ಮನೆಗೆ ಕರೆಯದೇ ಬರುವ ಅತಿಧಿಗಳು ಎಂದರೆ, ಜೆರಳೆಗಳು, ಸೊಳ್ಳೆಗಳು, ಸಣ್ಣ-ಪುಟ್ಟ ಕೀಟಗಳು, ಇರುವೆಗಳು, ಮನೆಯ ಹಂಚಿನಲ್ಲಿ ಅಥವಾ ಕಿಟಕಿ-ಬಾಗಿಲುಗಳ ಮೂಲೆಗಳಲ್ಲಿ ಬಲೆ ಕಟ್ಟಿರುವ ಜೇಡಗಳು, ಗೋಡೆಗಳಲ್ಲಿ ಸರ್ಕಸ್ ಮಾಡುತ್ತಿರುವ ಹಲ್ಲಿಗಳು, ಇವುಗಳೆಲ್ಲಾ ಬೇಡ ಎಂದರೂ ಕೂಡ, ಮನೆಯ ಮೂಲೆ ಮೂಲೆಗಳಲ್ಲಿ ಕಾಣಲು ಸಿಗುತ್ತವೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ, ಮನೆಯಲ್ಲಿ ಆಹಾರ ಪದಾರ್ಥಗಳು, ನೆಲದ ಮೇಲೆ ಹರಡಿರುವುದು,
ಕೊಡಗಿನಲ್ಲಿ ಭಾರೀ ಮಳೆ: ನಾಳೆಯೂ ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ!
ಇಲ್ಲಾಂದ್ರೆ ಮನೆಯ ನೆಲವನ್ನು ಸರಿಯಾಗಿ ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವುದು ಅಥವಾ ಅಡುಗೆಮನೆಯಲ್ಲಿ ಆಹಾರ ಪದಾರ್ಥಗಳನ್ನು ಮಾಡಿದ ಬಳಿಕ ಸರಿಯಾಗಿ ಕಿಚನ್ ಕ್ಲೀನ್ ಮಾಡದೇ ಇರುವುದರಿಂದ ಇಲ್ಲಾಂದ್ರೆ ವಾರದಲ್ಲಿ ಒಮ್ಮೆಯಾದರೂ ಮನೆಯ ಟಿವಿ ಅಥವಾ ಗೋಡೆಯಲ್ಲಿ ನೇತು ಹಾಕಿರುವ ದೇವರ ಫೋಟೋ ಹಿಂದೆ, ಜೇಡರ ಬಲೆಯನ್ನು ತೆಗೆಯದೇ ಇರುವುದರಿಂದ, ಮನೆಯಲ್ಲಿ ಹಲ್ಲಿ ಜೇಡಗಳ ಕಾಟ ಜಾಸ್ತಿ ಆಗಿ ಬಿಡುತ್ತವೆ…
ಮನೆ ಮನೆ ಎಂದ ಮೇಲೆ ಕೀಟಗಳ ಸಮಸ್ಯೆ ಸಾಮಾನ್ಯ. ಆದರೆ ಇದನ್ನು ಸಾಮಾನ್ಯ ಸಮಸ್ಯೆ ಎನ್ನುವಂತಿಲ್ಲ. ಯಾಕೆಂದರೆ ಹಲ್ಲಿಗಳು, ಜಿರಲೆಗಳು ಹೆಚ್ಚಾದಂತೆ ಅಪಾಯ ಕೂಡ ಹೆಚ್ಚಾಗುತ್ತದೆ. ಹಾಗಾಗಿ, ಮನೆಯಲ್ಲಿರಿಸಿದ ಆಹಾರಗಳ ಮೇಲೆ ಇಂತಹ ವಿಷಕಾರಿ ಕೀಟಗಳು ಓಡಾಡುವುದರಿಂದ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ನಾವು ನಮ್ಮ ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ, ಮಳೆಗಾಲದಲ್ಲಿ ಹಲ್ಲಿಗಳು ಮತ್ತು ಜಿರಳೆಗಳಂತಹ ಕೀಟಗಳ ಸಮಸ್ಯೆ ಹೆಚ್ಚಾಗುತ್ತದೆ. ವಿಶೇಷವಾಗಿ ಆರ್ದ್ರತೆ ಹೆಚ್ಚಾದಾಗ, ಜಿರಳೆಗಳು ಮನೆಯ ಮೂಲೆಗಳು, ಅಡುಗೆಮನೆಯ ಸಿಂಕ್ ಮತ್ತು ಸ್ನಾನಗೃಹವನ್ನು ಆಕ್ರಮಿಸುತ್ತವೆ. ಅದರಲ್ಲಿ ಅಡುಗೆಮನೆಯ ಸಿಂಕ್, ಸ್ನಾನಗೃಹವೂ ಸೇರಿರುತ್ತದೆ.
ಇವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲ, ರಾತ್ರಿಯ ವೇಳೆ ಮನೆಯ ಸುತ್ತಲೂ ಓಡಾಡುತ್ತವೆ. ಅದೇ ರೀತಿ, ಗೋಡೆಗಳ ಮೇಲೆ ಮತ್ತು ನೆಲದ ಮೇಲೆ ಹಲ್ಲಿಗಳು ತೆವಳುವುದನ್ನು ನಾವು ಕಾಣಬಹುದು.
ಈ ಕೀಟಗಳನ್ನು ಶಾಶ್ವತವಾಗಿ ದೂರವಿಡಲು ಸರಳವಾದ ಪರಿಹಾರಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನಿಮ್ಮ ನೆಲವನ್ನು ಸ್ವಚ್ಛಗೊಳಿಸುವ ನೀರಿಗೆ ಕೆಲವು ನೈಸರ್ಗಿಕ ಪದಾರ್ಥಗಳನ್ನು ಸೇರಿಸುವ ಮೂಲಕ ಈ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಹುದು
ವಿನೆಗರ್ ಮತ್ತು ಬೇಕಿಂಗ್ ಸೋಡಾ: ನಿಮ್ಮ ಮನೆಯ ನೆಲವನ್ನು ಒರೆಸುವಾಗ, ಒಂದು ಬಕೆಟ್ ನೀರಿಗೆ ಒಂದು ಕಪ್ ವಿನೆಗರ್ ಸೇರಿಸಿ ಮತ್ತು ಅದಕ್ಕೆ ಎರಡು ರಿಂದ ಮೂರು ಚಮಚ ಬೇಕಿಂಗ್ ಸೋಡಾವನ್ನು ಮಿಶ್ರಣ ಮಾಡಿ.
ಈ ದ್ರಾವಣದಿಂದ ನೆಲವನ್ನು ಸ್ವಚ್ಛಗೊಳಿಸಿದರೆ, ಜಿರಳೆಗಳು, ಹಲ್ಲಿಗಳು ಮತ್ತು ಇತರ ಕೀಟಗಳ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಈ ಮಿಶ್ರಣದ ಸುಗಂಧವು ಕೀಟಗಳನ್ನು ಆಕರ್ಷಿಸುವುದಿಲ್ಲ, ಬದಲಿಗೆ ಅವುಗಳನ್ನು ದೂರವಿಡುತ್ತದೆ.
ಉಪ್ಪು ಮತ್ತು ನಿಂಬೆ: ನೆಲವನ್ನು ಒರೆಸಲು ಬಳಸುವ ನೀರಿಗೆ ನಾಲ್ಕು ರಿಂದ ಐದು ಚಮಚ ಉಪ್ಪನ್ನು ಸೇರಿಸಿ, ಎರಡು ನಿಂಬೆಹಣ್ಣುಗಳ ರಸವನ್ನು ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿ. ಈ ದ್ರಾವಣವನ್ನು ನೆಲವನ್ನು ಸ್ವಚ್ಛಗೊಳಿಸಲು ಮಾತ್ರವಲ್ಲ, ಗೋಡೆಗಳು ಮತ್ತು ಪೀಠೋಪಕರಣಗಳನ್ನು ಒರೆಸಲು ಸಹ ಬಳಸಬಹುದು
ಇದು ನಿಮ್ಮ ಕೊಠಡಿಯನ್ನು ಹೊಳೆಯುವಂತೆ ಮಾಡುವುದಷ್ಟೇ ಅಲ್ಲ, ಜಿರಳೆಗಳ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಉಪ್ಪು ಮತ್ತು ನಿಂಬೆಯ ಮಿಶ್ರಣವು ಕೀಟಗಳಿಗೆ ನೈಸರ್ಗಿಕವಾದ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.
ತಂಬಾಕು ಮತ್ತು ಕಾಫಿ ಪುಡಿ: ತಂಬಾಕು ಪುಡಿ ಹಾಗೂ ಕಾಫಿ ಪುಡಿಯನ್ನು ಮಿಶ್ರಣಗೊಳಿಸಿ ಸಣ್ಣ ಪುಟ್ಟ ಮಾತ್ರೆಗಳನ್ನಾಗಿಸಿ, ಇದಕ್ಕೆ ಬೆಂಕಿ ಕಡ್ಡಿಯ ಮದ್ದನ್ನು ಸೇರಿಸಿ ಹಲ್ಲಿಗಳಿರುವ ಸ್ಥಳದಲ್ಲಿರಿಸಿ. ಈ ಮಿಶ್ರಣ ಹಲ್ಲಿಗಳಿಗೆ ಪ್ರಾಣಾಂತಿಕವಾಗಿವೆ.