Author: Author AIN

ಪರಿ ಪ್ರಪಂಚದಲ್ಲಿ ಸ್ಯಾಂಡಲ್‌ ವುಡ್‌ ಕ್ಯೂಟ್‌ ಕಪಲ್‌ ಮಿಲನಾ-ಕೃಷ್ಣ ಫುಲ್‌ ಹ್ಯಾಪಿಯಾಗಿದ್ದಾರೆ. ಮನೆಗೆ ಮುದ್ದು ಲಕ್ಷ್ಮಿಯನ್ನು ಬರ ಮಾಡಿಕೊಂಡಿರುವ ಈ ಜೋಡಿಗೆ ಪರಿ ತಮ್ಮ ಪ್ರಪಂಚ ಅಂತಾ ಹೊಸ ಹೊಸ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಪ್ರೀತಿಸಿ ಮದುವೆಯಾಗಿರುವ ಮಿಲನಾ ಕೃಷ್ಣಗೆ ಪರಿ ಎಂಬ ಮುದ್ದಾದ ಮಗಳಿದ್ದಾರೆ. ಆ ಕ್ಯೂಟ್‌ ಮಗುವಿನ ಫೋಟೋಗಳನ್ನು ಈ ಜೋಡಿ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಾರೆ. ಪರಿ ಕ್ಯೂಟ್ನೆಸ್ಟ್‌ ಫೋಟೋ ನೋಡಿ ಎಲ್ಲರೂ ಇಷ್ಟಪಡುತ್ತಾರೆ. ಇತ್ತೀಚೆಗೆ ಈ ಜೋಡಿ ಶ್ರೀಲಂಕಾಗೆ ತೆರಳಿದ್ದರು. ಈ ವೇಳೆ ಪರಿ ಜೊತೆ ಮಿಲನಾ ಕೃಷ್ಣ ಅಲ್ಲದೇ ನಟಿ ಅಮೃತಾ ಅಯ್ಯಂಗರ್‌ ಕೂಡ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಶ್ರೀಲಂಕಾ ಡೈರಿ ಫೋಟೋಗಳನ್ನ ಮಿಲನಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪರಿ ಕ್ಯೂಟ್‌ ಫೋಟೋ ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ʼನಮ್‌ ದುನಿಯಾ ನಮ್‌ ಸ್ಟೈಲ್ʼ ಸಿನಿಮಾದಲ್ಲಿ ಮಿಲನಾ ಕೃಷ್ಣ ನಟಿಸಿದ್ದರು. ಈ ಚಿತ್ರದ ಮೂಲಕ ಅವರಿಬ್ಬರಿಗೆ ಪರಿಚಯವಾಯ್ತು. ಬರೋಬ್ಬರಿ ಆರು ವರ್ಷಗಳ ಕಾಲ ಪ್ರೀತಿಸಿ…

Read More

ಅಗ್ನಿಸಾಕ್ಷಿ, ಸೀತಾರಾಮ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಸದ್ದಿಲ್ಲದೇ ಎಂಗೇಜ್ ಆಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆದಿದೆ. ಅನುಕೂಲ್ ಮಿಶ್ರಾ ಎಂಬುವವರು ಜೊತೆ ವೈಷ್ಣವಿ ಉಂಗುರ ಬದಲಿಸಿಕೊಂಡಿದ್ದಾರೆ. ಅವಳ ಪ್ರಪಂಚವು ಸ್ಕ್ರಿಪ್ಟ್‌ಗಳು ಮತ್ತು ಸ್ಟೇಜ್‌ಗಳಾಗಿತ್ತು. ಅವನದು ಆಕಾಶ ಮತ್ತು ಸೇವೆ. ಆದರೆ ವಿಧಿ ಪರಿಪೂರ್ಣ ಪ್ರೇಮಕಥೆಯನ್ನು ಬರೆದಿತು” ಎಂದು ವೈಷ್ಣವಿ ತಮ್ಮ ಎಂಗೇಜ್ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ವೈಷ್ಣವಿ ಕೈ ಹಿಡಿಯುತ್ತಿರುವ ಅನುಕೂಲ್ ಮಿಶ್ರ ಏರ್ ಪೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕನ್ನಡಿಗರ ಅಚ್ಚುಮೆಚ್ಚಿನ ನಟಿಯಾಗಿದ್ದ ವೈಷ್ಣವಿ ಗೌಡ ಬಳಿಕ ಬಿಗ್‌ಬಾಸ್ ಶೋನಲ್ಲಿಯೂ ಭಾಗಿಯಾಗಿದ್ದರು. ಬಳಿಕ ಜೀ ಕನ್ನಡ ವಾಹಿನಿಯ ‘ಸೀತಾರಾಮ’ ಧಾರಾವಾಹಿಯಲ್ಲಿ ಸೀತಾ ಪಾತ್ರದ ಮೂಲಕ ಎಲ್ಲರನ್ನೂ ಆವರಿಸಿಕೊಂಡಿದ್ದಾರೆ.  2022ರಲ್ಲಿ ವಿದ್ಯಾಭರಣ್ ಎಂಬುವವರ ಜೊತೆ ವೈಷ್ಣವಿ ಮದುವೆ ಮಾತುಕತೆ ನಡೆದಿತ್ತು. ಹೂ ಮುಡಿಸುವ ಶಾಸ್ತ್ತದ ಫೋಟೋ ವೈರಲ್ ಆಗುತ್ತಿದ್ದಂತೆ, ಅವರು ಸರಿ ಇಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ…

Read More

ಬೆಂಗಳೂರು: ಜಾತಿ ಗಣತಿ ವಿಚಾರವಾಗಿ ನಾಳೆ (ಮಂಗಳವಾರ) ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಶಾಸಕರ ಜತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿ ಬಳಿ ಮಾತನಾಡಿದ ಡಿ.ಕೆ ಶಿವಕುಮಾರ್,  “ನಾನು ಜಾತಿ ಗಣತಿ ವರದಿಯನ್ನು ಸಂಪೂರ್ಣವಾಗಿ ನೋಡಿಲ್ಲ, ಅದರ ಅಧ್ಯಯನ ಮಾಡಲಾಗುತ್ತಿದೆ. ನಾಳೆ ಕಾಂಗ್ರೆಸ್ ಪಕ್ಷದ ನಮ್ಮ ಸಮುದಾಯದ ಶಾಸಕರ ಸಭೆ ಕರೆದಿದ್ದೇನೆ. ಅವರ ಜತೆ ಚರ್ಚೆ ಮಾಡಿ, ಯಾರ ಮನಸ್ಸಿಗೂ ನೋಯಿಸದೇ ಎಲ್ಲರ ಗೌರವ ಕಾಪಾಡಲು ಸಲಹೆ ನೀಡುತ್ತೇವೆ”ಎಂದು ತಿಳಿಸಿದರು. ನಾಳೆ ಸಂಜೆ ಸಭೆ ಬೆಂಗಳೂರಿನ ಕುಮಾರ ಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಡಿಸಿಎಂ ಅವರ ಸರ್ಕಾರಿ ನಿವಾಸದಲ್ಲಿ 15-04-2025 ರಂದು ಮಂಗಳವಾರ ಸಂಜೆ 6.00 ಗಂಟೆಗೆ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಶಾಸಕರ ಸಭೆ ಕರೆಯಲಾಗಿದೆ. ಎಲ್ಲರಿಗೂ ನ್ಯಾಯ ಒದಗಿಸುವ ಪಕ್ಷ ಕಾಂಗ್ರೆಸ್ ಧರ್ಮದ ಆಧಾರದಲ್ಲಿ ಟೆಂಡರ್ ನೀಡಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಕ್ಕುಗಳನ್ನು ಕಾಂಗ್ರೆಸ್ ಸರ್ಕಾರ ಕಸಿಯುತ್ತಿದೆ ಎನ್ನುವ…

Read More

ಹರ್ಯಾಣ: ವಕ್ಫ್​ ತಿದ್ದುಪಡಿ ಮಾಡಿ ಸಾಮಾಜಿಕ ನ್ಯಾಯ ಒದುಗಿಸುವ ಕೆಲಸ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹರ್ಯಾಣದ ಹಿಸಾರ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಕ್ಫ್​ ತಿದ್ದುಪಡಿ ಮಾಡಿ ಸಾಮಾಜಿಕ ನ್ಯಾಯ ಒದುಗಿಸುವ ಕೆಲಸ ಮಾಡಿದ್ದೇವೆ. ವಕ್ಫ್​ ತಿದ್ದುಪಡಿ ಮಾಡಿ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗಿದೆ. ವಕ್ಫ್​ ತಿದ್ದುಪಡಿ ಮಸೂದೆಯಿಂದ ಮುಸ್ಲಿಮರಿಗೆ ಅನುಕೂಲ ಆಗಲಿದೆ, ಕಾಂಗ್ರೆಸ್​ ಅವಧಿಯಲ್ಲಿ ವಕ್ಫ್​ ನಿಯಮಗಳನ್ನು ಬದಲಾಯಿಸಲಾಗಿತ್ತು. https://ainkannada.com/girls-are-you-also-using-medimix-soap-this-is-definitely-not-for-you/ ವೋಟ್​ಬ್ಯಾಂಕ್​ಗಾಗಿ ವಕ್ಫ್​ ನಿಯಮಗಳನ್ನು ಬದಲಾಯಿಸಲಾಗಿತ್ತು, ವಕ್ಫ್ ಹೆಸರಲ್ಲಿ ಭೂಮಿಯನ್ನು ಕಬಳಿಕೆ ಮಾಡುತ್ತಿದ್ದರು, ಬಡವರ ಭೂಮಿಯನ್ನು ವಕ್ಫ್​ ಭೂಮಾಫಿಯಾ ಲೂಟಿ ಮಾಡಿದೆ ಕಾಂಗ್ರೆಸ್​​ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. 2013 ರಲ್ಲಿ ಚುನಾವಣಾ ಲಾಭಕ್ಕಾಗಿ ಕಾಂಗ್ರೆಸ್ ವಕ್ಫ್ ಕಾನೂನನ್ನು ಬದಲಾಯಿಸಿದೆ, ತಿದ್ದುಪಡಿಯನ್ನು ಅದರ ಸಾಂವಿಧಾನಿಕ ಪರಿಣಾಮಗಳನ್ನು ಪರಿಗಣಿಸದೆ ತರಾತುರಿಯಲ್ಲಿ ಮಾಡಲಾಗಿದೆ ಎಂದು ಹೇಳಿದರು. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ, ಕಾಂಗ್ರೆಸ್ ವಕ್ಫ್ ಕಾನೂನನ್ನು ಬದಲಾಯಿಸಿತು ಮತ್ತು ಅದನ್ನು ಬಾಬಾ ಸಾಹೇಬ್ ರಚಿಸಿದ ಸಂವಿಧಾನಕ್ಕಿಂತ…

Read More

ಗದಗ: ಮುದ್ರಣಕಾಶಿ ಗದಗ ಜಿಲ್ಲೆಯಲ್ಲೂ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ನಗರಸಭೆ ಸಹಯೋಗದಲ್ಲಿ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ನಗರಸಭೆ ಆವರಣದ ಅಂಬೇಡ್ಕರ್ ಪುತ್ಥಳಿಗೆ ಸಚಿವ ಎಚ್.ಕೆ ಪಾಟೀಲ್ ಮಾಲಾರ್ಪಣೆ ಮಾಡಿದರು. ನಂತರ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಭಾವಚಿತ್ರ ರಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಮೆರವಣಿಗೆಯಲ್ಲಿ ಸರ್ಕಾರಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅನೇಕ ದಲಿತಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು. ನಗರಸಭೆ ಆವರಣದಿಂದ ಅಂಬೇಡ್ಕರ್ ಭವನದವರೆಗೆ ಭವ್ಯ ಮೆರವಣಿಗೆ ನಡೆಯಿತು. ಇದೇ ವೇಳೆ ಮಾತನಾಡಿದ ಸಚಿವ ಎಚ್.ಕೆ ಪಾಟೀಲ್, ಈ ಬಾರಿ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣ, ವಿಶೇಷವಾಗಿ ಆಚರಣೆ ಮಾಡಲಾಯಿತು. ಅಂಬೇಡ್ಕರ್ ಸಂವಿಧಾನದಂತೆ ದೇಶದ‌ ಜನ ಸಮಾಧಾನದಿಂದ ಇರಬೇಕು. ಭ್ರಾತೃತ್ವ ಭಾವನೆಯಿಂದ ಇರಬೇಕು. ಸಮ ಬಾಳು,…

Read More

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನ ಹಲವೆಡೆ ಸೋಮವಾರ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ವಿಧಾನಸೌಧ, ಕೆ.ಆರ್ ಸರ್ಕಲ್, ಕಾರ್ಪೊರೇಷನ್, ಶಾಂತಿ ನಗರ, ಮೆಜೆಸ್ಟಿಕ್, ಮೈಸೂರ್ ಬ್ಯಾಂಕ್, ಟೌನ್​ಹಾಲ್, ರಿಚ್ಮಂಡ್​ ಟೌನ್, ಜಯನಗರ ಸೇರಿದಂತೆ ಹಲವೆಡೆ ಮಳೆ ಆಗಿದೆ. https://ainkannada.com/girls-are-you-also-using-medimix-soap-this-is-definitely-not-for-you/ ಡಾ.ಅಂಬೇಡ್ಕರ್ ಜಯಂತಿ ಹಿನ್ನೆಲೆ ವಿಧಾನಸೌಧದ ಬಳಿ ಹಾಕಲಾಗಿದ್ದ ಪೆಂಡಾಲ್​ ಕೆಳಗೆ ಜನರು ಆಶ್ರಯ ಪಡೆದಿದ್ದಾರೆ. ಇನ್ನು ರಜೆ ಹಿನ್ನಲೆ ವಿಧಾನಸೌಧ, ಕಬ್ಬನ್ ಪಾರ್ಕ್ ನೋಡಲು ಬಂದಿದ್ದ ಸಾರ್ವಜನಿಕರು ಮಳೆಯಿಂದ ಪರದಾಡುವಂತಾಗಿದೆ. ಬೆಂಗಳೂರು ಸೇರಿದಂತೆ ಕೆಲವೆಡೆ ಮಳೆ ಸುರಿದಿದೆ. ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿತ್ತು.

Read More

ಬೆಳಗಾವಿ: ಸಿದ್ದರಾಮಯ್ಯ ಬಳಿಕ ಕಾಂಗ್ರೆಸ್‌ ನಲ್ಲಿ ಬೆಳಗಾವಿ ಸಾಹುಕಾರ ಸತೀಶ್‌ ಜಾರಕಿಹೊಳಿ ಮುಖ್ಯಮಂತ್ರಿ ಆಗ್ತಾರೆ ಎಂಬ ಮಾತುಗಳು ಕಾರ್ತಕರ್ತರಿಂದಲೇ ಕೇಳಿ ಬರುತ್ತೆ. ಇದೀಗ  ಹಿಂದೂ ದೇವರಲ್ಲಿ ಮುಸ್ಲಿಂ ಕಾಂಗ್ರೆಸ್‌ ನಾಯಕಿ ಸತೀಶ್‌ ಜಾರಕಿಹೊಳಿ ಸಿಎಂ ಆಗಲೆಂದು ಹರಕೆ ಹೊತ್ತಿದ್ದಾಳೆ. ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಹಾರೈಸಿ 101 ಮುತ್ತೈದೆಯರಿಗೆ ಕಾಂಗ್ರೆಸ್ ಕಾರ್ಯಕರ್ತೆ ಆಯಿಶಾ ಸನದಿ ಉಡಿ ತುಂಬಿ ಅಭಿಮಾನ ಮೆರೆದಿದ್ದಾರೆ. ಬೆಳಗಾವಿಯ ಆರ್‌ ಟಿಒ ವೃತ್ತದ ಹನುಮಾನ್‌ ಮಂದಿರದಲ್ಲಿ ಮಹಿಳೆಯರಿಗೆ ಉಡಿ ತುಂಬಿದ ಆಯಿಶಾ ಸವದಿ, ಇದಕ್ಕೂ ಮೊದಲು ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 101 ಮಹಿಳೆಯರಿಗೆ ಸೀರೆ, ಹೂವು, ಕುಂಕುಮ-ಅರಿಶಿನ ನೀಡಿ ಉಡಿ ತುಂಬಿದ ಸತೀಶ್ ಅಭಿಮಾನಿ,  ಮುಂದೊಂದು ದಿನ ಸಿಎಂ ಆದರೆ ಹನುಮಾನ್ ಮಂದಿರದಲ್ಲಿ 11 ಸಾವಿರ ತೆಂಗಿನಕಾಯಿ ಒಡೆಯುವುದು, ಮಹಾಪ್ರಸಾದ ವಿತರಿಸುವ ಹರಕೆ ಹೊತ್ತಿದ್ದಾರೆ. ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಘೋಷಣೆ ಕೂಗಿ ಸಂತಸ ಹಂಚಿಕೊಂಡಿದ್ದಾರೆ.…

Read More

ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಮನೆಗೆ ಹೊಸ ಅತಿಥಿ ಎಂಟ್ರಿಯಾಗಿದೆ. ಅಂದರೆ ರಿಷಬ್‌ ಐಷಾರಾಮಿ ಕಾರಿನ ಮಾಲೀಕರಾಗಿದ್ದಾರೆ. ಟೊಯೋಟಾ ಕಂಪನಿಯ ಕಪ್ಪು ಬಣ್ಣದ ವೆಲ್ಫೈರ್ ದುಬಾರಿ ಕಾರನ್ನು ಕಾಂತಾರ ಸ್ಟಾರ್‌ ಖರೀದಿಸಿದ್ದಾರೆ. ವೆಲ್ಫೈರ್ ಕಾರಿನ ಬೆಲೆ 1 ಕೋಟಿ 22 ಲಕ್ಷದಿಂದ, 1 ಕೋಟಿ 32 ಲಕ್ಷ ರೂಪಾಯಿಯವರೆಗೂ ಇದೆಯಂತೆ. ಆನ್ ರೋಡ್‌ಗೆ ಈ ದುಬಾರಿ ಕಾರಿನ ಬೆಲೆ 1 ಕೋಟಿ 40 ಲಕ್ಷ ರೂಪಾಯಿ ಎನ್ನಲಾಗಿದೆ. ಬಹುತೇಕ ರಾಜಕಾರಣಿಗಳು, ದೊಡ್ಡ ಸಿನಿಮಾತಾರೆಯರ ಬಳಿ ಈ ಕಾರು ಇರುವುದು ವಿಶೇಷ. ಈ ಕಾರಿನ ಒಳಾಂಗಣವು ತುಂಬಾ ವಿಶಾಲವಾಗಿದ್ದು, ದೂರ ಪ್ರಯಾಣ ಮಾಡುವವರಿಗೆ ಹೇಳಿ ಮಾಡಿಸಿದಂತಿದೆ. ಅದರಲ್ಲೂ ಸಿನಿಮಾ ಮಂದಿಗೆ ಶೂಟಿಂಗ್, ಓಡಾಟ ಅಂತ ಒಂದಲ್ಲಾ ಒಂದು ಕೆಲಸಗಳು ಇದ್ದೇ ಇರುತ್ತದೆ. ಹಾಗಾಗಿ, ಸೆಲೆಬ್ರಿಟಿಗಳು ಟೊಯೋಟಾ ವೆಲ್‌ಫೇರ್ ಕಾರನ್ನು ಹೆಚ್ಚು ಇಷ್ಟಪಡುತ್ತಾರೆ. ರಿಷಬ್‌ ಶೆಟ್ಟಿ ಈ ಹೊಸ ಟೊಯೋಟಾ . ವೆಲ್ಫೈರ್ ಕಾರನ್ನ ಯಲಹಂಕ ಆರ್‌ಟಿಓನಲ್ಲಿ ನೋಂದಣಿ ಮಾಡಿಸಲಾಗಿದೆ. ಕಾರಿನ ನಂಬರ್ ಕೆಎ…

Read More

ಭಾರತ ಸರ್ಕಾರ ಹಲವು ಯೋಜನೆಗಳನ್ನು ಪರಿಚಯಿಸುತ್ತಿದೆ. ಮೋದಿ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಒಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯ ಲಾಭ ರೈತರಿಗೆ ಸಿಗಲಿದೆ. ನೀವು ಈ ಯೋಜನೆಗೆ ಅರ್ಹರಾಗಿದ್ದರೆ, ಈ ಯೋಜನೆಯಡಿಯಲ್ಲಿ ಪಡೆದ ಕಂತುಗಳ ಪ್ರಯೋಜನಗಳನ್ನು ನೀವು ಪಡೆಯಬಹುದು. ಇಲ್ಲಿಯವರೆಗೆ 19ನೇ ಕಂತಿನ ಹಣವನ್ನು ಪಡೆದ ರೈತರು ಈಗ 20ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. https://ainkannada.com/girls-are-you-also-using-medimix-soap-this-is-definitely-not-for-you/ ಈ ಯೋಜನೆಗೆ ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣವನ್ನು ಬಿಡುಗಡೆ ಮಾಡುತ್ತದೆ. ಇದು ರೂ.ಗಳನ್ನು ಬಿಡುಗಡೆ ಮಾಡುತ್ತದೆ. ವರ್ಷಕ್ಕೆ 6000 ರೂ.ಗಳ ಮೂರು ಕಂತುಗಳಲ್ಲಿ. ರೈತರ ಖಾತೆಗಳಿಗೆ ತಲಾ 2000 ರೂ. ಆದಾಗ್ಯೂ, 19 ನೇ ಕಂತಿನ ಹಣವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದರೂ,  20ನೇ ಕಂತಿನ ಹಣ ಜೂನ್ 2025ರಲ್ಲಿ ಬಿಡುಗಡೆಯಾಗಬಹುದು. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ, ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದಾಗ್ಯೂ, ಪಿಎಂ ಕಿಸಾನ್ ಯೋಜನೆಯ ಲಾಭ…

Read More

ಏಪ್ರಿಲ್‌ 14, ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದ ಪಾಲಿಗೆ ವಿಶೇಷ ದಿನ. ಇಂದಿಗೆ “ಕೆಜಿಎಫ್‌ ಚಾಪ್ಟರ್‌ 2” ಸಿನಿಮಾ ಬಿಡುಗಡೆ ಆಗಿ ಮೂರು ವರ್ಷಗಳಾಗಿವೆ. ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಭಾರತೀಯ ಆಕ್ಷನ್ ಸಿನಿಮಾಕ್ಕೆ ಹೊಸ ವ್ಯಾಖ್ಯಾನ ನೀಡಿದ ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯ್ ಪಾತ್ರದಲ್ಲಿ ಮಿಂಚು ಹರಿಸಿದ್ದರು. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿದ್ದಾರೆ. ಹಲವು ದಾಖಲೆ ಬರೆದ ಕೆಜಿಎಫ್‌ 2 ಮೂರು ವರ್ಷದ ಕ್ಷಣದಲ್ಲಿ ಹೊಂಬಾಳೆ ಸಂಸ್ಥೆ ಚಾಪ್ಟರ್‌ 3 ಬಗ್ಗೆ ಬಿಗ್‌ ಅಪ್‌ ಡೇಟ್‌ ಕೊಟ್ಟಿದೆ. ಈ ನಡುವೆ ರಾಕಿಭಾಯ್‌ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದೊಂದು ಮೂರು ವಾರದಿಂದ ಟಾಕ್ಸಿಕ್ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿತ್ತು. ಹೀಗಾಗಿ ಪತ್ನಿ ಸಮೇತ ಮುಂಬೈನಲ್ಲಿ ಬೀಡುಬಿಟ್ಟಿದ್ದ ಯಶ್‌ ಇಂದು ಬೆಂಗಳೂರಿನತ್ತ ಹೊರಟಿದ್ದಾರೆ. ಪತ್ನಿ ರಾಧಿಕಾ ಜೊತೆ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಟಾಕ್ಸಿಕ್‌ ಚಿತ್ರದ…

Read More