ಆನೇಕಲ್: ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಗಯ್ಯನದೊಡ್ಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಸುರೇಶ್ ಕೊಲೆಯಾದ ವ್ಯಕ್ತಿಯಾಗಿದ್ದು, ಕಾಂತರಾಜು ಹಾಗೂ ಆತನ ಗ್ಯಾಂಗ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್, ಶುಕ್ರವಾರ ರಾತ್ರಿ ಮದ್ಯ ಸೇವಿಸಲು ಸ್ನೇಹಿತರ ಜೊತೆ ಶ್ಯಾನುಭೋಗನಹಳ್ಳಿ ತರಂಗಿಣಿ ಬಾರ್ಗೆ ತೆರಳಿದ್ದ. ಅದೇ ಬಾರ್ನಲ್ಲಿ ಆರೋಪಿ ಕಾಂತರಾಜು ಹಾಗೂ ಆತನ ಗ್ಯಾಂಗ್ ಜೋರಾಗಿ ಮಾತನಾಡುತ್ತಾ ಮದ್ಯಸೇವನೆ ಮಾಡುತ್ತಿದ್ದರು. https://ainkannada.com/should-almonds-be-peeled-and-eaten-or-eaten-raw-which-is-better-here-is-the-answer/ ಆಗ ಅಲ್ಲೇ ಮದ್ಯ ಸೇವಿಸುತ್ತಿದ್ದ ಸುರೇಶ್, ನಿಧಾನಕ್ಕೆ ಮಾತನಾಡಿ ಎಂದು ಹೇಳಿದ್ದ. ಆಗ ಕಾಂತರಾಜು ನೀನು ಯಾರು ಕೇಳೋಕೆ ಎಂದು ಹೇಳಿದ್ದ. ಈ ವೇಳೆ ಕಾಂತರಾಜು ಮತ್ತು ಸುರೇಶ್ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಇದಾದ ಬಳಿಕ ಸುರೇಶ್ ಮನೆಗೆ ತೆರಳಿದ್ದ. ಕಾಂತರಾಜು ಹಾಗೂ ಆತನ ಗ್ಯಾಂಗ್ ಸುರೇಶ್ನನ್ನು ಹಿಂಬಾಲಿಸಿಕೊಂಡು ಬಂದಿದ್ದು, ಆತನ ಮನೆಗೆ ನುಗ್ಗಿ ಪತ್ನಿ ಮುಂದೆಯೇ ಹೊಟ್ಟೆ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ…
Author: Author AIN
ನವದೆಹಲಿ: ಇಂದು ಬೆಳಿಗ್ಗೆ ನಡೆದ ಭೀಕರ ಅಫಘಾತ ಸಂಭವಿಸಿದೆ. ನುಹ್ ಹರಿಯಾಣದ ಫಿರೋಜ್ಪುರ್ ಝಿರ್ಕಾದ ಇಬ್ರಾಹಿಂ ಬಾಸ್ ಗ್ರಾಮದ ಬಳಿ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯ ಪ್ರದೇಶವನ್ನು ಸ್ವಚ್ಛಗೊಳಿಸುತ್ತಿದ್ದಾಗ ವೇಗವಾಗಿ ಬಂದ ಪಿಕಪ್ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಆರು ಜನ ಕಾರ್ಮಿಕರು ಸಾವನ್ನಪ್ಪಿದ್ದು, ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. https://ainkannada.com/should-almonds-be-peeled-and-eaten-or-eaten-raw-which-is-better-here-is-the-answer/ ಹೌದು ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯ ಬಳಿಕ ಪಿಕಪ್ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಆರು ಮಹಿಳೆಯರು ಸಾವನ್ನಪ್ಪಿದ್ದು, ಒಬ್ಬ ಪುರುಷ ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ಮಂಡಿ ಖೇರಾ ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸಾವನ್ನಪ್ಪಿದ ಕಾರ್ಮಿಕರಲ್ಲಿ ಐದು ಮಂದಿ ಖೇರಿ ಕಲಾನ್ ಗ್ರಾಮಕ್ಕೆ ಸೇರಿದವರು ಮತ್ತು ಒಬ್ಬರು ಜಿಮ್ರಾವತ್ ಗ್ರಾಮಕ್ಕೆ ಸೇರಿದವರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅದೆಷ್ಟೋ ಯುವ ಆಟಗಾರರಿಗೆ ಸ್ಪೂರ್ತಿ. ಕಿಂಗ್ ಕೊಹ್ಲಿ ಜೊತೆ ಫೋಟೋ ತೆಗೆದುಕೊಳ್ಳಬೇಕು. ಅವರಿಂದ ಆಟೋಗ್ರಾಫ್ ತೆಗೆದುಕೊಳ್ಳುಬೇಕು ಅನ್ನೋದು ಅದೆಷ್ಟೋ ಕ್ರಿಕೆಟ್ ಪ್ರೇಮಿಗಳ ಕನಸು. ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ದಾಖಲೆಗಳ ದಂಡಯಾತ್ರೆ ಮಾಡುತ್ತಿದ್ದಾರೆ. ಇಂತಹ ಕೊಹ್ಲಿಯನ್ನು ನೆರಳಿನಂತೆ ಹಿಂಬಲಿಸುವ ಹುಡ್ಗನೊಬ್ಬ ಆರ್ಸಿಬಿ ಅಭಿಮಾನಿಗಳ ಹೃದಯ ಗೆದ್ದಿದ್ದಾನೆ. ಆರ್ಸಿಬಿ ಯಾವುದೇ ಪಂದ್ಯವಿರಲಿ, ಪ್ರಾಕ್ಟೀಸ್ ಇರಲಿ. ಅದರಲ್ಲಿಯೂ ಕೊಹ್ಲಿ ಎಲ್ಲೇ ಇರಲಿ ಅವರ ಹಿಂದೆ ನೆರಳಿನಂತೆ ಹಿಂಬಾಲಿಸುವ ಹುಡ್ಗ ಸ್ವಸ್ತಿಕ್ ಚಿಕಾರ. ಸ್ವಸ್ತಿಕ್ ಆರ್ಸಿಬಿ ಆಟಗಾರ. ಆದ್ರೆ ಈವರೆಗೂ ಈತ ರಾಯಲ್ ಚಾಲೆಂಜರ್ಸ್ ಪರ ಒಂದು ಮ್ಯಾಚನ್ನೂ ಆಡಿಲ್ಲ. ಆದರೂ ಕನ್ನಡಿಗರ ಹೃದಯ ಗೆದ್ದಿದ್ದಾನೆ. ಸದಾ ಕೊಹ್ಲಿ ಸುತ್ತಮುತ್ತ ಸುತ್ತುತ್ತ ಕ್ಯಾಮೆರಾ ಕಣ್ಣುಗಳನ್ನು ತನ್ನತ್ತ ಸೆಳೆಯುತ್ತಾನೆ. ಯಾರು ಸ್ವಸ್ತಿಕ್ ಚಿಕಾರ? 19 ವರ್ಷದ ಸ್ವಸ್ತಿಕ್ ಚಿಕಾರ ಉತ್ತರ ಪ್ರದೇಶದ ಗಾಜಿಯಾಬಾದ್ನವರು. ಈತ ಒಬ್ಬ ಪ್ರತಿಭಾನ್ವಿತ ಬ್ಯಾಟರ್. ಇವರು ಯುಪಿ ಟಿ20 ಲೀಗ್ನಲ್ಲಿ ಅತ್ಯತ್ತಮ…
ಬೆಂಗಳೂರು:- ಕಾಂಗ್ರೆಸ್ ಬಹಳ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಚಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಉಗ್ರಗಾಮಿಗಳಿಗಿಂತ ಕಾಂಗ್ರೆಸ್ಸಿಗರಿಂದಲೇ ಗಂಡಾಂತರ ಇದೆ. ಪಹಲ್ಗಾಮ್ ನಲ್ಲಿ ಉಗ್ರರು ಹಿಂದೂ ಮತ್ತು ಮುಸಲ್ಮಾನ ಪ್ರವಾಸಿಗರನ್ನು ಬೇರ್ಪಡಿಸಿ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡಿಕೊಂಡು ಗುಂಡಿಕ್ಕಿ ಕೊಂದಿದ್ದಾರೆ, ಆದರೆ ಕೆಲ ಕಾಂಗ್ರೆಸ್ ನಾಯಕರು ಈ ಅಂಶವನ್ನು ಅಲ್ಲಗಳೆಯುತ್ತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರೇನಾದರೂ ಪಹಲ್ಗಾಮ್ ಘಟನೆಯನ್ನು ಕಣ್ಣಾರೆ ವೀಕ್ಷಿಸಿದ್ದಾರಾ? ತಮ್ಮ ತಂದೆ, ಚಿಕ್ಕಪ್ಪ, https://ainkannada.com/should-almonds-be-peeled-and-eaten-or-eaten-raw-which-is-better-here-is-the-answer/ ಮಾವ ಮುಂತಾದವರ ಮೇಲೆ ಉಗ್ರರು ದಾಳಿ ನಡೆಸಿ ಕೊಂದಿದ್ದನ್ನು ಕಣ್ಣಾರೆ ನೋಡಿರುವ ಮಕ್ಕಳು ಹಿಂದೂಗಳನ್ನೇ ಟಾರ್ಗೆಟ್ ಮಾಡಿದ್ದರು ಅಂತ ಹೇಳುತ್ತಿದ್ದಾರೆ, ಕಾಂಗ್ರೆಸ್ ಬಹಳ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ, ಅದರ ನಾಯಕರ ಮಾತುಗಳನ್ನು ಕೇಳುತ್ತಿದ್ದರೆ ಭಾರತಕ್ಕೆ ಉಗ್ರಗಾಮಿಗಳಿಗಿಂತ ಅವರಿಂದಲೇ ಹೆಚ್ಚು ಗಂಡಾಂತರವಿದೆ ಅನಿಸುತ್ತದೆ ಎಂದು ಚಲವಾದಿ ಹೇಳಿದರು.
ಕ್ಯಾನ್ಸರ್ ಒಂದು ಗಂಭೀರ ಕಾಯಿಲೆಯಾಗಿದ್ದು ಅದು ದೇಹದಲ್ಲಿ ಮೌನವಾಗಿ ಬೆಳೆಯುತ್ತದೆ. ಕ್ಯಾನ್ಸರ್ ರೋಗವು ಮುಂದುವರಿದಾಗ ಮಾತ್ರ ಹೆಚ್ಚಾಗಿ ಪತ್ತೆಯಾಗುತ್ತದೆ. ಆದಾಗ್ಯೂ, ನಿಮ್ಮ ದೇಹವು ಕ್ಯಾನ್ಸರ್ನ ಆರಂಭಿಕ ಚಿಹ್ನೆಗಳನ್ನು ನೀಡುತ್ತದೆ. ಇವುಗಳನ್ನು ನಾವು ಹೆಚ್ಚಾಗಿ ಸಣ್ಣದಾಗಿ ಪರಿಗಣಿಸಿ ನಿರ್ಲಕ್ಷಿಸುತ್ತೇವೆ. ಈ ಮೂಕ ಚಿಹ್ನೆಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ, ಚಿಕಿತ್ಸೆಯ ಸಾಧ್ಯತೆಗಳು ಹಲವು ಪಟ್ಟು ಹೆಚ್ಚಾಗುತ್ತವೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಗೆಲ್ಲುವ ಮೊದಲ ಹೆಜ್ಜೆ ಅರಿವು ಮತ್ತು ಸಕಾಲಿಕ ರೋಗನಿರ್ಣಯ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. https://ainkannada.com/should-almonds-be-peeled-and-eaten-or-eaten-raw-which-is-better-here-is-the-answer/ ಭಯಪಡುವ ಬದಲು, ಜಾಗರೂಕರಾಗಿರುವುದು ಅಗತ್ಯ. ಕ್ಯಾನ್ಸರ್ ಲಕ್ಷಣಗಳು ಕೆಲವು ಜನರಲ್ಲಿ ಬದಲಾಗಬಹುದು, ಆದರೆ ತಪ್ಪಾಗಿ ಸಹ ನಿರ್ಲಕ್ಷಿಸಬಾರದ ಕೆಲವು ಸಾಮಾನ್ಯ ಲಕ್ಷಣಗಳಿವೆ. ವೈದ್ಯರ ಪ್ರಕಾರ, ನೀವು ಈ ಲಕ್ಷಣಗಳನ್ನು ನಿರಂತರವಾಗಿ ಅನುಭವಿಸುತ್ತಿದ್ದರೆ, ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಬಹಳ ಮುಖ್ಯ. ಈ ಸಣ್ಣ ಮುನ್ನೆಚ್ಚರಿಕೆಯು ನಿಮ್ಮ ಜೀವವನ್ನು ಉಳಿಸುವುದಲ್ಲದೆ ಚಿಕಿತ್ಸೆಯನ್ನು ಸುಲಭಗೊಳಿಸುತ್ತದೆ. ಇಲ್ಲದಿದ್ದರೆ… ಅದು ಗಂಭೀರವಾಗುತ್ತದೆ.. ಕ್ಯಾನ್ಸರ್ನ ಆ ಐದು…
ಬೆಂಗಳೂರು: ಸಿದ್ದರಾಮಯ್ಯನವರೇ ಸಲಹೆ ನೀಡುವ ಯಾವುದೇ ಅರ್ಹತೆಯೂ ತಮಗಿಲ್ಲ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಇಸ್ಲಾಮಿಕ್ ಉಗ್ರರ ದಾಳಿ ಆಗಿದೆ. ಗಡಿಯಾಚೆಗಿನ ನುಸುಳುಕೋರರು ನಡೆಸಿರುವ ಈ ಕೃತ್ಯ ಈಗ ಕೇವಲ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿ ಉಳಿದಿಲ್ಲ. ಇದು ಭಾರತದ ಸಾರ್ವಭೌಮತೆ, ಘನತೆಗೆ ಎಸೆದಿರುವ ಸವಾಲು. ಇಂತಹ ಸನ್ನಿವೇಶದಲ್ಲಿ ಇಡೀ ದೇಶವೇ ಪಕ್ಷಾತೀತವಾಗಿ ಒಂದು ದನಿಯಾಗಿರಬೇಕು” ಎಂದು ಹೇಳಿದ್ದಾರೆ. https://ainkannada.com/should-almonds-be-peeled-and-eaten-or-eaten-raw-which-is-better-here-is-the-answer/ ”ಇದಕ್ಕಾಗಿಯೇ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ, ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದೆ. ನಿಮ್ಮದೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವ ಸೇರಿದಂತೆ ಎಲ್ಲ ಪಕ್ಷಗಳೂ ಸರ್ವಾನುಮತದಿಂದ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದು ಹೇಳಿವೆ” ಎಂದಿದ್ದಾರೆ. ”ನಮ್ಮ ದೇಶದಲ್ಲಿ ವೃತ್ತಿಪರ ಸೇನಾಪಡೆಗಳಿವೆ. ಯಾವ ಸಂದರ್ಭದಲ್ಲಿ ಎಂತಹ ಕ್ರಮ ಕೈಗೊಳ್ಳಬೇಕು ಎನ್ನುವ ಪರಿಣಿತಿ,…
ರಾಮ್ ಚರಣ್ ತ್ರಿಬಲ್ ಆರ್ ಸಕ್ಸಸ್ ಬಳಿಕ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಚೆರ್ರಿ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ವಿಶೇಷ ಗೌರವ ಸಲ್ಲಿಸುತ್ತಿದೆ. ಲಂಡನ್ನಲ್ಲಿರುವ ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಅವರ ಮೇಣದ ಪ್ರತಿಮೆ ನಿರ್ಮಾಣವಾಗಿದ್ದು, ಅದನ್ನು ಮೇ 9ಕ್ಕೆ ಅವರು ಅನಾವರಣಗೊಳಿಸಲಿದ್ದಾರೆ. ಅದಕ್ಕಾಗಿ ರಾಮ್ ಲಂಡನ್ಗೆ ತೆರಳಲಿದ್ದಾರೆ. ಜಗತ್ತಿನಾದ್ಯಂತ ಬೇರೆ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಗಳಲ್ಲಿ ಈಗಾಗಲೇ ತೆಲುಗಿನ ಬೇರೆ ಬೇರೆ ಕಲಾವಿದರ ಪ್ರತಿಮೆಗಳಿವೆ. ‘ಬಾಹುಬಲಿ’ ನಟ ಪ್ರಭಾಸ್, ಮಹೇಶ್ ಬಾಬು, ಕಾಜಲ್ ಅಗರ್ವಾಲ್, ತಮಿಳು ನಟ ಸತ್ಯರಾಜ್ ಮುಂತಾದವರ ಅವರ ಮೇಣದ ಪ್ರತಿಮೆಗಳು ಮೇಡಮ್ ಟುಸ್ಸಾಡ್ಸ್ನಲ್ಲಿವೆ. ಸಿಂಗಾಪುರದ ಮೇಡಮ್ ಟುಸ್ಸಾಡ್ಸ್ನಲ್ಲಿ ಕಾಜಲ್ ಅಗರ್ವಾಲ್ ಮತ್ತು ಮಹೇಶ್ ಬಾಬು ಅವರ ಪ್ರತಿಮೆಗಳು ಇದ್ದರೆ, ಬಾಹುಬಲಿ ಪಾತ್ರದಲ್ಲಿರುವ ಪ್ರಭಾಸ್ ಮತ್ತು ಕಟ್ಟಪ್ಪ ಪಾತ್ರದಲ್ಲಿರುವ ಸತ್ಯರಾಜ್ ಅವರ ಮೇಣದ ಪ್ರತಿಮೆಗಳು ಲಂಡನ್ನ ಮೇಡಮ್ ಟುಸ್ಸಾಡ್ಸ್ನಲ್ಲಿವೆ. ದುಬೈನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಇದೆ. ಇದೀಗ ಈ ಪಟ್ಟಿಗೆ ರಾಮ್ ಚರಣ್…
ನವದೆಹಲಿ: ಪಹಲ್ಗಾಮ್ನಲ್ಲಿ ಪಾಕಿಸ್ತಾನ ಉಗ್ರರ ದಾಳಿ ಬಳಿಕ ಭಾರತ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾಗಿದೆ. ಹಲವು ದಿಟ್ಟ ನಿರ್ಧಾರಗಳಲ್ಲಿ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ಗೇಟ್ ಪಾಸ್ ಕೊಡುವುದು ಬಹಳ ಮುಖ್ಯವಾಗಿದೆ. ದೇಶದಲ್ಲಿ ಅಡಗಿರುವ ಪಾಕ್ ನಾಗರಿಕರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲು ತಾಕೀತು ಮಾಡಲಾಗಿದೆ. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನಗಳೆರಡರ ನಡುವಿನ ಸಂಬಂಧ ಹಳಸಿದೆ. ಇದೀಗ ಭಾರತದಲ್ಲಿ ಪಾಕಿಸ್ತಾನೀಯರ ವೀಸಾ ರದ್ದುಗೊಳಿಸಲು ಆದೇಶಿಸಲಾಗಿದೆ ಹಾಗೂ ಪಾಕಿಸ್ತಾನಿ ಪ್ರಜೆಗಳಿಗೆ ಭಾರತದೊಳಗೆ ಪ್ರವೇಶ ನಿಷೇಧಿಸಲಾಗಿದೆ. ಈಗಾಗಲೇ ಬೇರೆ ಬೇರೆ ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಮಾಡಿ ವಾಪಾಸ್ ಕಳುಹಿಸಲು ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. https://ainkannada.com/should-almonds-be-peeled-and-eaten-or-eaten-raw-which-is-better-here-is-the-answer/ ಭಾರತದಲ್ಲಿ ಪಾಕಿಸ್ತಾನದ 14,000 ಪ್ರಜೆಗಳು ಇರಬಹುದೆಂದು ಅಂದಾಜು ಮಾಡಲಾಗಿದೆ. ಭಾರತ ಸರ್ಕಾರ ವಾರ್ಷಿಕ 1.5-2 ಲಕ್ಷ ಪಾಕಿಸ್ತಾನ ಪ್ರಜೆಗಳಿಗೆ ವೀಸಾ ನೀಡುತ್ತದೆ. ವಿವಿಧ ಉದ್ದೇಶಗಳಿಗಾಗಿ ಪಾಕ್ ಪ್ರಜೆಗಳಿಗೆ ಭಾರತ ವೀಸಾ ನೀಡುತ್ತದೆ. ಕುಟುಂಬ ಸದಸ್ಯರು, ಸ್ನೇಹಿತರನ್ನು ಭೇಟಿಯಾಗಲು ವಿಸಿಟರ್ ವೀಸಾ ನೀಡಲಾಗುವುದು.…
ಇತ್ತೀಚಿನ ದಿನಗಳಲ್ಲಿ ರೆಫ್ರಿಜರೇಟರ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಭಾಗಗಳಲ್ಲೂ ಕೂಡ ಬಹುತೇಕ ಎಲ್ಲರ ಮನೆಯಲ್ಲಿಯೂ ಫ್ರಿಜ್ ಇದ್ದೇ ಇರುತ್ತದೆ. ಮನೆಯಲ್ಲಿ ಹಣ್ಣು ತರಕಾರಿಗಳನ್ನು, ಆಹಾರವನ್ನು ತಾಜಾವಾಗಿಡಲು ಫ್ರಿಡ್ಜ್ ತುಂಬಾ ಪ್ರಯೋಜನಕಾರಿ ಆಗಿದೆ. https://ainkannada.com/should-almonds-be-peeled-and-eaten-or-eaten-raw-which-is-better-here-is-the-answer/ ಅದರಲ್ಲಿಯೂ ಡಬಲ್ ಡೋರ್ ಫ್ರಿಡ್ಜ್ ಕೊಳ್ಳುವವರಿಗಿಂತ ಸಿಂಗಲ್ ಡೋರ್ ಫ್ರಿಜ್ ಕೊಳ್ಳುವವರೇ ಹೆಚ್ಚು. ಆದರೆ ನೀರನ್ನು ಸ್ವಚ್ಛಗೊಳಿಸುವ ನೀರಿನ ಫಿಲ್ಟರ್ ಮುರಿದರೆ ಫ್ರಿಜ್ನಲ್ಲಿ ಐಸ್ ರೂಪುಗೊಳ್ಳುತ್ತದೆ. ಇದರಿಂದ ನೀವು ಫ್ರಿಜ್ನಲ್ಲಿ ಇಟ್ಟಿದ್ದ ವಸ್ತುಗಳೆಲ್ಲವೂ ಮಂಜುಗಡ್ಡೆಯಿಂದ ಮುಚ್ಚಲ್ಪಡುತ್ತದೆ. ಫ್ರೀಜರ್ ಅನ್ನು ಸರಿಯಾದ ತಾಪಮಾನಕ್ಕೆ ಹೊಂದಿಸಿನಿಮ್ಮ ಫ್ರೀಜರ್ನಲ್ಲಿ ಐಸ್ ನಿರ್ಮಾಣವಾಗುವುದನ್ನು ತಡೆಯಲು, ಫ್ರೀಜರ್ ತಾಪಮಾನವನ್ನು -18 ಡಿಗ್ರಿ ಫ್ಯಾರನ್ಹೀಟ್ಗೆ ಹೊಂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಫ್ರೀಜರ್ ಈ ತಾಪಮಾನಕ್ಕಿಂತ ಹೆಚ್ಚಿದ್ದರೆ, ಅದನ್ನು ಕಡಿಮೆ ಮಾಡಿ. ಇಲ್ಲದಿದ್ದರೆ, ಹೆಚ್ಚಿನ ಐಸ್ ಫ್ರಿಡ್ಜ್ನಲ್ಲಿ ಘನೀಕರಿಸಲು ಪ್ರಾರಂಭಿಸುತ್ತದೆ. ಫ್ರೀಜರ್ ಅನ್ನು ಪೂರ್ಣವಾಗಿಸಿ ಫ್ರೀಜರ್ನಲ್ಲಿ ಮಂಜುಗಡ್ಡೆ ನಿರ್ಮಾಣವಾಗುವುದನ್ನು ತಡೆಯಲು, ಅದನ್ನು ಪೂರ್ಣವಾಗಿ ಇರಿಸಿಕೊಳ್ಳಿ. ಏಕೆಂದರೆ ಫ್ರೀಜರ್ನಲ್ಲಿ ಹೆಚ್ಚಿನ ಸ್ಥಳವಿದ್ದಾಗ,…
ಭಾರತದ ಸ್ಟಾರ್ ಬ್ಯಾಡ್ಮಿಟನ್ ಆಟಗಾರ್ತಿ ಪಿ.ವಿ.ಸಿಂಧು ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗಿನ ಸೌಂದರ್ಯಕ್ಕೆ ಮಾತ್ರವಲ್ಲ ನಮ್ಮ ಹೆಮ್ಮೆಯ ಕೆಂಪು ಸೈನ್ಯಕ್ಕೂ ಫಿದಾ ಆಗಿದ್ದಾರೆ. ಪಿವಿ ಸಿಂಧು ಮೂಲತಃ ತೆಲಂಗಾಣದ ರಾಜಧಾನಿ ಹೈದ್ರಾಬಾದ್ನವರು. ಕಳೆದ ಕೆಲ ವಾರಗಳಿಂದ ಮಡಿಕೇರಿಯಲ್ಲಿ ಪತಿ ಹಾಗೂ ಸ್ನೇಹಿತರೊಟ್ಟಿಗೆ ಸಮಯ ಕಳೆದಿದ್ದಾರೆ. ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿರುವ ಅವರು ಅಲ್ಲಿಯೇ ಒಂದು ಎಸ್ಟೇಟ್ ಖರೀದಿಸುವ ಬಗ್ಗೆಯೂ ಆಶಯ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ನಡುವೆ ಸಿಂಧು ಮೊನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ವರ್ಸಸ್ ಆರ್ ಆರ್ ಪಂದ್ಯಕ್ಕೆ ಹಾಜರಾತಿ ಹಾಕಿದ್ದಾರೆ. ಈ ವೇಳೆ ಆರ್ಸಿಬಿ ಬಾವುಟ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಿಂಧು ಮೂಲತಃ ಹೈದ್ರಾಬಾದ್ನವರು. ಆದ್ರೆ ತಮ್ಮದೇ ಹೈದ್ರಾಬಾದ್ ಸನ್ ರೈಸರ್ಸ್ ತಂಡದ ಬದಲು ಬೆಂಗಳೂರು ರಾಯಲ್ ಚಾಲೆಂಜರ್ಸ್ನ್ನು ತುಂಬಾ ಇಷ್ಟಪಟ್ಟಿದ್ದಾರೆ. ಅಲ್ಲದೇ ಈ ಬಾರಿ ಆರ್ಬಿಸಿ ಅಭಿಮಾನಿಗಳ ಧ್ಯೇಯ ವಾಕ್ಯದಂತಿರುವ ಈ ಸಲ ಕಪ್ ನಮ್ಮದೇ ಎಂದಿದ್ದಾರೆ. ಆರ್ಸಿಬಿ ಹೋಮ್ ಗ್ರೌಂಡ್ನಲ್ಲಿ ಹ್ಯಾಟ್ರಿಕ್…