ದಾವಣಗೆರೆ : ಇತ್ತೀಚಿಗಷ್ಟೇ ದಾವಣಗೆರೆ ಪೊಲೀಸರು ನ್ಯಾಮತಿಯ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಿದ್ದು, ಕೋಟಿಗಟ್ಟಲೇ ಚಿನ್ನ ಪತ್ತೆ ಹಚ್ಚಿದ್ದರು. ಇದೀಗ ಇದಾದ ಕೆಲವೇ ದಿನಗಳಲ್ಲೇ ದಾವಣಗೆರೆ ಪೊಲೀಸರಿಗೆ ಮತ್ತೊಂದು ಚಾಲೆಂಜ್ ಎದುರಾಗಿದೆ.
ಬಂಗಾರದ ಅಂಗಡಿಯಲ್ಲಿ ಕಳ್ಳಿಯರ ಕೈಚಳಕ ತೋರಿದ್ದು, ಬಂಗಾದ ಅಂಗಡಿಗೆ ಬೆಳ್ಳಿ ಲೋಟ ಖರೀದಿಸಲು ಬಂದವರು ಒಂದು ಕೋಟಿ ಮೌಲ್ಯದ ಬಂಗಾರ ಕದೊಯ್ದಿದ್ದಾರೆ. ದಾವಣಗೆರೆಯ ಮಂಡಿ ಪೇಟೆಯಲ್ಲಿರುವ ರವಿ ಜ್ಯುವೆಲ್ಲರಿ ಶಾಪ್ನಲ್ಲಿ ಘಟನೆ ನಡೆದಿದೆ.
ಲೋನ್ ರಿಜೆಕ್ಟ್ಗೆ ಸೇಡು, ವೆಬ್ ಸಿರೀಸ್ ನೋಡಿ ದರೋಡೆ ಪ್ಲಾನ್ ; ನ್ಯಾಮತಿ ಬ್ಯಾಂಕ್ ದರೋಡೆ ಕಥೆ ಇದು..
ಐದು ಜನರ ತಂಡವೊಂದು ಅಂಗಡಿಗೆ ಬೆಳ್ಳಿ ಲೋಟ ಕೇಳಿಕೊಂಡು ಬಂದಿದೆ. ಈ ವೇಳೆ ಕೆಲಸಗಾರ ಗಮನ ಬೇರೆಡೆಗೆ ಸೆಳೆದು 1. 13 ಕೋಟಿ ಮೌಲ್ಯದ 1 ಕೆಜಿ 400 ಗ್ರಾಂ ಬಂಗಾರದ ಆಭರಣಗಳನ್ನು ಎಗರಿಸಿದ್ದಾರೆ. ಕೆಲಸದವರು ಬೆಳ್ಳಿ ಲೋಟ ತೋರಿಸುವ ವೇಳೆ ಬಂಗಾರದ ಆಭರಣ ಇರುವ ಬಾಕ್ಸ್ ನ್ನೇ ಕದಿದ್ದಾರೆ..ಈ ಕಳ್ಳಿಯ ಕೈಚಳಕ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ವಿಡಿಯೋ ಆಧರಿಸಿ ಕಳ್ಳಿಯರಿಗೆ ಬಲೆ ಬೀಸಿದ್ದಾರೆ.