ಬೆಂಗಳೂರು: ಇಂದು ಅಣ್ಣಾವ್ರ19ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೊ ಬಳಿ ಕುಟುಂಬಸ್ಥರು, ಅಭಿಮಾನಿಗಳು ಡಾ ರಾಜ್ ಸಮಾಧಿಗೆ ಹೋಗಿ ನಮನ ಸಲ್ಲಿಸುತ್ತಿದ್ದಾರೆ. ಇನ್ನೂ ಡಾ ರಾಜ್ ಕುಮಾರ್ ಮಕ್ಕಳಾದ ಶಿವರಾಜ್ ಕುಮಾರ್ ಅವರ ಕುಟುಂಬ, ರಾಘವೇಂದ್ರ ರಾಜ್ ಕುಮಾರ್ ಅವರ ಮಕ್ಕಳು, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಜರಿದ್ದರು.
ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಶಿವಣ್ಣ ಮಾತನಾಡಿ,ಒಂದು ಬಾರಿ ಹಚ್ಚೆ ಹಾಕಿಸಿಕೊಂಡ್ರೆ ಹೇಗೆ ಹೋಗೋದಿಲ್ಲೋ ಹಾಗೇ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಹೋಗಲ್ಲ. ಅಪ್ಪಾಜಿ ಮಾಡಿರೋ ಕಲಾ ಸೇವೆಯಿಂದ ಇವತ್ತಿಗೂ ಅಭಿಮಾನ ಹಾಗೆ ಉಳಿಸಿಕೊಂಡಿದೆ.
ನೀವು ಸ್ವಿಮಿಂಗ್ ಮಾಡುತ್ತೀರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ..!
ರಾಜಕೀಯವಾಗಿ ಯೋಚಿಸದೇ ಗೋಕಾಕ್ ಚಳುವಳಿಯಲ್ಲಿ ಅಪ್ಪಾಜಿ ಭಾಗವಹಿಸಿದ್ದರು. ಸದಾ ನೆಲ, ಜಲ, ಭಾಷೆ ಅಂತಾ ಬಂದಾಗ ಅವರು ಮುಂದೆ ಇರೋರು. ಅದಕ್ಕೂ ದೇವರ ಕೃಪೆ ಬೇಕು. ಇಂತಹ ತಂದೆಗೆ ನಾವು ಮಕ್ಕಳಾಗಿರೋದು ಹೆಮ್ಮೆ ಅನಿಸುತ್ತದೆ.
ಈ ಚಿಕ್ಕ ಮಕ್ಕಳನ್ನ ಕೇಳಿದ್ರು ರಾಜ್ಕುಮಾರ್ ಯಾರು ಅಂತಾ ಹೇಳುತ್ತಾರೆ. ಅಪ್ಪಾಜಿ ಪಾಠದ ಹಾಗೆ ಅಭಿಮಾನ ಜಾಸ್ತಿ ಆಗುತ್ತೆ ಹೊರತು ಎಂದಿಗೂ ಕಮ್ಮಿಯಾಗಲ್ಲ. ಇಂದು ಸಂಬಂಧಗಳು ಗಟ್ಟಿಯಾಗಿ ಉಳಿದಿದೆ ಅಂದರೆ ಅಪ್ಪಾಜಿ ಸಿನಿಮಾಗಳೇ ಕಾರಣ ಎಂದಿದ್ದಾರೆ.