Author: Author AIN

ಸೂಪರ್‌ಸ್ಟಾರ್ ರಜನಿಕಾಂತ್ ‘ಜೈಲರ್ 2’ ಸಿನಿಮಾದ ಶೂಟಿಂಗ್‌ ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳುನಾಡು-ಕೇರಳ ಗಡಿಯ ಅಟ್ಟಪ್ಪಾಡಿ ಪ್ರದೇಶದಲ್ಲಿ ಕಳೆದ 20 ದಿನಗಳಿಂದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇಂದು ಚಿತ್ರೀಕರಣಕ್ಕೆ ತೆರಳುತ್ತಿದ್ದಾಗ ಕೊಯಮತ್ತೂರು ಬಳಿಯ ಅನೈಕಟ್ಟಿ ಬೆಟ್ಟಗಳಲ್ಲಿರುವ ಮಾತೇಶ್ವರನ್ ಶಿವನ್ ದೇವಸ್ಥಾನಕ್ಕೆ ರಜನಿ ಅನಿರೀಕ್ಷಿತವಾಗಿ ಭೇಟಿ ಕೊಟ್ಟಿದ್ದಾರೆ. ರಜನಿ ಆಗಮನ ಸುದ್ದಿ ಕೇಳುತ್ತಿದ್ದ ಅಭಿಮಾನಿಗಳು ಜಮಾಯಿಸಿದ್ದು, ಅವರೊಂದಿಗೆ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ‘ಜೈಲರ್ 2’ ಸಿನಿಮಾ 2023 ರ ಬ್ಲಾಕ್‌ಬಸ್ಟರ್ ಜೈಲರ್ ಚಿತ್ರದ ಮುಂದುವರಿದ ಭಾಗವಾಗಿದ್ದು, ಈ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದಾರೆ. ಜೈಲರ್‌ನಲ್ಲಿ, ರಜನಿಕಾಂತ್ “ಟೈಗರ್” ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ, ರಮ್ಯಾ ಕೃಷ್ಣನ್‌, ಯೋಗಿ ಬಾಬುಸ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. ಜೈಲರ್‌ 2ಗೂ ಮೊದಲೇ ರಜನಿಯ ಕೂಲಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಈ ಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್‌ ಕಟ್‌ ಹೇಳಿದ್ದಾರೆ.

Read More

ಬೆಂಗಳೂರು: ಕಾಂಗ್ರೆಸ್​ ಶಾಸಕ ವಿನಯ ಕುಲಕರ್ಣಿ ಅವರ ಬೆಂಗಳೂರಿನ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಸತತ 28 ಗಂಟೆಗಳ ಕಾಲ ವಿನಯ್ ಕುಲಕರ್ಣಿ ಅವರ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧಕಾರ್ಯ ನಡೆಸಿದರು. ಇನ್ನೂ ಈ ವಿಚಾರವಾಗಿ ಮಾತನಾಡಿದ ವಿನಯ್ ಕುಲಕರ್ಣಿ, ಐಶ್ವರ್ಯಾ ಗೌಡ ಜೊತೆ ನನ್ನ ಯಾವ ವ್ಯವಹಾರವೂ ಇಲ್ಲ, ಹಣದ ವರ್ಗಾವಣೆಯೂ ಆಗಿಲ್ಲ. ಮಂಜುಳಾ ಪಾಟೀಲ್​ ಮತ್ತು ಐಶ್ವರ್ಯಾ ಗೌಡ ನಡುವೆ ನಾನು‌ ರಾಜಿ ಸಂಧಾನ ಮಾಡಿಸಿಲ್ಲ. https://ainkannada.com/did-you-know-mango-prevents-weight-gain/ ಈಗ ಕೆಲ ತಿಂಗಳ ಹಿಂದೆ ಪ್ರಕರಣ ದಾಖಲಾದ ನಂತರ ಪರಿಚಯವಷ್ಟೆ. ಪ್ರಕರಣ ಮುಂದುವರೆಸುವುದು ಬೇಡ, ನನ್ನ ಹಣ ಕೊಡಿಸಿ ಎಂದು ಬಂದಾಗ ಕರೆದು ವಿಚಾರಿಸಿದ್ದೆ. ಅವರವರ ನಡುವೆ ಮಾತುಕತೆ ಸರಿ‌ ಹೋಗಲಿಲ್ಲವಂತೆ. ಜನರಿಗೆ ಯಾರೇ ಮೋಸ ಮಾಡಿದರೂ ತಪ್ಪೇ ಎಂದು ಹೇಳಿದರು. ಇ.ಡಿಯವರು ಬರೋದು ಒಂದಕ್ಕೆ, ಪರಿಶೀಲನೆ ಮಾಡುವುದು ಇನ್ನೊಂದು. ನನ್ನ ವಿರುದ್ಧದ ಷಡ್ಯಂತ್ರ ಇಂದು, ನಿನ್ನೆಯದ್ದಲ್ಲ. ನಾನೋರ್ವ ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಜನರನ್ನು…

Read More

ಹುಬ್ಬಳ್ಳಿ: ಕಾಶ್ಮೀರದ ಪೆಹಲ್ಗಾಂನಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿ ಕೃತ್ಯವನ್ನು ಖಂಡಿಸಿ, ಹುಬ್ಬಳ್ಳಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿಂದು ಪ್ರತಿಭಟನೆ ಮಾಡಿದರು. ಉಗ್ರಗಾಮಿಗಳು ತಮ್ಮ ಉಗ್ರ ಕೃತ್ಯವನ್ನು ಪ್ರದರ್ಶಿಸಿ ದೇಶದ ಪ್ರವಾಸಿಗರ ಮೇಲೆ ಹಾಗೂ ಹಿಂದೂಗಳೆಂದು ಕೇಳಿ ದಾಳಿ ಮಾಡಿ ಹತ್ಯೆಗೈದಿರುವುದು ಖಂಡನಾರ್ಹ. ಅಲ್ಲದೇ ಸರ್ಕಾರ ಭಯೋತ್ಪಾದನಾ ಚಟುವಟಿಕೆಯನ್ನು ಹತ್ತಿಕ್ಕಲು ಇನ್ನೂ ಹೆಚ್ಚಿನ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಬ್ರಾಹ್ಮಣ ಮಹಾಸಭಾ ಒತ್ತಾಯಿಸಿತು. https://ainkannada.com/did-you-know-mango-prevents-weight-gain/ ಇನ್ನೂ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ಶಿವಮೊಗ್ಗ, ಬೀದರ ಹಾಗೂ ಧಾರವಾಡದ ಪರೀಕ್ಷಾ ಕೇಂದ್ರಗಳಲ್ಲಿ ವಿಪ್ರ ವಿದ್ಯಾರ್ಥಿಗಳ ಜನಿವಾರವನ್ನು ತುಂಡರಿಸಿದ್ದನ್ನು‌ ಖಂಡಿಸಿದ ಪ್ರತಿಭಟನಾಕಾರರು, ಪರೀಕ್ಷೆ ಬರೆಯಲು ಹೋದಾಗ ಪರೀಕ್ಷಾ ನೀತಿ ನಿಯಮಗಳಿಗೆ ವಿರುದ್ಧವಾಗಿ ಅಧಿಕಾರಿಗಳು ಪರೀಕ್ಷೆ ಬರೆಯಲ್ಪಡುವ ವಿದ್ಯಾರ್ಥಿಗಳ ಜನಿವಾರವನ್ನು ಕಟ್ಟು ಮಾಡಿ ಧಾರ್ಮಿಕ ಸ್ವಾತಂತ್ರ್ಯವನ್ನು ಮತ್ತು ಭಾವನಾತ್ಮಕ ವಿಷಯಗಳಿಗೆ ಧಕ್ಕೆಯನ್ನುಂಟು ಆಗಿದೆ. ಶೋಷಣೆಗೊಳಗಾದ ವಿದ್ಯಾರ್ಥಿಗಳಿಗೆ ಸೂಕ್ತವಾದ ಕಾಲೇಜಿನಲ್ಲಿ ಪ್ರವೇಶ ಕೊಡುವುದರೊಂದಿಗೆ ನ್ಯಾಯದೊರಕಿಸಿ‌ ಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಪಡಿಸುತ್ತೇವೆಂದು ಒತ್ತಾಯಿಸಿದರು.

Read More

ಮೈಸೂರು: ಮುಸ್ಲಿಮರೆಲ್ಲಾ ಭಯೋತ್ಪಾದಕರು ಎಂದು ಬಿಂಬಿಸುವ ಕೆಲಸ ಶುರುವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್‌ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ದೇಶದ ಜನರ ರಕ್ತದ ಮೇಲೆ ಅಧಿಕಾರ ಹಿಡಿಯುವುದು ಬಿಜೆಪಿಯ ಚಟವಾಗಿದೆ. ಪಹಲ್ಗಾಮ್‌ನಲ್ಲಿ ಮುಸ್ಲಿಮರೇ ಬಹಳಷ್ಟು ಜನರನ್ನು ಕಾಪಾಡಿದ್ದಾರೆ. ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ. ಸುಮ್ಮನೆ ಮುಸ್ಲಿಮರು, ಮುಸ್ಲಿಮರು ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. https://ainkannada.com/did-you-know-mango-prevents-weight-gain/ ಘಟನೆ ನಡೆದ ದಿನ ಅಲ್ಲಿ ಸೇನೆ ಮತ್ತು ಪೊಲೀಸ್ ಯಾಕೆ ಇರಲಿಲ್ಲ. ಇದರ ಹಿಂದೆ ಬೇರೆ ಏನೋ ಉದ್ದೇಶವಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಏಜೆನ್ಸಿ ಮೂಲಕ ತನಿಖೆ ಆಗಬೇಕು. ಹಿಂದೂ, ಮುಸ್ಲಿಮರ ನಡುವೆ ಕಂದಕ ಉಂಟು ಮಾಡಿ ಚುನಾವಣೆ ಗೆಲ್ಲುವುದೇ ಬಿಜೆಪಿಯ ಉದ್ದೇಶ. ಮುಸ್ಲಿಮರೆಲ್ಲಾ ಭಯೋತ್ಪಾದಕರು ಎಂದು ಬಿಂಬಿಸುವ ಕೆಲಸ ಶುರುವಾಗಿದೆ ಎಂದರು.

Read More

ಕೋಲಾರ – ಪರಿಶಿಷ್ಟ ಜಾತಿಯ ಒಳ ಮಿಸಲಾತಿ ಕುರಿತಂತೆ ಮೇ 5 ರಿಂದ 17 ರವರೆಗೆ 12 ದಿನಗಳ ಕಾಲ ಜಿಲ್ಲೆಯಾದ್ಯಂತ ಶಿಕ್ಷಕ ಗಣತಿದಾರರ ಮೂಲಕ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದ್ದು ಪರಿಶಿಷ್ಟ ಜಾತಿ ಸಮುದಾಯದವರು ಸ್ವಯಂ ಪ್ರೇರಿತವಾಗಿ ಮಾಹಿತಿ ಹಾಗೂ ವಿವರವನ್ನು ಗಣತಿದಾರರರಿಗೆ ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದರು.‌ ನಗರದ ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ನೆಡೆದ ಪರಿಶಿಷ್ಟ ಜಾತಿಯ ಒಳಮಿಸಲಾತಿ ಸಮೀಕ್ಷೆಯ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸರ್ಕಾರದಿಂದ ನೇಮಕವಾಗಿರುವ ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹ ಮಾಡಿ ಶೇಖರಿಸುವ ಸಂಬಂಧ ರಾಜ್ಯದಾದ್ಯಂತ ಸಮೀಕ್ಷೆ ನಡೆಸಲು ತೀರ್ಮಾನಿಸಿರುತ್ತದೆ, https://ainkannada.com/did-you-know-mango-prevents-weight-gain/ ಅದಂತೆ ಕೋಲಾರ ಜಿಲ್ಲೆಯಾದ್ಯಂತ ಮೇ 5 ರಿಂದ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಈ ಸಮೀಕ್ಷೆಯನ್ನು ಜಿಲ್ಲೆಯಲ್ಲಿರುವ ಮತಗಟ್ಟೆಗೆ ಒಬ್ಬರಂತೆ ಗಣತಿದಾರರನ್ನು ನೇಮಕ ಮಾಡಲಾಗುತ್ತದೆ. ಈ ಗಣತಿದಾರರನ್ನಾಗಿ ಕೇವಲ ಪ್ರೌಢಶಾಲಾ…

Read More

ಆಧುನಿಕ ಜೀವನಶೈಲಿಯಲ್ಲಿ ಸಕ್ಕರೆ ಸೇವನೆ ಗಣನೀಯವಾಗಿ ಹೆಚ್ಚಾಗಿದೆ. ರುಚಿಕರವಾದ ಆಹಾರಗಳು, ಪಾನೀಯಗಳು ಮತ್ತು ಸಿಹಿತಿಂಡಿಗಳಲ್ಲಿ ಸೇರಿಸಲಾದ ಸಕ್ಕರೆ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅತಿಯಾದ ಸಕ್ಕರೆ ಸೇವನೆಯು ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ, ದಿನಕ್ಕೆ ಎಷ್ಟು ಸಕ್ಕರೆ ಸೇವಿಸುವುದು ಸುರಕ್ಷಿತ? ಹೆಚ್ಚಿನ ಸಕ್ಕರೆ ಅಂಶ, ಅದರ ಪ್ರಮಾಣ ಮತ್ತು ಆರೋಗ್ಯಕರ ಜೀವನಶೈಲಿಗಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಹೆಚ್ಚುವರಿ ಸಕ್ಕರೆ ಎಂದರೇನು? ಸೇರಿಸಿದ ಸಕ್ಕರೆ ಎಂದರೆ ಆಹಾರ ಅಥವಾ ಪಾನೀಯಗಳಿಗೆ ಸೇರಿಸಲಾದ ಸಕ್ಕರೆ ಅಥವಾ ಸಿರಪ್‌ಗಳು. ಇವು ಆಹಾರದಲ್ಲಿ ನೈಸರ್ಗಿಕವಾಗಿ ಕಂಡುಬರುವ ಸಕ್ಕರೆಗಳಿಗಿಂತ ಭಿನ್ನವಾಗಿವೆ (ಉದಾ. ಹಣ್ಣಿನಲ್ಲಿ ಫ್ರಕ್ಟೋಸ್, ಹಾಲಿನಲ್ಲಿ ಲ್ಯಾಕ್ಟೋಸ್). ಸಾಮಾನ್ಯವಾಗಿ, ತಂಪು ಪಾನೀಯಗಳು, ಕೇಕ್‌ಗಳು, ಬಿಸ್ಕತ್ತುಗಳು, ಚಾಕೊಲೇಟ್‌ಗಳು ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಸಕ್ಕರೆ ಅಧಿಕವಾಗಿರುತ್ತದೆ. ನೀವು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬೇಕು? ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​(AHA) ನಂತಹ ಸಂಸ್ಥೆಗಳು…

Read More

ಭಾರತದಲ್ಲಿ ಚಿನ್ನದ ಮೇಲಿನ ವ್ಯಾಮೋಹ ಎಂದಿಗೂ ಬದಲಾಗಲ್ಲ. ಇಲ್ಲಿ ಜನ ಕೇವಲ ಆಭರಣವಾಗಿ ನೋಡದೇ ಅದನ್ನು ಉಳಿತಾಯ, ಹೂಡಿಕೆಯಾಗಿ ನೋಡುತ್ತಾರೆ. ಹೀಗಾಗಿ ಚಿನ್ನ ದಿನೇ ದಿನೇ ತನ್ನ ಮೌಲ್ಯ ಹೆಚ್ಚಿಸಿಕೊಂಡು ಗಗನಕ್ಕೇರುತ್ತಿದೆ. ಬಹಳ ಹಿಂದೆ ಭಾರತೀಯರಿಗೆ ಈ ಚಿನ್ನ, ಬೆಳ್ಳಿ ವಸ್ತುಗಳನ್ನು ಹೆಚ್ಚು ಆಭರಣವಾಗಿ ಮಾತ್ರ ಹೆಚ್ಚು ಬಳಸುತ್ತಿದ್ದರು. https://ainkannada.com/did-you-know-mango-prevents-weight-gain/ ಆದರೆ ಈಗ ಚಿನ್ನ ಕೇವಲ ಅಲಂಕಾರಿಕ ವಸ್ತುವಾಗಿ ಉಳಿದಿಲ್ಲ. ಬದಲಿಗೆ ಬಂಗಾರವನ್ನು ಈಗ ಬಾಂಡ್‌ ರೂಪದಲ್ಲಿ, ಷೇರು ರೂಪದಲ್ಲಿ ಹೂಡಿಕೆ-ಉಳಿತಾಯವಾಗಿ ಇಡುತ್ತಿದ್ದಾರೆ. ಇದೇ ಕಾರಣಕ್ಕೆ ಗ್ರಾಹಕರು ಚಿನ್ನ-ಬೆಳ್ಳಿ ದರ ಎಷ್ಟೇ ಏರಿದ್ದರೂ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಇವುಗಳನ್ನು ಖರೀದಿ ಮಾಡುತ್ತಾರೆ. ಭಾರತದಲ್ಲಿ ಸ್ವರ್ಣ ಬೆಲೆಯಲ್ಲಿ ಯಾವ ವ್ಯತ್ಯಯ ಆಗಿಲ್ಲ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ 9,005ರೂನಲ್ಲಿ ಮುಂದುವರಿದಿದೆ. ವಿದೇಶಗಳಲ್ಲಿ ಕೆಲವೆಡೆ ಬೆಲೆ ಏರುಪೇರು ಆಗಿದೆ. ಬೆಳ್ಳಿ ಬೆಲೆಯ ಯಥಾಸ್ಥಿತಿಯೂ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ…

Read More

ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿದ್ದ ಪಾಕ್‌ ನಟನಿಗೆ ಯೂಟ್ಯೂಬ್‌ ಇಂಡಿಯಾ ಶಾಕ್‌ ಕೊಟ್ಟಿದೆ. ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರದಾಳಿ ಬೆನ್ನಲ್ಲೇ ಪಾಕಿಸ್ತಾನದ ನಟ ಫಾವದ್‌ ಖಾನ್‌ ಅಭಿರ್ ಗುಲಾಲ್ ಚಿತ್ರವನ್ನು ಬಾಯ್ಕಾಟ್‌ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಈ ಚಿತ್ರಕ್ಕೆ ಭಾರತದಲ್ಲಿ ನಿಷೇಧ ಮಾಡಬೇಕೆಂಬ ವ್ಯಾಪಕ ಆಕ್ರೋಶದ ನಡುವೆ ಈಗ ಏಕಾಏಕಿ ಅಭಿರ್ ಗುಲಾಲ್ ಸಿನಿಮಾದ ಹಾಡುಗಳನ್ನು ಯೂಟ್ಯೂಬ್‌ ನಿಂದ ಅಳಿಸಿ ಹಾಕಲಾಗಿದ್ದು, ಯೂಟ್ಯೂಬ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ. ಈ ಮೂಲಕ ಪಾಕ್‌ ನಟನಿಗೆ ಯೂಟ್ಯೂಬ್‌ ಶಾಕ್‌ ಕೊಟ್ಟಿದೆ. ‘ಅಭಿರ್ ಗುಲಾಲ್’ ಸಿನಿಮಾಕ್ಕೆ ಆರತಿ ಎಸ್ ಬಾಗ್ಡಿ ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ಫಹಾದ್ ಖಾನ್ ನಾಯಕಿಯಾಗಿ ವಾಣಿ ಕಪೂರ್ ಅಭಿನಯಿಸಿದ್ದಾರೆ. ಮೇ 9ಕ್ಕೆ ಈ ತೆರೆಗೆ ಬರಲಿದೆ. ಈ ಫಹಾದ್ ಖಾನ್ ಹೊರತುಪಡಿಸಿ ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲರೂ ಭಾರತೀಯರೇ ಆಗಿದ್ದಾರೆ. ಆಗಿದ್ದರೂ ಪಾಕ್‌ ನಟನಿದ್ದಾನೆ ಎಂಬ  ನಟಿಸಿರುವ ಕಾರಣಕ್ಕೆ ಚಿತ್ರವನ್ನು ಬ್ಯಾನ್‌ ಮಾಡಬೇಕೆಂಬ ಕೂಗು ಇದೆ. ಕೇಂದ್ರದ ಮಾಹಿತಿ…

Read More

ಬೆಂಗಳೂರು: 9 ಕೋಟಿ ರೂಪಾಯಿ ಮೌಲ್ಯದ ಚಿನ್ನದ ವಂಚನೆ ಆರೋಪ ಎದುರಿಸುತ್ತಿರುವ ಐಶ್ವರ್ಯ ಗೌಡ ಅವರ ಬೆಂಗಳೂರು ಮತ್ತು ಮಂಡ್ಯದಲ್ಲಿರುವ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿ ಐಶ್ವರ್ಯ ಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಐಶ್ವರ್ಯ ಗೌಡ ನಿವಾಸ ಮತ್ತು ಗೊರಗುಂಟೆಪಾಳ್ಯದಲ್ಲಿರುವ ಫ್ಲ್ಯಾಟ್‌ ಮೇಲೆ ಇಡಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. ಈ ವೇಳೆ ಇಡಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. https://ainkannada.com/did-you-know-mango-prevents-weight-gain/ ಇನ್ನು, ಇಡಿ ಅಧಿಕಾರಿಗಳು ಬೆಂಗಳೂರಿನ ಆರ್.ಆರ್.ನಗರದ ಕಾಂಗ್ರೆಸ್ ಮುಖಂಡ ತಿಬ್ಬೇಗೌಡ ನಿವಾಸದ ಮೇಲೂ ದಾಳಿ ನಡೆಸಿದ್ದರು. ತಿಬ್ಬೇಗೌಡ ಅವರ ಬ್ಯಾಂಕ್ ಅಕೌಂಟ್ಸ್ ಡೀಟೆಲ್ಸ್‌, ದಾಖಲೆಗಳನ್ನು ಇಡಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ.

Read More

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಗಾಂಧಿನಗರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವುಳ್ಳ ಶ್ರೀ ಗಜಾನನ ಶ್ರೀ ವೀರಭದ್ರೇಶ್ವರ ದೇವಸ್ಥಾನಗಳು ಭಕ್ತರ ಆರಾಧ್ಯ ಕೇಂದ್ರ ಆಗಿವೆ.‌ ಒಂದೇ ಆವರಣದಲ್ಲಿ ಈ ದೇವಸ್ಥಾನಗಳಿದ್ದು ಬೇಡಿದವರಿಗೆ ಬೇಡಿದನ್ನ ಕೊಡುವ ದೈವಿ ಪುರುಷರಾಗಿದ್ದರೆ.ಇಂದು ಈ ದೇವಸ್ಥಾನದ‌ ಸಕಲ ಭಕ್ತರ ಆರಾಧ್ಯ ಕೇಂದ್ರ ಆಗಿದೆ.‌ ಆರಂಭದಲ್ಲಿಗಾಂಧಿನಗರದಲ್ಲಿ ಖಾಲಿ ಜಾಗೆ ಇತ್ತುಸ್ಥಳೀಯರು ಸೇರಿಕೊಂಡು ಮಹಿಳಾ ಸಂಘ ಹಾಗೂ ಗುರುಹಿರಿಯರು ಜೊತೆಯಲ್ಲಿ ಸಾಮಾಜ ಮುಖಿಯಾಗಿ ಚಟುವಟಿಕೆಗಳನ್ನ ನಡೆಸಿಕೊಂಡು ಹೋಗತಾ ಇದ್ದರು. ನಂತರ ಇದೇ ಜಾಗೆಯಲ್ಲಿ ಒಂದು ಧಾರ್ಮಿಕ ಕೇಂದ್ರ ಆಗಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಕೇಲವರ ವಿರೋಧದ ನಡುವೆ ದೊಡ್ಡ ಮಟ್ಟದ ಧಾರ್ಮಿಕ ಕೇಂದ್ರ ನಿರ್ಮಾಣದ ನಿರ್ಧಾರ ತೆಗೆದುಕೊಳ್ಳಲಾಯಿತು. https://ainkannada.com/did-you-know-mango-prevents-weight-gain/ ಸ್ಥಳೀಯ ನಾಯಕರು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಶ್ರೀ ಗಣಪತಿ ದೇವಸ್ಥಾನ ನಿರ್ಮಾಣದ ಸಂಕಲ್ಪದೊಂದಿಗೆ ಆರಂಭ ಆಯಿತು. ಕೇವಲ ಗಾಂಧಿನಗರ ಅಷ್ಟೇ ಅಲ್ಲ ಹುಬ್ಬಳ್ಳಿ ಧಾರವಾಡ ಸೇರಿದಂತೆ ಸುತ್ತಲಿನ ಭಕ್ತರು ಆಗಮಿಸಲು ಆರಂಭಿಸಿದರು. ‌1996 ರಲ್ಲಿ ಶ್ರಿ ಬಲಮುರಿ ಗಣಪತಿ ದೇವಸ್ಥಾನ…

Read More