತರ ಮನೆಗಳಿಗೂ ಬೆಂಕಿ ವ್ಯಾಪಿಸಿದೆ.