ಬೀದರ್: ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು ಜುಲೈ 03ನೇ ತಾರೀಖು ಬೀದರ್ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್ ರವರು ತಿಳಿಸಿದ್ದಾರೆ.ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಗೆ ಸಂಬಂಧಿಸಿದಂತೆ ಬೀದರ್ ನಗರದ ಜೆಡಿಎಸ್ ಜಿಲ್ಲಾ ಕಛೇರಿಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜುಲೈ 03ರಂದು ನಿಖಿಲ್ ಕುಮಾರಸ್ವಾಮಿರವರು ಬೀದರ್ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ ಎಂದರು.
ಬೊಜ್ಜಿಗೆ ಮತ್ತೊಂದು ಹೊಸ ಮೆಡಿಸನ್.. ಒಂದೇ ಇಂಜೆಕ್ಷನ್’ನಿಂದ 100 ಕೆಜಿ ತೂಕ ಇಳಿಸಬಹುದು..! ಇದರ ಬೆಲೆ ಎಷ್ಟು?
ಜುಲೈ 03ರಂದು ಬೆಳಗ್ಗೆ 11:30ಕ್ಕೆ ಬೀದರ್ ಉತ್ತರ ವಿಧಾನಸಭಾ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೀದರ್ ನಗರದ ಲಾವಣ್ಯ ಫಂಕ್ಷನ್ ಹಾಲ್ ನಲ್ಲಿ ಹಾಗೂ ಸಂಜೆ 04 ಗಂಟೆಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಎಖೇಳ್ಳಿ ಹೊರವಲಯದಲ್ಲಿರುವ (ಮೀನಕೇರಾ ಕ್ರಾಸ್) ವಿಜಯಲಕ್ಷ್ಮಿ ಫಂಕ್ಷನ್ ಹಾಲ್ ನಲ್ಲಿ ‘ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ’ ನಡೆಯುತ್ತದೆ.
ಅಂದು ನಡೆಯುವ ಸಭೆಗೆ ನಾವು ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಬೇಕು. ಕಾರ್ಯಕ್ರಮದ ಯಶಸ್ವಿಗಾಗಿ ಪಕ್ಷದ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ಶ್ರಮಿಸಿಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲ್ಪೂರ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಡಗೆ, ಜಿಲ್ಲಾ ಚುನಾವಣಾ ಅಧಿಕಾರಿ ಶಿವಪುತ್ರ ಮಾಳಗೆ, ಪ್ರಮುಖರಾದ ಐಲಿಂಜಾನ್ ಮಠಪತಿ, ರಾಜಶೇಖರ್ ಜವಳೆ, ಸಿದ್ರಾಮಪ್ಪ ವಂಕ್ಕೆ, ಶಿವರಾಜ್ ಹುಲಿ, ಸುರೇಶ್ ಸಿಗಿ, ಬಸವರಾಜ್ ಪಾಟೀಲ್ ಹಾರೂರಗೇರಿ, ಸಂಜುರೆಡ್ಡಿ ನಿರ್ಣಾ, ಅಭಿ ಕಾಳೆ, ಸಂಗು ಚಿದ್ರಿ, ರಾಜು ಚಿಂತಾಮಣಿ, ಮನೋಹರ್ ದಂಡಿ, ಬೊಮಗೊಂಡ ಚಿಟ್ಟಾವಾಡಿ, ಪ್ರಶಾಂತ್ ವಿಶ್ವಕರ್ಮ,
ಬಸವರಾಜ ಯರನಹಳ್ಳಿ, ಜಾನ್ಸನ್ ಕಪಲಾಪೂರ, ಸುಭಾಷ್ ಪಾಟೀಲ್, ವಿಕ್ಕಿ ಕಮಲನಗರ, ಗೌತಮ್ ಸಾಗರ್, ತಾನಾಜಿ ತೋರಣೇಕರ್, ಮಲ್ಲಿಕಾರ್ಜುನ ನೆಳ್ಗೆ, ಲಲಿತಾ ಕರಂಜೆ, ಸುಂದರ್ ರಾಜ್ ಮಾಳೆಗಾಂ, ಸುದರ್ಶನ್ ಸುಂದದರಾಜ್, ಬಸವರಾಜ್ ಶಾಹಪೂರೆ, ರವಿಕುಮಾರ್ ಸಿರ್ಸಿ, ಸೂರ್ಯಕಾಂತ್ ದಂಡಿ, ಪ್ರಲಾದ್ ಚಿಟ್ಟವಾಡಿ, ಶಾಂತಮ್ಮ ಕರಕನಹಳ್ಳಿ, ಮಹಮ್ಮದ್ ಮುಜುಬುದ್ದೀನ್, ಮಹಮ್ಮದ್ ತಾಜುದ್ದೀನ್ ಖಾದ್ರಿ, ಅವಿನಾಶ್ ಸಿಂಧೆ, ಗಂಗಮ್ಮ ಪುಲೆ, ಅಭೀದ್ ಹಲಿ, ಲಕ್ಷ್ಮೀ ದಂಡೆ ಸೇರಿದಂತೆ ಅನೇಕರಿದ್ದರು.