Author: Author AIN

ಬೆಂಗಳೂರು: ಸಮೀಕ್ಷೆಯಲ್ಲಿ ಒಕ್ಕಲಿಗ, ಲಿಂಗಾಯತ, ಮುಸ್ಲಿಂ, SC-ST ಅಂತ ಪ್ರಶ್ನೆ ಬರಲ್ಲ ಎಂದು ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಇಂದು ಜಾತಿಗಣತಿ ವರದಿ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಭೆ ಮಾಡಲು ಕರೆದಿದ್ದಾರೆ. ನಮ್ಮ ಅಭಿಪ್ರಾಯಗಳನ್ನ ಸಭೆಯಲ್ಲಿ ಹೇಳ್ತೀವಿ. ನಮ್ಮ ಸಮುದಾಯದ ತೀರ್ಮಾನ ಏನು ಮಾಡಬೇಕು ಅಂತ ನಿರ್ಧಾರ ಮಾಡಲು ಸಭೆ ಕರೆದಿದ್ದಾರೆ‌. ಸಮೀಕ್ಷೆಯಲ್ಲಿ ಒಕ್ಕಲಿಗ, ಲಿಂಗಾಯತ, ಮುಸ್ಲಿಂ, SC-ST ಅಂತ ಪ್ರಶ್ನೆ ಬರಲ್ಲ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ರಾಜ್ಯದಲ್ಲಿ ವಾಸ ಮಾಡೋ ಜನಸಂಖ್ಯೆ ಎಷ್ಟು ಇದೆ ಅಂತ ತೀರ್ಮಾನ ಮಾಡಬೇಕು. ಸಮೀಕ್ಷೆ ಬಗ್ಗೆ ಸರ್ಕಾರ ಇನ್ನು ಸ್ಪಷ್ಟ ನಿರ್ಧಾರ ಮಾಡಿಲ್ಲ. ಪ್ರತಿ ಮನೆಗೂ ಹೋಗಿ ಸಮೀಕ್ಷೆ ಮಾಡಿ ವರದಿ ಕೊಡಲಿ ಎನ್ನೋದು ನಮ್ಮ ಅಭಿಪ್ರಾಯ. ಪ್ರತಿ ಮನೆಗೆ ಹೋಗಿ ಸರ್ಕಾರ ಸರ್ವೆ ಮಾಡಬೇಕು. ಸಿಎಂ ಹಾಗೂ ಡಿಸಿಎಂಗೆ ಒತ್ತಾಯ ಮಾಡ್ತೀವಿ ಎಂದಿದ್ದಾರೆ.

Read More

ಬೆಮಗಳೂರು: ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಪಾರ್ಕ್‌ ಬಳಿ ನೈತಿಕ ಪೊಲೀಸ್‌ ಗಿರಿ ನಡೆಸಿದ್ದ ಐವರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದೀಗ ಅದನ್ನೇ ಹೋಲುವ ಮತ್ತೊಂದು ಪ್ರಕರಣ ವರದಿಯಾಗಿದೆ. ಹೌದು, ಪಾರ್ಕೊಂದರಲ್ಲಿ ಮುಸ್ಲಿಂ ಯುವತಿ, ಹಿಂದೂ ಯುವಕ ಕುಳಿತಿದ್ದಾಗ ಅವರ ಬಳಿಗೆ ಬಂದ ಯುವಕರ ತಂಡವೊಂದು, ‘ಬುರ್ಖಾ ತೆಗೆ, ನಿನ್ನ ಹೆಸರೇನು ಹೇಳು’ಎನ್ನುತ್ತ ವಿಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದೆ. ದಯವಿಟ್ಟು ಗಲಾಟೆ ಮಾಡಬೇಡಿ ಎಂದು ಯುವತಿ ಬೇಡಿಕೊಂಡಿದ್ದರೂ ಬಿಡದೆ, ‘ಕಮಿಟಿಯವರು ಬರ್ತಾರೆ ಇರುʼ ಎಂದು ಹೇಳಿ ವಿಡಿಯೋ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸದ್ಯ ನೈತಿಕ ಪೊಲೀಸ್‌ ಗಿರಿ ವಿಡಿಯೋವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ದೊರೆಯಬೇಕಿದೆ. ಸದ್ಯ, ಬೆಂಗಳೂರು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.‌

Read More

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಐದು ವರ್ಷದ ಮಗುವನ್ನು ಬಿಹಾರಿ ಕಾಮುಕನೊಬ್ಬ ಹೊತ್ತೊಯ್ದು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದನು. ಇದು ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನೂ ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ. ಇನ್ನೇರಡು ದಿನಗಳಲ್ಲಿ ಸಿಐಡಿ ತನಿಖೆ ಆರಂಭಿಸುವ ಸಾಧ್ಯತೆ ಇದೆ. ಇನ್ನು, ಪ್ರಕರಣದ ತನಿಖೆಗಾಗಿ ತಜ್ಞರ ತಂಡ ರಚಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್​ ಪಿಐಎಲ್ ಸಲ್ಲಿಸಿದೆ. ಎನ್ಕೌಂಟರ್​ನಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ದೂರವಾಣಿ ಕರೆ ವಿವರ (ಸಿಡಿಆರ್) ಪರಿಶೀಲಿಸಬೇಕು. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ವೈರ್​ಲೆಸ್ ಲಾಗ್ ಬುಕ್ ಪರಿಶೀಲನೆಗೆ ನಿರ್ದೇಶಿಸಲು ಮನವಿ ಮಾಡಿದೆ. ಮೃತನ ದೇಹದ ಅಂತ್ಯಕ್ರಿಯೆ ಮಾಡದಂತೆ ತಡೆಗೆ ಮತ್ತು ಸಾಕ್ಷ್ಯನಾಶ ಆಗದಂತೆ ಕ್ರಮಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿಕೊಂಡಿದೆ. ಬಿಹಾರದ ಪಟ್ನಾ ನಿವಾಸಿಯಾದ ರಿತೇಶ್ ಕುಮಾರ್ (35) ಈ ಹತ್ಯೆಯ ಆರೋಪಿಯಾಗಿದ್ದು, ಈತ ಎರಡ್ಮೂರು ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದನು. ತಾರಿಹಾಳ ಸೇತುವೆ ಬಳಿಯಿರೋ ಮನೆಯಲ್ಲಿ ವಾಸವಾಗಿದ್ದ…

Read More

ನಾಗಿಣಿ ಸೀರಿಯಲ್‌ ಮೂಲಕ ಮನೆ ಮಾತಾದವರು ನಟಿ ನಮ್ರತಾ ಗೌಡ. ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿಯೂ ಆಗಿದ್ದ ಅವರು ಜನ್ಮದಿನದ ಖುಷಿಯಲ್ಲಿದ್ದಾರೆ.‌ ನಮ್ರತಾ ಹುಟ್ಟುಹಬ್ಬಕ್ಕೆ ರಕ್ಷಕ್‌ ಬುಲೆಟ್‌ ಸರ್‌ ಪ್ರೈಸ್‌ ಕೊಟ್ಟಿದ್ದಾರೆ. ನಮ್ರತಾಗೆ ಬಿಗ್‌ ಬಾಸ್‌ ಮೂಲಕ ಪರಿಚಯವಾದವರು ರಕ್ಷಕ್‌ . ರಕ್ಷಕ್‌ ಅವರನ್ನು ನಮ್ರತಾ ತಮ್ಮ ಎಂದು ಪ್ರೀತಿಯಿಂದ ಕರೆಯುತ್ತಾರೆ. ಹೀಗಾಗಿ ಅಕ್ಕನ ಹುಟ್ಟುಹಬ್ಬವನ್ನು ರಕ್ಷಕ್‌ ಸ್ಪೆಷಲ್‌ ಆಗಿ ಆಚರಿಸಿದ್ದಾರೆ. ರಕ್ಷಕ್‌ ನಮ್ರತಾಗೆ ಪಪ್ಪು ಎಂದು ಕರೆಯುತ್ತಾರೆ. ಪಪ್ಪು ಬರ್ತಡೇಗೆ ಸ್ಪೆಷಲ್‌ ಡಿಕೋರೇಟ್‌ ಮಾಡಿ ನಮ್ರತಾಗೆ ಸರ್‌ ಪ್ರೈಸ್‌ ಕೊಟ್ಟಿದ್ದಾರೆ. ರಕ್ಷಕ್‌ ತಮ್ಮ ಇನ್‌ ಸ್ಟಾಗ್ರಾಂನಲ್ಲಿ ನಮ್ರತಾ ಬರ್ತಡೇ ವಿಡಿಯೋ ಹಂಚಿಕೊಂಡು  ಹ್ಯಾಪಿ ಬರ್ತಡೇ ಪಪ್ಪು ಕೊನೆವರೆಗೂ ನಿನ್ನ ಜೊತೆ ಇರ್ತಿನಿ‌ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.  ರಕ್ಷಕ್‌ ಸರ್ ಪ್ರೈಸ್‌ ನೋಡಿ ನಮ್ರತಾ ಎಮೋಷನಲ್‌ ಆಗಿದ್ದಾರೆ. ತನಿಷಾ ಕೂಡ ನಮ್ರತಾ ಗೌಡ ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡಿದ್ದಾರೆ. https://www.youtube.com/shorts/29TMDFNQoto?feature=share

Read More

ಹವಾಮಾನ ಬದಲಾವಣೆ ಸಮಸ್ಯೆ ಹೋಗಲಾಡಿಸಲು ವಿಶ್ವಸಂಸ್ಥೆ ನೀಡಿರುವ ಗುರಿ ಈಡೇರಿಕೆಯಲ್ಲಿ ಭಾರತದ ಪ್ರಯತ್ನಕ್ಕೆ ಪೂರಕವಾಗಿ ಪಿಎಂ ಕುಸುಮ್ ಯೋಜನೆ ರೂಪಿಸಲಾಗಿದೆ. ಇದು ಪರ್ಯಾಯ ಮತ್ತು ಹಸಿರು ಇಂಧನ ಎನಿಸಿರುವ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ರೂಪಿಸಿರುವ ಯೋಜನೆಯಾಗಿದೆ. ಪಿಎಂ ಕುಸುಮ್ ಯೋಜನೆ ಎಂದರೆ ಪಿಎಂ ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ ಮಹಾಭಿಯಾನ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಕೇಂದ್ರದ ಹೊಸ ಮತ್ತು ಮರುಬಳಕೆ ಇಂಧನ ಸಚಿವಾಲಯದ ಅಡಿಯಲ್ಲಿ ಚಾಲನೆಯಲ್ಲಿರುವ ಯೋಜನೆಯಾಗಿದೆ. ಇದರಲ್ಲಿ ರೈತರು ತಮ್ಮ ಬಂಜರು ಭೂಮಿಯನ್ನು ಸೌರ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಬಹುದು. ತಮ್ಮ ಸ್ವಂತ ಬಳಕೆಯ ಬಳಿಕ ಮಿಗುವ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್​ಗೆ ಕಳುಹಿಸಿ, ಅದರಿಂದ ಆದಾಯ ಪಡೆಯಬಹುದು. ರಾಜ್ಯದ ಡಿಸ್ಕಾಮ್​ಗಳು ಅಥವಾ ವಿದ್ಯುತ್ ಪ್ರಸರಣ ಸಂಸ್ಥೆಗಳು ರೈತರಿಂದ ಸೌರ ವಿದ್ಯುತ್ ಖರೀದಿ ಮಾಡುತ್ತವೆ. ಈ ಯೋಜನೆಯ ಉದ್ದೇಶ? ರೈತರಿಗೆ ಇಂಧನ ಮತ್ತು ನೀರಿನ ಭದ್ರತೆಯನ್ನು ಒದಗಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು, ಕೃಷಿ ವಲಯದ ಮೇಲೆ ಡೀಸೆಲ್ ಅವಲಂಬನೆ ಕಡಿಮೆ ಮಾಡಿಸಲು ಭಾರತ ಸರ್ಕಾರವು 2019 ಮಾರ್ಚ್…

Read More

ಮಹಿಳೆಯ ದೇಹದಿಂದ ಹಂದಿಯ ಮೂತ್ರಪಿಂಡವನ್ನು ವೈದ್ಯರು ಹೊರತೆಗೆದಿದ್ದಾರೆ. ಮೂರು ತಿಂಗಳ ಹಿಂದೆ ಆಕೆಗೆ ಹಂದಿ ಮೂತ್ರಪಿಂಡವನ್ನು ಕಸಿ ಮಾಡಲಾಗಿತ್ತು. ಆದಾಗ್ಯೂ, ಶಸ್ತ್ರಚಿಕಿತ್ಸೆಯ 130 ದಿನಗಳ ನಂತರ, ಹಂದಿ ಮೂತ್ರಪಿಂಡವನ್ನು ಮಹಿಳೆಯ ದೇಹದಿಂದ ತೆಗೆದುಹಾಕಬೇಕಾಯಿತು. ಈಗ ಅವರು ಹಾಗೆ ಏಕೆ ಮಾಡಬೇಕಾಯಿತು ಎಂದು ಕಂಡುಹಿಡಿಯೋಣ. ಅಲಬಾಮಾದಲ್ಲಿ ಮಹಿಳೆಯೊಬ್ಬರು ಹಂದಿ ಮೂತ್ರಪಿಂಡದೊಂದಿಗೆ ದಾಖಲೆಯ 130 ದಿನಗಳ ಕಾಲ ಬದುಕಿದ್ದರು. ಆದರೆ, ಆಕೆಯ ದೇಹವು ಅದನ್ನು ತಿರಸ್ಕರಿಸಲು ಪ್ರಾರಂಭಿಸಿದ ನಂತರ ಅಂಗವನ್ನು ತೆಗೆದುಹಾಕಲಾಯಿತು. ಈಗ ಅವಳು ಮತ್ತೆ ಡಯಾಲಿಸಿಸ್ ಅನ್ನು ಅವಲಂಬಿಸಬೇಕಾಗುತ್ತದೆ ಎಂದು ವೈದ್ಯರು ಘೋಷಿಸಿದರು. ಆದಾಗ್ಯೂ, ಹಂದಿ ಮೂತ್ರಪಿಂಡಗಳಿಂದ ಮಾನವರು ಅನುಭವಿಸುವ ಮೂತ್ರಪಿಂಡದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವ ವೈದ್ಯಕೀಯ ವಿಜ್ಞಾನಿಗಳಿಗೆ ಇದು ನಿರಾಶಾದಾಯಕವಾಗಿದೆ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಏತನ್ಮಧ್ಯೆ, ಏಪ್ರಿಲ್ 4 ರಂದು ಲ್ಯಾಂಗೋನ್ ಹೆಲ್ತ್‌ನಲ್ಲಿ ತೆಗೆದುಹಾಕುವ ಶಸ್ತ್ರಚಿಕಿತ್ಸೆಯ ನಂತರ ಟೋವಾನಾ ಲೂನಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಾನವ ಅಂಗಗಳ ಕೊರತೆಯನ್ನು ನೀಗಿಸಲು, ವಿಜ್ಞಾನಿಗಳು ಹಂದಿಯ ಅಂಗಗಳನ್ನು ತಳೀಯವಾಗಿ ಮಾರ್ಪಡಿಸಿ ಮಾನವ…

Read More

ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ವೀರಚಿನ್ನೇನಹಳ್ಳಿ ಗ್ರಾಮದಲ್ಲಿ ಭೀಕರ ಕೊಲೆಯೊಂದು ನಡೆದು ಹೋಗಿದೆ. ಮನಸೋ ಇಚ್ಚೆ ಚಾಕುವಿನಿಂದ ಇರಿದು ರಾಜು (40) ಎಂಬಾತನ ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್‌ ಆಗಿದ್ದಾರೆ. ಇಂದು ಬೆಳಗಿನಜಾವ 4.30ರ ವೇಳೆ ಕಾಲಿಗೆ ಟವೆಲ್ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವೀರಚಿನ್ನೇನಹಳ್ಳಿ ಗ್ರಾಮದ ರಾಜುನ ಸಂಬಂಧಿಯೊಬ್ಬರ ಮನೆ ಬಳಿಯೇ ಈ ಘಟನೆ ನಡೆದಿದೆ. ಮೂರು ಜನರಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ, ಕೊಲೆ ಮಾಡಿದವರ್ಯಾರು ಎಂದು ತಿಳಿದು ಬಂದಿಲ್ಲ. ತುಮಕೂರಿನ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ತನಿಖೆ ಆರಂಭಿಸಿದ್ದಾರೆ. https://www.youtube.com/watch?v=NpoerZU1mKc

Read More

ಭಾರತೀಯ ಮೂಲದ ಶಸ್ತ್ರಚಿಕಿತ್ಸಕ ಜಾಯ್ ಸೈನಿ ವಿಮಾನ ಅಪಘಾತದಲ್ಲಿ ನಿಧನರಾದರು. ಈ ಅಪಘಾತ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಸಂಭವಿಸಿದೆ. ಆದರೆ, ಈ ವಿಮಾನವನ್ನು ತನ್ನ ಪತಿಯೇ ಹಾರಿಸಿದ್ದಾರೆ ಎಂದು ಅವರು ಹೇಳಿದರು. ಶನಿವಾರ ನ್ಯೂಯಾರ್ಕ್‌ನ ಕೊಪೆಕ್ ಪಟ್ಟಣದ ಬಳಿ ಸಣ್ಣ ಅವಳಿ ಎಂಜಿನ್ ವಿಮಾನವೊಂದು ಮಣ್ಣಿನ ಹೊಲಕ್ಕೆ ಅಪ್ಪಳಿಸಿ ಇಬ್ಬರು ಶಸ್ತ್ರಚಿಕಿತ್ಸಕರು, ಅವರ ಇಬ್ಬರು ಮಕ್ಕಳು ಮತ್ತು ಅವರ ನಿಶ್ಚಿತಾರ್ಥಿಗಳು ಸಾವನ್ನಪ್ಪಿದರು. ಸೈನಿ ಕೊಲಂಬಿಯಾ ಕೌಂಟಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಲು ಪ್ರಯತ್ನಿಸಿದರು. ಈ ಪ್ರಯತ್ನ ವಿಫಲವಾಯಿತು ಮತ್ತು ವಿಮಾನ ಅಪಘಾತಕ್ಕೀಡಾಯಿತು. ಪರಿಣಾಮವಾಗಿ ಅವರಲ್ಲಿ ಆರು ಮಂದಿ ಸಾವನ್ನಪ್ಪಿದರು. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಕುಟುಂಬ ಸದಸ್ಯರ ಹೇಳಿಕೆಯ ಪ್ರಕಾರ, ಮಿತ್ಸುಬಿಷಿ MU-2B ವಿಮಾನವು ಹಡ್ಸನ್ ಬಳಿಯ ಕೊಲಂಬಿಯಾ ಕೌಂಟಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು, 25 ನೇ ಹುಟ್ಟುಹಬ್ಬದ ಆಚರಣೆ ಮತ್ತು ಪಾಸೋವರ್ ಸೆಡರ್‌ಗಾಗಿ ಮೂರು ಜೋಡಿಗಳನ್ನು ಹೊತ್ತೊಯ್ಯುತ್ತಿತ್ತು. ಪೈಲಟ್ ನರಶಸ್ತ್ರಚಿಕಿತ್ಸಕ ಮತ್ತು ಅನುಭವಿ ಫ್ಲೈಯರ್ ಮೈಕೆಲ್ ಗ್ರಾಫ್ ಮತ್ತು ಅವರ ಪತ್ನಿ, ಪೆಲ್ವಿಕ್ ಸರ್ಜನ್ ಜಾಯ್…

Read More

ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯೋದಿಕ್ಕೆ ನಟಿ ವೈಷ್ಣವಿ ಗೌಡ ಸಜ್ಜಾಗಿದ್ದಾರೆ. ಅದರ ಮೊದಲ ಭಾಗವಾಗಿ ನಿನ್ನೆ ಬೆಂಗಳೂರಿನ ಖಾಸಗಿ ರೆಸಾರ್ಟ್‌ ನಲ್ಲಿ ನಿಶ್ಚಿತಾರ್ಥ ನಡೆದಿದೆ. ಎಂಗೇಜ್‌ ಮೆಂಟ್‌ ಫೋಟೋ ಜೊತೆಗೆ ಫೋಟೋಶೂಟ್‌ ವಿಡಿಯೋವನ್ನು ವೈಷ್ಣವಿ ಹಂಚಿಕೊಂಡಿದ್ದಾರೆ. ವೈಷ್ಣವಿ ಕೈ ಹಿಡಿಯುತ್ತಿರುವ ಹುಡುಗನ ಹೆಸರು ಅನುಕೂಲ್.‌ ಏರ್‌ ಪೋರ್ಸ್‌ ನಲ್ಲಿ ತಮ್ಮ ಭಾವಿ ಪತಿ ಕೆಲಸ ಮಾಡುತ್ತಿದ್ದಾರೆ. ಅವರು ನನಗೆ ಕನ್ನಡ ಕಲಿತಿದ್ದಾರೆ. ಅದನ್ನು ಹೇಗೆ ಕಲಿತರು ಅನ್ನೋದನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. https://www.youtube.com/shorts/Dlq7MOip1NA?feature=share

Read More

ಹುಬ್ಬಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಸೋಲಿಗೆ ವೀರ ಸಾವರ್ಕರ್ ಕಾರಣ ಎಂದು ಸಿಎಂ ಹೇಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಇದನ್ನು ಸಾಬೀತು ಮಾಡಿದ್ರೆ ನಾನು ನನ್ನ ವಿಧಾನ ಪರಿಷತ್ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವೆ, ಒಂದು ವೇಳೆ ಇದನ್ನು ಸಾಬೀತು ಮಾಡಲು ಸಿಎಂ ಸಿದ್ದರಾಮಯ್ಯ ವಿಫಲವಾದ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ಸನ್ಯಾಸ ಸ್ವೀಕಾರ ಮಾಡಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲ್ ಹಾಕಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅಂತವರು, ಹೇಳಿದ ಹೇಳಿಕೆಗಳಿಗೆ ಸಮರ್ಥಿಸಿ ಸಿಎಂ ಸಿದ್ದರಾಮಯ್ಯ ಮಾತನಾಡುವುದು ಬಹಳ ವಿಪರ್ಯಾಸದ ಸಂಗತಿ, ಇಂತಹ ಹಗುರವಾದ ಹೇಳಿಕೆಗಳನ್ನು ಸಿದ್ದರಾಮಯ್ಯ ಕೊಡಬಾರದಿತ್ತು, ಇದು ಅವರ ವ್ಯಕ್ತಿತ್ವಕ್ಕೆ ಗೌರವ ತರುವುದಿಲ್ಲ, ಸಿದ್ದರಾಮಯ್ಯ ನಾವು ಹಾಕಿದ ಸವಾಲನ್ನು ಸ್ವೀಕಾರ ಮಾಡಬೇಕು ಎಂದರು. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ರಾಜ್ಯದಲ್ಲಿ ಬಿಜೆಪಿಯಿಂದ ಬೆಲೆ ಏರಿಕೆ ವಿರೋಧಿಸಿ ಜನಾಕ್ರೋಶ ಆರಂಭ ಮಾಡಲಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಆಡಳಿತ ಸರ್ಕಾರ ಕೇವಲ ಗ್ಯಾರಂಟಿ ಮೂಲಕ ಐದು ವರ್ಷ…

Read More