ಬೆಳಗಾವಿ: ಹಣಕಾಸಿನ ವ್ಯವಹಾರ ಸಂಬಂಧ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮದ ವಿಠ್ಠಲ ಮಂದಿರದಲ್ಲಿ ಡಬಲ್ ಬ್ಯಾರಲ್ ಗನ್, ಕುಡಗೋಲು, ಡೊಣ್ಣೆಯಿಂದ ರಿಯಲ್ ಎಸ್ಟೇಟ್ ಉದ್ಯಮಿ ಕಾಕತಿ ಗ್ರಾಮದ ರಾಜಶೇಖರ ನಾಯಕ ಎಂಬುವರ ಮೇಲೆ ಹಲ್ಲೆಗೆ ಯತ್ನ ನಡೆದಿದ್ದು, ಹಲ್ಲೆ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಕಾಂಗ್ರೆಸ್ ಅವಧಿಯಲ್ಲಿ ಉಗ್ರರ ವಿರುದ್ಧ ಕ್ರಮ ಯಾಕೆ ಆಗಿಲ್ಲ? – ರವಿಕುಮಾರ್ ಪ್ರಶ್ನೆ!
ಬೆಳಗಾವಿ ತಾಲೂಕಿನ ಹೊಸೂರು ಗ್ರಾಮದ ಲಗಮಾ ಬುಡರಿ, ಕಮಲೇಶ ಬುಡರಿ, ರಾಮಪ್ಪ, ಕಮಲೇಶ ಎಂಬುವವರು ಹಲ್ಲೆಗೆ ಯತ್ನಿಸಿದ್ದಾರೆ. ಉದ್ಯಮಿ ರಾಜಶೇಖರ್ ಎಂಬುವರಿಂದ ಸೈಟ್ ಪಡೆದು ಹಣ ಮರಳಿಸಲು ಲಗಮಾ ಬುಡರಿ ಸತಾಯಿಸುತ್ತಿದ್ದರಂತೆ. ಈ ಬಗ್ಗೆ ರಾಜಶೇಖರ ಹಣ ಕೇಳಲು ಹೋದಾಗ ಗನ್, ದೊಣ್ಣೆಗಳಿಂದ ದಾಳಿಗೆ ಯತ್ನಿಸಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಬಾಳಪ್ಪ ತೇರದಾಳ ಬೆಳಗಾವಿ AIN NEWS