Author: Author AIN

ಬೆಂಗಳೂರು: ರಾಜ್ಯದ ಜನತೆ ಇದೀಗ ಮತ್ತೊಂದು ದರ ಏರಿಕೆಯ ಭಾರ ಹೊರಲು ಸಿದ್ಧವಾಗಬೇಕಿದೆ. ಬೆಲೆ ಏರಿಕೆ ಜಮಾನದಲ್ಲಿ ಇದೀಗ ಮತ್ತೊಂದು ಹೊಡೆತ ಬೀಳಲಿದೆ. ಹೌದು ಹಾಲು, ಕರೆಂಟು, ಮೆಟ್ರೋ, ಸರ್ಕಾರಿ ಬಸ್ ಟಿಕೆಟದ ದರ ಹೀಗೆ ಎಲ್ಲವೂ ಏರಿಕೆಯಾಗಿದ್ದು, ಈ ಬಗ್ಗೆ ಜನ ಬೀದಿಗಿಳಿದು ಹೋರಾಡುತ್ತಿರುವಾಗಲೇ, ಸದ್ದಿಲ್ಲದೆ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಏರಿಸಲು ನಿರ್ಧರಿಸಿದ್ದಾರೆ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಖಾಸಗಿ ಬಸ್‌ಗಳ ಟಿಕೆಟ್ ದರ ಶೇಕಡಾ 15 ರಿಂದ 20 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಡೀಸೆಲ್ ಬೆಲೆ ಏರಿಕೆಯನ್ನು ಕಾರಣವನ್ನಾಗಿ ನೀಡಿ ಖಾಸಗಿ ಬಸ್ ಮಾಲೀಕರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ದರ ಏರಿಕೆಯನ್ನು ಕೂಡ ಕಾರಣವಾಗಿ ನೀಡಿದ್ದಾರೆ. ಒಂದು ವೇಳೆ ದರ ಹೆಚ್ಚಳವಾದರೆ, ಈಗಾಗಲೇ ಹೆಚ್ಚುತ್ತಿರುವ ಪ್ರಯಾಣ ವೆಚ್ಚ ಮತ್ತಷ್ಟು ಹೊರೆಯಾಗಲಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ರಾಜ್ಯ ಸರಕಾರ ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳದ ಕ್ರಮ ಹಿಂಪಡೆಯದಿದ್ದರೆ ನಾವು ಟಿಕೆಟ್‌ ದರ ಹೆಚ್ಚಳ…

Read More

ಕನ್ನಡ ಚಿತ್ರರಂಗದ ಅಲಿಯಾ ಭಟ್ ಅಂತಾ ಕರೆಸಿಕೊಳ್ಳುವ ಚೈತ್ರಾ ಆಚಾರ್ ತಮ್ಮ ಅಭಿನಯದ ಜೊತೆಗೆ ಸೌಂದರ್ಯ ಮೂಲಕವೂ ಗಮನಸೆಳೆಯುತ್ತಾರೆ. ಅದ್ಭುತ ನಟಿಯಾಗಿರುವ ಚೈತ್ರಾ ಗಾಯಕಿಯಾಗಿಯೂ ಜನಪ್ರಿಯರು. ಕನ್ನಡದ ಜೊತೆಗೆ ಇತರ ಭಾಷೆಯಲ್ಲಿಯೂ ಅವರು ಬ್ಯುಸಿಯಾಗಿದ್ದಾರೆ. ಸದ್ಯ ಮಿನಿ ಸ್ಕರ್ಟ್ ಧರಿಸಿ ಚೈತ್ರಾ ಆಚಾರ್ ಬೋಲ್ಡ್ ಅಂಡ್ ಬಿಂದಾಸ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಬಿಳಿ ಸ್ಕರ್ಟ್ ಅದಕ್ಕೆ ಒಪ್ಪುವ ಟಾಪ್ ಧರಿಸಿ ಚೈತ್ರಾ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವಳು ಕಾಡ್ಗಿಚ್ಚು, ಬಳಿಕ ಬೆಳೆಯುವ ಹೂವು ಎಂಬ ನುಡಿಮುತ್ತಿನ ಜೊತೆಗೆ ತಮ್ಮ ಫೋಟೋ ಹಂಚಿಕೊಂಡಿದ್ದಾರೆ. ಚೈತ್ರಾ ಆಚಾರ್ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿವೆ. ರಾಣಿ, ಬ್ಯೂಟಿಫುಲ್‌ ಅಂತೆಲ್ಲಾ ಕಮೆಂಟ್ ಗಳು ಸಿಕ್ಕಿವೆ. ಸದ್ಯ ಚೈತ್ರಾ, ತಮಿಳುನಟ  ಶಶಿಕುಮಾರ್ ಜೊತೆ ಹೊಸ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಒಂದಷ್ಟು ಪ್ರಾಜೆಕ್ಟ್ ಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಮಹಿರಾ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಚೈತ್ರಾ, ತಲೆದಂಡ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.…

Read More

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ಮಲ್ಲೋಹಳ್ಳಿಯಲ್ಲಿ ನಡೆದ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ವೇಳೆ ಖದೀಮರು ಕೈಚಳಕ ತೋರಿದ್ದಾರೆ. ನೆಲಮಂಗಲದಿಂದ ಮಲ್ಲೋಹಳ್ಳಿ ಜಾತ್ರೆಗೆ ಕುಟುಂಬದವರೊಂದಿಗೆ ಬಂದಿದ್ದ ವೃದ್ಧೆ ರಂಗಮ್ಮ(71) ಎಂಬುವರ ಮಾಂಗಲ್ಯ ಸರ ದೋಚಿ ಕಳ್ಳರು ಎಸ್ಕೇಪ್‌ ಆಗಿದ್ದಾರೆ. ಏ. 13ರಂದು ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು. ಜಾತ್ರೆ ಸಮಯದಲ್ಲಿ ಮಜ್ಜಿಗೆ ಪಾನಕ ಕುಡಿಯುವ ವೇಳೆ ಮಾಂಗಲ್ಯಸರ ನೋಡಿಕೊಂಡ ವೃದ್ಧೆ, ಆನಂತರ ನೋಡಿದಾಗ ಕತ್ತಲ್ಲಿ ಇರಲಿಲ್ಲ. ಈ ವೇಳೆ 50 ಗ್ರಾಂ ತೂಕದ ಮಾಂಗಲ್ಯ ಸರ ಕಳವಾಗಿದೆ. ಕೂಲಿ ಮಾಡಿ ರಂಗಮ್ಮ ಮಾಂಗಲ್ಯ ಸರ ಮಾಡಿಸಿಕೊಂಡಿದ್ದರು. ದೊಡ್ಡಬೆಳವಂಗಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://ainkannada.com/chitradurga-historic-akka-tangi-visit-festival/

Read More

ದೊಡ್ಡಬಳ್ಳಾಪುರ: ಜಾತ್ರೆಗೆ ಹೋಗಿದ್ದ ವೇಳೆ ಲಕ್ಷಾಂತರ ಬೆಲೆ ಬಾಳುವ ಮಾಂಗಲ್ಯ ಸರ ಕಳ್ಳತನವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮಲ್ಲೋಹಳ್ಳಿಯಲ್ಲಿ ನಡೆದಿದೆ. ರಂಗಮ್ಮ(71) ಮಾಂಗಲ್ಯ ಸರ ಕಳೆದುಕೊಂಡ ಮಹಿಳೆಯಾಗಿದ್ದು, https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಏ. 13 ರಂದು ನಡೆದ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ 50 ಗ್ರಾಂ ತೂಕದ ಮಾಂಗಲ್ಯ ಸರ ಕಳ್ಳತನವಾಗಿದೆ. ನೆಲಮಂಗಲದಿಂದ ಮಲ್ಲೋಹಳ್ಳಿಗೆ ಬಸ್ ನಲ್ಲಿ ಬಂದಿದ್ದರು. ಜಾತ್ರೆಯ ಸಮಯದಲ್ಲಿ ಮಜ್ಜಿಗೆ ಪಾನಕ ಕುಡಿಯುವ ವೇಳೆ ವೃದ್ದೆ ನೋಡಿಕೊಂಡಾಗ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಕೂಲಿ ಮಾಡಿ ಮಾಂಗಲ್ಯ ಸರ ಮಾಡಿಸಿಕೊಂಡಿದ್ದ ವೃದ್ಧೆ ಇದೀಗ ಕಂಗಲಾಗಿದ್ದಾರೆ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಹೆಣ್ಣಿಗೆ ಸೀರೆಯೇ ಅಂದ ಚೆಂದ.. ಸೀರೆಯಲ್ಲಿ ಹೆಣ್ಣು ಬೆಣ್ಣೆ ಅಂತಾ ನಮ್ ಕ್ರೇಜಿ ಸ್ಟಾರ್ ರವಿಚಂದ್ರನ್ ವರ್ಣಿಸಿದ್ದಾರೆ. ಸೀರೆಯಲ್ಲಿ ನಾರಿ ಅಂತಾ ನಾಗಿಣಿ ದೀಪಿಕಾ ದಾಸ್ ಹೊಸ‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ದೀಪಿಕಾ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ದೇವತೆ, ಸೂಪರ್ ಅಂತೆಲ್ಲಾ ಮೆಚ್ಚುಗೆ ಸೂಚಿಸುತ್ತಿದ್ದಾರೆ. ದೀಪಿಕಾ ಟ್ರೆಡಿಷನಲ್ ಹಾಗೂ ಮಾರ್ಡನ್ ಎರಡು ಲುಕ್ ಗಳಲ್ಲಿಯೂ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಹಳದಿ ಹಾಗೂ ಕೆಂಪು ಮಿಶ್ರಿತ ಬಣ್ಣದ ಸೀರೆಯಲ್ಲಿ ದೀಪಿಕಾ ಕಂಗೊಳಿಸಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಸೀರಿಯಲ್ ಮೂಲಕ ದೀಪಿಕಾ ದಾಸ್ ಫೇಮಸ್ ಆಗಿದ್ದಾರೆ. ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ದೇಶ-ವಿದೇಶಗಳನ್ನು ಸುತ್ತುತ್ತುವುದು ಎಂದರೆ ಇಷ್ಟ. ದೀಪಿಕಾ ದಾಸ್ ರಾಕಿಂಗ್ ಸ್ಟಾರ್ ಯಶ್ ತಂಗಿ. ಯಶ್ ಹಾಗೂ ಬಿಗ್‌ಬಾಸ್ ಖ್ಯಾತಿಯ ದೀಪಿಕಾ ದಾಸ್ ದೊಡ್ಡಮ್ಮ ಚಿಕ್ಕಮ್ಮನ ಮಕ್ಕಳು. ಆದರೆ ಯಾವತ್ತೂ ಯಶ್ ನಮ್ಮ ಅಣ್ಣ ಅಂತ ದೀಪಿಕಾ ದಾಸ್ ಹೇಳುವುದಿಲ್ಲ.

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಕುಂಬಾರ ಓಣಿಯ ಶ್ರೀಮತಿ ಶೋಭಾ ಸದಾಶಿವ ಕುಂಬಾರ ಒಡೆತನಕ್ಕೆ ಸೇರಿದ ಶಡ್ಗಳ ಮತ್ತು ಶೇಡ್ಡಿನಲ್ಲಿ ಕುಂಬಾರರು ಮಾಡಿದ ಮಣ್ಣಿನ ಮಡಿಕೆಗಳು ಹಾಗೂ ವಿವಿಧ ವಸ್ತುಗಳು ಸುಮಾರು ಸುಟ್ಟು ಕರಕಲಾಗಿದೆ. ನಿನೇ ರಾತ್ರಿ 9:00 ಸುಮಾರಿಗೆ ಆಕಸ್ಮಿಕ ಬೆಂಕಿ ತಗಲಿ ಒಂದು ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಕರಕಲಾಗಿವೆ.ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಒಟ್ಟಾರಿಯಾಗಿ ಮಡಿಕೆಗಳನ್ನ ನಂಬಿ ಜೀವನ ಸಾಗಿಸುತ್ತಿದ್ದ ಶೋಭಾ ಸದಾಶಿವ ಕುಂಬಾರ ಕುಟುಂಬ ಈಗ ಬೀದಿಗೆ ಬಿದ್ದಂತಾಗಿದೆ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಕೂಡಲೆ ಸರ್ಕಾರ ನೊಂದ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಯಾವುದೇ ಸರ್ಕಾರ ಇಲ್ಲಿಯವರೆಗೂ ಕುಂಬಾರರಿಗೆ ಸರ್ಕಾರಿ ಸೌಲತ್ತನ ನೀಡಿದೆ ಇರುವುದು ಒಂದು ಕಡೆ ಬೇಸರ ಆದರೆ ಮತ್ತೊಂದು ಕಡೆ ಮಣ್ಣಿನ ಮಡಿಕೆ ಮತ್ತು ವಲಿಗಳನ್ನು ನಂಬಿ ಜೀವನ ಸಾಗಿಸುವ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Read More

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್‌ ಮೊದಲ ವಾರದಿಂದಲೂ ಭಾರೀ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಇಂದು ಸಹ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಮಳೆಯಾಗಲಿದೆ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಗದಗ, ಧಾರವಾಡ, ಬೀದರ್​, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡದಲ್ಲಿ ಒಣಹವೆ ಇರಲಿದೆ. ಬೆಂಗಳೂರು ನಗರ, ಹಿರೆಕೆರೂರು, ಕುಶಾಲನಗರ, ಹಾರಂಗಿ, ಭಾಗಮಂಡಲ, ನಾಪೋಕ್ಲು, ಎಂಎಂ ಹಿಲ್ಸ್​, ಶೃಂಗೇರಿ, ಬಂಡೀಪುರ, ಕೆಆರ್ ನಗರ, ಹೆಸರಘಟ್ಟ, ಕಳಸ, ಬೇಗೂರು, ಆಗುಂಬೆಯಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಮಳೆಯಾಗಿದೆ, ಇಂದು ಕೂಡ ಮೋಡಕವಿದ ವಾತಾವರಣ ಮುಂದುವರೆಯಲಿದೆ. ಎಚ್​ಎಎಲ್​ನಲ್ಲಿ…

Read More

ಚಿತ್ರದುರ್ಗ : ಪಾಳೇಗಾರರ ಕಾಲದಿಂದಲೂ ನಡೆಯುತ್ತಿರುವ ಐತಿಹಾಸಿಕ ಅಕ್ಕ ತಂಗಿ,ಭೇಟಿ ಉತ್ಸವ ಅದ್ದೂರಿ ಸಡಗರ ಸಂಭ್ರಮದಿಂದ ನಡೆಯಿತು. ಚಿತ್ರದುರ್ಗದ ದೊಡ್ಡ ಪೇಟೆಯಲ್ಲಿ ವರ್ಷಕ್ಕೊಮ್ಮೆ ನಡೆವ ಅಕ್ಕ‌ತಂಗಿ ಭೇಟಿ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಜಮಾಯಿಸಿದ್ದರು. ತಂಗಿ ತಿಪ್ಪಿನಘಟ್ಟಮ್ಮ ರಂಗಯ್ಯನ ಬಾಗಿಲಿಂದ ಬಂದರೆ, ಅಕ್ಕ ಬರಗೇರಮ್ಮ, ಇನ್ನೊಂದೆಡೆಯಿಂದ ಕುಣಿಯುತ್ತಾ ಓಡಿ ಬರುತ್ತಾರೆ. ಇಬ್ಬರು ಸಡಗರದಿಂದ ಒಬ್ಬರನ್ನೊಬ್ಬರು ಭೇಟಿಯಾಗಿ ತಬ್ಬಿಕೊಳ್ಳುತ್ತಾರೆ. ಇದನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಅಕ್ಕ-ತಂಗಿ ಭೇಟಿ ಉತ್ಸವದ ವಿಡಿಯೋ…

Read More

ದಾವಣಗೆರೆ: ನಮ್ಮನ್ನು ಎದುರು ಹಾಕಿಕೊಂಡು ರಾಜ್ಯ ಭಾರ ಮಾಡಲು ಸಾಧ್ಯವೇ ಇಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮದೇ ಸರ್ಕರದ ವಿರುದ್ಧ ಕಿಡಿಕಾರಿದ್ದಾರೆ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ನಗರದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತರನ್ನು ಹಾಗು ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡಲು ಆಗುತ್ತಾ? ಲಿಂಗಾಯತರು ಹಾಗು ಒಕ್ಕಲಿಗರು ಇಬ್ಬರು ಸೇರಿ ಹೋರಾಟ ಮಾಡ್ತೇವೆ. ಇಬ್ಬರು ಸೇರಲಿದ್ದೇವೆ‌. ನಮ್ಮನ್ನು ಎದುರು ಹಾಕಿಕೊಂಡು ರಾಜ್ಯ ಭಾರ ಮಾಡಲು ಸಾಧ್ಯವೇ ಇಲ್ಲ. ಇದರ ಬಗ್ಗೆ ಸಭೆ ನಡೆದಿದ್ದು, ಮುಂದೇನು ಸಭೆ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 10 ವರ್ಷಗಳ ಹಿಂದೆ ಈ ಜನಗಣತಿ ನಡೆದಿದ್ದು, ಈ ಜನಗಣತಿ ವೈಜ್ಞಾನಿಕವಾಗಿ ಇಲ್ಲ, ಸರಿಯಾಗಿಲ್ಲ ಎಂಬುದು ರಾಜ್ಯದ ವಿವಿಧ ವರ್ಗದ ಜನ್ರ‌ ಅಭಿಪ್ರಾಯ ಆಗಿದೆ. ಸರ್ಕಾರ ಇದೇ 17 ರಂದು ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದಿದೆ. ಅವರು ಗಂಭೀರವಾಗಿ ಚರ್ಚೆ ಮಾಡುತ್ತಾರೆ ಎಂದು ನಾವು ನಂಬಿದ್ದೇವೆ. ಮತ್ತೆ ಹೊಸದಾಗಿ…

Read More

ಬೆಂಗಳೂರು: ವಿನಯ್ ಗೌಡ ಹಾಗೂ ರಜತ್ ಅವರುಗಳು ಮಚ್ಚು ಹಿಡಿದು ರೀಲ್ಸ್ ಮಾಡಿ ಪೊಲೀಸರ ಅತಿಥಿಯಾಗಿದ್ದರು. ಇದೀಗ ಬಸವೇಶ್ವರ ನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ರಜತ್ ಗೆ ಸೂಚನೆ ನೀಡಿದ್ದಾರೆ. ರಜತ್ ಬಳಸಿದ ಒರಿಜಿನಲ್ ಮಚ್ಚು ಪತ್ತೆಯಾಗದ ಹಿನ್ನೆಲೆ ನೋಟಿಸ್‌ ನೀಡಲಾಗಿದೆ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಲಾಂಗ್ ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ನಂತರ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಕೋರ್ಟ್ ವಶಕ್ಕೆ ನೀಡಿದ್ದರು. ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ವಿನಯ್ ಗೌಡ ಹಾಗೂ ರಜತ್ ರಿಲೀಸ್ ಆಗಿ ಹೊರ ಬಂದಿದ್ದಾರೆ. ಇದೀಗ ಬಸವೇಶ್ವರ ನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಪೊಲೀಸ್ರ ನೋಟೀಸ್ ಹಿನ್ನೆಲೆ ರಜತ್ ಹಾಜರಾಗೋ ಸಾಧ್ಯತೆಯಿದೆ.

Read More