ಬೆಂಗಳೂರು:- ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿಗೆ ಮತ್ತೊಂದು ಆಘಾತ ಎದುರಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಬಿಕಾಂ ವಿದ್ಯಾರ್ಥಿ ಸಿ.ವೇಣು ಎಂಬುವವರು ಆರ್ ಸಿ ಬಿ, ಡಿಎನ್ಎ ಮತ್ತು ಕೆಎಸ್ ಸಿಎ ವಿರುದ್ಧ ದೂರು ನೀಡಿದ್ದಾರೆ. ಆರ್ ಸಿ ಬಿ ಜಾಹೀರಾತು ನೋಡಿ ಕ್ರೀಡಾಂಗಣಕ್ಕೆ ಬಂದಿರೋದಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಉಚಿತ ಟಿಕೆಟ್ ಎಂದು ವೇಣು ಅವರು ಕ್ರೀಡಾಂಗಣ ಬಳಿ ಬಂದಿದ್ದರು. ಗೇಟ್ ನಂಬರ್ 6 ರ ಬಳಿ ನೂಕು ನುಗ್ಗಲು ಉಂಟಾಗಿದೆ.
ಇದರಿಂದಾಗಿ ಬ್ಯಾರಿಕೆಡ್ ವೇಣು ಬಲಗಾಲಿಗೆ ಬಿದ್ದಿದೆ. ಬಲಗಾಲಿಗೆ ಗಾಯವಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿರೋದಾಗಿ ಉಲ್ಲೇಖ ಮಾಡಲಾಗಿದೆ. RCB,DNA ಮತ್ತು KSCA ವಿರುದ್ಧ ಇದುವರೆಗೆ ಒಟ್ಟು ಮೂರು ಎಫ್ಐಆರ್ ದಾಖಲಾಗಿದೆ.