Author: Author AIN

ಪ್ರೇಮಕಾಶ್ಮೀರವಾಗಿದ್ದ ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಘೋರವಾಗಿ ಕೊಂದು ಹಾಕಿದ್ದರು. ಮಿನಿ ಸ್ವಿಜರ್‌ ಲ್ಯಾಂಡ್‌ ಎಂದೇ ಕರೆಸಿಕೊಳ್ಳುವ ಈ ಜಾಗ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳ..ಇಲ್ಲಿ ನೆತ್ತರು ಹರಿದ ಬಳಿಕ ಪ್ರವಾಸಿಗರು ಹೋಗುವ ಧೈರ್ಯ ಮಾಡ್ತಿಲ್ಲ. ಹೀಗಿರುವಾಗ ಖ್ಯಾತ ನಟರೊಬ್ಬರು   ಪಹಲ್ಗಾಮ್‌ಗೆ ತೆರಳಿ ಪ್ರವಾಸಿಗರನ್ನು ಅಲ್ಲಿಗೆ ಬರುವಂತೆ ಕೋರಿದ್ದಾರೆ. ಕನ್ನಡದಲ್ಲಿ ಎದೆಗಾರಿಕೆ, ಯಕ್ಷ, ಉಗ್ರಂ ಸೇರಿದಂತೆ ಸಾಕಷ್ಟು ಪರಭಾಷೆಯ ಚಿತ್ರಗಳಲ್ಲಿ ನಟಿಸಿರುವ ಅತುಲ್‌ ಕುಲಕರ್ಣಿ, ಮುಂಬೈನಿಂದ ಶ್ರೀನಗರಕ್ಕೆ ಪ್ರಯಾಣಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ʼಇದು ಹಿಂದೂಸ್ತಾನದ ಭೂಮಿ, ಇಲ್ಲಿ ಭಯಕ್ಕಿಂತ ಧೈರ್ಯವೇ ಹೆಚ್ಚು. ಬನ್ನಿ, ಕಾಶ್ಮೀರಕ್ಕೆ ಹೋಗೋಣ.. ನಾನು ಬಂದಿದ್ದೇನೆ, ನೀವೂ ಬನ್ನಿ..’ ಎಂದು ಅವರು ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ. ಏಪ್ರಿಲ್-ಮೇ ತಿಂಗಳುಗಳಲ್ಲಿ ಕಾಶ್ಮೀರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರ ಬರುತ್ತಾರೆ. ಆದರೆ ದಾಳಿಯ ನಂತರ, ವಿಮಾನವೂ ಖಾಲಿ ಇದೆ. ಈ ವಿಮಾನವು ಯಾವಾಗಲೂ ಪ್ರಯಾಣಿಕರಿಂದ ತುಂಬಿರುತ್ತದೆ ಎಂದು ಸಿಬ್ಬಂದಿ ಅತುಲ್‌ಗೆ ಮಾಹಿತಿ ನೀಡಿದರು. ‘ನಾವು ಈ ಜಾಗಗಳನ್ನು ಮತ್ತೆ ತುಂಬಬೇಕು’…

Read More

ಭಾರತದಲ್ಲಿ ಚಿನ್ನದ ಮೇಲಿನ ವ್ಯಾಮೋಹ ಎಂದಿಗೂ ಬದಲಾಗಲ್ಲ. ಇಲ್ಲಿ ಜನ ಕೇವಲ ಆಭರಣವಾಗಿ ನೋಡದೇ ಅದನ್ನು ಉಳಿತಾಯ, ಹೂಡಿಕೆಯಾಗಿ ನೋಡುತ್ತಾರೆ. ಹೀಗಾಗಿ ಚಿನ್ನ ದಿನೇ ದಿನೇ ತನ್ನ ಮೌಲ್ಯ ಹೆಚ್ಚಿಸಿಕೊಂಡು ಗಗನಕ್ಕೇರುತ್ತಿದೆ. ಬಹಳ ಹಿಂದೆ ಭಾರತೀಯರಿಗೆ ಈ ಚಿನ್ನ, ಬೆಳ್ಳಿ ವಸ್ತುಗಳನ್ನು ಹೆಚ್ಚು ಆಭರಣವಾಗಿ ಮಾತ್ರ ಹೆಚ್ಚು ಬಳಸುತ್ತಿದ್ದರು. ಆದರೆ ಈಗ ಚಿನ್ನ ಕೇವಲ ಅಲಂಕಾರಿಕ ವಸ್ತುವಾಗಿ ಉಳಿದಿಲ್ಲ. ಬದಲಿಗೆ ಬಂಗಾರವನ್ನು ಈಗ ಬಾಂಡ್‌ ರೂಪದಲ್ಲಿ, ಷೇರು ರೂಪದಲ್ಲಿ ಹೂಡಿಕೆ-ಉಳಿತಾಯವಾಗಿ ಇಡುತ್ತಿದ್ದಾರೆ. ಇದೇ ಕಾರಣಕ್ಕೆ ಗ್ರಾಹಕರು ಚಿನ್ನ-ಬೆಳ್ಳಿ ದರ ಎಷ್ಟೇ ಏರಿದ್ದರೂ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಇವುಗಳನ್ನು ಖರೀದಿ ಮಾಡುತ್ತಾರೆ. https://ainkannada.com/do-you-eat-mangoes-at-night-so-see-this-news-miss-modde/ ಇಂದು ಚಿನ್ನದ ಬೆಲೆ ಗ್ರಾಮ್​​ಗೆ 62 ರೂನಷ್ಟು ಕುಸಿತ ಆಗಿದೆ. ಒಂದು ಗ್ರಾಮ್​​ಗೆ 9,002 ರೂ ಇದ್ದ 22 ಕ್ಯಾರಟ್ ಚಿನ್ನದ ಬೆಲೆ 8,940 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 9,753 ರೂ ಆಗಿದೆ. ಬೆಳ್ಳಿ ಬೆಲೆಯೂ ಅಲ್ಪ ಇಳಿಕೆ ಕಂಡಿದೆ. ವಿದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ತುಸು…

Read More

ಬೆಂಗಳೂರು: ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಪರೀಕ್ಷೆಯೊಂದಕ್ಕೆ ಹಾಜರಾಗುವವರು ಮಂಗಳಸೂತ್ರ, ಧಾರ್ಮಿಕ ಸಂಕೇತಗಳನ್ನು ತೆಗೆದು ಹಾಜರಾಗಬೇಕು ಎಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಭಾರತೀಯ ರೈಲ್ವೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ಬರೆಯುವವರು ಮಂಗಳಸೂತ್ರ, ಜನಿವಾರದಂತಹ ಧಾರ್ಮಿಕ ಸಂಕೇತಗಳು ಮತ್ತು ಆಭರಣಗಳನ್ನು ತೆಗೆಯುವಂತೆ ಮಾಡಬಾರದು. https://ainkannada.com/do-you-eat-mangoes-at-night-so-see-this-news-miss-modde/ ಜನಿವಾರ, ಮಂಗಳಸೂತ್ರ ತೆಗೆಸದಂತೆ ಅಧಿಕಾರಿಗಳಿಗೆ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸೂಚನೆ ನೀಡಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಮಂಗಳಸೂತ್ರ ಹಾಗೂ ಧಾರ್ಮಿಕ ಸಂಕೇತಗಳನ್ನು ತೆಗೆಯಬೇಕೆಂದು ಹಾಲ್​ಟಿಕೆಟ್​ನಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಬಗ್ಗೆ ನಾವು ಅವರ ಗಮನಕ್ಕೆ ತಂದಿದ್ದೆವು. ಅವರು ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಎಕ್ಸ್​ ಸಂದೇಶದ ಮೂಲಕ ಬ್ರಿಜೇಶ್ ಚೌಟ ಸ್ಪಷ್ಟಪಡಿಸಿದ್ದಾರೆ.

Read More

ಇಂಡಿಯನ್ ಪ್ರೀಮಿಯರ್ ಲೀಗ್​ನ 46ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.3 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಗೆಲುವು ದಾಖಲಿಸಿದೆ. ಇದರ ನಡುವೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮೈದಾನದಲ್ಲಿ ಆಡಿದ ಜಗಳದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ವಿಕೆಟ್ ಕೀಪಿಂಗ್ ಮಾಡುವಾಗ ಕೆಎಲ್ ರಾಹುಲ್ ಅವರು ವಿರಾಟ್ ಕೊಹ್ಲಿ ಜೊತೆ ವಾಗ್ವಾದ ನಡೆಸುತ್ತಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. https://ainkannada.com/do-you-eat-mangoes-at-night-so-see-this-news-miss-modde/ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರನ್ನು ಉತ್ತಮ ಸ್ನೇಹಿತರು ಎಂದು ಪರಿಗಣಿಸಲಾಗುತ್ತದೆ, ಆದರೆ ಐಪಿಎಲ್ ಪಂದ್ಯದ ಸಮಯದಲ್ಲಿ…

Read More

ನಾವು ಯಾವುದಾದರೂ ವಿಶೇಷವಾದ ಅಡುಗೆ ಮಾಡುವ ಸಂದರ್ಭದಲ್ಲಿ ಒಂದು ವೇಳೆ ನಿಂಬೆ ಹಣ್ಣಿನ ಅವಶ್ಯಕತೆ ಇದ್ದರೆ, ಅದನ್ನು ಎರಡು ಹೋಳು ಮಾಡಿ ನಿಂಬೆ ಹಣ್ಣಿನ ರಸ ಹಿಂಡಿಕೊಂಡು ಸಿಪ್ಪೆಯನ್ನು ಹೊರಗಡೆ ಬಿಸಾಡುತ್ತೇವೆ. ಅಂದ್ರೆ ನಮ್ಮ ಪ್ರಕಾರದಲ್ಲಿ ನಿಂಬೆಹಣ್ಣಿನ ಸಿಪ್ಪೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು. ಆದರೆ ಇದು ತಪ್ಪು. ಚರ್ಮದ ಅನೇಕ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ. https://ainkannada.com/do-you-eat-mangoes-at-night-so-see-this-news-miss-modde/ ಯಾವುದಾದರೂ ವಸ್ತುಗಳ ಮೇಲೆ ಬಿಡದೆ ಇರುವ ಕಲೆಗಳನ್ನು ಇದು ಹೋಗಲಾಡಿಸುತ್ತದೆ. ಪಾತ್ರೆಗಳನ್ನು ಬೆಳ್ಳಗಾಗಿಸುತ್ತದೆ. ಹೀಗೆ ಹೇಳುತ್ತ ಹೋದರೆ ನಿಂಬೆಹಣ್ಣಿನ ಸಿಪ್ಪೆ ಇಂದ ಸಿಗುವ ಲಾಭಗಳು ಒಂದೆರಡಲ್ಲ. ಅದೇ ಆರೋಗ್ಯಕ್ಕೆ ಏನು ಲಾಭ ಎಂದು ನೀವು ಇಲ್ಲಿ ತಿಳಿದು ಕೊಳ್ಳಬಹುದು ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ. ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಪೆಕ್ಟಿನ್ ಎಂಬ ಅಂಶವಿರುವುದರಿಂದ ಇದು ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ. ಬಾಯಿಯ ಸಾಮಾನ್ಯ ಸಮಸ್ಯೆಗಳು ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಸಿಟ್ರಿಕ್ ಆಮ್ಲ ಹೇರಳವಾಗಿದೆ, ಇದು ವಿಟಮಿನ್ ಸಿ ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ…

Read More

ಹುಬ್ಬಳ್ಳಿ: ಸೇವಂತಿಗೆ ಹೂವಿಗೆ ವಿವಿಧ ಕಡೆಗಳಲ್ಲಿ ಮಾರುಕಟ್ಟೆಯಲ್ಲಿ ಈ ಸೇವಂತಿಗೆ ವರ್ಷವಿಡೀ ಬೇಡಿಕೆ ಸೇವಂತಿಗೆ ಈಗ ವಾಣಿಜ್ಯ ಬೆಳೆಯಾಗಿ ಧಾರವಾಡ ತಾಲೂಕಿನ ರೈತರಿಗೆ ಲಾಭದಾಯಕವಾಗಿ ಪರಿಣಮಿಸಿದೆ. ತಾಲೂಕಿನ ಕುರುಬಗಟ್ಟಿ ಲೋಕೂರು, ಮಂಗಳಗಟ್ಟಿ, ಕವಲಗೇರಿ, ಅಮ್ಮಿನಬಾವಿ, ಸೋಮಾಪುರ ಸೇರಿದಂತೆ ಕೃಷಿಯತ್ತ ಒಲವು ತೋರಿದ್ದಾರೆ. ಅಲ್ಪಾವಧಿಯ ಎಂದರೆ ಕೇವಲ ಎರಡು ತಿಂಗಳಿನ ಬೆಳೆಯಾಗಿರುವ ಕಾರಣ ರೈತರಿಗೆ ಇದು ಸುಲಭ, https://ainkannada.com/do-you-eat-mangoes-at-night-so-see-this-news-miss-modde/ ಅನುಕೂಲಕರ ಬೆಳೆಯಾಗಿ ಮಾರ್ಪಟ್ಟಿದೆ. ಕಡಿಮೆ ಖರ್ಚಿನಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದೆ. ಕೆಲವು ರೈತರು ಕಾಯಿಪಲ್ಲೆ ಜತೆಗೆ ಸೇವಂತಿಗೆ ಕೃಷಿ ಕೈಗೊಂಡು ಲಾಭಗಳಿಸುತ್ತಿದ್ದಾರೆ. ಇನ್ನು ಕೆಲವರು ಪ್ರಮುಖ ಬೆಳೆಯನ್ನು ಬೆಳೆದು, ಇನ್ನೊಂದು ಪ್ರಮುಖ ಬೆಳೆಯನ್ನು ಬೆಳೆಯುವ ನಡುವಿನ ಅವಧಿಯಲ್ಲೂ ಸೇವಂತಿಗೆ ಬೆಳೆಯುತ್ತಾರೆ. ಸೇವಂತಿಗೆ ಕೃಷಿಗಾಗಿ ಭೂಮಿ ಹದ ಧಾರವಾಡ -ಸವದತ್ತಿ ರಸ್ತೆಯ ಅಮ್ಮಿನಬಾವಿ ರೈತರ ಭೂಮಿಯಲ್ಲಿ ಕಂಡು ಬಂದಿದೆ.ಈಗ ಜಮೀನಿನಲ್ಲಿಯ ಕಸವನ್ನು ಸಂಪೂರ್ಣವಾಗಿ ತೆಗೆದು ಮಣ್ಣು ಹದ ಮಾಡಿ, 3 ಆಡಿ ಅಂತರದಲ್ಲಿ ಸಾಲುಗಳನ್ನು ಈ ಬಿಟ್ಟು ಹೂವಿನ ಸಸಿ…

Read More

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2025ರ ಐಪಿಎಲ್ ನ ತನ್ನ 10ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ಕೃನಾಲ್ ಪಾಂಡ್ಯಾ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ನೆರವಿನಿಂದ ಜಯಭೇರಿ ಭಾರಿಸಿತು. ಆರ್ ಸಿಬಿ 18.3 ಓವರ್ ನಲ್ಲಿ 165 ರನ್ ಗಳಿಸಿ ಇನ್ನೂ 9 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು. https://ainkannada.com/do-you-eat-mangoes-at-night-so-see-this-news-miss-modde/ ಈ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಪ್ರದರ್ಶನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಬೌಲರ್‌ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ನಾನು ಮೊದಲೇ ಹೇಳಿದಂತೆ, ನಾವು ಮೈದಾನಗಳನ್ನು ನೋಡುವುದಿಲ್ಲ. ಬದಲಾಗಿ ಉತ್ತಮ ಕ್ರಿಕೆಟ್ ಆಡಲು ಬಯಸುತ್ತಿದ್ದೇವೆ. ಚೇಸಿಂಗ್ ವಿಕೆಟ್, ಬೌಲಿಂಗ್ ಮತ್ತು ಸ್ಕೋರ್ ಬಗ್ಗೆ…

Read More

ಮಗುವಿನ ಜನನದ ಅನಂತರ ಅನೇಕ ಪೋಷಕರು ತಮ್ಮ ಮಗುವಿನ ಭವಿಷ್ಯಕ್ಕಾಗಿ ವಿವಿಧ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಲು ಪ್ರಾರಂಭಿಸುತ್ತಾರೆ. ಇದಕ್ಕಾಗಿ ಹೂಡಿಕೆಯ  ವಿವಿಧ ಮಾರ್ಗಗಳನ್ನು ಅನ್ವೇಷಿಸುತ್ತಾರೆ. ಹೆಣ್ಣು ಮಕ್ಕಳಿಗಾಗಿ ಹಲವು ಉಳಿತಾಯ ಯೋಜನೆಗಳಿವೆ. ಅಂತೆಯೇ ಎಲ್ಲ ಮಕ್ಕಳಿಗೂ ಪ್ರಯೋಜನವಾಗುವ ಕೆಲವು ಯೋಜನೆಗಳಿವೆ. ಅದರಲ್ಲಿ ಅಂಚೆ ಕಚೇರಿಯಲ್ಲಿ ಸಿಗುವ ಬಾಲ ಜೀವನ್ ವಿಮಾ ಯೋಜನೆಯೂ ಒಂದು. ಇದು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜೀವ ವಿಮಾ ಯೋಜನೆಯಾಗಿದೆ. ಈ ಯೋಜನೆಯಲ್ಲಿ, ದಿನಕ್ಕೆ ಕೇವಲ 6 ರೂಪಾಯಿಗಳನ್ನು ಉಳಿಸಿದರೆ ಸಾಕು. ನೀವು ಮೆಚ್ಯೂರಿಟಿಯ ಸಮಯದಲ್ಲಿ ಕನಿಷ್ಠ ಒಂದು ಲಕ್ಷ ರೂಪಾಯಿಗಳ ಲಾಭವನ್ನು ಪಡೆಯುತ್ತೀರಿ. 18 ರೂಪಾಯಿ ಉಳಿಸಿದರೆ 3 ಲಕ್ಷ ರೂಪಾಯಿ ಪಡೆಯಬಹುದು. ಯೋಜನೆಯ ಹೆಸರು ಬಾಲ ಜೀವನ್ ಬಿಮಾ ಯೋಜನೆ. ಉಳಿತಾಯ ಮಾಡುವವರ ಕೈಗೆಟಕುವ ಬೆಲೆಗೆ ಅನುಗುಣವಾಗಿ.. ದಿನಕ್ಕೆ ರೂ.6 ಅಥವಾ ರೂ.18 ಆಗಬಹುದು. ಮಕ್ಕಳ ಹೆಸರಿನಲ್ಲಿ ಮಾತ್ರ ಉಳಿತಾಯ ಮಾಡಬೇಕು. ಮಗುವಿನ ವಯಸ್ಸು 5 ರಿಂದ 20 ವರ್ಷಗಳ ನಡುವೆ ಇರಬೇಕು. ಈ ಯೋಜನೆ…

Read More

ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ, ಡಿ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ, ಆರ್. ದೇವರಾಜ್ ನಿರ್ಮಿಸುತ್ತಿರುವ `ದೂರ ತೀರ ಯಾನ’ ಸಿನೆಮಾದ ಮೊದಲ ಪ್ರೇಮಗೀತೆ ಎಂ ಆರ್ ಟಿ ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರಶಂಸೆ ಪಡೆಯುತ್ತಿದೆ. ಕವಿರಾಜ್ ಅವರು ಬರೆದಿರುವ ಸಾಹಿತ್ಯಕ್ಕೆ, ಬಕ್ಕೇಶ್-ಕಾರ್ತಿಕ್ ಸ್ವರ ಸಂಯೋಜನೆ ಮಾಡಿದ್ದು, ಖ್ಯಾತ ಗಾಯಕರಾದ ಅರ್ಮಾನ್ ಮಲಿಕ್ ಹಾಡಿದ್ದಾರೆ. ಮಂಸೋರೆ ಬರೆದಿರುವ ಕಥೆಗೆ ಚೇತನಾ ತೀರ್ಥಹಳ್ಳಿ ಸಂಭಾಷಣೆ ಬರೆದಿದ್ದಾರೆ. ಈ ಸಿನೆಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಬಕ್ಕೇಶ್ ಹಾಗೂ ಕಾರ್ತೀಕ್ ಹಾಡುಗಳನ್ನು ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ, ಕವಿರಾಜ್, ಪ್ರಮೋದ್ ಮರವಂತೆ ಹಾಗೂ ಕಿರಣ್ ಕಾವೇರಪ್ಪ ಹಾಡುಗಳನ್ನು ಬರೆದಿದ್ದಾರೆ. ಸಿನೆಮಾದ ಶೀರ್ಷಿಕೆ ಗೀತೆಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ತಿಳಿಸಿರುವ ನಿರ್ದೇಶಕ ಮಂಸೋರೆಯವರು, ಆ ಹಾಡನ್ನು ವಿಶೇಷವಾಗಿ ಪ್ರೇಕ್ಷಕರಿಂದಲೇ ಬಿಡುಗಡೆ ಮಾಡಿಸುವ ಆಲೋಚನೆ ಇದ್ದು, ರಾಜ್ಯದ ಪ್ರಮುಖ ನಗರವೊಂದರಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ. ಮಂಸೋರೆ ನಿರ್ದೇಶನ ಮಾಡಿರುವ…

Read More

ಎ.ಆರ್.ರೆಹಮಾನ್, ಭಾರತೀಯ ಸಂಗೀತ ಲೋಕದ ದಿಗ್ಗಜ. ತಮ್ಮ ಅಮೋಘ ಸಂಗೀತದ ಮೂಲಕವೇ ಕೋಟಿ ಕೋಟಿ ಹೃದಯ ಗೆದ್ದಿರುವ ರೆಹಮಾನ್‌ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿ ಹೈಕೋರ್ಟ್‌ ಕೃತಿಚೌರ್ಯದ  ಆರೋಪದಡಿ ರೆಹಮಾನ್‌ ಹಾಗೂ  ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದ ನಿರ್ಮಾಪಕರ ಮೇಲೆ ಎರಡು ಕೋಟಿ ದಂಡ ಹಾಕಿದೆ. 2023ರಲ್ಲಿ ಬಿಡುಗಡೆಯಾಗಿದ್ದ ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ‘ವೀರ ರಾಜ ವೀರ’ ಎಂಬ ಹಾಡು ಇದೆ. ಇದು ಜಯಂ ರವಿ ಮತ್ತು ಶೋಭಿತಾ ಧುಲಿಪಾಲ ನಡುವಿನ ಗೀತೆ. ವೀರ ರಾಜ ವೀರ’ ಹಾಡನ್ನು ಶಿವ ಸ್ತುತಿಯಿಂದ ಕದ್ದಿದ್ದು, ಶಿವ ಸ್ತುತಿಯನ್ನು ತಮ್ಮ ತಂದೆ ಮತ್ತು ತಮ್ಮ ಚಿಕ್ಕಪ್ಪನವರು ಕಂಪೋಸ್ ಮಾಡಿದ್ದರು, ಅದರ ರಾಗ, ಸಂಗೀತ, ಬೀಟ್​ಗಳನ್ನು ಸಹ ಯಾವುದೇ ಬದಲಾವಣೆ ಇಲ್ಲದೆ ಬಳಸಿಕೊಂಡಿದ್ದಾರೆ’ ಎಂದು ಉಸ್ತಾದ್ ಫಯಾಜ್ ಡಾಗರ್ ಎಂಬುವರು ಹಾಡಿನ ವಿರುದ್ಧ ಕೃತಿಚೌರ್ಯದ ಆರೋಪದ ಮಾಡಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿ, ಎಆರ್ ರೆಹಮಾನ್ ಅವರಿಗೆ ಎರಡು ಕೋಟಿ ರೂಪಾಯಿ…

Read More