ವಿಜಯಪುರ: ಕಾಶಪ್ಪನವರ್ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಶಿವಾನಂದ ಪಾಟೀಲ್ಗೆ ಬಾಗೇವಾಡಿಯಲ್ಲಿ ಏನೂ ಸಿಗುತ್ತಿಲ್ಲ, ಹಾಗಾಗಿ ಅವರಿಗೆ ವಿಜಯಪುರ ಬರೋದು ಬೇಕಾಗಿದೆ, ಅವರು ಇಲ್ಲಿಂದ ಸ್ಪರ್ಧಿಸಿದರೆ ಮಣ್ಣು ಮುಕ್ಕೋದು ಗ್ಯಾರಂಟಿ, https://ainkannada.com/what-is-the-reason-for-buying-gold-like-akshay-trithiya-here-is-the-information/ ಯಾಕೆಂದರೆ ಎಲ್ಲ ಹಿಂದೂಗಳು ನನಗೆ ವೋಟು ಹಾಕುತ್ತಾರೆ, ಶಿವಾನಂದ್ ಗೆ ಮುಸಲ್ಮಾನರ ವೋಟು ಸಹ ಸಿಗಲ್ಲ, ಯಾಕೆಂದರೆ ಮುಸಲ್ಮಾನರು ತಮ್ಮ ಸಮುದಾಯದ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸುತ್ತಾರೆ ಎಂದು ಯತ್ನಾಳ್ ಹೇಳಿದರು. ನನ್ನ ವಿರುದ್ಧ ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಯಾರಾದರೂ ಭಾರತ ಮಾತಾಕಿ ಜೈ ಅಂದ್ರಾ, ಪಾಕಿಸ್ತಾನಕ್ಕೆ ಧಿಕ್ಕಾರ ಕೂಗಿದ್ದಾರಾ? ಕಾಂಗ್ರೆಸ್ ಸಚಿವ, ಶಾಸಕರನ್ನು ಮುಸ್ಲಿಂ ಮುಖಂಡರು ಬ್ಲಾö್ಯಕ್ಮೇಲ್ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುವವರಿಗೆ ಚಪ್ಪಲಿಯಿಂದ ಹೊಡೆಯಿರಿ. ಅವರ ಪರವಾಗಿ ನಾನು ಇರುತ್ತೇನೆ. ಅವರ ವಕಾಲತ್ತು ನಾನು ನೋಡಿಕೊಳುತ್ತೇನೆ ಎಂದರು.
Author: Author AIN
ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಚಂದ್ರಶೇಖರ್ ಎಂಬ ವ್ಯಕ್ತಿ ಕೆಲವು ವರ್ಷಗಳ ಹಿಂದೆ ಇಂದ್ರಾವತಿ ಎಂಬ ಮಹಿಳೆಯನ್ನು ವಿವಾಹವಾದರು. ಆದರೆ, ಇದು ಚಂದ್ರಶೇಖರ್ ಅವರ ಎರಡನೇ ಮದುವೆ ಎಂದು ತೋರುತ್ತದೆ. ಆದರೆ, ಚಂದ್ರಶೇಖರ್ ಆಗಾಗ್ಗೆ ಕೆಲಸಕ್ಕಾಗಿ ಶಿಬಿರಗಳಿಗೆ ಹೋಗುತ್ತಿದ್ದರು. ಹೆಂಡತಿ ಮನೆಯಲ್ಲಿದ್ದಳು. ಮೊಮ್ಮಗ ಮತ್ತು ವಂಶಾವಳಿಯ ಉತ್ತರಾಧಿಕಾರಿಯಾಗಿದ್ದ ಆಜಾದ್ ಕೂಡ ಅಲ್ಲಿ ವಾಸಿಸುತ್ತಿದ್ದರು. ಈ ಸಂದರ್ಭದಲ್ಲಿ, ಆಜಾದ್ ಸಾಂದರ್ಭಿಕವಾಗಿ ಇಂದ್ರಾವತಿಯ ಮನೆಗೆ ಭೇಟಿ ನೀಡುತ್ತಿದ್ದರು. ಇದರೊಂದಿಗೆ ಅವರ ನಡುವಿನ ಸಂಬಂಧ ಕ್ರಮೇಣ ಪ್ರೀತಿಗೆ ತಿರುಗಿತು. ಆದರೆ, ಅವರ ನಡುವಿನ ವಯಸ್ಸಿನ ಅಂತರ ಮತ್ತು ಸಂಬಂಧದಿಂದಾಗಿ ಯಾರೂ ಅವರನ್ನು ಅನುಮಾನಿಸಲಿಲ್ಲ. ಅವರು ಕೆಲವು ವರ್ಷಗಳ ಕಾಲ ತಮ್ಮ ಪ್ರೇಮ ಸಂಬಂಧವನ್ನು ಮುಂದುವರೆಸಿದರು. https://ainkannada.com/what-is-the-reason-for-buying-gold-like-akshay-trithiya-here-is-the-information/ ಆದರೆ, ಶಿಬಿರದಿಂದ ಮನೆಗೆ ಹಿಂದಿರುಗಿದ ಆಕೆಯ ಪತಿ ಚಂದ್ರಶೇಖರ್, ಇಂದ್ರಾವತಿ ಮತ್ತು ಆಜಾದ್ ರಹಸ್ಯವಾಗಿ ಮಾತನಾಡುತ್ತಿರುವುದನ್ನು ನೋಡಿದರು. ಅವನು ಅನುಮಾನಾಸ್ಪದವಾಗಿ ಇಬ್ಬರನ್ನೂ ಹಿಡಿದು ನಿಲ್ಲಿಸಿದನು. ಅವರ ಸಂಬಂಧದ ಬಗ್ಗೆ ತಿಳಿದು ಅವನಿಗೆ ಆಘಾತವಾಯಿತು. ಅವನು ಅವರಿಬ್ಬರನ್ನೂ ಬೇರ್ಪಡಿಸಲು…
ಉಡುಪಿ: ಮಂಗಳೂರು ಸಮೀಪದ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಗಲಾಟೆ ಸಂಭವಿಸಿ, ಗುಂಪೊಂದು ಯುವಕನ ಮೇಲೆ ಹಲ್ಲೆಗೈದ ಪರಿಣಾಮ ಆತ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಪ್ರಕರಣ ಸಂಬಂಧ ಈವರೆಗೆ 20 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಇನ್ನೂ ವಿಚಾರವಾಗಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ಕೃತ್ಯ ಖಂಡಿಸಿದ ಹಿಂದೂ ಯುವಕರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಭಾರತದ ವಿರುದ್ಧ ಪಾಕಿಸ್ತಾನ ಯುದ್ಧದ ಬೆದರಿಕೆ ಹಾಕುತ್ತಿದೆ. ದೇಶದೊಳಗಿನ ಶತ್ರುಗಳು ಇದಕ್ಕಿಂತ ಹೆಚ್ಚು ಅಪಾಯಕಾರಿ. ಈ ದೇಶದ ಉಪ್ಪು ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಈ ಮನಃಸ್ಥಿತಿ ಬಾಹ್ಯ ಶತ್ರುಗಳಿಗಿಂತ ಕೆಟ್ಟದು ಎಂದು ಎಂದು ಟೀಕಿಸಿದ್ದಾರೆ. ಮಸೀದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಿಸಿದ್ದಾಯ್ತು. ವಿಧಾನಸೌಧದಲ್ಲೂ ಪಾಕ್ ಪರ ಘೋಷಣೆಯಾಯ್ತು. ಈಗ ಕ್ರಿಕೆಟ್ ಅಂಗಳದಲ್ಲೂ ಪಾಕ್ ಪ್ರೇಮ. ಇಂತಹ…
ಪ್ರೀತಿಸಿ ಕೈ ಹಿಡಿದವರು ಧೀಡೀರ್ ಅಂತಾ ದೂರವಾದ್ರೆ ಆ ನೋವನ್ನು ಯಾರಿಂದಲೂ ಮರೆಯಲು ಆಗೋದಿಲ್ಲ. ಸದಾ ಅವರ ನೆನಪು ನಮ್ಮನ್ನು ಕಾಡುತ್ತಲೇ ಇರುತ್ತದೆ. ಇದೀಗ ಪತಿ ಚಿರಂಜೀವಿ ನೆನಪಿನಲ್ಲಿ ಮೇಘನಾ ರಾಜ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿರು ಮೇಘನಾ ಪ್ರೀತಿಸಿ ಮದುವೆಯಾದವರು. ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದರು. ಆದ್ರೆ ಹೃದಯಾಘಾತದಿಂದ ಚಿರು ಕೊನೆಯುಸಿರೆಳೆದರು. ಆ ನೋವು ಅವರನ್ನು ಬಾಧಿಸುತ್ತಲೇ ಇದೆ. ಚಿರು ನೆನಪಿನಲ್ಲಿ ಬದುಕು ಸಾಗಸುತ್ತಿರುವ ಮೇಘನಾಆ ರಾಜ್ ಸದಾ ನಿನ್ನೊಂದಿಗೆ ಎಂದು ಪತಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ಮೇಘನಾ ರಾಜ್ ಎರಡನೇ ಮದುವೆಯಾಗುತ್ತಾರೆ ಎಂಬ ವದಂತಿ ಜೋರಾಗಿ ಹಬ್ಬಿತ್ತು. ಈ ವದಂತಿಗೆ ಅವರು ಗುನ್ನ ಹೊಡೆದಿದ್ದಾರೆ. ಸದಾ ನಿನ್ನೊಂದಿಗೆ ಎನ್ನುತ್ತಾ ಎರಡನೇ ಮದುವೆ ಗಾಸಿಪ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಮೇಘನಾ ರಾಜ್ ಫ್ಯಾಮಿಲಿ, ಮಗ, ಸಿನಿಮಾ ಅಂತಾ ಬ್ಯುಸಿಯಾಗಿದ್ದಾರೆ. ಮಗ ರಾಯನ್ ಹಾರೈಕೆಯಲ್ಲಿ ಅವರು ಬ್ಯುಸಿಯಾಗಿದ್ದಾರೆ. 2018, ಮೇ 2ರಂದು ಚಿರು-ಮೇಘನಾ ಹಸೆಮಣೆ ಏರಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತಿದ್ದು ಗೊತ್ತೇ ಇದೆ. ಆದರೆ, ಕುಲದೀಪ್ ಯಾದವ್ ಮೈದಾನದ ಮಧ್ಯದಲ್ಲಿ ರಿಂಕು ಸಿಂಗ್ ಅವರನ್ನು ಎರಡು ಬಾರಿ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಐಪಿಎಲ್ 2025 ರ 48 ನೇ ಪಂದ್ಯ ದೆಹಲಿ ಮತ್ತು ಕೋಲ್ಕತ್ತಾ ನಡುವೆ ನಡೆದಿತ್ತು ಎಂದು ತಿಳಿದಿದೆ. ಈ ಪಂದ್ಯದಲ್ಲಿ ಕೋಲ್ಕತ್ತಾ ತಂಡವು ಆತಿಥೇಯ ತಂಡವನ್ನು 14 ರನ್ಗಳಿಂದ ಸೋಲಿಸಿತು. ಈ ಪಂದ್ಯದ ನಂತರ, ಕೋಲ್ಕತ್ತಾದ ರಿಂಕು ಮತ್ತು ದೆಹಲಿಯ ಕುಲದೀಪ್ ಮೈದಾನದಲ್ಲಿ ಮಾತನಾಡುತ್ತಿರುವುದು ಕಂಡುಬಂದಿತು. ಇದೇ ವೇಳೆ ಭಾರತದ ಸ್ಟಾರ್ ಆಟಗಾರ ಕುಲ್ದೀಪ್ ಇದ್ದಕ್ಕಿದ್ದಂತೆ ರಿಂಕುಗೆ ಕಪಾಳಮೋಕ್ಷ ಮಾಡಿದರು. ಇದರಿಂದ ರಿಂಕು ಇದ್ದಕ್ಕಿದ್ದಂತೆ ಆಘಾತಕ್ಕೊಳಗಾದರು. ಆಗ ಅವನು ಕೋಪಗೊಂಡಂತೆ ಕಾಣುತ್ತಿದ್ದನು. ಇವರಿಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಮೊದಲಿಗೆ ಇಬ್ಬರೂ ನಗುತ್ತಿರುವಂತೆ ಕಾಣುತ್ತಿದ್ದರು. ಈ ಅನುಕ್ರಮದಲ್ಲಿ, ಕುಲದೀಪ್ ಮೊದಲು ರಿಂಕು ಸಿಂಗ್ಗೆ ಕಪಾಳಮೋಕ್ಷ ಮಾಡಿದರು. ಅದಾದ ನಂತರ, ಕುಲದೀಪ್…
ಇಂದು ಕಾಯಕಯೋಗಿ, ಭಕ್ತಿ ಭಂಡಾರಿ, ಜಗಜ್ಯೋತಿ ಬಸವಣ್ಣನವರ ಜಯಂತಿ. ಎಲ್ಲರೂ ಭಕ್ತಿ ಭಾವದಿಂದ ‘ಕ್ರಾಂತಿ ಯೋಗಿ ಬಸವಣ್ಣʼ ಅವರನ್ನು ಸ್ಮರಿಸುತ್ತಿದ್ದಾರೆ. ಈ ಜಯಂತಿ ವಿಶೇಷವಾಗಿ ಕನ್ನಡ ಸಿನಿಮಾ ಜಗತ್ತಿನಲ್ಲಿ ಬಸವಣ್ಣನಾಗಿ ಮಿಂಚಿದವರು ನಟರು ಯಾರು ಅನ್ನೋದನ್ನು ನೋಡುವುದಾದರೇ ಬಸವಣ್ಣನವರ ಬದುಕನ್ನು ಆಧರಿಸಿದ ಮೊದಲ ಸಿನಿಮಾ ಜಗಜ್ಯೋತಿ ಬಸವೇಶ್ವರ. ಹೊನ್ನಪ್ಪ ಭಾಗವತರ್, ಬಸವಣ್ಣನ ಪಾತ್ರ ನಿರ್ವಹಿಸಿದ್ದರು. ವರನಟ ಡಾ.ರಾಜ್ಕುಮಾರ್ ಬಿಜ್ಜಳನ ಪಾತ್ರ ನಿರ್ವಹಿಸಿದ್ದು. ಟಿ.ವಿ.ಸಿಂಗ್ಠಾಕೂರ್ ಜಗಜ್ಯೋತಿ ಬಸವೇಶ್ವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ರಾಷ್ಟ್ರ ಪ್ರಶಸ್ತಿ ಕೂಡ ಬಂದಿತ್ತು. ಬಸವಣ್ಣ ಪಾತ್ರಗಳಿಗೆ ಹೇಳಿಮಾಡಿಸಿದಂತಿದ್ದವರು ಅಶೋಕ್ ಅವರು. 1983ರಲ್ಲಿ ತೆರೆಕಂಡ ಕ್ರಾಂತಿಯೋಗಿ ಬಸವಣ್ಣ ಸಿನಿಮಾದಲ್ಲಿ ಬಸವಣ್ಣನ ಪಾತ್ರವನ್ನು ಅಶೋಕ್ ಮಾಡಿದ್ದರು. ಹನ್ನೆರಡನೇ ಶತಮಾನದ ಅನೇಕ ಕ್ರಾಂತಿಕಾರಿ ವಿಚಾರಗಳು ಸಿನಿಮಾದಲ್ಲಿವೆ. ಕೆ.ಎಸ್.ಎಲ್. ಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ದಾನಮ್ಮದೇವಿ ಚಿತ್ರದಲ್ಲಿ ನಟ ರಾಮಕೃಷ್ಣ ನಿಭಾಯಿಸಿದ್ದ ಬಸವೇಶ್ವರರ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಹಂಸಲೇಖ ಸಾಹಿತ್ಯ, ಸಂಗೀತ…
ಬೆಂಗಳೂರು: ಅಂಥವರನ್ನು ನೆನೆಸುವುದು ಪ್ರತಿಯೊಬ್ಬ ಕನ್ನಡಿಗರ ಹಾಗೂ ಭಾರತೀಯನ ಕರ್ತವ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬಸವ ಸಮಿತಿ ಆಯೋಜಿಸಿದ್ದ ವಿಶ್ವ ಗುರು ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದೆ. ಬಸವಣ್ಣ ವಿಶ್ವ ಗುರುಗಳಾಗಿದ್ದು, ಅವರು ಕೇವಲ ಸಾಮಾಜಿಕ ಕ್ರಾಂತಿ ಮಾಡಿದವರಲ್ಲ, https://ainkannada.com/what-is-the-reason-for-buying-gold-like-akshay-trithiya-here-is-the-information/ ಸಮಾಜದ ಪರಿವರ್ತನೆಗೆ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸುವ, ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಕೆಲಸವನ್ನು ಬಸವಣ್ಣ ತಮ್ಮ ಜೀವಿತ ಕಾಲದಲ್ಲಿ ಮಾಡಿದ್ದಾರೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಬಸವ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ಮಡಕೆ ಮಾಡುವಡೆ ಮಣ್ಣೆ ಮೊದಲು ತೊಡಿಗೆಯ ಮಾಡುವಡೆ ಹೊನ ಮೊದಲು ಶಿವಪತವನರಿವಡೆ ಗುರುಪಥವೆ ಮೊದಲು ಕೂಡಲಸಂಗಮದೇರನರಿವಡೆ ಶರಣರ ಸಂಗವೇ ಮೊದಲು. ಆಚಾರವೇ ಸ್ವರ್ಗ ಅನಾಚಾರವೇ ನರಕ. ಮಾಡಿ ಮಾಡಿ ಕೆಟ್ಟವರು ಮನವಿಲ್ಲದೆ ನೀಡಿ ನೀಡಿ ಕೆಟ್ಟವರು ನಿಜವಿಲ್ಲದೆ ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿ ಕೊಂಬ ನಮ್ಮ ಕೂಡಲಸಂಗಮದೇವ.ಈ ಪುಣ್ಯದ ಭೂಮಿಯಲ್ಲಿ ಶ್ರೇಷ್ಠ ನಾಯಕನಾಗಿ ಬೆಳೆದವರು ಬಸವಣ್ಣನವರು. ಬಸವಣ್ಣನವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕೆಂದು ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಹೊಸ ಬಸ್ ನಿಲ್ದಾಣದಿಂದ ರಬಕವಿಯ ಶ್ರೀ ವಿರಕ್ತಮಠದವರಿಗೆ ವಾದ್ಯ ಮೇಳದೊಂದಿಗೆ ಶ್ರೀ ಬಸವೇಶ್ವರ ಭಾವಚಿತ್ರ ಮೆರವಣಿಗೆ ಮಾಡುವುದರ ಮುಖಾಂತರ ಅದ್ದೂರಿಯಾಗಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು. https://ainkannada.com/what-is-the-reason-for-buying-gold-like-akshay-trithiya-here-is-the-information/ ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಬ್ರಹ್ಮಾನಂದ ಮಠ. ತೇರದಾಳ ಶಾಸಕ ಸಿದ್ದು ಸವದಿ.ಮಾಹಾದೇವ ದುಪದಾಳ.ಸಂಜಯ ತೇಗಿ.ಪ್ರಶಾಂತ ಪಾಲಬಾವಿ.ಮಾಹಾದೇವ ಕೋಟ್ಯಾಳ.ಬಾಬು ಮಾಹಾಜನ.ಮಲಪ್ಪಾ ಕುಚನೂರ.ರವಿ ಗಡಾದ.ರಾಮಣ್ಣ ಹುಲಕುಂದ.ಈರಣ್ಣಾ ಗುಣಕಿ.ಚಿದಾನಂದ ಸೋಲ್ಲಾಪುರ.ಬಸವರಾಜ ತೇಗಿ.ನೀಲಕಂಠ ಮುತ್ತುರ.ಸುಭಾಷ ಮದರಖಂಡಿ.ಸಿದ್ದು ಅರಬಳ್ಳಿ.ಗುರುಪ್ಪಾಯ್ಯ ಅಮ್ಮನಗಿಮಠ.ಬಸು ಅಮ್ಮನಿಗಿಮಠ.ಸಂಜು…
ಹುಬ್ಬಳ್ಳಿ; ಶ್ರೀ ಬಸವೇಶ್ವರರು ಕೇವಲ ಎಂಟು ವರ್ಷದವರಿದ್ದಾಗ ಹಿಂದುಳಿದ ಹಾಗೂ ಶೋಷಿತ ವರ್ಗದವರ ಬಗ್ಗೆ ಚಿಂತನೆ ಮಾಡಿದ್ದರು ಮೇಲು ಕೀಳು ತಾರತಮ್ಯ ಮಾಡಿದರೆ ನಾನು ಮನೆಯಲ್ಲಿ ಇರಲ್ಲ ಎಂದು ಮನೆ ತೊರೆದು ಜಗತ್ತು ಉದ್ಧಾರ ಮಾಡಿದ ಮಹಾನ್ ಚೇತನ ಶ್ರೀ ಬಸವೇಶ್ವರರು ಎಂದು ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು. ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ರೋತ್ಸವದ ಅಂಗವಾಗಿ ಮೂರು ಸಾವಿರ ಮಠದ ವೀರಶೈವ ಸಂಘಟನಾ ಸಮಿತಿ ವತಿಯಿಂದ ನಗರದ ಮೂರುಸಾವಿರಹ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು, https://ainkannada.com/what-is-the-reason-for-buying-gold-like-akshay-trithiya-here-is-the-information/ ಹೆಣ್ಣು ಗಂಡು ಮೇಲು ಕೀಳು ಬಡವ. ಬಲ್ಲಿದವ ಎನ್ನದೇ ಸಮಾನತೆ ಸಾರಿಗೆ ಮಹಾಗುರು. ಮಹಿಳೆಯರು ಯಾರಿಗೂ ಕಡಿಮೆ ಇಲ್ಲ ಅವರು ಎಲ್ಲ ರಂಗದಲ್ಲಿ ಸಹ ಮುಂದೆ ಬರಬೇಕು ಎಂಬ ನಿಟ್ಟಿನಲ್ಲಿ ಸಮಾನ ಅವಕಾಶ ಕೊಟ್ಟವರು. ಬಸವೇಶ್ವರರು ಅನುಭವ ಮಂಟಪದಲ್ಲಿ ಹೇಗೆ ಸಮಾನತೆ ಕೊಟ್ಟು ಜಗತ್ತಿಗೆ ಹೊಸ ಸಂದೇಶ ನೀಡಿದವರು. ಕೊರಳಿಗೆ ಲಿಂಗ ಕಟ್ಟಿ ಲಿಂಗ ಪೂಜೆಗೆ ಸಹ ಅವಕಾಶ ನೀಡಿದವರು…
ಹುಬ್ಬಳ್ಳಿ: ಕಾಶ್ಮೀರ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಹಾಗೂ ದಾಳಿಯಲ್ಲಿ ಮೃತ ಭಾರತೀಯರ ಆತ್ಮಕ್ಕೆ ಶಾಂತಿ ಕೋರಿ ಹುಬ್ಬಳ್ಳಿ ಪಾಸ್ಟರ್ಸ್ ಹಾಗೂ ಇವೆಂಗಲಿಸ್ಟ್ಸ್ ಫೆಲೋಶಿಪ್ ವತಿಯಿಂದ ನಗರದ ಗದಗ ರಸ್ತೆಯಲ್ಲಿನ ಸನ್ ಪೀಟರ್ ಚರ್ಚ್ ನಲ್ಲಿ ಮಂಗಳವಾರ ಸಂಜೆ ಮೇಣ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾನವೀಯತೆ ಮರೆತ ಉಗ್ರರು ಕೆಲವು ಕಡೆ ಇದ್ದೆ ಸಮಾಜಘಾತುಕ ಕೆಲಸ ಮಾಡುತ್ತಿದ್ದಾರೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಅವರನ್ನು ಮೂಲೋತ್ಪಾಟನೆ ಮಾಡಬೇಕು. ಉಗ್ರವಾದ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು. ಮೃತರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಪ್ರಾರ್ಥಿಸಲಾಯಿತು. ಹು-ಧಾ ಮಹಾನಗರ ಪಾಲಿಕೆ ಸದಸ್ಯ ಧೋರಜ್ ಮನ್ನೆಕುಂಟ್ಲ, ಮಾಜಿ ಸದಸ್ಯೆ ಸುಧಾ ಮನ್ನೆಕುಂಟ್ಲ, ಪ್ರಮುಖರಾದ ರೆವೆರೆಂಡ್ ಜೆ. ನಿಕೋಲಸ್, ವೈ. ಜಾಲಯ್ಯ, ಪೆಂಡೆಮ್ ಡ್ಯಾನಿಯಲ್, ಸುನಿಲ್ ಮಾಡೆ, ಓಬಲ್ ರಾವ್, ಇತರರು ಭಾಗವಹಿಸಿದ್ದರು.