ದೃಷ್ಟಿಬೊಟ್ಟು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಬಡತನದಲ್ಲಿದ್ದ ಹೆಣ್ಣಿಗೆ ತನ್ನ ಸೌಂದರ್ಯವೇ ಹೇಗೆಲ್ಲಾ ಶತ್ರು ಆಗುತ್ತೇ ಎಂಬ ಕಥೆ ಸುತ್ತ ಸಾಗುವ ಗಟ್ಟಿಕಥೆಯಲ್ಲಿ ವಿಜಯ್ ಸೂರ್ಯ ನಾಯಕ. ಬಳ್ಳಾರಿಯ ದತ್ತಭಾಯ್ ಆಗಿ ನಟಿಸುತ್ತಿರುವ ಅವರೀಗೆ ಜೋಡಿಯಾಗಿ ಅರ್ಪಿತಾ ಮೋಹಿತೆ ನಟಿಸುತ್ತಿದ್ದಾರೆ. ದೃಷ್ಟಿ ಪಾತ್ರದಲ್ಲಿ ಮೋಹಿತಾ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ದೃಷ್ಟಿಯ ಪಾಲಿಗೆ ರೂಪ ಎನ್ನುವುದೇ ಶಾಪವಾಗಿರುತ್ತದೆ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಅವಳು ಬದುಕುತ್ತಿದ್ದಾಳೆ. ಮುಖಕ್ಕೆ ಮಸಿ ಹಚ್ಚಿ ಪಾತ್ರ ಮಾಡುವ ಅರ್ಪಿತಾ ರಿಯಲ್ ಲೈಫ್ ನಲ್ಲಿ ಸುಂದರವಾಗಿದ್ದಾರೆ. ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಚೆಂದದ ಫೋಟೋ ಹಂಚಿಕೊಂಡಿದ್ದಾರೆ. ಸೀರೆಯಲ್ಲಿ ಸಖತ್ ಅಗಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ. ಅರ್ಪಿತಾ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಸಿಗುತ್ತಿದೆ. ಆದಷ್ಟು ಬೇಗ ಸೀರಿಯಲ್ ನಲ್ಲಿ ದೃಷ್ಟಿ ಅಸಲಿ ಮುಖ ತೋರಿಸಿ ಅಂತಾ ಫ್ಯಾನ್ಸ್ ಬೇಡಿಕೆ ಇಡುತ್ತಿದ್ದಾರೆ.
Author: Author AIN
ಬಹುಭಾಷಾ ನಟಿ ಸಮಂತಾ ಮುಟ್ಟಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳು ಪೀರಿಯಡ್ಸ್ ಬಗ್ಗೆ ಓಪನ್ ಆಗಿ ಮಾತಾಡಲು ಮುಜುಗರಪಟ್ಟುಕೊಳ್ಳುವೇಕೆ ಎಂದು ನೋವನ್ನು ಹೊರಹಾಕಿದ್ದಾರೆ. ಸಮಂತಾ ನಟನೆ ಜೊತೆಯಲ್ಲೀಗ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ವೆಬ್ ಸೀರೀಸ್ ಗಳಲ್ಲಿ ಬ್ಯುಸಿಯಾಗಿರುವ ನಟಿ, ಇತ್ತೀಚೆಗೆ ಮಹಿಳೆಯರ ಋತುಚಕ್ರದ ಬಗ್ಗೆ ಮುಕ್ತವಾಗಿ ಅಭಿಪ್ರಾಯಪಡಿಸಿದ್ದಾರೆ. ಪೋಡ್ ಕಾಸ್ಟ್ ವೊಂದರಲ್ಲಿ ಸ್ಯಾಮ್, ‘ಹೆಣ್ಣಾಗಿ ನಾವು ಇಲ್ಲಿಯವರೆಗೆ ಬಂದಿದ್ದೇವೆ. ಆದರೂ ಮುಟ್ಟಿನ ವಿಷಯಗಳ ಬಗ್ಗೆ ಮಾತನಾಡುವಾಗ ಇಂದಿಗೂ ಮೌನ ವಹಿಸುತ್ತೇವೆ. ಅದನ್ನು ಅವಮಾನ ಎಂದು ಭಾವಿಸುತ್ತೇವೆ. ನಮ್ಮ ಋತುಚಕ್ರ ಶಕ್ತಿಯುತವಾಗಿವೆ. ಇದು ಜೀವನವನ್ನು ದೃಢಪಡಿಸುತ್ತವೆ. ಇದು ಖಂಡಿತವಾಗಿಯೂ ಮುಜುಗರ ಅಥವಾ ಹಗುರವಾಗಿ ಪರಿಗಣಿಸುವ ವಿಷಯವಲ್ಲ. ಋತುಚಕ್ರ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಪ್ರತಿ ವರ್ಷವೂ ನಿರಂತರವಾಗಿ ಕಲಿಯುತ್ತಲೇ ಇರಬೇಕು’ ಎಂದು ಹೇಳಿದ್ದಾರೆ. ವೈವಾಹಿಕ ಜೀವನದಿಂದ ನೊಂದಿರುವ ಸಮಂತಾ ಎರಡನೇ ಮದುವೆಗೆ ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಗಾಸಿಪ್ ಗಳಿಗೆ ಕಿವಿಗೆ…
ದಕ್ಷಿಣ ಭಾರತ ಚಿತ್ರರಂಗ ಕಂಡ ಅಪರೂಪ ನಟಿ ಅಭಿನಯ ಹೊಸ ಬಾಳಿಗೆ ಹೆಜ್ಜೆ ಹಾಕಿದ್ದಾರೆ. ತಮ್ಮ ಬಾಲ್ಯದ ಗೆಳೆಯ ಕಾರ್ತಿಕ್ ಜೊತೆ ಹಣೆಮಣೆ ಏರಿದ್ದಾರೆ. ಇಂದು ಹೈದ್ರಾಬಾದ್ ನಲ್ಲಿ ಈ ಜೋಡಿ ಹಸೆಮಣೆ ಏರಿದ್ದು, ಆತ್ಮೀಯರು, ಕುಟುಂಬಸ್ಥರು ಶುಭಾಶಯ ಕೋರಿದ್ದಾರೆ. ಜೋರು ಮೆಹಂದಿ ಶಾಸ್ತ್ರ ಅಭಿನಯ ಕಾರ್ತಿಕ್ ಮದುವೆ ಶಾಸ್ತ್ರಗಳು ಜೋರಾಗಿ ನಡೆದಿವೆ. ನೇರಳೆ ಬಣ್ಣದ ಲೆಹಂಗ ಧರಿಸಿ ಅಭಿನಯ ಕಂಗೊಳಿಸಿದ್ದು, ಕಾರ್ತಿಕ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮೆಹಂದಿ ಶಾಸ್ತ್ರದಲ್ಲಿ ಈ ಜೋಡಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದೆ. ಅಭಿನಯ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 58ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಸರೇ ಸೂಚಿಸುವಂತೆ ಅಭಿನಯ ಅದ್ಭುತ ನಟಿ. ಮಾತು ಬಾರದೆ ಇದ್ರು, ಕಿವಿ ಕೇಳದೇ ಇದ್ರು ಯಾವುದೇ ಪಾತ್ರ ಕೊಟ್ಟರು ಸೊಗಸಾಗಿ ಪಾತ್ರಕ್ಕೆ ಜೀವ ತುಂಬುತ್ತಾರೆ. ಕನ್ನಡದ ಸೂಪರ್ ಹಿಟ್ ಚಿತ್ರ ಹುಡುಗರು ಸಿನಿಮಾದಲ್ಲಿ ಪುನೀತ್ ತಂಗಿಯಾಗಿ ನಟಿಸಿದ್ದರು. ಅಭಿನಯ ನಟನೆಯ ಮಲಯಾಳಂ ಸಿನಿಮಾ ʻಪಾನಿʼ ಕಳೆದ…
ಕೆಲವು ಜನರು ಎರಡು ಅಥವಾ ಮೂರು ದಿನಗಳವರೆಗೆ ಜ್ವರದಿಂದ ಬಳಲುತ್ತಾರೆ, ಆದರೆ ಆಸ್ಪತ್ರೆಗೆ ಹೋಗುವುದಿಲ್ಲ. ಯಾಕೆಂದರೆ… ವೈದ್ಯರು ನನಗೆ ಇಂಜೆಕ್ಷನ್ ನೀಡುತ್ತಾರೆ ಎಂದು ನನಗೆ ಭಯವಾಗಿದೆ. ಅದು ಕಡಿಮೆಯಾಗುವುದಷ್ಟೇ.. ಈಗ ಅವರು ಎಷ್ಟು ಹಠಮಾರಿ ಎಂದರೆ, ಅವರಿಗೆ ಇಂಜೆಕ್ಷನ್ ಯಾರು ಕೊಡುತ್ತಾರೆ ಎಂದು ಕೇಳುತ್ತಾರೆ. ಮಕ್ಕಳ ವಿಷಯದಲ್ಲೂ ಇದು ಭಿನ್ನವಾಗಿಲ್ಲ. ಅವರು ಇಂಜೆಕ್ಷನ್ ಪಡೆದಾಗ ಅನಿಯಂತ್ರಿತವಾಗಿ ಅಳುತ್ತಾರೆ. ವರ್ಷಗಳ ನಂತರವೂ ಕೆಲವರು ಚುಚ್ಚುಮದ್ದಿನ ಬಗ್ಗೆ ಭಯಪಡುತ್ತಾರೆ. ಅದನ್ನು ಟ್ರಿಪನೋಫೋಬಿಯಾ ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತ ಶೇ. 50 ರಷ್ಟು ಮಕ್ಕಳು ಮತ್ತು ಶೇ. 30 ರಷ್ಟು ವಯಸ್ಕರು ಟ್ರಿಪನೋಫೋಬಿಯಾಕ್ಕೆ ಬಲಿಯಾಗಿದ್ದಾರೆ. https://ainkannada.com/you-should-never-keep-a-broom-in-this-direction-at-home-for-any-reason/ ಆದಾಗ್ಯೂ, ಇಂಜೆಕ್ಷನ್ಗಳಿಗೆ ಹೆದರುವವರಿಗೆ ಇದು ಒಳ್ಳೆಯ ಸುದ್ದಿ. ಹೊಸ ಸೂಜಿ-ಮುಕ್ತ ಇಂಜೆಕ್ಷನ್ ಈಗ ಲಭ್ಯವಿರುತ್ತದೆ. ಯಾವುದೇ ನೋವು ಇಲ್ಲ, ಮತ್ತು ಇಂಜೆಕ್ಷನ್ಗಳ ಭಯವೂ ಇಲ್ಲ. ಇಂಟೆಗ್ರಿ ಮೆಡಿಕಲ್ ಇತ್ತೀಚೆಗೆ ಸೂಜಿ-ಮುಕ್ತ ಇಂಜೆಕ್ಷನ್ಗಳನ್ನು ಪರಿಚಯಿಸುತ್ತಿರುವುದಾಗಿ ಘೋಷಿಸಿತು. ಬೆಂಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ, ಕಂಪನಿಯ ಪ್ರತಿನಿಧಿಗಳಾದ ಸ್ಕಾಟ್ ಮೆಕ್ಫರ್ಲ್ಯಾಂಡ್, ಅಂಕುರ್ ನಾಯಕ್, ಸರ್ವೇಶ್ ಮುಥಾ…
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್ 18ರ 32ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 188 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 188 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿದ್ದರು. ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ 11 ರನ್ ಗಳಿಸಿದರೆ, ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 4 ಎಸೆತಗಳಲ್ಲಿ 13 ರನ್ ಬಾರಿಸಿ ಗೆಲುವು ದಾಖಲಿಸಿತು. ದೆಹಲಿ ವಿರುದ್ಧದ ಈ ನಿರಾಶಾದಾಯಕ ಸೋಲಿನ ನಂತರ, ನಾಯಕ ಸಂಜು ಸ್ಯಾಮ್ಸನ್ ಇದು ಖಂಡಿತವಾಗಿಯೂ ಗುರಿ ಮುಟ್ಟಬಹುದಾಗ ಟಾರ್ಗೆಟ್ ಎಂದು ಹೇಳಿ ಬ್ಯಾಟಿಂಗ್ ವಿಭಾಗದ ಬಗ್ಗೆ ಕೆಂಡಕಾರಿದ್ದಾರೆ. ‘‘ನಮ್ಮ ಬ್ಯಾಟಿಂಗ್ ಲೈನ್ಅಪ್ಗೆ ಈ ಸ್ಕೋರ್ ಅನ್ನು ಬೆನ್ನಟ್ಟುವುದು ಸುಲಭ ಎಂದು ನಾನು ಭಾವಿಸಿದೆ. ಪವರ್ಪ್ಲೇನಲ್ಲಿ ನಮಗೆ ಉತ್ತಮ ಆರಂಭ ಸಿಕ್ಕಿತು. ಇದು ಖಂಡಿತವಾಗಿಯೂ ಗುರಿ ಮುಟ್ಟಬಹುದಾಗ ಟಾರ್ಗೆಟ್ ಎಂದು ನಾನು ಭಾವಿಸಿದೆ. ಆದರೆ, ಮಿಚೆಲ್ ಸ್ಟಾರ್ಕ್ ದೆಹಲಿ ಪರ…
ಅಮೆರಿಕದ ಫ್ಲೋರಿಡಾದ ಮಹಿಳೆಯೊಬ್ಬರು ಫೇಸ್ಬುಕ್ ಮಾರ್ಕೆಟ್ಪ್ಲೇಸ್ ಮೂಲಕ ಆನ್ಲೈನ್ನಲ್ಲಿ ತಲೆಬುರುಡೆ ಮತ್ತು ಪಕ್ಕೆಲುಬುಗಳು ಸೇರಿದಂತೆ ಮಾನವ ಮೂಳೆಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿಷಯ ತಿಳಿದ ಪೊಲೀಸರು ಆಕೆಯನ್ನು ಬಂಧಿಸಿದರು. 52 ವರ್ಷದ ಕಿಂಬರ್ಲಿ ಶಾಪರ್, ಮಾನವ ತಲೆಬುರುಡೆ ಮತ್ತು ಮೂಳೆಗಳನ್ನು ಅಕ್ರಮವಾಗಿ ಖರೀದಿಸಿ ಮಾರಾಟ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಫ್ಲೋರಿಡಾದ ಆರೆಂಜ್ ಸಿಟಿಯಲ್ಲಿರುವ ತನ್ನ ‘ವಿಕೆಡ್ ವಂಡರ್ಲ್ಯಾಂಡ್’ ವ್ಯವಹಾರದಿಂದ ಕಿಂಬರ್ಲಿ ಮೂಳೆಗಳನ್ನು ಖರೀದಿಸಿ ಇತರರಿಗೆ ಮಾರಾಟ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ವಶಕ್ಕೆ ತೆಗೆದುಕೊಂಡು ಏಪ್ರಿಲ್ 11 ರಂದು ವೊಲುಸಿಯಾ ಕೌಂಟಿ ಜೈಲಿನಿಂದ $7,500 (ಸುಮಾರು ರೂ. 6.45 ಲಕ್ಷ) ಬಾಂಡ್ ಮೇಲೆ ಬಿಡುಗಡೆ ಮಾಡಲಾಯಿತು. ಇದು ವರ್ಷಗಳಿಂದಲೂ ಹಾಗೆಯೇ ಇದೆ.. ಫೇಸ್ಬುಕ್ ಪುಟದ ಮೂಲಕ ಮಾನವ ಮೂಳೆಗಳ ಮಾರಾಟದ ಬಗ್ಗೆ ಆರೆಂಜ್ ಸಿಟಿ ಪೊಲೀಸರಿಗೆ ಮಾಹಿತಿ ಬಂದ ನಂತರ, ಡಿಸೆಂಬರ್ 21, 2023 ರಂದು ತನಿಖೆ ಪ್ರಾರಂಭವಾಯಿತು. ಮಾಹಿತಿದಾರರು ವ್ಯವಹಾರದ ಪ್ರೊಫೈಲ್ನಲ್ಲಿ ಮಾರಾಟಕ್ಕಿರುವ ಮೂಳೆಗಳ ಚಿತ್ರಗಳನ್ನು ಅಧಿಕಾರಿಗಳಿಗೆ ಒದಗಿಸಿದ್ದಾರೆ. ಆರೆಂಜ್…
ಹೈ5 ಸ್ಟುಡಿಯೋಸ್ ನಿರ್ಮಾಣದ ಚೊಚ್ಚಲ ಸಿನಿಮಾ ಎಲ್ಟು ಮುತ್ತಾ ಟೈಟಲ್ ನಿಂದಲೇ ನಿರೀಕ್ಷೆ ಹೆಚ್ಚಿಸಿದೆ. ಪೋಸ್ಟರ್ ಮೂಲಕ ಗಮನಸೆಳೆದಿದ್ದ ಚಿತ್ರತಂಡ ಇತ್ತೀಚೆಗಷ್ಟೇ ಮಾಧ್ಯಮದರ ಮುಂದೆ ಬಂದಿದ್ದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಎಲ್ಟಾ ಮುತ್ತಾ ಚಿತ್ರತಂಡದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು, ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ಚಿತ್ರದ ಬಗ್ಗೆ ನಿರ್ದೇಶಕರು, ನಿರ್ಮಾಪಕ ಹಾಗೂ ಇಡೀ ತಂಡ ಮಾಹಿತಿ ಹಂಚಿಕೊಂಡಿದೆ. ನಿರ್ಮಾಪಕ ಸತ್ಯ ಶ್ರೀನಿವಾಸನ್ ಮಾತನಾಡಿ, ಹೈ5 ಸ್ಟುಡಿಯೋವನ್ನು ಎರಡು ಉದ್ದೇಶದಿಂದ ಶುರು ಮಾಡಿದ್ದೇವು. ಒಳ್ಳೆ ಸಿನಿಮಾ ಮಾಡಬೇಕು. ಹಾಗೂ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಬೇಕು ಎಂದು ಸ್ಟುಡಿಯೋಸ್ ಪ್ರಾರಂಭಿಸಿದ್ದೇವು. ಮೊದಲು ಎಲ್ಟು ಮುತ್ತಾ ಎಂಬ ಚಿತ್ರ ಮಾಡಿದ್ದೇವೆ. ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ರಿಲೀಸ್ ಗೆ ರೆಡಿ ಇದ್ದೇವೆ. 50 ದಿನ ಕೊಡಗು ಹಾಗೂ 2 ದಿನ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ನಿರ್ದೇಶಕರಾದ ರಾ ಸೂರ್ಯ ಮಾತನಾಡಿ, ಎಲ್ಟು ಮುತ್ತಾ ಎರಡು ಪಾತ್ರಗಳ ಸುತ್ತ ನಡೆಯುವ ಕಥೆ ಇದಾಗಿದ್ದು, ಟೆಕ್ನಿಷನ್…
ಭಾರತೀಯ ರೈಲ್ವೆ ಇಲಾಖೆ ವಿನೂತನ ಪ್ರಯೋಗಳನ್ನು ಮಾಡುತ್ತಲೇ ಇರುತ್ತದೆ. ಅದರ ಮುಂದುವರೆದ ಭಾಗವಾಗಿ ಚಲಿಸು ಟ್ರೈನ್ ಎಟಿಎಂ ಇರಿಸಿ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಯಶಸ್ವಿ ಕಂಡಿದೆ. ಇನ್ಮುಂದೆ ಪ್ರಯಾಣಿಕರು ಚಲಿಸುವ ರೈಲಿನಲ್ಲಿಯೇ ಹಣ ಡ್ರಾ ಮಾಡಿಕೊಳ್ಳಬಹುದು. ರೈಲ್ವೆಯ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ನಡುವಿನ ಸಹಭಾಗಿತ್ವದಲ್ಲಿ ಮುಂಬೈಯಿಂದ ನಾಸಿಕ್ನ ಮನ್ಮಾಡ್ವರೆಗೆ ಸಂಚಾರ ಮಾಡುವ ಪಂಚವಟಿ ಎಕ್ಸ್ಪ್ರೆಸ್ ರೈಲ್ವೆಯ ಎಸಿ ಕೋಚ್ನ ಒಳಗೆ ಎಟಿಎಂ ಪರೀಕ್ಷೆ ನಡೆಸಲಾಗಿತ್ತು. ಈ ಪ್ರಾಯೋಗಿಕ ಪರೀಕ್ಷೆ ಸಕ್ಸಸ್ ಕಂಡಿದ್ದು, ಇನ್ನು ಮೇಲೆ ಟ್ರ್ಯಾಕ್ ಮೇಲೆ ಚಲಿಸುವ ರೈಲಿನ ಎಟಿಎಂಗಳಿಂದ ಹಣ ಡ್ರಾ ಮಾಡಬಹುದು. ಪಂಚವಟಿ ಎಕ್ಸ್ಪ್ರೆಸ್ನ ಎಸಿ ಕೋಚ್ನಲ್ಲಿ ಎಟಿಎಂ ಅಳವಡಿಸಲಾಗಿದ್ದು, ರೈಲಿನ ಎಲ್ಲಾ 22 ಬೋಗಿಗಳಲ್ಲಿರುವ ಪ್ರಯಾಣಿಕರು ಎಸಿ ಕೋಚ್ಗೆ ಬಂದು ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಬಹುದು. ಇದು ಭಾರತೀಯ ರೈಲ್ವೆ ಇಲಾಖೆ ಉತ್ತಮ ಕಾರ್ಯವಾಗಿದ್ದು, ಪ್ರಯಾಣ ಮಾಡುವಾಗ ಹಣದ ಅವಶ್ಯಕತೆ ಇದ್ದವರು ಚಲಿಸುವ ಟ್ರೈನ್ನಲ್ಲಿ ಹಣ ಡ್ರಾ ಮಾಡಿಕೊಳ್ಳಬಹುದು.
ಬೆಳಗಾವಿ: ಈ ಸರ್ಕಾರ ಯಾವಾಗ ತೊಲಗುತ್ತೊ ಎಂಬ ಆಶಾಭಾವನೆಯಲ್ಲಿ ಜನರಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದೇ ಇಲ್ಲ. ಗೃಹಸಚಿವರೂ ಇದ್ದು ಇಲ್ಲದಂತಾಗಿದೆ. ಏನೇ ಪ್ರಕರಣ ಆದರೂ ಅಂಕಿ ಅಂಶ ಕೊಟ್ಟು ಸುಮ್ಮನಾಗುತ್ತಿದ್ದಾರೆ. ಈ ಸರ್ಕಾರದ ಮೇಲೆ ರಾಜ್ಯದ ಜನರಿಗೆ ಭರವಸೆ ಇಲ್ಲದಾಗಿದೆ. ಈ ಸರ್ಕಾರ ಯಾವಾಗ ತೊಲಗುತ್ತೊ ಎಂಬ ಆಶಾಭಾವನೆಯಲ್ಲಿ ಜನರಿದ್ದಾರೆ ಎಂದು ಹೇಳಿದರು. https://ainkannada.com/according-to-chanakya-parents-should-not-make-these-mistakes-with-their-children/ ಬಿಜೆಪಿ ಸರ್ಕಾರವೇ ಉತ್ತಮ ಎಂದು ಹಲವರು ಹೇಳುತ್ತಿದ್ದಾರೆ. ಕಾಂಗ್ರೆಸ್ಗೆ 10 ರೂ. ಕೊಡುವ ಯೋಗ್ಯತೆ ಇಲ್ಲ. ಗುತ್ತಿಗೆದಾರರ, ಅಧಿಕಾರಿಗಳ ಆತ್ಮಹತ್ಯೆ ಆಗುತ್ತಿವೆ. ಆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಮೋದಿ ಅವರು ಸಿಲಿಂಡರ್ ಬೆಲೆ ಎರಡು ಬಾರಿ ಇಳಿಸಿದ್ದಾರೆ. ಈಗ ಜಾಸ್ತಿ ಮಾಡಿದ್ದಾರೆ. ಕಾಂಗ್ರೆಸ್ ಯಾವುದಾದರೂ ಇಳಿಸಿ ಜಾಸ್ತಿ ಮಾಡಿದ್ದಾರೆ. ಆಗ ನಾನು ಒಪ್ಪುತ್ತಿದ್ದೆ. ಈಗ ಎಲ್ಲದರ ಮೇಲೂ ತೆರಿಗೆ ಹೆಚ್ಚಾಗಿದೆ” ಎಂದು ಆರೋಪಿಸಿದರು.
ಬಹುಭಾಷಾ ನಟ, ನಿರ್ದೇಶಕ ಪ್ರಭುದೇವ ತಾಯಿ ಆಸೆ ಈಡೇರಿಸಿದ್ದಾರೆ. ತಮ್ಮ ಹುಟ್ಟೂರಿನ ಮಲೈ ಮಹದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದಾರೆ. ಅದರ ಖರ್ಚು ಪ್ರಭುದೇವ ಭರಿಸಿದ್ದಾರೆ ಎನ್ನಲಾಗಿದೆ. ಪೂಜೆಯಲ್ಲಿ ಪ್ರಭುದೇವ ಹಾಗೂ ಅವರ ಪತ್ನಿಯೂ ಸಹ ಭಾಗಿ ಆಗಿದ್ದಾರೆ. ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದದಲ್ಲಿ ದೇವಸ್ಥಾನಲ್ಲಿ ಹೋಮ ಹವನ ಪೂಜೆ ಪುನಸ್ಕಾರದಲ್ಲಿ ಪ್ರಭುದೇವ ಕುಟುಂಬಸ್ಥರು ಭಾಗಿಯಾಗಿದೆ. ಪ್ರಭುದೇವ ಅವರ ತಾಯಿ ಮಹದೇವಮ್ಮ ಅವರು ಕೆಂಬಾಳು ಗ್ರಾಮದಲ್ಲಿ ಜಮೀನು ಖರೀದಿ ಮಾಡಿದ್ದರು. ಈ ಜಮೀನಿನ ಪಕ್ಕದಲ್ಲೇ ಇದ್ದ ಮಲೆ ಮಹದೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿತ್ತು. ಚೋಳರ ಕಾಲದ ದೇವಸ್ಥಾನ ಅತ್ಯಂತ ಪ್ರಖ್ಯಾತಿ ಪಡೆದಿತ್ತು. ಹೀಗಾಗಿ ಗ್ರಾಮಸ್ಥರು ಶಿಥಿಲಾವಸ್ಥೆಯಲ್ಲಿದ್ದ ಅದೇ ದೇವಾಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದರು. ಸದ್ಯ ತನ್ನ ತಾಯಿ ಆಸೆಯಂತೆ, ಗ್ರಾಮಸ್ಥರ ಬಯಕೆಯಂತೆ ನಟ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ್ದಾರೆ. https://www.youtube.com/watch?v=U7VF2f9jFz4