Author: Author AIN

ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಹೆಚ್ಚುತ್ತಲೇ ಇದೆ. ಇದರಿಂದ ಸಹಜವಾಗಿಯೇ ಕೃಷಿ ಯಂತ್ರೋಪಕರಣಗಳ ಬೇಡಿಕೆ ಹೆಚ್ಚುತ್ತಿದೆ. ಅಲ್ಲದೆ, ರೈತರು ಕೂಡ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಲು ಉತ್ಸುಕರಾಗಿದ್ದಾರೆ. ಹೀಗಾಗಿ ರೈತರು ಕೃಷಿ ಯಂತ್ರೋಪಕರಣ ಕೊಳ್ಳಲು ಸರ್ಕಾರವೇ ಸಹಾಯಧನ ನೀಡುತ್ತಿದೆ. ಇದಕ್ಕಾಗಿ ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ ಟ್ರಾಕ್ಟರ್ ಖರೀದಿಗೆ ಅರ್ಜಿ ಆಹ್ವಾನಿಸಲಾಗಿದ್ದರೆ, ಸಾಮಾನ್ಯ ವರ್ಗದ ರೈತರು ಶೇ.50ರ ರಿಯಾಯಿತಿಯಲ್ಲಿ ಮಿನಿ ಟ್ರ್ಯಾಕ್ಟರ್‌ ಸಹಾಯಧನ ಪಡೆಯಬಹುದಾಗಿದೆ. ಆಸಕ್ತ ರೈತರು ಪಹಣಿ(ಆರ್‍ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಎರಡು ಭಾವಚಿತ್ರ, 100 ರೂಪಾಯಿಯ ಬಾಂಡ್‌ ಪೇಪರ್‌ನೊಂದಿಗೆ ಸ್ಥಳೀಯ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. https://ainkannada.com/what-is-the-reason-for-buying-gold-like-akshay-trithiya-here-is-the-information/ 2024-25ರ ಸಾಲಿನ…

Read More

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಹೊಸದೊಂದು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಅದಕ್ಕೆ PA Productions ಎಂದು ಹೆಸರಿಟ್ಟಿದ್ದಾರೆ. P ಅಂದ್ರೆ ಪುಷ್ಪ A ಅಂದ್ರೆ ಅರುಣ್ ಕುಮಾರ್ ಎಂದರ್ಥ. ಯಶ್ ಅಪ್ಪ ಮತ್ತು ಅಮ್ಮನ ಹೆಸರು ಇರೋ ಈ ಪ್ರೊಡಕ್ಷನ್ ಹೌಸ್‌ ಮೂಲಕ ಚೊಚ್ಚಲ ಚಿತ್ರ ನಿರ್ಮಾಣವಾಗುತ್ತಿದೆ. ಅಕ್ಷಯ ತೃತೀಯ ದಿನವಾದ ಇಂದು ಚಿತ್ರತಂಡ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಿದೆ. PA Productions ಮೊದಲ ಪ್ರಯತ್ನಕ್ಕೆ ಕೊತ್ತಲವಾಡಿ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ಶ್ರೀರಾಜ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಿರಿಯ ನಿರ್ದೇಶಕರಾದ ಕೆವಿ ರಾಜು, ರವಿಶ್ರೀವತ್ಸ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಾಯಕ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದು, ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗರಂತಹ ಅನುಭವಿ ತಾರಾಬಳಗ…

Read More

ಬೆಂಗಳೂರು: ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಜಾಹೀರಾತು ನೀತಿ-2024 ಜಾರಿಗೊಳಿಸಾಗಿದೆ. ಡಿಜಿಟಲ್ ಜಾಹೀರಾತು ನೀತಿಯನ್ನ ಜಾರಿಗೊಳಿಸಲು ಪ್ರಮುಖ ಕಾರಣಿಕರ್ತರಾದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅವರನ್ನ ಕೆಎಸ್ ಡಿಎಂಎಫ್ ವತಿಯಿಂದ ನಗರದ ಪ್ರೆಸ್ ಕ್ಲಬ್ ನಲ್ಲಿ ಅಭಿನಂದಿಸಲಾಯಿತು. ಇದೆ ಸಂದರ್ಭದಲ್ಲಿ ಮಾತನಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ರಾಜ್ಯದಲ್ಲಿ ಡಿಜಿಟಲ್ ನೀತಿ ತರುವ ಬಗ್ಗೆ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಡಿಜಿಟಲ್ ಮಾಧ್ಯಮದ ಅಗತ್ಯತೆ ಬಗ್ಗೆ ತಿಳಿ ಹೇಳಿ ಆ ಬಗ್ಗೆ ಚರ್ಚೆ ನಡೆಸಿದ್ದೆ. ಸಣ್ಣ ಪತ್ರಿಕೆಯಂತೆ ಡಿಜಿಟಲ್ ಮಾಧ್ಯಮವನ್ನು ಕೈಹಿಡಿಯುವ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಮಾತನಾಡಿ ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೂ ಜಾಹೀರಾತು ನೀಡಲು ಹಣಕಾಸು ವೆಚ್ಚ, ಡಿಜಿಟಲ್ ಮೀಡಿಯಾ ನೀತಿಯ ನೀಲನಕ್ಷೆ ಬಗ್ಗೆಯೂ ತಿಳಿಸಿದೆ. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದರು. ಹೀಗಾಗಿ ಡಿಜಿಟಲ್ ಜಾಹೀರಾತು ನೀತಿ ತರಲು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಡಿಜಿಟಲ್ ನೀತಿಯನ್ನು ಜಾರಿಗೆ…

Read More

ನವದೆಹಲಿ: ಕಾಂಗ್ರೆಸ್ ಪಾಕಿಸ್ತಾನದ ಪರವಾಗಿ ಮಾತನಾಡುತ್ತಲೇ ಇರುವುದು ಮುಜುಗರದ ಸಂಗತಿ ಎಂದು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಪರವಾಗಿ ಮತ್ತು ಭಾರತದ ವಿರುದ್ಧ ಮಾತನಾಡುತ್ತಲೇ ಇರುವುದು ಮುಜುಗರದ ಸಂಗತಿ. ಪಾಕಿಸ್ತಾನ ಕಾಂಗ್ರೆಸ್ ನಾಯಕರ ಪೋಸ್ಟ್‌ಗಳನ್ನು ಮರುಟ್ವೀಟ್ ಮಾಡುತ್ತಿರುವುದು ಅವರ ನಡುವಿನ ಅಪಾಯಕಾರಿ ಮತ್ತು ಅನುಚಿತ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಪಹಲ್ಗಾಮ್ ಘಟನೆಯ ನಂತರ, ಎಲ್ಲಾ ವಿಭಾಗಗಳ ಭಾರತೀಯರು ಪಾಕಿಸ್ತಾನದ ನಡವಳಿಕೆಯಿಂದ ಕೋಪಗೊಂಡಿದ್ದಾರೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಪಾಕಿಸ್ತಾನಕ್ಕೆ ದೃಢ ಪ್ರತಿಕ್ರಿಯೆ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ಕಳುಹಿಸಿದ್ದಾರೆ. ಆದರೂ, ಪ್ರಧಾನಿ, ಸರ್ಕಾರ ಮತ್ತು ಭಾರತೀಯ ಸೇನೆಯ ಪರವಾಗಿ ನಿಲ್ಲುವ ಕರ್ತವ್ಯವನ್ನು ಮರೆತ ಕಾಂಗ್ರೆಸ್, ಭಯೋತ್ಪಾದಕರ ಭಾಷೆಯಲ್ಲಿ ಮಾತನಾಡುವುದನ್ನು ಆಯ್ಕೆ ಮಾಡಿಕೊಂಡಿದೆ. ಇದು ಅತ್ಯಂತ ನಾಚಿಕೆಗೇಡಿನ ಕೃತ್ಯ ಎಂದಿದ್ದಾರೆ.

Read More

ನಮ್ಮಲ್ಲಿರುವ ಅನೇಕ ತರಕಾರಿಗಳು, ಮಸಾಲೆ ಪದಾರ್ಥಗಳು ಬರೀ ನಮ್ಮ ಅಡುಗೆಗೆ ರುಚಿ ಕೊಡುವುದಲ್ಲದೆ, ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಸಹ ಹೊಂದಿದೆ. ಅದರಲ್ಲಿಯೂ ಶುಂಠಿ, ಬೆಳ್ಳುಳ್ಳಿ ಅಂತಹ ಆಹಾರ ಪದಾರ್ಥಗಳು ಅನೇಕ ಶತಮಾನಗಳಿಂದ ಅಡುಗೆಮನೆಯ ಭಾಗವಾಗಿದೆ. ಅಷ್ಟೇ ಅಲ್ಲದೆ, ಈ ಮೂಲಿಕೆಯು ಅದರ ಬ್ಯಾಕ್ಟೀರಿಯಾ ಮತ್ತು ನಂಜುನಿರೋಧಕ ಗುಣದಿಂದಾಗಿ ಗುಣಪಡಿಸುವ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. https://ainkannada.com/what-is-the-reason-for-buying-gold-like-akshay-trithiya-here-is-the-information/ ಅದರಲ್ಲೂ ಬೆಳ್ಳುಳ್ಳಿಯ ರಂಜಕ, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಬೆಳ್ಳುಳ್ಳಿ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಅಂತ ಹೇಳಬಹುದು. ಅದರಲ್ಲೂ ಈ ಬೆಳ್ಳುಳ್ಳಿಯನ್ನು ರಾತ್ರಿ ಹೊತ್ತು ತಿಂದರೆ ಇನ್ನೂ ಒಳ್ಳೆಯದಂತೆ ಅಂತ ಹೇಳಲಾಗುತ್ತಿದೆ. ಆದ್ರೆ ಬೇಸಿಗೆ ಸಮಯದಲ್ಲಿ ಇವುಗಳ ಅತಿಯಾದ ಸೇವನೆ ಒಳ್ಳೆಯದಲ್ಲ. ಏಕೆಂದರೆ ಬೆಳ್ಳುಳ್ಳಿ ನೈಸರ್ಗಿಕವಾಗಿ ದೇಹವನ್ನು ಬೆಚ್ಚಗಾಗಿಸುವ ಸ್ವಭಾವವನ್ನು ಹೊಂದಿರುತ್ತದೆ. ಇದರರ್ಥ ಇದು ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದು, ಬೇಸಿಗೆಯಲ್ಲಿ ಹವಾಮಾನವು ಈಗಾಗಲೇ ಬಿಸಿಯಾಗಿರುವುದರಿಂದ ಇವುಗಳನ್ನು ಅತಿಯಾದ ಸೇವನೆ ಒಳ್ಳೆಯದಲ್ಲ. ಇದು ನಮ್ಮ ದೇಹದ…

Read More

ನೀವು ರೈಲಿನಲ್ಲಿ ಹೆಚ್ಚು ಪ್ರಯಾಣಿಸುವವರಾಗಿದ್ದರೆ, ಈ ಸುದ್ದಿ ನಿಮಗಾಗಿ. ಭಾರತೀಯ ರೈಲ್ವೆ ಮೇ 1 ರಿಂದ ಟಿಕೆಟ್ ನಿಯಮಗಳನ್ನು ಬಿಗಿಗೊಳಿಸಲಿದೆ. ಈಗ ವೇಟಿಂಗ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಸ್ಲೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸಲು ಅವಕಾಶವಿರುವುದಿಲ್ಲ. ಪ್ರಯಾಣಿಕರು ಕಾಯುವ ಟಿಕೆಟ್ ಹೊಂದಿದ್ದರೆ, ಅವರು ಸಾಮಾನ್ಯ ಕೋಚ್‌ನಲ್ಲಿ ಮಾತ್ರ ಪ್ರಯಾಣಿಸಬಹುದು. ಮೇ 1 ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ನಂತರ, ಪ್ರಯಾಣಿಕರು ಸ್ಲೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ವೇಟಿಂಗ್ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವುದನ್ನು ನಿಷೇಧಿಸಲಾಗುವುದು. ಒಬ್ಬ ಪ್ರಯಾಣಿಕನು ಸ್ಲೀಪರ್ ಅಥವಾ ಎಸಿ ಕೋಚ್‌ನಲ್ಲಿ ಕಾಯುವ ಟಿಕೆಟ್ ಹೊಂದಿರುವುದು ಕಂಡುಬಂದರೆ, ಟಿಟಿಇ ಅವನಿಗೆ ದಂಡ ವಿಧಿಸಬಹುದು ಅಥವಾ ಸಾಮಾನ್ಯ ಕೋಚ್‌ಗೆ ಕಳುಹಿಸಬಹುದು. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ದೃಢೀಕೃತ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿಬಂಧನೆಯನ್ನು ಮಾಡಲಾಗಿದೆ ಎಂದು ವಾಯುವ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕ್ಯಾಪ್ಟನ್ ಶಶಿ ಕಿರಣ್ ತಿಳಿಸಿದ್ದಾರೆ. ಹೀಗಾಗಿ, ದೃಢೀಕೃತ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ಕಾಯುವ ಟಿಕೆಟ್‌ಗಳನ್ನು…

Read More

ಕನ್ನಡ ಚಿತ್ರರಂಗ ಕಂಪ್ಲೀಟ್‌ ಡಲ್‌ ಆಗಿದೆ. ಹೀಗೆ ಬಂದ್‌ ಸಿನಿಮಾಗಳು ಹಂಗೆ ಹೋಗ್ತಿವೆ. ಸ್ಟಾರ್ಸ್‌ ಸಿನಿಮಾಗಳು ಇಲ್ಲೇ ಸ್ಯಾಂಡಲ್‌ವುಡ್‌ ಸೊರಗಿದೆ. ಬೆಳ್ಳಿಪರದೆಯಲ್ಲಿ ಕಳೆ ತುಂಬಬೇಕು ಅಂದ್ರೆ ದೊಡ್ಡವರು ಅಖಾಡಕ್ಕೆ ಇಳಿಯಬೇಕು. ಫಸ್ಟ್‌ ಫ್‌ ಮುಗಿಯತ್ತಾ ಬರ್ತಿದೆ. ಹೀಗಿದ್ರೂ ಕನ್ನಡದಲ್ಲಿ ಈವರೆಗೂ ಸೂಪರ್‌ ಹಿಟ್‌ ಸಿನಿಮಾ ಕಂಡೇ ಇಲ್ಲ. ಸಕ್ಸಸ್‌ ಅನ್ನೋದು ಮರಿಚಿಕೆಯಾಗಿದೆ. ಆದ್ರೆ ಸೆಕೆಂಡ್‌ ಆಫ್‌ನಲ್ಲಿ ಧೂಳ್‌ ಎಬ್ಬಿಸೋದಿಕ್ಕೆ ಸ್ಯಾಂಡಲ್ ವುಡ್‌ ಸಜ್ಜಾಗಿದೆ. ಕಾಂತಾರ ಪ್ರೀಕ್ವೆಲ್‌ ಅಕ್ಟೋಬರ್‌ ಗೆ ತೆರೆಗೆ ಬರ್ತಿದೆ. ಅದಕ್ಕೂ ಮುನ್ನ ಶಿವಣ್ಣ-ಉಪ್ಪಿ-ರಾಜ್‌ ಬಿ ಶೆಟ್ಟಿ ನಟನೆಯ 45 ಸಿನಿಮಾ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಧ್ರುವ ಪ್ರೇಮ್‌ ಕಾಂಬೋದ ಕೆಡಿ ಕೂಡ ಈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಹಬ್ಬಕ್ಕೂ ಮುನ್ನ ಇಂಡಸ್ಟ್ರೀಯಲ್ಲಿ ಮುಹೂರ್ತದ ಸಂಭ್ರಮಗಳು ಕಳೆಕಟ್ಟುತ್ತಿದೆ. ನಅಲೆ ಅಕ್ಷಯ ತೃತೀಯದ ವಿಶೇಷವಾಗಿ ಯುವರಾಜ್‌ಕುಮಾರ್‌ ಹಾಗೂ ಸುಕ್ಕ ಸೂರಿಯ ಹೊಸ ಸಿನಿಮಾ ಸೆಟ್ಟೇರಲಿದೆ. ಪಿಆರ್‌ಕೆ-ಕೆಆರ್‌ಜಿ-ಜಯಣ್ಣ ಫಿಲ್ಮಂ ಬ್ಯಾನರ್‌ನಡಿ ಸೂರಿ ಸಾರಥ್ಯದಲ್ಲಿ ಯುವ ನಾಯಕನಾಗಿ ಹಾಗೂ ದುನಿಯಾ ವಿಜಯ್‌ ಪುತ್ರಿ ರಿತನ್ಯಾ ನಾಯಕಿಯಾಗಿ…

Read More

ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮದುವೆ ವಿಚಾರ ಕಳೆದ ವಾರದ ಹಿಂದಷ್ಟೇ ಭಾರೀ ಸದ್ದು ಮಾಡಿತ್ತು. ಅಪ್ಪ ಅಮ್ಮನ ಬಿಟ್ಟು ಪೃಥ್ವಿ ಮದುವೆಯಾಗಿದ್ದಾರೆ. ನನ್ನ ಮಗಳನ್ನು ವಶೀಕರಣ ಮಾಡಿದ್ದಾರೆ ಅಂತೆಲ್ಲಾ ಅವರ ತಂದೆ ಆರೋಪ ಮಾಡಿದ್ದರು. ಆ ಬಳಿಕ ಪೃಥ್ವಿ ಭಟ್‌ ಇದಕ್ಕೆ ಕ್ಲಾರಿಟಿ ಕೊಟ್ಟಿದ್ದರು. ಇಷ್ಟೆಲ್ಲಾ ವಿವಾದ ಬಳಿಕ ಇದೀಗ ಗಾಯಕಿ ಪೃಥ್ವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಪೃಥ್ವಿ ಭಟ್‌ ಮದುವೆ ಬಳಿಕ ಪತಿ ಅಭಿಷೇಕ್‌ ಅವರೊಂದಿಗೆ ರಾಯರ ದರ್ಶನ ಪಡೆದಿದ್ದಾರೆ. ಮಂತ್ರಾಯಲಕ್ಕೆ ಭೇಟಿ ಕೊಟ್ಟಿರುವ ಅವರ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಂದ ಪೃಥ್ವಿ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಜೀ ಕನ್ನಡ ವಾಹಿನಿಯ ಸರಿಗಮಪ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಕಾಸರಗೋಡು ಮೂಲದ ಗಾಯಕಿ ಪೃಥ್ವಿ ಭಟ್ ಮಾರ್ಚ್ 27 ರಂದು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುವ ಅಭಿಷೇಕ್ ಎಂಬವರ ಜೊತೆ ಮದುವೆಯಾಗಿದ್ದರು. ಮಗಳ ಮದುವೆ ಬಗ್ಗೆ ತಂದೆ ಶಿವಪ್ರಸಾದ್‌ ಮಾತನಾಡಿದ್ದ ಆಡಿಯೋ…

Read More

ಶೈಲೇಶ್ ಕೋಲನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ‘ಹಿಟ್-3’ ಸಿನಿಮಾ ಮೇ1ಕ್ಕೆ ತೆರೆಗೆ ಬರ್ತಿದೆ. ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರ ಹಿಂದಿ, ಕನ್ನಡ, ತಮಿಳು ಭಾಷೆಗಳಿಗೂ ಡಬ್ ಆಗಿ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಚಿತ್ರದ ಪ್ರಚಾರ ಭರದ ಸಾಗುತ್ತಿದ್ದು, ಇಂದು ಬೆಂಗಳೂರಿನಲ್ಲಿ ನಾನಿ ಶ್ರೀನಿಧಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು. #allನಗರದ ಖಾಸಗಿ ಹೋಟೆಲ್‌ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾನಿ , ಹಿಟ್-3 ಸಿನಿಮಾ ಇನ್ನೊಂದು ದಿನದಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಬಹಳಷ್ಟು ನಂಬಿಕೆ ಇದೆ. ನಾನು ಸಿನಿಮಾ ನೋಡಿದೆ. ಅದ್ಭುತವಾಗಿ ಮೂಡಿಬಂದಿದೆ ಎಂದರು. ಇನ್ನೂ ಪಾತ್ರಗಳ ಆಯ್ಕೆ ಬಗ್ಗೆಯೂ  ಮಾತನಾಡಿದ ಅವರು, ನಾನು ವಿಭಿನ್ನ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದೇನೆ. ಯಾವುದೇ ಜಾನರ್‌ ಗೆ ಸ್ಟಿಕ್‌ ಆಗುವುದಿಲ್ಲ. ಹೊಸದನ್ನು ಕಲಿಯಲು ಪ್ರಯತ್ನ ಮಾಡುತ್ತೇನೆ. ಶ್ರೀನಿಧಿ ಈ ಚಿತ್ರದಲ್ಲಿ ಕನ್ನಡ ಡಬ್‌ ಮಾಡಿದ್ದಾರೆ. ಇನ್ನೂ ಕಿಚ್ಚ ಸುದೀಪ್‌ ಅಣ್ಣನ…

Read More

ಆಂದ್ರಪ್ರದೇಶ: ಟೀಂ ಇಂಡಿಯಾದ ಮಾಜಿ ವೇಗಿ ಶ್ರೀಶಾಂತ್ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದರು. ಇಂದು ಬೆಳಿಗ್ಗೆ ವಿಐಪಿ ವಿರಾಮದ ಸಮಯದಲ್ಲಿ ಶ್ರೀಶಾಂತ್ ತಮ್ಮ ಕುಟುಂಬ ಸದಸ್ಯರೊಂದಿಗೆ ಭಗವಂತನ ಸೇವೆಯಲ್ಲಿ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ವೇದ ವಿದ್ವಾಂಸರು ಶ್ರೀಶಾಂತರ ಕುಟುಂಬ ಸದಸ್ಯರಿಗೆ ವೇದಾಶೀರ್ವಾದ ನೀಡಿ ತೀರ್ಥ ಪ್ರಸಾದವನ್ನು ನೀಡಿದರು. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ಶ್ರೀಶಾಂತ್ ಮತ್ತು ಅವರ ಪತ್ನಿಗೆ ರೇಷ್ಮೆ ವಸ್ತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ದರ್ಶನದ ನಂತರ, ಹೊರಗೆ ಬಂದ ಶ್ರೀಶಾಂತ್ ಜೊತೆ ಫೋಟೋ ತೆಗೆಸಿಕೊಳ್ಳಲು ಭಕ್ತರು ಪೈಪೋಟಿ ನಡೆಸಿದರು. ಶ್ರೀಶಾಂತ್ ದೇವಾಲಯದ ಹೊರಗೆ ಮಾತನಾಡಿದ ಅವರು, ಕುಟುಂಬ ಸದಸ್ಯರೊಂದಿಗೆ. ಶ್ರೀವಾರಿಯ ದರ್ಶನ ಪಡೆದು ತುಂಬಾ ಸಂತೋಷವಾಯಿತು ಎಂದು ಅವರು ಹೇಳಿದರು. ಐಪಿಎಲ್-2025 ಬಗ್ಗೆ ಪ್ರತಿಕ್ರಿಯಿಸುತ್ತಾ, ಚಿಕ್ಕ ವಯಸ್ಸಿನಲ್ಲಿ ಅದ್ಭುತ ರೀತಿಯಲ್ಲಿ ರನ್ ಗಳಿಸಿದ್ದಕ್ಕಾಗಿ ವೈಭವ್ ಸೂರ್ಯ ವಂಶಿ ಅವರನ್ನು ಶ್ಲಾಘಿಸಿದರು. ಕಾಮೆಂಟರಿ ಬಾಕ್ಸ್ ನಿಂದ ಪಂದ್ಯ ನೋಡುವುದು ತುಂಬಾ ಸಂತೋಷ ತಂದಿದೆ ಎಂದು ಶ್ರೀಶಾಂತ್ ಹೇಳಿದರು.

Read More