ಬೆಂಗಳೂರು ಗ್ರಾಮಾಂತರ: ರೈಲ್ವೆ ಸ್ಟೆಷನ್ ಗೆ ತೆರಳುತ್ತಿದ್ದ ವ್ಯಕ್ತಿ ಪಾಳು ಬಾವಿಗೆ ಬಿದ್ದು ಪರದಾಟ ನಡೆಸಿದ ಘಟನೆ ಯಲಹಂಕ ತಾಲೂಕಿನ ರಾಜನುಕುಂಟೆ ಸಮೀಪ ನಡೆದಿದೆ. ಕೊಪ್ಪಳ ಮೂಲದ ಶಿವರಾಜ್ ಪೂಜಾರ್ (28) ಪಾಳು ಬಾವಿಗೆ ಬಿದ್ದ ವ್ಯಕ್ತಿಯಾಗಿದ್ದು, ರೈಲ್ವೆ ಸ್ಟೇಷನ್ ಹಿಂಭಾಗದಿಂದ ಕಾಲುದಾರಿಯಲ್ಲಿ ಸ್ಟೆಷನ್ ಬಳಿ ಬರುತ್ತಿರುವ ವೇಳೆ ಪಾಳು ಬಾವಿ ನೋಡರೆ ಒಳಗೆ ಬಿದ್ದಿದ್ದಾನೆ. ಪಾಳು ಬಾವಿಗೆ ಬಿದ್ದವನ ಕಂಡು ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಸ್ಥಳಕ್ಕೆ ದೊಡ್ಡಬಳ್ಳಾಪುರ ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಪಾಳುಬಾವಿಗೆ ಬಿದ್ದಿದ್ದ ಶಿವರಾಜ್ ಪೂಜಾರ್ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನೀಕರ ಮೆಚ್ಚುಗೆ ವ್ಯಕ್ತವಾಗಿದೆ.
Author: Author AIN
ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಹಿಟ್-3. ಟೀಸರ್ ಹಾಗೂ ಹಾಡುಗಳ ಮೂಲಕ ಗಮನಸೆಳೆದಿದ್ದ ಈ ಚಿತ್ರದ ಜಬರ್ದಸ್ತ್ ಟ್ರೇಲರ್ ಬಿಡುಗಡೆಯಾಗಿದೆ. ನಾನಿ ಹಿಂದೆಂದೂ ಕಾಣದ ಲುಕ್ ನಲ್ಲಿ ಅಬ್ಬರಿಸಿದ್ದಾರೆ. ನಾನಿ ಹಿಟ್- 3ಗಾಗಿ ಕಂಪ್ಲೀಟ್ ರಗಡ್ ಜೊತೆ ರಕ್ತಸಿಕ್ತ ಅವತಾರ ತಾಳಿದ್ದು, 3 ನಿಮಿಷ 31 ಸೆಕೆಂಡ್ ಇರುವ ಟ್ರೇಲರ್ ನಲ್ಲಿ ಅಬ್ ಕಿ ಬಾರ್ ಅರ್ಜುನ್ ಸರ್ಕಾರ್ ಎನ್ನುತ್ತಾ ಅಬ್ಬರಿಸಿದ್ದಾರೆ. ಕ್ರೈಂ ಮತ್ತು ಸಸ್ಪೆನ್ಸ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಈ ಚಿತ್ರಕ್ಕೆ ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ‘ಹಿಟ್ ಸಿನಿಮಾದ ಮೂರನೇ ಫ್ರಾಂಚೈಸಿ ಹಿಂದಿನ ಎರಡು ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ಹೆಚ್ಚು ಕ್ರೂರ ಮತ್ತು ರಕ್ತ, ಹಿಂಸೆ ಕಾಣಿಸುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ನಾನಿಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಪ್ರಶಾಂತಿ ತಿಪಿರ್ನೇನಿ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದ್ದು, ಮಿಕ್ಕಿ ಜೆ…
ಕೊಪ್ಪಳ: ವಕ್ಫ್ ಬಿಲ್ ವಿರುದ್ದ ನಾಳೆ ದೇಶದಲ್ಲಿ ಅಶಾಂತಿ ಉಂಟಾಗಬಹುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ವಕ್ಫ್ ಬಿಲ್ ಸರಿಯಾಗಿ ಇಲ್ಲ ಅನಿಸ್ತಾ ಇದೆ. ಮುಸ್ಲಿಂ ಹಕ್ಕುಗಳನ್ನು ಧ್ವಂಸ ಮಾಡಲು ಹೊರಟಂತಿದೆ. ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಫ್ ಬಿಲ್ ವಿರುದ್ದ ನಾಳೆ ದೇಶದಲ್ಲಿ ಅಶಾಂತಿ ಉಂಟಾಗಬಹುದು. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ದೇಶದಲ್ಲಿ ಮುಸ್ಲಿಂರ ಸ್ಥಿತಿ ಹೀನಾಯವಾಗಿದೆ. ಬಹಳ ಬಡವರಿದ್ದಾರೆ. ಮೋದಿ ತಿಳಿದು ಮಾತಾಡ್ತಾರೋ ತಿಳಿಯದೆ ಮಾತಾಡ್ತಾರೋ ಗೊತ್ತಿಲ್ಲ. ದೇಶದಲ್ಲಿ 20 ಕೋಟಿ ಮೇಲೆ ಜನ ಇದಾರೆ. ಅವರ ಸ್ಥಿತಿ ಹೀನಾಯವಾಗಿದ್ದು, ಶಿಕ್ಷಣ ಕೇಳಲೇಬೇಡಿ. ತುಂಬಾ ಬಡವರು ಇದ್ದಾರೆ,ಅವರಿಗೆ ಕೊಟ್ಟರೇ ತಪ್ಪೇನು ಎಂದರು. ರಾಜ್ಯದಲ್ಲಿ ಈಗ ಮಂಡನೆಯಾಗುತ್ತಿರುವುದು ಇದು ಜಾತಿಗಣತಿ ಅಲ್ಲ. ಅದು ಸಾಮಾಜಿಕ ಶೈಕ್ಷಣಿಕ ಆರ್ಥಿಕ ವಿಚಾರ ತಿಳಿಯಲು ಮಾಡಿದ ಸರ್ವೆ. ಅದರಲ್ಲಿ ಜಾತಿ ಕಾಲಂ ಸೇರಿಸಲಾಗಿದೆ. ಇದು ಸ್ವಾಗತಾರ್ಹ. ಇದು ಅತ್ಯಂತ ವೈಜ್ಞಾನಿಕವಾಗಿದೆ ಎಂದರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮ್ಯಾಕ್ಸ್ ಬಳಿಕ ಕೈಗೆತ್ತಿಕೊಳ್ಳುತ್ತಿರುವ ಬಹುನಿರೀಕ್ಷಿತ ಸಿನಿಮಾ ಬಿಲ್ಲ ರಂಗ ಭಾಷಾ. ಈ ಚಿತ್ರದ ಅಪ್ ಡೇಟ್ ಗಾಗಿ ಕಾಯ್ತಿದ್ದ ಸುದೀಪಿಯನ್ಸ್ ಗೆ ನಿರ್ದೇಶಕ ಅನೂಪ್ ಭಂಡಾರಿ ಬೊಂಬಾಟ್ ಸುದ್ದಿ ಕೊಟ್ಟಿದ್ದಾರೆ. ನಾಳೆಯಿಂದ ಬಿಲ್ಲ ರಂಗ ಭಾಷಾ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ನಾವು ನಾಳೆ ಪ್ರಾರಂಭಿಸುತ್ತೇವೆ. ಬಿಬಿಕೆಫಸ್ಟ್ ಬ್ಲಂಡ್ 9 ಗಂಟೆಗೆ ಎಂದು ಬರೆದಿರುವ ಪೋಸ್ಟರ್ ನ್ನು ನಿರ್ದೇಶಕ ಅನೂಪ್ ಭಂಡಾರಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಅನೂಪ್ ಭವಿಷ್ಯದ ಕಥೆಯನ್ನು ಹೇಳಲಿದ್ದಾರೆ ಎನ್ನಲಾಗುತ್ತಿದೆ. ʻ2209 ADʼಯ ಕಥೆ ಈ ಸಿನಿಮಾದಲ್ಲಿ ಇರಲಿದೆ ಎಂದು ಚಿಕ್ಕ ವಿಡಿಯೋ ಗ್ಲಿಂಪ್ಸ್ ಮೂಲಕ ಚಿತ್ರತಂಡ ಈ ಹಿಂದೆ ರಿವೀಲ್ ಮಾಡಿತ್ತು. ʻವಿಕ್ರಾಂತ್ ರೋಣʼ ಸಿನಿಮಾದ ಬಳಿಕ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಸುದೀಪ್ ಕಾಂಬೋ ಒಂದಾಗುತ್ತಿದೆ. ಕಿಚ್ಚನ ಅಭಿಮಾನಿಗಲ್ಲಿ ಈ ಸಿನಿಮಾದ ಮೇಲೆ ನಿರೀಕ್ಷೆಯೂ ಹೆಚ್ಚಾಗುತ್ತಿದೆ. ಬಿಲ್ಲ ರಂಗ ಭಾಷಾ ಜೊತೆಗೆ ಕಿಚ್ಚನ ಅಕೌಂಟ್ ನಲ್ಲಿ ಸಾಕಷ್ಟು…
ಬೆಂಗಳೂರು: ಬೂದಿಮುಚ್ಚಿದ ಕೆಂಡದಂತಿದ್ದ ಜಾತಿ ಗಣತಿ ವಿವಾದದ ಕಿಡಿ ಸಮೀಕ್ಷಾ ವರದಿ ಸರ್ಕಾರದ ಕೈಸೇರುತ್ತಿದ್ದಂತೆ ಧಗ್ ಎಂದು ಹೊತ್ತಿಕೊಂಡಿದೆ. ಜಾತಿಗಣತಿಯಲ್ಲಿ ಅನೇಕ ಲೋಪದೋಷಗಳಿಗೆ ಎಂಬ ಆರೋಪಗಳಿಗೆ ಕೆಲ ಸಮುದಾಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಲು ಶುರುವಾಗಿದೆ. ಅದೇನೆಂದು ನೋಡೋದಾದರೆ.. -ಗೊಲ್ಲ ಮತ್ತು ಯಾದವ ಜಾತಿಗಳ ನಾಯಕರಿಂದ ಸಮೀಕ್ಷೆಗೆ ತೀವ್ರ ಆಕ್ಷೇಪ – ರಾಜ್ಯದಲ್ಲಿ ಗೊಲ್ಲ ಸಮುದಾಯದ ಜನ ಸಂಖ್ಯೆ ಸುಮಾರು 30 ಲಕ್ಷಕಿಂತ ಹೆಚ್ಚಾಗಿದೆ – ನಮ್ಮ ಸಮುದಾಯವನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ -ಒಟ್ಟಾರೆಯಾಗಿ ಗೊಲ್ಲರು ಅತೀ ಹಿಂದುಳಿದ ವರ್ಗಗಳಲ್ಲಿ ಇವೆ ಗೊಲ್ಲ, ಯಾದವ, ಹಣಬಾರ ಮತ್ತು ಕಾಡುಗೊಲ್ಲ ಸಮುದಾಯಗಳು ಪ್ರಸ್ತುತ ಪ್ರವರ್ಗ-1 ರಲ್ಲಿ ಇರುತ್ತದೆ -ಈಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯವನ್ನು ಪ್ರವರ್ಗ -1ಎರಲ್ಲಿ ಸೇರಿಸಿರುತ್ತಾರೆ -ಯಾದವರನ್ನು ಪ್ರವರ್ಗ-1ಬಿ ಗೆ ಸೇರಿಸಿ ಗೊಲ್ಲ-ಯಾದವರನ್ನು ಬೇರ್ಪಡಿಸಿರುವುದು ಖಂಡನೀಯ -ಈಗ ಸರ್ಕಾರದ ಮುಂದಿರುವ ವರದಿ ಪ್ರಕಾರ ಪ್ರವರ್ಗ-1ಎ ರಲ್ಲಿ ಬರುವ ಅಲೆಮಾರಿ- ಅರೆ ಅಲೆಮಾರಿ…
ಮೈಸೂರು: ಮುಸ್ಲಿಂ, ಕ್ರಿಶ್ಚಿಯನ್ರಲ್ಲಿ ಉಪಜಾತಿ ಯಾಕೆ ಲೆಕ್ಕ ಹಾಕಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ 35 ಜನ ವೀರಶೈವ ಶಾಸಕರಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಮ್ಮ ಕುರ್ಚಿ ಬಿಟ್ಟು ಕೊಡುತ್ತಾರಾ? ಲಿಂಗಾಯತರಿಗೆ, ಒಕ್ಕಲಿಗರು, ಒಬಿಸಿ ಎಲ್ಲದರಲ್ಲೂ ಉಪಜಾತಿ ಲೆಕ್ಕ ಹಾಕಲಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ರಲ್ಲಿ ಉಪಜಾತಿ ಯಾಕೆ ಲೆಕ್ಕ ಹಾಕಿಲ್ಲ ಎಂದು ಪ್ರಶ್ನಿಸಿದರು. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ನಮ್ಮ ಜಾತಿ ಸಂಖ್ಯೆ ಕಡಿಮೆ ಆಯ್ತು ಅಂತಾ ಪರಸ್ಪರ ಮಂಗ್ಯಾಗಳ ತರ ಕಿತ್ತಾಡಬೇಡಿ. ಹಿಂದೂಗಳಾಗಿ ಈ ಜಾತಿಗಣತಿ ನೋಡಿ. ಯಾರ ಮನೆಗೆ ಬಂದು ಜಾತಿಗಣತಿ ಮಾಡಿದ್ದಾರೆ? ಸಿಎಂ ಎಲ್ಲರನ್ನು ಕುರಿ ಮಾಡುತ್ತಿದ್ದಾರೆ. ಆಗ ಅಹಿಂದ ಅಂತಾ ಒಂದು ವರ್ಗ ಒಡೆದರು. ಈಗ ಜಾತಿಗಣತಿ ಹೆಸರಲ್ಲಿ ಇಡೀ ಹಿಂದೂ ಧರ್ಮ ಒಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ. ಬೆಲೆ ಏರಿಕೆಯಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ ನಡೆದಿದೆ. ಇವೆಲ್ಲವನ್ನು ಮರೆ ಮಾಚಲು ಜಾತಿಗಣತಿ ಬಿಚ್ಚಿಟ್ಟಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ನಾಟಕ…
2025 ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಕಠಿಣ ಸಮಯವನ್ನು ಎದುರಿಸುತ್ತಿರುವಾಗ, ಅಭಿಮಾನಿಯೊಬ್ಬರು ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕನನ್ನಾಗಿ ಮಾಡುವಂತೆ ತಂಡದ ಮಾಲೀಕರಾದ ನೀತಾ ಅಂಬಾನಿಯಲ್ಲಿ ಮನವಿ ಮಾಡಿದ್ದಾರೆ. ಮುಂಬೈ ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಕಷ್ಟ ಅನುಭವಿಸಿದ್ದರೂ, ಪ್ರಮುಖ ಬದಲಾವಣೆಯೆಂದರೆ ಕಳೆದ ವರ್ಷ ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ತೆಗೆದುಹಾಕಿ ಹಾರ್ದಿಕ್ ಪಾಂಡ್ಯ ಅವರಿಗೆ ಜವಾಬ್ದಾರಿಗಳನ್ನು ವಹಿಸಲಾಯಿತು. ಆದಾಗ್ಯೂ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 2024 ರಲ್ಲಿ ಐಪಿಎಲ್ನಲ್ಲಿ ಕೊನೆಯ ಸ್ಥಾನ ಗಳಿಸಿತು ಮತ್ತು 2025 ರ ಋತುವಿನಲ್ಲಿ ತಂಡವು ಮತ್ತೊಮ್ಮೆ ಅಸ್ಥಿರವಾಗಿ ಕಾಣುತ್ತಿದೆ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಇತ್ತೀಚೆಗೆ, ನೀತಾ ಅಂಬಾನಿ ಶಿರಡಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಅಭಿಮಾನಿಯೊಬ್ಬರು “ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಮಾಡಿ” ಎಂದು ಧೈರ್ಯದಿಂದ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ನೀತಾ ಅಂಬಾನಿ, ಮುಗುಳ್ನಗುತ್ತಾ “ಬಾಬಾ…
ಬೆಂಗಳೂರು: ಜಾತಿಗಣತಿ ವರದಿಯದ್ದು ಎನ್ನಲಾದ ಅಂಕಿ ಅಂಶಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಇದು ಜಾತಿಗಣತಿಯೋ.. ದ್ವೇಷಗಣತಿಯೋ..? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಹಿಂದೆ ಜಾತಿ ಗಣತಿ ವರದಿಯನ್ನು ವಿರೋಧಿಸಿದ್ದ ಡಿಸಿಎಂ ಡಿಕೆಶಿ ಈಗ ಯೂಟರ್ನ್ ಹೊಡೆದಿರುವ ಬಗ್ಗೆ ಕೇಂದ್ರ ಸಚಿವರು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು; ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂ.ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಸೇರಿ ಹಳೇ ಮೈಸೂರು ಜಿಲ್ಲೆಗಳಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ಸಂಖ್ಯೆ ಎಷ್ಟು? ಎಂದು ಕೇಳಿದ್ದಾರೆ. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಜಾತಿ ಗಣತಿ ಗಜಪ್ರಸವ ತಥಂಗಕ್ಕೆ ಸಂಪುಟದಲ್ಲಿ ಶಾಸ್ತ್ರೋಕ್ತವಾಗಿ ಅರಿಶಿಣ ಕಂಕುಮ ಹಚ್ಚಿ ಕಡ್ಡಿ ಹಚ್ಚಲಾಗಿದೆ. ಆ ವರದಿಯದ್ದು (!?) ಎನ್ನಲಾದ ಅಂಕಿ-ಅಂಶಗಳು ಎಲ್ಲೆಡೆ ತೇಲಾಡುತ್ತಿವೆ! ಯಾವುದೋ ಅಜ್ಞಾತ ಕೈ ಅದನ್ನು ವ್ಯವಸ್ಥಿತವಾಗಿ ತೇಲಿಬಿಟ್ಟಿದೆ!! ಒಕ್ಕಲಿಗ ಸಮಾಜಕ್ಕೆ ಸೇರಿದ ಅಂಕೆ-ಸಂಖ್ಯೆ ಅಷ್ಟೇ ಅಲ್ಲ, ವೀರಶೈವ ಲಿಂಗಾಯತ ಮತ್ತು ಇನ್ನಿತರೆ ಸಮಾಜಗಳ ಸಂಖ್ಯೆಯೂ ನನಗೆ ಅಚ್ಚರಿ ಹುಟ್ಟಿಸಿದೆ…
ಬೆಂಗಳೂರು: ಮನೆಗಳ್ಳತನ ಮಾಡ್ತಿದ್ದ ಖತರ್ನಾಕ್ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ದೀಕ್ಷಿತ್ (25) ಬಂಧಿತ ಆರೋಪಿಯಾಗಿದ್ದು, ನಗರದಲ್ಲಿಸ್ವಿಗ್ಗಿ ಡೆಲಿವರಿ ಮಾಡುತ್ತಾ ಯಾವ್ಯಾವ ಮನೆ ಕಾಲಿ ಇದೆ ಅನ್ನೋದನ್ನ ನೋಡಿ ಗುರುತಿಸಿಕೊಳ್ತಿದ್ದನು. ಬೀಗ ಹಾಕಿರುವ ಮನೆ, ರಾತ್ರಿ ಲೈಟ್ ಹಾಕದ ಮನೆ ಗುರುತಿಸಿಕೊಳ್ತಿದ್ದನು. ಇದೇ ರೀತಿ ಬಿಲ್ಡರ್ ಒಬ್ಬರ ಮನೆ ಟಾರ್ಗೆಟ್ ಮಾಡಿ, ಬಿಲ್ಡರ್ ಮನೆಯಲ್ಲಿ 70ಗ್ರಾಂ ಚಿನ್ನ, ಒಂದೂವರೆ ಲಕ್ಷ ಕ್ಯಾಶ್ ಕದ್ದಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸ್ರು. https://ainkannada.com/white-hair-should-be-dark-from-the-base-it-is-enough-to-boil-this-fruit-plant-in-water-and-apply-it-on-the-head/ ಸಿಸಿಟಿವಿಯಲ್ಲಿ ಆರೋಪಿಯ ಚಲನವಲನ ರೆಕಾರ್ಡ್ ಆಗಿತ್ತು. ಇದರಿಂದ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿ ಜೈಲಿಗೆ ಕಳಿಸಿರುವ ಪೊಲೀಸ್ರು. ಬಂಧಿತನಿಂದ ಒಂದೂವರೆ ಲಕ್ಷ ಕ್ಯಾಶ್, 70ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಬೆಂಗಳೂರು: ಕಳೆದ ವಾರ ರಾಜ್ಯ ಸರ್ಕಾರಕ್ಕೆ ನೀಡಲಾದ ಜಾತಿಗಣತಿ ವರದಿ ಭಾರಿ ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ. ಕೆಲ ಸಮುದಾಯಗಳು ಜಾತಿ ಗಣತಿ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ನಡೆದೇ ಇಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆ ಭಾರೀ ಕುತೂಹಲಕಾರಿ ಸಂಗತಿಯೊಂದು ಬಹಿರಂಗವಾಗಿದೆ. ಅದೇನಂದರೆ, ಜಾತಿ ಸಮೀಕ್ಷೆ ವೇಳೆ ಜಾತಿ ಗುರುತಿಸಿಕೊಳ್ಳಲು ಲಕ್ಷಾಂತರ ಮಂದಿ ಹಿಂದೇಟು ಹಾಕಿದ್ದಾರಂತೆ. ಸಮೀಕ್ಷೆ ಕಾರ್ಯ ನಡೆಯುವ ವೇಳೆ ಜಾತಿಯನ್ನೇ ಹೇಳಲು ಇಚ್ಚಿಸಿಲ್ಲವಂತೆ. ಹೌದು, ಜಾತಿಯೇ ಗೊತ್ತಿಲ್ಲ ಎಂದು 1,94,003 ಮಂದಿ ಹೇಳಿದ್ದಾರೆ. ಇನ್ನು ಜಾತಿ ಹೇಳಲು ನಿರಾಕರಿಸಿರುವ ಜನರ ಸಂಖ್ಯೆ ಕೂಡ 2,53,954. ಇದು ಕೂಡ ಜಾತಿ ಗಣತಿ ವರದಿಗೆ ಮತ್ತಷ್ಟು ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಜಾತಿ ಹೇಳಲು ನಿರಾಕರಿಸಿದವರೆಷ್ಟು.. ಜಾತಿರಹಿತ ಎಂದು ಗುರುತಿಸಿಕೊಂಡಿರುವ- 1,34,319 ಜಾತಿಯೇ ಗೊತ್ತಿಲ್ಲ ಎಂದಿರುವವರು-1,94,003 ಜಾತಿ ಹೇಳಲು ನಿರಾಕರಿಸಿರುವವರು- 2,53,954 ಜಾತಿ ಗುರುತಿಸಲು ಸಾಧ್ಯವಾಗದವರು- 3755 ಇದು, ಸಿಎಂ ಸಿದ್ದರಾಮಯ್ಯ ಅವರ ಜಾತಿಗಣತಿ ಸಮೀಕ್ಷೆ ಕನಸಿಗೆ ಹಿಂದೇಟು ಆಗುವ ಸಾಧ್ಯತೆ…