ಇಂದಿನ ಕಾಲದಲ್ಲಿ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದು, KYC ಇತ್ಯಾದಿಗಳವರೆಗೆ ಹಲವು ಹಣಕಾಸಿನ ಅಗತ್ಯಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಿದೆ. ಇದನ್ನು ಕಾನೂನುಬದ್ಧ ಗುರುತಿನ ಚೀಟಿ ಎಂದೂ ಪರಿಗಣಿಸಲಾಗುತ್ತದೆ. ನಿಮ್ಮ ಹಣಕಾಸಿನ ಇತಿಹಾಸದ ಮಾಹಿತಿಯನ್ನು ಟ್ರ್ಯಾಕ್ ಮಾಡಲು ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ನೊಂದಿಗೆ ಟ್ರ್ಯಾಕ್ ಮಾಡಲಾಗುತ್ತದೆ. ಆದರೆ ಪ್ಯಾನ್ ಕಾರ್ಡ್ ಕೂಡ ಅವಧಿ ಮೀರುತ್ತದೆಯೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬರುತ್ತಿದೆಯೇ? ಅದರ ಬಗ್ಗೆ ತಿಳಿದುಕೊಳ್ಳೋಣ. ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದರೆ ಏನು ಮಾಡಬೇಕು? ನೀವು ಎಂದಾದರೂ ನಿಮ್ಮ ಪ್ಯಾನ್ ಕಾರ್ಡ್ನ ಸಿಂಧುತ್ವವನ್ನು ಪರಿಶೀಲಿಸಿದ್ದೀರಾ? ನೀವು ಇದರ ಬಗ್ಗೆ ತಿಳಿದುಕೊಳ್ಳಲೇಬೇಕು. ಪ್ಯಾನ್ ಕಾರ್ಡ್ ಅನ್ನು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ನೀಡುತ್ತದೆ. ದಯವಿಟ್ಟು ಗಮನಿಸಿ, ಒಬ್ಬ ವ್ಯಕ್ತಿ ಸಾಯುವವರೆಗೂ ಪ್ಯಾನ್ ಕಾರ್ಡ್ನ ಸಿಂಧುತ್ವವು ಎಂದಿಗೂ ಮುಕ್ತಾಯಗೊಳ್ಳುವುದಿಲ್ಲ. ವ್ಯಕ್ತಿಯ ಮರಣದ ನಂತರವೇ ಪ್ಯಾನ್ ಕಾರ್ಡ್ ರದ್ದಾಗುತ್ತದೆ. ಮರಣ ಪ್ರಮಾಣಪತ್ರದ…
Author: Author AIN
ಐಪಿಎಲ್ 2025 ರಲ್ಲಿ ಆರ್ಸಿಬಿ ತವರಿನಲ್ಲಿ ಸತತ ಸೋಲಿಗೆ ಬ್ರೇಕ್ ಹಾಕಿತು. ಈ ಋತುವಿನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ಆರ್ಸಿಬಿ ಗುರುವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೂಪರ್ ಗೆಲುವು ಸಾಧಿಸಿತು. ಕೊನೆಯ ಎರಡು ಓವರ್ಗಳಲ್ಲಿ 18 ರನ್ಗಳನ್ನು ರಕ್ಷಿಸಿಕೊಂಡ ಅವರು ಅದ್ಭುತವಾಗಿ ಕಾಣುತ್ತಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು ಸೂಪರ್ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರೊಂದಿಗೆ ಅದ್ಭುತ ಆರಂಭವನ್ನು ನೀಡಿತು. ಅವರು 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ಗಳೊಂದಿಗೆ 70 ರನ್ ಗಳಿಸಿದರು. ಕೊಹ್ಲಿ ಜೊತೆಗೂಡಿ ದೇವದತ್ ಪಡಿಕ್ಕಲ್ ಕೇವಲ 27 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 50 ರನ್ ಗಳಿಸಿದರು. ಟಿಮ್ ಡೇವಿಡ್ 23 ರನ್ ಮತ್ತು ಜಿತೇಶ್ ಶರ್ಮಾ 10 ಎಸೆತಗಳಲ್ಲಿ 20 ರನ್ ಗಳಿಸಿ ಉತ್ತಮ ಫಿನಿಶಿಂಗ್ ನೀಡಿದರು. ಇದರೊಂದಿಗೆ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 205…
ತಂತ್ರಜ್ಞಾನ ಲೋಕದಲ್ಲಿ ಪ್ರಸ್ತುತ ಬಜೆಟ್ ಫೋನ್ಗಳ ಯುಗ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ, ಮೊಟೊರೊಲಾ ಮಾರುಕಟ್ಟೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಬಜೆಟ್ ಫೋನ್ ಅನ್ನು ಬಿಡುಗಡೆ ಮಾಡಿತು. ಈ ಸಂಚಿಕೆಯಲ್ಲಿ, Realme ಈಗ ತನ್ನ ಇತ್ತೀಚಿನ ಬಜೆಟ್ ಸ್ಮಾರ್ಟ್ಫೋನ್, Realme 14T 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ದೊಡ್ಡ 6000mAh ಬ್ಯಾಟರಿ, 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 6.67-ಇಂಚಿನ FullHD+ 120 Hz AMOLED ಡಿಸ್ಪ್ಲೇಯನ್ನು ಹೊಂದಿದೆ. ಅಂತಹ ಹಲವು ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಅದರ ಬೆಲೆ, ಮಾರುಕಟ್ಟೆ ಲಭ್ಯತೆ ದಿನಾಂಕ ಮತ್ತು ಎಲ್ಲಾ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ. ರಿಯಲ್ಮಿ 14T ಬೆಲೆ, ರೂಪಾಂತರಗಳು: Realme 14T 5G ಭಾರತದಲ್ಲಿ ಎರಡು ಶೇಖರಣಾ ರೂಪಾಂತರಗಳೊಂದಿಗೆ ಬಿಡುಗಡೆಯಾಗಿದೆ. 8GB+128GB ರೂಪಾಂತರದ ಬೆಲೆ ರೂ. 17,999 ಆಗಿದ್ದು, ಹೈ-ಎಂಡ್ 8GB+256GB ಮಾದರಿಯ ಬೆಲೆ ರೂ. 19,999. ಇದರ ಜೊತೆಗೆ, ಈ ಸ್ಮಾರ್ಟ್ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಲೈಟ್ನಿಂಗ್ ಪರ್ಪಲ್, ಅಬ್ಸಿಡಿಯನ್ ಕಪ್ಪು, ಸರ್ಫ್…
ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ಅವರು ನಿರ್ಮಿಸಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಶೀರ್ಷಿಕೆ ಗೀತೆಯನ್ನು ಡಾ||ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಶತಾಯುಷಿ ಸಾಲುಮರದ ತಿಮ್ಮಕ್ಕ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಚಿತ್ರದ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಯಿತು. ಬಹು ನಿರೀಕ್ಷಿತ ಈ ಚಿತ್ರ ಮೇ 23 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. “ಕುಲದಲ್ಲಿ ಕೀಳ್ಯಾವುದೋ” ಸರ್ವಕಾಲಿಕ ಜನಪ್ರಿಯ ಗೀತೆ. ಇಂತಹ ಜನಪ್ರಿಯ ಗೀತೆಯ ಸಾಲನಿಟ್ಟುಕೊಂಡು ಹಾಡು ಬರೆಯುವುದು ಅಷ್ಟು ಸುಲಭದ ಮಾತಲ್ಲ. ಈ ಹಾಡನ್ನು ಯೋಗರಾಜ್ ಭಟ್ ಅವರ ಹತ್ತಿರ ಬರೆಸುವುದು ಅಂತ ನಿರ್ಧಾರವಾಯಿತು. ಆದರೆ ಅವರು “ಮನದ ಕಡಲು” ಚಿತ್ರದ ಬಿಡುಗಡೆಯ ಬ್ಯುಸಿಯಲ್ಲಿದ್ದರು. ಹಾಗಾಗಿ ಅವರೆ ನನಗೆ ಈ ಹಾಡನ್ನು ಬರೆಯುವಂತೆ…
ಕ್ರಿಕೆಟರ್ ಬಿಆರ್ ಶರತ್ ಹಾಗೂ ನಟಿ ಅರ್ಚನಾ ಕೊಟ್ಟಿಗೆ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈ ಜೋಡಿಗೆ ಕ್ರಿಕೆಟರ್ ಹಾಗೂ ಸಿನಿಮಾ ತಾರೆಯರು ಶುಭ ಹಾರೈಸಿದ್ದರು. ಮದುವೆ ಬಳಿಕ ಅರ್ಚನಾ ತಮ್ಮ ಪತಿ ಜೊತೆಗಿನ ಹಳೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫಿಯನ್ಸಿ ಈಗ ಫೈನಾನ್ಷಿಯರ್ ಎನ್ನುವ ಕ್ಯಾಪ್ಷನ್ ಕೊಟ್ಟು ಶರತ್ ಜೊತೆಗಿನ ಓಲ್ಡ್ ಮೆಮೋರಿಗಳನ್ನು ಮೆಲುಕು ಹಾಕಿದ್ದಾರೆ. ಮದುವೆಗೂ ಮುಂಚೆ ಈ ಜೋಡಿ ಒಟ್ಟಿಗೆ ಸುತ್ತಾಟ ನಡೆಸಿದ್ದ ಸಂತಸದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಅರ್ಚನಾ ಡಿಯರ್ ಸತ್ಯ, ಫಾರೆಸ್ಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶರತ್ ಗುಜರಾತ್ ಟೈಟನ್ ಪರ ಐಪಿಎಲ್ ನಲ್ಲಿ ಆಡಿದ್ದರು. ಕಾಲೇಜಿನಲ್ಲಿ ಶರತ್ ಅವರಿಗೆ ಅರ್ಚನಾ ಜೂನಿಯರ್ ಆಗಿದ್ದರು. ಗೆಳೆಯರ ಮೂಲಕ ಪರಿಚಯವಾದ ಈ ಜೋಡಿ ಸ್ನೇಹಿತರಾಗಿ ಆ ನಂತರ ಪ್ರೀತಿಸಿ ಎಂಟು ವರ್ಷದ ಪ್ರೀತಿಗೆ ಈಗ ಮೂರು ಗಂಟಿನ ನಂಟು ಬೆಸೆದಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯವು ಕ್ರಿಕೆಟ್ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಮೀಪಿಸುತ್ತಿದೆ. ಪ್ರಸಿದ್ಧ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ನಂತರ, ರಾಜ್ಯದ ಎರಡನೇ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮೈಸೂರು ನಗರದಲ್ಲಿ ಸ್ಥಾಪನೆಯಾಗಲಿದೆ. ಮೈಸೂರಿಗೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಬೇಕು ಎಂದು ಹಲವರು ಬಹಳ ದಿನಗಳಿಂದ ಹೇಳುತ್ತಿದ್ದರು, ಮತ್ತು ಈಗ ಅದು ವಾಸ್ತವವಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರ ಈ ಪ್ರಸ್ತಾವನೆಯನ್ನು ಬೆಂಬಲಿಸಿದೆ ಮತ್ತು ಶೀಘ್ರದಲ್ಲೇ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ತೋರುತ್ತದೆ. ಏಪ್ರಿಲ್ 24 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಘೋಷಣೆ ಮಾಡಿದ್ದು, ಮೈಸೂರಿನಲ್ಲಿ ಶೀಘ್ರದಲ್ಲೇ ಅಂತರರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ. ಕ್ರೀಡಾಂಗಣಕ್ಕೆ ಅಗತ್ಯವಿರುವ ಭೂಮಿಯನ್ನು ಗುರುತಿಸಲು ಸರ್ಕಾರ ಪ್ರಸ್ತುತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವರದಿಗಳ ಪ್ರಕಾರ, ಮೈಸೂರು ಬಳಿಯ ಹುಯಿಲಾಳು ಗ್ರಾಮದಲ್ಲಿ ಸುಮಾರು 26 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ನಂತರ, ಭೂಮಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘಕ್ಕೆ (ಕೆಎಸ್ಸಿಎ) ಹಸ್ತಾಂತರಿಸಲಾಗುವುದು ಮತ್ತು ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. https://ainkannada.com/did-you-know-mango-prevents-weight-gain/ ಸಂಪುಟ ಸಭೆಗೂ ಮುನ್ನ, ಮೈಸೂರು…
ದೇಶಾದ್ಯಂತ ಐಪಿಎಲ್ ಕಾವು ಜೋರಾಗಿದೆ. ಈ ಸಲಾ ಕಪ್ ನಮ್ಮದೇ ಅನ್ನೋ ಘೋಷ ವಾಕ್ಯವನ್ನು ನನಸು ಮಾಡಲು ಆರ್ ಸಿಬಿ ಪಣ ತೊಟ್ಟಿದೆ. ಮತ್ತೊಂದು ಐದು ಬಾರಿ ಚಾಂಪಿಯನ್ ಟ್ರೋಪಿ ಗೆದ್ದಿರುವ ಸಿಎಸ್ ಕೆ ಮಾತ್ರ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಆದರೂ ಅಭಿಮಾನಿಗಳು ಸಿಎಸ್ ಕೆಗೆ ಜೈಕಾರ ಹಾಕುತ್ತಿದ್ದಾರೆ. ಅದಕ್ಕೆ ಕಾರಣ ಒನ್ ಅಂಡ್ ಒನ್ಲಿ ಥಲಾ ಥೋನಿ. ಸಿಎಸ್ ಕೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಪಂದ್ಯದಿಂದ ಹೊರಗೆ ಉಳಿದಿರುವುದರಿಂದ, ಧೋನಿ ಅವರಿಗೆ ಕ್ಯಾಪ್ಟನ್ಸಿ ಜವಾಬ್ದಾರಿ ನೀಡಲಾಗಿದೆ. ಹೀಗಿದ್ದರೂ ಸಹ ಸಿಎಸ್ ಕೆ ನೀರಸ ಪ್ರದರ್ಶನ ತೋರುತ್ತಿದೆ. ನಿನ್ನೆ ಸಿಎಸ್ ಕೆ ಹಾಗೂ ಎಸ್ ಆರ್ ಹೆ ಪಂದ್ಯ ಚೆನ್ನೈನ ಚೆಪಕ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯ ವೀಕ್ಷಿಸೋದಿಕ್ಕೆ ಕಾಲಿವುಡ್ ಥಲಾ ಅಜಿತ್ ಫ್ಯಾಮಿಲಿ ಸಮೇತ ಆಗಮಿಸಿದ್ದರು. ಅಜಿತ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ರೇಸಿಂಗ್, ಟ್ರಿಪ್ ಅಂತಾ ಎಂಜಾಯ್ ಮಾಡುವ ಅವರು ನಿನ್ನೆ ಸಿಎಸ್ ಕೆ ಸಪೋರ್ಟ್ ಮಾಡಲು ಫ್ಯಾಮಿಲಿ ಸಮೇತ…
ಬಾದಾಮಿ ಕೊಂಚ ದುಬಾರಿಯ ಒಣ ಬೀಜ. ಆದರೆ ಇದರ ಸೇವನೆಯಿಂದ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬಾದಾಮಿಯಲ್ಲಿ ಇರುವ ವಿಟಮಿನ್ ಇ ಚರ್ಮ, ಕೂದಲು ಹಾಗೂ ಅಂಗಾಂಗಗಳ ರಕ್ಷಣೆಗೆ ಸಹಾಯ ಮಾಡುತ್ತದೆ. ಮಿದುಳಿನ ಆರೋಗ್ಯ, ಹೃದಯದ ಆರೋಗ್ಯ ಮತ್ತು ಜೀರ್ಣ ಕ್ರಿಯೆಯ ಸುಧಾರಣೆಗೆ ಸಹಾಯ ಮಾಡುವುದು. https://ainkannada.com/did-you-know-mango-prevents-weight-gain/ ಈ ಬಾದಾಮಿಯನ್ನು ಹೇಗೆ ತಿನ್ನಬೇಕು/ ಸಿಪ್ಪೆಯೊಂದಿಗೆ ಸವಿದರೆ ಉತ್ತಮವಾದುದ್ದೇ? ಅಥವಾ ಸಿಪ್ಪೆ ತೆಗೆದು ತಿನ್ನುವುದು ಯೋಗ್ಯವಾದುದ್ದೇ? ಎನ್ನುವ ಗೊಂದಲ ಸಾಕಷ್ಟು ಜನರಲ್ಲಿ ಇದೆ. ನೀವು ಸಹ ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ. ಬಾದಾಮಿಯನ್ನು ನೆನೆಸಿ ಏಕೆ ತಿನ್ನಬೇಕು?: ಬಾದಾಮಿಯ ಸಿಪ್ಪೆಯನ್ನು ಗಟ್ಟಿಯಾಗಿರುತ್ತದೆ. ಇದನ್ನು ನೆನೆಸಿ ಸಿಪ್ಪೆ ಸುಲಿದರೂ ಬಾದಾಮಿ ದಪ್ಪವಾಗಿರುತ್ತದೆ. ಸಿಪ್ಪೆ ಸಮೇತ ಬಾದಾಮಿ ತಿನ್ನುವುದರಿಂದ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದು ವಿಶೇಷವಾಗಿ ಜೀರ್ಣಕಾರಿ ಅಸ್ವಸ್ಥತೆಗಳಿರುವವರಿಗೆ ಅನಗತ್ಯ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಹಾಗಾಗಿ ಬಾದಾಮಿಯನ್ನು ನೆನೆಸಿ ಸಿಪ್ಪೆ ಸುಲಿದು ತಿನ್ನಬೇಕು. ಬಾದಾಮಿಯನ್ನು ನೆನೆಸುವುದರಿಂದ ಸಿಪ್ಪೆಯನ್ನು ಸುಲಭವಾಗಿ…
ಹತ್ತು ಲಕ್ಷರೂಪಾಯಿ ಕೊಟ್ರೆ ಎಂತಾ ಹುಡುಗಿ ಬೇಕಂದ್ರು ಸಿಕ್ತಾಳಂತೆ, ಹೀಗೆ ಹೇಳಿದವರು ಜೀನಿ ಮಾಲೀಕ ದಿಲೀಪ್ ಕುಮಾರ್. ಮಹಿಳೆ ಮೇಲೆ ಲೈಂಗಿಕ ಕಿರುಕುಳ ಆರೋಪದಡಿ ಸಿಲಿಕಿರುವ ಜೀನಿ ಮಾಲೀಕ ದಿಲೀಪ್ ಕುಮಾರ್ ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ. ಹೆಣ್ಣು ಮಕ್ಕಳ ಶೀಲಕ್ಕೆ ಬೆಲೆ ಕಟ್ಟಿರುವ ಜೀನಿ ಮಾಲೀಕ ದಿಲೀಪ್ ಕುಮಾರ್ ಹತ್ತು ಲಕ್ಷಕ್ಕೆ ಚೆನ್ನಾಗಿರುವ ಹುಡುಗಿ ಬರ್ತಿರ್ಲಿಲ್ವಾ ಅಂತ ಹೇಳಿದ ವಿಡಿಯೋ ಈಗ ವೈರಲ್ ಆಗಿದೆ. ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿದ ದಿಲೀಪ್ ಕುಮಾರ್ ವಿರುದ್ದ ಸಾಕಷ್ಟು ಜನ ಅಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಮೇಲೆ ಎಫ್ ಐಆರ್ ಅಗ್ತಿದ್ದಂತೆ ಜೀನಿ ಮಾಲೀಕ ದಿಲೀಪ್ ಕುಮಾರ್ ತಲೆಮರೆಸಿಕೊಂಡಿದ್ದಾನೆ. ದಿಲೀಪ್ ಕುಮಾರ್ ಕಳೆದ ಆರು ತಿಂಗಳಿಂದ ಲೈಂಗಿಕ ಕಿರುಕುಳ (Sexual harassment ) ನೀಡುತ್ತಿದ್ದಾರೆ ಎಂದು ಆರೋಪಿಸಿ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ಮಹಿಳೆ ಮೇಘನಾ ಎಂಬುವವರು ದೂರು ನೀಡಿದ್ದರು. ಶಿರಾ ತಾಲೂಕಿನ ಯರಗುಂಟೆಯಲ್ಲಿರುವ ಜೀನಿ ಸಂಸ್ಥೆಯಲ್ಲಿ ಹತ್ತು ತಿಂಗಳ ಹಿಂದೆ ನಾನು ಕೆಲಸಕ್ಕೆ ಸೇರಿದ್ದೆ,…
ಬೆಂಗಳೂರು: ಭಾರತ ಕಂಡ ಹಿರಿಯ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಇವರ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದ ಹೆಮ್ಮೆಯ ಪುತ್ರ, ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿ, ಭಾರತೀಯ ಬಾಹ್ಯಾಕಾಶ ಸಂಸ್ಥೆ @isro ವಿಶ್ರಾಂತ ಅಧ್ಯಕ್ಷರು, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷರೂ ಆಗಿದ್ದ ಪದ್ಮವಿಭೂಷಣ ಡಾ.ಕಸ್ತೂರಿರಂಗನ್ ಅವರ ನಿಧನದ ವಾರ್ತೆ ಕೇಳಿ ನನಗೆ ಅತೀವ ದುಃಖ ಉಂಟಾಯಿತು. ಅವರ ಜೊತೆ ನನಗೆ ಆತ್ಮೀಯ ಬಾಂಧವ್ಯವಿತ್ತು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಮಾರ್ಗದರ್ಶನ, ಸಲಹೆ, ಸಹಕಾರವನ್ನು ನಾನೆಂದಿಗೂ ಮರೆಯಲಾರೆ” ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. https://ainkannada.com/did-you-know-mango-prevents-weight-gain/ “ಇಸ್ರೋ ಸಂಸ್ಥೆಯನ್ನು 9 ವರ್ಷ ಮುನ್ನಡೆಸಿದ್ದ ಕಸ್ತೂರಿರಂಗನ್ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಅನೇಕ ದಿಗ್ವಿಜಯಗಳ ಹಿಂದಿನ ಶಕ್ತಿ ಆಗಿದ್ದರು. ಅವರು ಬೆಂಗಳೂರು ನಗರದ ಜೊತೆ ಭಾವನಾತ್ಮಕ ಬೆಸುಗೆ ಹೊಂದಿದ್ದರು.…