ಬೆಂಗಳೂರು: ಹೆತ್ತು ಹೊತ್ತು ಸಾಕಿದ ತಾಯಿಯನ್ನೇ ಪಾಪಿ ಮಗನೊಬ್ಬ ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಬಗಲಗುಂಟೆಯ ಮುನೇಶ್ವರ ನಗರದಲ್ಲಿ ಜರುಗಿದೆ.
ಶಾಂತಬಾಯಿ (82) ಮೃತ ವೃದ್ದ ತಾಯಿ. ಮಹೆಂದ್ರ ಸಿಂಗ್ ಎಂಬಾತ ತಾಯಿ ಕೊಂದ ಪಾಪಿ ಮಗ. ತಾಯಿ ಜೊತೆಯಲ್ಲೇ ವಾಸವಿದ್ದ ಆರೋಪಿ ಮಹೇಂದ್ರ ಸಿಂಗ್, ಕುಡಿತದ ಚಟಕ್ಕೆ ಬಿದ್ದು, ನಿತ್ಯ ಕೆಲಸಕ್ಕಾಗಿ ಅಲೆಯುತ್ತಿದ್ದ. ಅಲ್ಲದೇ ನಿತ್ಯ ಹಣಕ್ಕಾಗಿ ತಾಯಿಯನ್ನು ಹಿಂಸೆ ನೀಡಿ ನಿಂದಿಸುತ್ತಿದ್ದ.
ಆದರೆ ನಿನ್ನೆ ರಾತ್ರಿ ಹಣಕಾಸಿನ ವಿಚಾರಕ್ಕೆ ಜಗಳ ನಡೆದು, ಕಬ್ಬಿಣದ ರಾಡ್ ನಿಂದ ಹೊಡೆದು ತಾಯಿಯನ್ನು ಕೊಲೆಗೈದಿದ್ದಾನೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.