Author: Author AIN

ಐಪಿಎಲ್ 2025 ರ ಋತುವಿನಲ್ಲಿ ಗುರುವಾರ ನಡೆದ ಮುಂಬೈ ಇಂಡಿಯನ್ಸ್ (MI) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯವು ಮುಂಬೈ ಗೆಲುವಿನೊಂದಿಗೆ ಕೊನೆಗೊಂಡಿತು. ಆದಾಗ್ಯೂ, ಈ ಪಂದ್ಯದಲ್ಲಿ, ಭಾವನೆಗಳು ಮತ್ತು ಆಟವು ಪ್ರೇಕ್ಷಕರನ್ನು ಮೆಚ್ಚಿಸಿತು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಕೇವಲ 162 ರನ್‌ಗಳಿಗೆ ಸೀಮಿತವಾಯಿತು. ನಂತರ ಮುಂಬೈ ಇಂಡಿಯನ್ಸ್ 18.1 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿದ ಮತ್ತು ನಿಕಟ ಗೆಲುವು ದಾಖಲಿಸಿತು. ಈ ಗೆಲುವಿನಲ್ಲಿ ಮುಂಬೈನ ಬೌಲರ್‌ಗಳು ಮತ್ತು ಬ್ಯಾಟರ್‌ಗಳು ಒಟ್ಟಾಗಿ ಉತ್ತಮ ಪ್ರದರ್ಶನ ನೀಡಿದರು. ವಿಲ್ ಜ್ಯಾಕ್ಸ್ 26 ಎಸೆತಗಳಲ್ಲಿ 36 ರನ್ ಗಳಿಸಿದರು, ಸೂರ್ಯಕುಮಾರ್ ಯಾದವ್ 15 ಎಸೆತಗಳಲ್ಲಿ 26 ರನ್ ಗಳಿಸಿದರು ಮತ್ತು ತಿಲಕ್ ವರ್ಮಾ 21 ರನ್ ಗಳಿಸಿ ಔಟಾಗದೆ ಉಳಿದರು. ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ವಿಲ್ ಜಾಕ್ಸ್ ಹೈದರಾಬಾದ್ ಬ್ಯಾಟಿಂಗ್ ಲೈನ್ ಅಪ್ ಅನ್ನು ಚೆಂಡಿನ ಮೂಲಕ ಹಾನಿಗೊಳಿಸಿದರು. SRH ಪರ ಹೆನ್ರಿಚ್ ಕ್ಲಾಸೆನ್ 37 ರನ್ ಗಳಿಸಿದರು…

Read More

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ಉತ್ತುಂಗಕ್ಕೇರಿದೆ. ಎರಡೂ ದೇಶಗಳು ಸುಂಕವನ್ನು ಕಡಿಮೆ ಮಾಡುವುದಿಲ್ಲ ಎಂದು ಘೋಷಿಸುವ ಮೂಲಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿವೆ. ಈ ಕ್ರಮದಲ್ಲಿ, ಚೀನಾ ಪ್ರಮುಖ ಖನಿಜಗಳ ರಫ್ತನ್ನು ನಿಲ್ಲಿಸಿದೆ. ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ಸ್, ಕಾರುಗಳು, ವಿಮಾನಗಳು ಮತ್ತು ಅರೆವಾಹಕಗಳ ತಯಾರಿಕೆಗೆ ಅಗತ್ಯವಾದ ಖನಿಜಗಳ ರಫ್ತನ್ನು ಅದು ಸ್ಥಗಿತಗೊಳಿಸಿದೆ. ಚೀನಾ ಹೊಸ ರಫ್ತು ನೀತಿಯನ್ನು ರೂಪಿಸುತ್ತಿರುವಾಗ ಅಮೆರಿಕವು ಇಕ್ಕಟ್ಟಿಗೆ ಸಿಲುಕುವುದು ಖಚಿತವಾಗಿದೆ. ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಈ ಬಾರಿ ಚೀನಾ ಹೊಸ ಅಸ್ತ್ರವನ್ನು ಹೊರತಂದಿದೆ. ಅವು ಅಪರೂಪದ ಭೂಮಿಯ ಅಂಶಗಳು. ಈ ಖನಿಜಗಳಿಲ್ಲದೆ, ಆಧುನಿಕ ಜಗತ್ತು ನಿಂತುಹೋಗುತ್ತಿತ್ತು. ಕಾರು ತಯಾರಿಕೆಯಿಂದ ಹಿಡಿದು ಕ್ಷಿಪಣಿಗಳವರೆಗೆ, ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ವಿಮಾನಗಳವರೆಗೆ ಎಲ್ಲವೂ ಈ ಅಪರೂಪದ ಭೂಮಿಯ ಅಂಶಗಳಿಂದಲೇ ತಯಾರಿಸಲ್ಪಟ್ಟಿದೆ. https://ainkannada.com/do-you-have-the-habit-of-keeping-hot-rice-in-a-plastic-box-you-will-definitely-get-cancer-soon/ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ಮೇಲೆ ಪ್ರತೀಕಾರದ ಸುಂಕವನ್ನು ಹೆಚ್ಚಿಸಿದಾಗ ಡ್ರ್ಯಾಗನ್ ದೇಶವು ಕೋಪಗೊಂಡಿತು.…

Read More

ಇಂದು ನೆನಪಿರಲಿ ಪ್ರೇಮ್‌ ಹುಟ್ಟುಹಬ್ಬ. ಅವರ ಹುಟ್ಟುಹಬ್ಬದ ವಿಶೇಷವಾಗಿ ಸ್ಪಾರ್ಕ್‌ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‌ ವಿರುದ್ಧ ನಟಿ ನಿರ್ಮಾಪಕಿ ಶೃತಿ ನಾಯ್ಡು ಗರಂ ಆಗಿದ್ದಾರೆ. ನಟ ಪ್ರೇಮ್‌ ಹಾಗೂ ಚಿತ್ರತಂಡಕ್ಕೆ ನೋಟೀಸ್‌ ಕಳಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಆಗಿದ್ದೇನು? ಶ್ರುತಿ ನಾಯ್ಡು ನೆನಪಿರಲಿ ಪ್ರೇಮ್‌ ನಟಿಸುತ್ತಿರುವ ಸ್ಪಾರ್ಕ್‌ ಸಿನಿಮಾದ ಪೋಸ್ಟ್‌ವೊಂದನ್ನ ಶೇರ್‌ ಮಾಡಿ ಸುಧೀರ್ಘ ಬರಹವೊಂದನ್ನು ಬರೆದು, ಕಾನೂನು ನೋಟಿಸ್ ಕಳುಹಿಸುವುದಾಗಿ ತಿಳಿಸಿದ್ದಾರೆ. ನಮಸ್ಕಾರ, ಈ ಚಿತ್ರ ತಂಡದವರು ಅನೈತಿಕವಾಗಿ ನಡೆದುಕೊಂಡಿದ್ದಾರೆ. ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪ್ರಕಟವಾಗಿರುವ ಈ ಚಿತ್ರದ ಬಗ್ಗೆ, ಪತ್ರಿಕೆಯ ಕಟಿಂಗ್‌ನಲ್ಲಿರುವ ಈ ಚಿತ್ರದಲ್ಲಿ ನಟನ ಅನುಮತಿ ಪಡೆಯದೇ ಪೋಸ್ಟ್‌ ಮಾಡಿದ್ದಾರೆ. ನಟ ಹಿಡಿದುಕೊಂಡ ಪೋಸ್ಟರ್‌ನಲ್ಲಿ ಬಳಸಲಾದ ಈ ಚಿತ್ರವು ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ಭೀಮಾ ಚಿತ್ರದ್ದು.ಅದರಲ್ಲಿರೋ ಫೋಟೋವನ್ನು ಭೀಮಾ ಚಿತ್ರಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಆದರೆ ಈ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪರವಾಗಿ ಈ ಚಿತ್ರ…

Read More

ಬೆಂಗಳೂರು: ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಭೇಟಿಯಾಗಿದ್ದಾರೆ. ಈ ಕುರಿತು ಡಿಸಿಎಂ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. https://ainkannada.com/do-you-have-the-habit-of-keeping-hot-rice-in-a-plastic-box-you-will-definitely-get-cancer-soon/ ಇಂದು ನನ್ನ ನಿವಾಸದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ, ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಕರ್ನಾಟಕ ಮತ್ತು ಭಾರತೀಯ ಕ್ರಿಕೆಟ್‌ಗೆ ಅಪಾರವಾದ ಕೊಡುಗೆ ನೀಡಿದ ಹೆಮ್ಮೆಯ ಹೆಮ್ಮೆಯ ಕನ್ನಡಿಗನೊಂದಿಗೆ ಸಂವಾದದಲ್ಲಿ ತೊಡಗಿಸಿಕೊಂಡಿದ್ದು ಸಂತಸವಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಡಿಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್ ಕುಂಬ್ಳೆ, ವೈಯುಕ್ತಿಕ ಕೆಲಸದ ನಿಮಿತ್ತ ಡಿಸಿಎಂ ಭೇಟಿ ಆಗಿದ್ದೆ ಎಂದು ಹೇಳಿದರು.

Read More

ಕಾವಾಲಯ್ಯ ಜೈಲರ್‌ ಸಿನಿಮಾದ ಈ ಸ್ಪೆಷಲ್‌ ನಂಬರ್‌ ಯೂಟ್ಯೂಬ್‌ ನಲ್ಲಿ ದಾಖಲೆ ಹಿಟ್‌ ಕಂಡಿದೆ. ತಮನ್ನಾ ಜೊತೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ನೂ ಕಾವಾಲಯ್ಯ ಅಂತಾ ಭರ್ಜರಿಯಾಗಿ ಕುಣಿದಿದ್ದರು. ಲಿರಿಕಲ್ಸ್‌ ಸಾಂಗ್‌ ಗೆ ರಬೋಬ್ಬರಿ 200 ಮಿಲಿಯನ್ಸ್‌ ವೀವ್ಸ್‌ ಕಂಡಿದೆ. ನೆಲ್ಸನ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಜೈಲರ್‌ ಸಿನಿಮಾದ ಸ್ಪೆಷಲ್‌ ನಂಬರ್‌ ಇದಾಗಿದ್ದು, ಈ ಹಾಡನ್ನು ಮೀರಿಸುವ ಮತ್ತೊಂದು ಗಾನಬಜಾನದಲ್ಲಿ ಕರಾವಳಿ ಸುಂದರಿ ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್‌ ಕನಗರಾಜ್‌ ಕಾಂಬೋದ ಬಹುನಿರೀಕ್ಷಿತ ಸಿನಿಮಾ ಕೂಲಿ. ಈ ಚಿತ್ರದ ಗ್ಲಿಂಪ್ಸ್‌ ಈಗಾಗಲೇ ಭಾರೀ ಸದ್ದು ಮಾಡಿದೆ. ಸದ್ಯ ಚಿತ್ರ ಪೋಸ್ಟ್‌ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದ್ದು, ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಇರೋದ್ರಿಂದ ಕಂಟೆಂಟ್ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಕೂಲಿ ಸಿನಿಮಾಲಿ ಒಂದು ಸ್ಪೆಷಲ್ ಹಾಡೊಂದಿದ್ದು, ಈ ಹಾಡಿಗೆ ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ.. ಈ ಹಾಡಿನ ಕುರಿತು ಪೂಜಾ ಮೌನ ಮುರಿದಿದ್ದು, ನಾನು…

Read More

ಬೆಂಗಳೂರು: ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಖಾಸಗಿ ಶಾಲೆ ಬಳಿ ಫೇಸ್ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರವೀಣ್ ಗೌಡ ಬೇಲೂರು (35) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೃತ ಪ್ರವೀಣ್ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೆಲ ವ್ಯಕ್ತಿಗಳ ಟಾರ್ಚರ್‌ನಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪಿಸಿದ್ದಾರೆ. https://ainkannada.com/do-you-have-the-habit-of-keeping-hot-rice-in-a-plastic-box-you-will-definitely-get-cancer-soon/ ಬಿಜೆಪಿ ಕಾರ್ಯಕರ್ತನಾಗಿದ್ದ ಪ್ರವೀಣ್ ಗೌಡ ಬೇಲೂರು, ಫೇಸ್ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಸಾವಿಗೆ ಕಾರಣ ಏನು ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಳೆದ ಎರಡು ತಿಂಗಳಿನಿಂದ ಮಾನಸಿಕವಾಗಿ ನೊಂದಿದ್ದೇನೆ. ನನ್ನ ಸಾವಿಗೆ ಕೆಲವರು ನೇರ ಕಾರಣರಾಗಿದ್ದಾರೆ. ಸಮಂದರ್ ಕಿರಣ್, ಗೋಕುಲ್ ಫ್ಯಾಷನ್ ಹರೀಶ್, ಭಾಸ್ಕರ್ ನಾರಾಯಣಪ್ಪ, ದೊಡ್ಡಹಾಗಡೆ ಮಧುಗೌಡ ಜೊತೆಗೆ ಸರವಣ ಇವರೆಲ್ಲಾ ನನ್ನ ಸಾವಿಗೆ ಕಾರಣಕರ್ತರು ಎಂದು ವೀಡಿಯೋದಲ್ಲಿ ಆರೋಪಿಸಿದ್ದಾರೆ. ಪೊಲೀಸರು, ಯಾರನ್ನೂ ಬಿಟ್ಟರೂ ಕಿರಣ್ ಗೌಡನನ್ನು ದಯವಿಟ್ಟು ಬಿಡಬೇಡಿ. ಕಿರಣ್ ತುಂಬಾ ಹೆಣ್ಣುಮಕ್ಕಳಿಗೆ ಫೋನ್ ಮಾಡಿ…

Read More

ಕನ್ನಡದ ಕುವರ, ಭಾರತೀಯ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ಕೆಎಲ್‌ ರಾಹುಲ್‌ ಇಂದು ಜನ್ಮದಿನ ಸಂಭ್ರಮದಲ್ಲಿದ್ದಾರೆ. ರಾಹುಲ್‌ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ತಮ್ಮ ಹುಟ್ಟುಹಬ್ಬದಂದೇ ರಾಹುಲ್‌ ಮಗಳ ಹೆಸರನ್ನು ರಿವೀಲ್‌ ಮಾಡಿದ್ದಾರೆ. ಕೆಎಲ್‌ ರಾಹುಲ್‌ ಮಂಗಳೂರು ಮೂಲದ ಸುನಿಲ್‌ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿಯನ್ನು ಪ್ರೀತಿಸಿ ಕೈ ಹಿಡಿದ್ದರು. ಸುನಿಲ್‌ ಶೆಟ್ಟಿಯವರ ಮುಂಬೈ ಫಾರ್ಮ್‌ ಹೌಸ್‌ ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಈ ಜೋಡಿ ಈ ವರ್ಷ ಹೆಣ್ಣು ಮಗವನ್ನು ಬರ ಮಾಡಿಕೊಂಡಿದ್ದರು. ಇದೀಗ ಆ ಮಗಳ ಹೆಸರನ್ನು ರಾಹುಲ್‌ ದಂಪತಿ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಇವಾರಾ ರಾಹುಲ್ “ನಮ್ಮ ಮಗಳು ಮಗು, ನಮ್ಮ ಸರ್ವಸ್ವ. ಇವಾರಾ/ ಈವಾರಾ, ದೇವರ ಉಡುಗೊರೆ,” ಎಂದು ಅಥಿಯಾ-ರಾಹುಲ್ ಫೋಟೋದೊಂದಿಗೆ ಬರೆದಿದ್ದಾರೆ.‌ ಈವಾರಾ ಸಂಸ್ಕೃತದ ಹೆಸರು. ದೇವರ ಕೊಡುಗೆ ಎಂದರ್ಥ.

Read More

ಬೆಂಗಳೂರು: ಪಿಯುಸಿ ಪರೀಕ್ಷೆ ಬೆನ್ನಲ್ಲೇ ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದೆ. ಕೊನೆಯ ದಿನವಾದ ನಿನ್ನೆ, ಶಿವಮೊಗ್ಗ ಮತ್ತು ಬೀದರ್​ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆದುಹಾಕುವಂತೆ ಸೂಚಿಸಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇನ್ನೂ ಈ ವಿಚಾರವಾಗಿ ಹಿಂದೂಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರೇ ನಾನು ಬ್ರಾಹ್ಮಣರ ವಿರೋಧಿಯಲ್ಲ ಅಂತ ಹೇಳ್ತಿದ್ರು. ಆದ್ರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಂದ ನಂತರ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ತುಂಬಾ ಶಾಕಿಂಗ್ ವಿಚಾರ. ಒಂದು ಸಮುದಾಯವನ್ನ ಇನ್ನೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಉದ್ಧ ತೋಳಿನ ಶರ್ಟ್ ತೆಗೆಸ್ತಾರೆ, ಜನಿವಾರದಲ್ಲಿ ಬ್ಲೂಟೂತ್ ಹಾಕ್ಕೊಂಡು ಬರೋಕೆ ಆಗುತ್ತಾ? ಅಂತ ಪ್ರಶ್ನೆ ಮಾಡಿದ್ದಾರೆ. https://ainkannada.com/do-you-have-the-habit-of-keeping-hot-rice-in-a-plastic-box-you-will-definitely-get-cancer-soon/ ಹಿಜಬ್, ಬುರ್ಖಾಗೆ ಅನುಮತಿ ಕೊಡ್ತೀರ, ಇವೇಲ್ಲ ಇರಬಹುದು ಅದ್ರೆ ಜನಿವಾರ ಬೇಡ್ವಾ..? ಜಾತಿ ಜಾತಿಗಳ ನಡುವೆ ವಿಷ ಬೀತ್ತ ಬಿತ್ತಿವ ಕೆಲಸ…

Read More

ಈ ವಿಶ್ವದಲ್ಲಿ ಎಲ್ಲೋ ಭೂಮಿಯಂತಹ ಇನ್ನೊಂದು ಗ್ರಹವಿದೆ, ಅದರಲ್ಲಿ ಮನುಷ್ಯರನ್ನು ಹೋಲುವ ಜೀವಿಗಳಿವೆ ಎಂದು ಅನೇಕ ಜನರು ನಂಬುತ್ತಾರೆ. ಕೆಲವು ವಿಜ್ಞಾನಿಗಳು ವರ್ಷಗಳಿಂದ ಏಲಿಯನ್‌ಗಳನ್ನು ಹುಡುಕಲು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಮನುಷ್ಯ ಅನ್ಯಗ್ರಹ ಜೀವಿಗಳನ್ನು ಪತ್ತೆಹಚ್ಚಿ ಅವರೊಂದಿಗೆ ಸ್ನೇಹ ಬೆಳೆಸಲು ಆಶಿಸುತ್ತಾನೆ. ವರ್ಷಗಳಲ್ಲಿ ನೂರಾರು ಪ್ರಯೋಗಗಳನ್ನು ನಡೆಸಲಾಗಿದ್ದರೂ, ಅನ್ಯಲೋಕದ ಅಸ್ತಿತ್ವದ ಸ್ಪಷ್ಟ ಪುರಾವೆಗಳು ಕಂಡುಬಂದಿಲ್ಲ. https://ainkannada.com/do-you-have-the-habit-of-keeping-hot-rice-in-a-plastic-box-you-will-definitely-get-cancer-soon/ ಆದರೆ, ಇತ್ತೀಚಿನ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಏಲಿಯನ್ಸ್ ನಮ್ಮ ಭೂಮಿಯ ಹತ್ತಿರ ಓಡಾಡುತ್ತಿವೆ ಎಂದು ಹೇಳಲಾಗುತ್ತಿದೆ. ಕೆನಡಾದಲ್ಲಿ ರಾತ್ರಿ ಆಕಾಶದಲ್ಲಿ ನಿಗೂಢ, ವರ್ಣರಂಜಿತ ದೀಪಗಳು ಮಿನುಗುತ್ತಿರುವುದು ಕಂಡುಬಂದ ನಂತರ ವಿಚಿತ್ರವಾದ UFO (ಗುರುತಿಸಲಾಗದ ಹಾರುವ ವಸ್ತು) ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. https://x.com/dom_lucre/status/1912240470480285729?ref_src=twsrc%5Etfw%7Ctwcamp%5Etweetembed%7Ctwterm%5E1912240470480285729%7Ctwgr%5E28b35f634abc046572b6e912c92da95a82336b40%7Ctwcon%5Es1_&ref_url=https%3A%2F%2Ftv9telugu.com%2Fworld%2Fmysterious-lights-ufo-sightings-canadas-alien-encounter-1513601.html ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ UAPS (ಗುರುತಿಸದ ವೈಮಾನಿಕ ವಿದ್ಯಮಾನಗಳು) ಪತ್ತೆಯಾಗಿವೆ. ವೀಡಿಯೊ ವಿವಿಧ ಬಣ್ಣಗಳು ಮತ್ತು ಅಸಾಮಾನ್ಯ ಚಲನೆಗಳನ್ನು ಪ್ರದರ್ಶಿಸುವ ದೀಪಗಳನ್ನು ತೋರಿಸುತ್ತದೆ. ಇವು ಖಂಡಿತವಾಗಿಯೂ ವಿದೇಶಿಯರು ಎಂದು ಹಲವರು ಹೇಳುತ್ತಾರೆ. ಅನೇಕ ಜನರು…

Read More

ಟಾಲಿವುಡ್‌ ಮೋಸ್ಟ್‌ ಅಪ್‌ ಕಮ್ಮಿಂಗ್‌ ಸಿನಿಮಾಗಳಲ್ಲೊಂದು ಅಖಂಡ-1. ಸೂಪರ್‌ ಸ್ಟಾರ್‌ ನಂದಮೂರಿ ಬಾಲಕೃಷ್ಣ ನಟಿಸುತ್ತಿರು ಅಖಂಡ ಚಿತ್ರದ ಸೀಕ್ವೆಲ್ ಮೇಲೆ ಚಿತ್ರಪ್ರೇಮಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬೊಯಾಪಾಟಿ ಶ್ರೀನು ಈ ಬಾರಿ ಬಾಲಯ್ಯನನ್ನು ಯಾವ ಅವತಾರದಲ್ಲಿ ತೋರಿಸ್ತಾರೆ ಅಂತಾ ಕಾತರದಿಂದ ಕಾಯುತ್ತಿದ್ದಾರೆ. ಅಖಂಡ-2ದಲ್ಲಿಯೂ ಡಬಲ್‌ ರೋಲ್‌ ಮುಂದುವರೆಯಲಿದ್ದು, ಭರಪೂರ ಆಕ್ಷನ್‌ ಇರೋದು ಖಾತ್ರೆಯಾಗಿದೆ. ಈ ಆಕ್ಷನ್‌ ಸೀಕ್ವೆನ್ಸ್‌ ಕಂಪೋಸ್‌ ಮಾಡೋದಿಕ್ಕೆ ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಎಂಟ್ರಿ ಕೊಟ್ಟಿದ್ದಾರೆ. ರವಿವರ್ಮ, ಸ್ಯಾಂಡಲ್‌ ವುಡ್‌ ಮಾತ್ರವಲ್ಲ ಬಾಲಿವುಡ್ ಸ್ಟಾರ್‌ ಹೀರೋ, ಸ್ಟಾರ್‌ ಡೈರೆಕ್ಷರ್ ಗಳಿಂದ ಸೈ ಎನಿಸಿಕೊಂಡವರು. ಸಲ್ಮಾನ್ ಖಾನ್, ಶಾರುಖ್‌ ಖಾನ್ ಸಿನಿಮಾಗಳಿಗೆ ಸಾಹಸ ಸಂಯೋಜಿಸಿ ಜನಪ್ರಿಯತೆಗಳಿಸಿರುವ ರವಿವರ್ಮ‌ ಈಗ ಬಾಲಯ್ಯನಿಗೆ ಆಕ್ಷನ್‌ ಹೇಳಿಕೊಡಲು ರೆಡಿಯಾಗಿದ್ದಾರೆ. ಕನ್ನಡದ ರವಿವರ್ಮಾ, ಎಲ್ಲಾ ಭಾಷೆಯಲ್ಲೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.. ಬಹುತೇಕ ಸೂಪರ್ ಸ್ಟಾರ್ಗಳ ಸಿನಿಮಾಗಳಿಗೆ ರವಿವರ್ಮಾ ಸ್ಟಂಟ್ ಇರುತ್ತೆ.‌ ಇದೀಗ ತೆಲುಗಿನ ಅಖಂಡ 2ಗೆ ಭರ್ಜರಿ ಫೈಟ್ ಒಂದನ್ನು ಕಂಪೋಸ್ ಮಾಡಿದ್ದಾರೆ..…

Read More