ಬೀದರ್:- ಕಮಲ್ ಹಾಸನ್ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಒಂದು ವಿಷಾದ ವ್ಯಕ್ತಪಡಿಸಿದ್ರೆ ನಿಮ್ಮ ತಾತನ ಮನೆ ಗಂಟು ಹೋಗಲ್ಲಾ. ನಮ್ಮ ಅಪ್ಪನ ಮನೆ ಆಸ್ತಿನು ಬರಲ್ಲಾ ಎಂದು ಟಾಂಗ್ ನೀಡಿದರು. ನಾನು ಮಂತ್ರಿಯಾಗಿ ನಿನ್ನಗೆ ಕ್ಷೆಮೆ ಕೇಳಲು ಒಂದು ಮನವಿ ಮಾಡತ್ತಿನಿ. ನೀವು ಗಣತಂತ್ರ ರಾಜ್ಯಗಳಲ್ಲಿ ಇದ್ದು ಈ ರೀತಿ ನೀವು ಉಡಾಪೆಯಾಗಿ ಮಾತನಾಡೋದು ಸರಿಯಲ್ಲ. ನಿಮ್ಮಗೂ 70 ವಯಸ್ಸಾಗಿದೆ ಅರಳೊ ಮರಳೋ ಆಗಬೇಡಿ. ನೀವು ಮಾಡಿದ ಸಣ್ಣ ಅಪಚಾರಕ್ಕೆ ವಿಷಾದ ವ್ಯಕ್ತಪಡಿಸಿ.
ವಿಷಾದ ವ್ಯಕ್ತಪಡಿಸಿದ್ರೆ ನೀವು ಈ ದೇಶದ ಇತಿಹಾಸದಲ್ಲಿ ಉಳಿರಿ.ಇಲ್ಲಾ ಈ ದೇಶದ ಇತಿಹಾಸದಲ್ಲಿ ನೀವು ಕಳೆದು ಹೋಗತ್ತಿರಾ ಎಂದು ಸೋಮಣ್ಣ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕಮಲ್ ಹಾಸನ್ ಪ್ರತಿಭಾವಂತ ನಟ… ನಮ್ಮ ತಾಯಿ ಕನ್ನಡ, ನಮ್ಮ ಉಸಿರು ಕನ್ನಡ. ಹಾಗಾಂತ್ತಾ ಬೇರೆ ಭಾಷಿಗಳ ಬಗ್ಗೆ ಕ್ರಿಟಿಸೈಜ್ ಮಾಡಬಾರದು.. ಅವರಿಗೇನಾದ್ರು ಸ್ವಲ್ಪಾದ್ರು ಗಾಂಭೀರ್ಯತೆ ಇದ್ರೆ. ಸಂಸ್ಕಾರ ಗೋತ್ತಿದ್ರೆ, ದೇಶದ ಬಗ್ಗೆ ಗೋತ್ತಿದ್ದರೆ ಕ್ಷೆಮೆ ಕೇಳತ್ತಿರಾ.. ನೀವು ಈ ರೀತಿ ಮಾತನಾಡಿದ್ದು ಸಣ್ಣ ಕೆಲಸವಾಗಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು 50 ವರ್ಷವಾದ್ರು ಕೇಂದ್ರ ಅನುಮತಿ ನೀಡಿರಲಿಲ್ಲಾ ಎಂದು ಬೀದರ್ ನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕಮಲ್ ಹಾಸನ್ ಗೆ ಎಚ್ಚರಿಕೆ ಕೊಟ್ಟಿದ್ದಾರೆ.