ಹೇಳಿಕೇಳಿ ಇದು ಡಿಜಿಟಲ್ ಜಮಾನ. ಸ್ವಲ್ಪ ಯಾಮಾರಿದ್ರೂ ಉಂಡೇ ನಾಮ ತಿಕ್ಕೋರು ಜಾಸ್ತಿನೇ. ಇನ್ನು, ಆನ್ ಲೈನ್ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೇ ಅಂತಾ ನೀವು ಆ ಕುಣಿಗೆ ಸಿಕ್ಕಿದ್ರೆ ಮುಗಿತು ಕಥೆ. ಆ ಕುಣಿಕೆಯಿಂದ ಹೊರಬರೋದಿಕ್ಕೆ ಸರ್ಕಸ್ ಮಾಡಬೇಕು. ಈ ಜಾಲದಲ್ಲಿ ಕನ್ನಡದ ಕಿರುತೆರೆ ನಟಿ ಸಿಲುಕಿದ್ದಾರೆ ಅನ್ನೋದೇ ವಿಪರ್ಯಾಸ. ‘ಸೀತೆ’, ‘ಪತ್ತೇದಾರಿ’, ʼಪಲ್ಲವಿ ಅನುಪಲ್ಲವಿʼ, ‘ಅಂತರಪಟ’ ಸೇರಿದಂತೆ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯರಾಗಿರುವ ಶರ್ಮಿಳಾ ಚಂದ್ರಶೇಖರ್ ಆನ್ಲೈನ್ ಬಡ್ಡಿಕೋರರು ಬೀಸಿದ ಬಲೆಯಲ್ಲಿ ಸಿಲುಕಿದ್ದಾರೆ. ಈ ಸಂಬಂಧ ಅವರು ವಿಡಿಯೋವೊಂದನ್ನು ಮಾಡಿ ನೀವು ಮೋಸ ಹೋಗಬೇಡಿ ಎಂದು ಸಂದೇಶ ಕೊಟ್ಟಿದ್ದಾರೆ. ಶರ್ಮಿಳಾ ಮಾತು! ಇತ್ತೀಚೆಗೆ ಆನ್ಲೈನ್ ಮೋಸ ಜಾಸ್ತಿ ಆಗಿದೆ, ವೇವ್ ಕ್ಯಾಶ್ ಲೋನ್ ಆಪ್ನಿಂದ ನಿಮಗೆ ಸಾಲ ಮಂಜೂರು ಆಗಿದೆ, ನೀವು ಸಾಲ ತೀರಿಸಿಲ್ಲ ಅಂದರೆ ನಿಮ್ಮ ಫೋಟೊಗಳನ್ನು ಬಳಸಿಕೊಂಡು, ಅಶ್ಲೀಲವಾಗಿ ಎಡಿಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನೆಲ್ಲ ವಾಟ್ಸಾಫ್ ಬಳಕೆದಾರರಿಗೆ…
Author: Author AIN
ಜಿಯೋ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿದೆ. ದೇಶದಲ್ಲಿ ಸುಮಾರು 460 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಲಕ್ಷಾಂತರ ಮೊಬೈಲ್ ಬಳಕೆದಾರರ ಅಗತ್ಯಗಳನ್ನು ರಿಲಯನ್ಸ್ ಜಿಯೋ ಪೂರೈಸುತ್ತಿರುವ ರೀತಿಯನ್ನು ಗಮನಿಸಿದರೆ, ಈ ಸಂಖ್ಯೆ ಶೀಘ್ರದಲ್ಲೇ 500 ಮಿಲಿಯನ್ ದಾಟಬಹುದು. ಜಿಯೋ ತನ್ನ ಗ್ರಾಹಕರಿಗೆ ಹಲವಾರು ರೀಚಾರ್ಜ್ ಯೋಜನೆಗಳ ಪಟ್ಟಿಯನ್ನು ನೀಡುತ್ತಿದೆ. ಕಂಪನಿಯು ಅಗ್ಗದ ಮತ್ತು ದುಬಾರಿ ಯೋಜನೆಗಳನ್ನು ಹೊಂದಿದೆ. ಜಿಯೋದ ದೀರ್ಘಾವಧಿಯ ಮಾನ್ಯತೆಯೊಂದಿಗೆ ಅಗ್ಗದ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. ರಿಲಯನ್ಸ್ ಜಿಯೋ ತನ್ನ ಲಕ್ಷಾಂತರ ಗ್ರಾಹಕರಿಗಾಗಿ ಹಲವು ಉತ್ತಮ ಯೋಜನೆಗಳನ್ನು ಹೊಂದಿದೆ. ಗ್ರಾಹಕರು ತಮ್ಮ ಅನುಕೂಲಕ್ಕಾಗಿ ರೀಚಾರ್ಜ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಜಿಯೋ ತನ್ನ ಪೋರ್ಟ್ಫೋಲಿಯೊವನ್ನು ಹಲವಾರು ವರ್ಗಗಳಾಗಿ ವಿಂಗಡಿಸಿದೆ. ನೀವು ಅಗ್ಗದ, ದೀರ್ಘಾವಧಿಯ ಮಾನ್ಯತೆಯ ಯೋಜನೆಯನ್ನು ಹುಡುಕುತ್ತಿದ್ದರೆ, ದುಬಾರಿ ರೀಚಾರ್ಜ್ ಯೋಜನೆಗಳನ್ನು ತಪ್ಪಿಸಲು ಇದು ತುಂಬಾ ಉಪಯುಕ್ತವಾಗಿದೆ. ಜಿಯೋ ತನ್ನ ಪಟ್ಟಿಯಲ್ಲಿ ದೀರ್ಘಾವಧಿಯ ಮಾನ್ಯತೆಯೊಂದಿಗೆ ಹಲವು ರೀಚಾರ್ಜ್ ಯೋಜನೆಗಳನ್ನು ಹೊಂದಿದೆ. ನಿಮ್ಮ ಬಜೆಟ್ಗೆ ಅನುಗುಣವಾಗಿ ನೀವು ಯಾರನ್ನಾದರೂ…
ಇಡೀ ಕ್ರಿಕೆಟ್ ಜಗತ್ತು ಇವತ್ತು ಹದಿನಾಲ್ಕು ವರ್ಷದ ಪೋರ ವೈಭವ್ ಸೂರ್ಯವಂಶಿ ಬಗ್ಗೆ ಕೊಂಡಾಡುತ್ತಿದೆ. ಗುಣಗಾನ ಮಾಡುತ್ತಿದೆ. 14 ವರ್ಷದ ಪೋರನ ತಾಕತ್ತು, ಗತ್ತು, ಗೈರತ್ತಿನ ಬಗ್ಗೆ ಕ್ರಿಕೆಟ್ ದಿಗ್ಗಜರೇ ಸಲಾಂ ಎನ್ನುತ್ತಿದ್ದಾರೆ. ನಿನ್ನೆ ನಡೆದ ಆರ್ ಆರ್ ವರ್ಸಸ್ ಜಿಟಿ ಐಪಿಎಲ್ ಕಾಳಗದಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು, ಜಸ್ಟ್ ವಾವ್ ಎನ್ನುವ ಫರ್ಪಾಮೆನ್ಸ್ ಕೊಟ್ಟಿದ್ದು ಆರ್ ಆರ್ ಯಂಗೆಸ್ಟ್ ಫ್ಲೇಯರ್ ವೈಭವ್ ಸೂರ್ಯವಂಶಿ. ಭಾರತದ ಫ್ಯೂಚರ್ ಕ್ರಿಕೆಟ್ ತಾರೆ, ಆರ್ ಆರ್ನ ಗತವೈಭವ ಅಂತಾ ಕ್ರಿಕೆಟ್ ಪ್ರೇಮಿಗಳು ಸೂರ್ಯವಂಶಿಯನ್ನು ವರ್ಣನೆ ಮಾಡುತ್ತಿದ್ದಾರೆ. ಸಿಡಿಲಬ್ಬರದ ಆಟ ಆಡಿ ಆರ್ ಆರ್ ಗೆಲುವಿಗೆ ಕಾರಣರಾದ ವೈಭವ್ ಸೂರ್ಯವಂಶಿಗೆ ಮಹಾನ್ ಗುರುವಾಗಿ ಹಿಂದೆ ನಿಂತಿರುವವರು ನಮ್ಮ ಕನ್ನಡದ ಹೆಮ್ಮೆ ರಾಹುಲ್ ದ್ರಾವಿಡ್. ಐಪಿಎಲ್ ಬಿಡ್ಡಿಂಗ್ನಲ್ಲಿ ಈ 14ರ ಪೋರನ್ನು ಒಂದೂವರೆ ಕೋಟಿ ಕೊಟ್ಟು ಖರೀಸುವಂತೆ ಹಠ ಹಿಡಿದ್ದು ರಾಹುಲ್ ಡ್ರಾವಿಡ್. ದೆಹಲಿ ಕ್ಯಾಪಿಟಲ್ ಪಾಲಾಗದಂತೆ ವೈಭವ್ ನ್ನು ತಮ್ಮ ತಂಡಕ್ಕೆ ಬರ ಮಾಡಿಕೊಂಡಿದ್ದು ರಾಹುಲ್…
ಬೆಂಗಳೂರು: ಇತ್ತೀಚೆಗೆ ಶಾಲಾ-ಕಾಲೇಜು, ಹೋಟೆಲ್, ಏರ್ಪೋರ್ಟ್ಗಳಿಗೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಜನಪ್ರಿಯ ಹೋಟೆಲ್ಗಳಿಗೆ ಬಾಂಬ್ ಬೆದರಿಕೆ ಇಮೇಲ್ಗಳು ಬಂದಿತ್ತು. ಇದೀಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆಯ ನಡುಕ ಉಂಟಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಆಚಾರ್ಯ ಕಾಲೇಜಿನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ಅಪರಿಚಿತ ವ್ಯಕ್ತಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಜತೆಗೆ, ಕಾಲೇಜು ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಚಾರ್ಯ ಕಾಲೇಜಿನ ಅಧಿಕೃತ ಇ-ಮೇಲ್ ಪರಿಶೀಲನೆ ವೇಳೆ ಬೆರಿಕೆ ಸಂದೇಶ ಗಮನಕ್ಕೆ ಬಂದಿದೆ. ಸದ್ಯ ಕಾಲೇಜಿನ ಆಡಳಿತ ಮಂಡಳಿ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದೆ. ಘಟನೆ ಸಂಬಂಧ ಎನ್ಸಿಆರ್ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ನಂತರ ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ತನಿಖೆ ಮುಂದುವರಿಸಿದ್ದಾರೆ.
ನಿಮ್ಮ ಆದಾಯದ ಒಂದು ಭಾಗವನ್ನು ಉಳಿಸುವ ಮೂಲಕ ಸುರಕ್ಷಿತ, ವಿಶ್ವಾಸಾರ್ಹ ಹೂಡಿಕೆಯನ್ನು ನೀವು ಹುಡುಕುತ್ತಿದ್ದರೆ, ಸಾರ್ವಜನಿಕ ಭವಿಷ್ಯ ನಿಧಿ (PPF) ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಇದು ಸರ್ಕಾರಿ ಖಾತರಿಯೊಂದಿಗೆ ಬರುವುದಲ್ಲದೆ, ಅದರ ಮೇಲಿನ ಬಡ್ಡಿಯೂ ಮಾರುಕಟ್ಟೆಯ ಏರಿಳಿತಗಳಿಂದ ಪ್ರಭಾವಿತವಾಗುವುದಿಲ್ಲ. ಇದರರ್ಥ ಷೇರು ಮಾರುಕಟ್ಟೆ ಕುಸಿತ ಅಥವಾ ಆರ್ಥಿಕ ಅನಿಶ್ಚಿತತೆ ಇದ್ದರೂ ಸಹ, ನಿಮ್ಮ ಹೂಡಿಕೆಯು ಅಪಾಯದಲ್ಲಿರುವುದಿಲ್ಲ. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ಪಿಪಿಎಫ್ ಅನ್ನು ಸುರಕ್ಷಿತ ಉಳಿತಾಯ ಸಾಧನವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ದೀರ್ಘಾವಧಿಯಲ್ಲಿ. ನೀವು ಇದರಲ್ಲಿ ನಿಯಮಿತವಾಗಿ ಹೂಡಿಕೆ ಮಾಡಿದರೆ, ಮುಂಬರುವ ವರ್ಷಗಳಲ್ಲಿ ನೀವು ದೊಡ್ಡ ನಿಧಿಯನ್ನು ರಚಿಸಬಹುದು. ನೀವು ರೂ.ಗಿಂತ ಹೆಚ್ಚಿನ ನಿಧಿಯನ್ನು ಹೇಗೆ ರಚಿಸಬಹುದು? 1 ಕೋಟಿ ರೂ. ಪ್ರತಿ ತಿಂಗಳು 12,500 ರೂ. ನೀವು ರೂ. ಹೂಡಿಕೆ ಮಾಡಿದರೆ. ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF) ಪ್ರತಿ ತಿಂಗಳು 12,500 ರೂಪಾಯಿಗಳನ್ನು ಠೇವಣಿ ಇಡುವುದರಿಂದ, ನೀವು 25 ವರ್ಷಗಳ ಅವಧಿಯಲ್ಲಿ ದೊಡ್ಡ ನಿಧಿಯನ್ನು ರಚಿಸಬಹುದು. ಹೂಡಿಕೆ ಮೊತ್ತ: ರೂ. ತಿಂಗಳಿಗೆ 12,500 ರೂ.…
ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲಾ ಕಾಂಬಿನೇಷನ್ ಸಿನಿಮಾದ ಬಿಡುಗಡಗೆ ಮುಹೂರ್ತ ಫಿಕ್ಸ್ ಆಗಿದೆ. ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿದೆ. ಮುಂದಿನ ವರ್ಷದ ಜೂನ್ 25ಕ್ಕೆ ನೀಲ್-ಎನ್ಟಿಆರ್ ಸಿನಿಮಾ ತೆರೆಗೆ ಬರಲಿದೆ. ತಾರಕ್ ಬರ್ತಡೇಗೆ ಫಸ್ಟ್ ಗ್ಲಿಂಪ್ಸ್! ಜೂನಿಯರ್ ಎನ್ಟಿಆರ್ ಬರ್ತಡೇಗೆ ಚಿತ್ರತಂಡ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡೋದಾಗಿ ಘೋಷಿಸಿದೆ. ಮುಂದಿನ ತಿಂಗಳ 20ರಂದು ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದೆ. ಸದ್ಯ ಚಿತ್ರತಂಡ ಟೈಟಲ್ ರಿವೀಲ್ ಮಾಡಿಲ್ಲ. ಆದ್ರೆ ಡ್ರ್ಯಾಗನ್ ಎಂಬ ಶೀರ್ಷಿಕೆಯನ್ನು ಫಿಕ್ಸ್ ಮಾಡಿದೆ ಎಂಬ ಸುದ್ದಿ ಇದೆ. ಜ್ಯೂ.ಎನ್ಟಿಆರ್ ಹೊಸ ಚಿತ್ರದ ಚಿತ್ರೀಕರಣ ಉತ್ತರ ಕನ್ನಡದ ಕಡಲ ಕಿನಾರೆಯಲ್ಲಿ ನಡೆಯುತ್ತಿದೆ. ಕುಮುಟಾದ ರಾಮನಗಿಂಡಿ ಬೀಚ್ನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕಾಗಿ ಯಂಗ್ ಟೈಗರ್ ಭರ್ಜರಿಯಾಗಿ ದೇಹ ದಂಡಿಸಿದ್ದಾರೆ. ಪಾತ್ರಕ್ಕಾಗಿ 5 ತಿಂಗಳಲ್ಲಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಈಗಾಗಲೇ ವಿಶಾಖಪಟ್ಟಣಂ ಹಾಗೂ ಹೈದರಾಬಾದ್ನಲ್ಲಿ ಒಂದೊಂದು ಹಂತದ ಚಿತ್ರೀಕರಣವನ್ನು ತಂಡ…
ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುವುದಲ್ಲದೆ, ಪೋಷಕಾಂಶಗಳ ದೃಷ್ಟಿಯಿಂದಲೂ ಇದು ಅತ್ಯಂತ ಮೌಲ್ಯಯುತವೆಂದು ಪರಿಗಣಿಸಲಾಗಿದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಮಾವಿನಹಣ್ಣುಗಳು ಜೀವಸತ್ವಗಳು ಮತ್ತು ಖನಿಜಗಳಂತಹ ಅನೇಕ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಅದಕ್ಕಾಗಿಯೇ ಇದನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಹಣ್ಣು ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಅನೇಕ ಜನರಲ್ಲಿ ಇರುವ ಮುಖ್ಯ ಸಂದೇಹವೆಂದರೆ ಮಧುಮೇಹ ಇರುವವರು ಮಾವಿನ ಹಣ್ಣು ತಿನ್ನಬಹುದೇ ಎಂಬುದು. ಇದರ ಬಗ್ಗೆ ವೈದ್ಯಕೀಯ ತಜ್ಞರು ಏನು ಹೇಳುತ್ತಾರೆಂದು ನಿಮಗೆ ತಿಳಿದಿದೆಯೇ? ಮಾವಿನಹಣ್ಣನ್ನು ತಿನ್ನಬಹುದು, ಆದರೆ ಅವುಗಳನ್ನು ಮಿತವಾಗಿ ತಿನ್ನಬೇಕು. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ಏಕೆಂದರೆ ಮಾವಿನ ಹಣ್ಣಿನಲ್ಲಿರುವ ಒಟ್ಟು ಕ್ಯಾಲೊರಿಗಳಲ್ಲಿ ಸರಿಸುಮಾರು ಶೇಕಡಾ 90 ರಷ್ಟು ಸಕ್ಕರೆಯಿಂದಲೇ ಬರುತ್ತದೆ. ಆದ್ದರಿಂದ, ಹೆಚ್ಚು ಮಾವಿನಹಣ್ಣು ತಿನ್ನುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ. ವಿಶೇಷವಾಗಿ ಮಧುಮೇಹ ಇರುವವರು ಮಾವಿನಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಮಾವಿನಹಣ್ಣು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು (GI) ಹೊಂದಿದೆ. ಇದು ಮಾವು ತಿಂದ ತಕ್ಷಣ ರಕ್ತದಲ್ಲಿನ ಸಕ್ಕರೆ…
ಈ ಬಾರಿ ಐಪಿಎಲ್ ಕಾಪು ಜೋರಾಗಿದೆ. ಕಪ್ ಗೆಲ್ಲಬೇಕು ಅಂತಾ ಆರ್ಸಿಬಿ ಪಣ ತೊಟ್ಟು ಅಖಾಡಕ್ಕೆ ಇಳಿದ್ದು, ಟೇಬಲ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಎಲ್ಲಾ ಮ್ಯಾಚ್ಗಳನ್ನು ಸೊಗಸಾಗಿ ಆಟವಾಡುತ್ತಿದೆ. ಮೊನ್ನೆ ಇತ್ತೀಚೆಗೆ ನ್ಯೂ ಚಂಡೀಗಢದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ ಬೆಂಗಳೂರು ಪಂದ್ಯ ನಡೆಯಿತು. ಈ ವೇಳೆ ಆರ್ಸಿಬಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಹಾಗೂ ಪಂಜಾಬ್ ಕಿಂಗ್ಸ್ ಮಾಲೀಕೆ ಪ್ರೀತಿ ಜಿಂಟಾ ಮಾತುಕತೆಯಲ್ಲಿ ತೊಡಗಿದ್ದರು. ಮೊಬೈಲ್ ನೋಡಿ ಇಬ್ಬರು ನಗುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದಕ್ಕೆ ಕಾರಣ ಏನೂ ಅನ್ನೋದನ್ನು ಇದೀಗ ಪ್ರೀತಿ ಜಿಂಟಾ ಹೇಳಿದ್ದಾರೆ. ಪ್ರೀತಿ ಜಿಂಟಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟ ಆಕ್ಟೀವ್. ಅವರು ಇತ್ತೀಚೆಗೆ ಟ್ವಿಟರ್ನಲ್ಲಿ ಪ್ರಶ್ನೋತ್ತರ ಸೆಷನ್ ನಡೆಸಿದ್ದರು. ಈ ವೇಳೆ ವಿರಾಟ್ ಹಾಗೂ ಪ್ರೀತಿ ಪರಸ್ಪರ ನಗುತ್ತಿರುವ ಫೋಟೋ ಇದೆ. ಈ ಬಗ್ಗೆ ಪ್ರೀತಿ ಜಿಂಟಾಗೆ ಪ್ರಶ್ನೆ ಮಾಡಲಾಗಿದೆ. ‘ವಿರಾಟ್ ಅವರ ಬಳಿ ಏನು ಮಾತನಾಡುತ್ತಿದ್ದಿರಿ’…
ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಮ್ಮೆ ಕಣಕ್ಕೆ ಇಳಿಯಲಿದೆ. ಭಾನುವಾರ (ಏಪ್ರಿಲ್ 27) ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿತು. ಡಿಸಿ ತಂಡವು ಮಂಗಳವಾರ (ಏಪ್ರಿಲ್ 29) ತಮ್ಮ ತವರು ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳಿಗೆ ಗೆಲುವು ಬಹಳ ಮುಖ್ಯ. ದೆಹಲಿ ಗೆಲ್ಲುವ ಮೂಲಕ ಅಗ್ರ 4 ರಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ನೋಡುತ್ತದೆ. ಕೋಲ್ಕತ್ತಾ ತಂಡವು ಪ್ಲೇಆಫ್ ರೇಸ್ನಲ್ಲಿ ತನ್ನನ್ನು ತಾನು ಬಲಿಷ್ಠವಾಗಿಟ್ಟುಕೊಳ್ಳಲು ಬಯಸುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಅವರು 9 ಪಂದ್ಯಗಳನ್ನು ಆಡಿದ್ದಾರೆ, 6 ರಲ್ಲಿ ಗೆದ್ದಿದ್ದಾರೆ ಮತ್ತು 3 ಪಂದ್ಯಗಳಲ್ಲಿ ಸೋತಿದ್ದಾರೆ. ಹೀಗಾಗಿ, ಖಾತೆಯಲ್ಲಿ 12 ಅಂಕಗಳಿವೆ. ಮತ್ತೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ಕೆಕೆಆರ್ 9 ಪಂದ್ಯಗಳಲ್ಲಿ ಕೇವಲ 3 ಗೆಲುವು ಮತ್ತು 5 ಸೋಲುಗಳನ್ನು ಕಂಡಿದೆ. https://ainkannada.com/this-hair-pack-turns-white-hair-black-from-the-roots-knee-length-hair-guaranteed/ ಮಳೆಯಿಂದಾಗಿ…
ಕನ್ನಡ ಚಿತ್ರರಂಗದಲ್ಲಿ ಹಿರಿಯ ನಿರ್ದೇಶಕ ಮುರಳಿ ಮೋಹನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅವರು ವಾರಕ್ಕೆ 3 ದಿನಗಳ ಕಾಲ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. 2020 ರಲ್ಲೇ ಕಿಡ್ನಿ ಟ್ರ್ಯಾನ್ಸ್ಪ್ಲಾಂಟ್ಗೆ ಮುರಳಿ ಮೋಹನ್ ಒಳಗಾಗಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 2018ರಿಂದ ಮುರಳಿ ಮೋಹನ್ ಅವರು ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದಾರೆ. ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಸುಮಾರು ಇಪ್ಪತ್ತೈದು ಲಕ್ಷ ರೂಪಾಯಿಗಳು ಖರ್ಚಾಗಲಿದ್ದು, ಹೀಗಾಗಿ ಸಹಾಯಕ್ಕಾಗಿ ಅವರು ಅಂಗಲಾಚಿದ್ದಾರೆ. ಈಗಾಗಲೇ ಅವರು ಹೃದಯ ಶಸ್ತ್ರ ಚಿಕಿತ್ಸೆ ಹಾಗೂ ಇತರೆ ಚಿಕಿತ್ಸೆಗಳಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದು, ಈ ನಿಟ್ಟಿನಲ್ಲಿ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.. ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಅವರ ಗರಡಿಯಲ್ಲಿ ಪಳಗಿದ ಮುರಳಿ ಮೋಹನ್. ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆತ್ಮೀಯರು. ಕನ್ನಡ ಚಿತ್ರರಂಗದಲ್ಲಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವವರು ಮುರಳಿ ಮೋಹನ್, ಹ್ಯಾಟ್ರಿಕ್…