Author: Author AIN

ಧಾರವಾಡ: ತಾವರೆಕೆರೆಯಲ್ಲಿ ಮಹಿಳೆಯೊಬ್ಬರ ಮೇಲೆ ಅಮಾನವೀಯವಾಗಿ ತಾಲಿಬಾನಿ ರೀತಿಯಲ್ಲೇ ಹಲ್ಲೆ ನಡೆಸಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಸಂತೋಷ ಲಾಡ್, ಆ ಹಲ್ಲೆಯನ್ನು ತಾಲಿಬಾನಿಗೆ ಹೋಲಿಸಬೇಡಿ ಎಂದಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ತಾವರೆಕೆರೆಯಲ್ಲಿ ನಡೆದ ಈ ಹಲ್ಲೆ ತಾಲಿಬಾನಿ ರೀತಿಯಲ್ಲಿ ನಡೆದಿದೆ ಎನ್ನುವುದಾದರೆ ಮಣಿಪುರದಲ್ಲಿ ಆಗಿದ್ದು ಏನು? ಎಂದು ಸಚಿವರು ಪ್ರಶ್ನಿಸಿದರು. https://ainkannada.com/girls-are-you-also-using-medimix-soap-this-is-definitely-not-for-you/ ರಾಜ್ಯದಲ್ಲಿ ಇಂತಹ ಘಟನೆಗಳು ಸಾಕಷ್ಟು ಆಗಿರುತ್ತವೆ. ಅಂತವುಗಳಿಗೆ ತಾಲಿಬಾನಿ ಪದ ಬಳಕೆ ಮಾಡುವುದು ಸರಿಯಲ್ಲ. ಮಣಿಪುರದಲ್ಲಿ ಎರಡು ವರ್ಷಗಳಿಂದ ಏನಾಗುತ್ತಿದೆ? ಇಲ್ಲಿ ಆಗಿರುವುದಕ್ಕೆ ತಾಲಿಬಾನಿ ಪದ ಬಳಸಬೇಡಿ ಎಂದು ಸಚಿವ ಲಾಡ್ ಮನವಿ ಮಾಡಿದರು.

Read More

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ರೌಡಿಗಳು ಬಾಲ ಬಿಚ್ಚಿದ್ದಾರೆ. ಅದ್ರಲ್ಲೂ ಸಿಟಿಯ ಗಡಿ ಭಾಗದಲ್ಲಿ ರೌಡಿಗಳ ಹಾವಳಿ ಹೆಚ್ಚುತ್ತಿದೆ. ನಿನ್ನೆ ರೌಡಿಗಳ ನಡುವೆ ಮಾರಾಮಾರಿ ನಡೆದಿದೆ. ಯಲಹಂಕ ನ್ಯೂಟೌನ್ ಠಾಣ ವ್ಯಾಪ್ತಿಯ ಅಟ್ಟೂರು ಮುಖ್ಯರಸ್ತೆಯ ನಾಟಿ ಬಾರ್ ಮುಂದೆ ನಡೆದಿದೆ. ಬಾಣಸವಾಡಿ ರೌಡಿಶೀಟರ್ ಆರ್ ಎಕ್ಸ್ ರವಿ ಮೇಲೆ ನ್ಯೂಟೌನ್ ರೌಡಿಶೀಟರ್ ಗಾಂಜ ಅಭಿ ಅಂಡ್ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ. ಮೀಟರ್ ಬಡ್ಡಿ ವ್ಯವಹಾರ ನಡೆಸೋ ಅಭಿ ರವಿ ಕಡೆಯವರಿಗೆ ಫೈನಾನ್ಸ್ ನೀಡಿದ್ದಾನೆ. ಫೈನಾನ್ಸ್ ವಿಚಾರವಾಗಿ ರವಿಯನ್ನ ಮಾತುಕತೆಗೆ ಅಂತ ಕರೆಸಿದ್ದಾರೆ. ಈ ವೇಳೆ ರವಿ ನಾಟಿ ಬಾರ್ ಮುಂದೆ ಹೋಗ್ತಿದ್ದಂತೆ. ರವಿ‌ ಮೇಲೆ ಅಭಿ, ಶೇಖರ, ಮಲ್ಲಿಕಾರ್ಜುನ, ನಾಗಾರ್ಜುನ, ನಂದೀಶ ಸೇರಿದಂತೆ ಒಂದಷ್ಟು ಜನ‌ ಮಾರಾಣಾಂತಿಕವಾಗಿ ಥಳಿಸಿದ್ದಾರೆ.‌ ಇನ್ನೂ ಈ ವೇಳೆ ರವಿ ಕೂಡ ಕೆಲವರ ಮೇಲೆ ಹಲ್ಲೆ ಮಾಡಿದ್ದಾನೆ. ರವಿ ಮೇಲೆ ಹಲ್ಲೆ ಮಾಡಿದವರ ಪೈಕಿ ನಾಗಾರ್ಜುನ ಸ್ತಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾನೆ.‌‌ಇನ್ನೂ ಘಟನೆ ನಂತರ ಆರೋಪಿಗಳು ಎಸ್ಕೇಪ್…

Read More

ಮೈಸೂರು: 10 ವರ್ಷದ ಹಿಂದಿನ ಗಣತಿಯನ್ನು ಈಗ ಬಿಡುಗಡೆ ಮಾಡಲು ಹೊರಟಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಈ ಗಣತಿ ಅವೈಜ್ಞಾನಿಕ ಅಂತ ಈಗಾಗಲೇ ಹೇಳಿದ್ದೇವೆ. ಜಾತಿಗಣತಿಗೆ ನಮ್ಮ ತಕರಾರಿಲ್ಲ. ಆದರೆ ಅದು ವೈಜ್ಞಾನಿಕವಾಗಿ ಆಗಬೇಕು. https://ainkannada.com/girls-are-you-also-using-medimix-soap-this-is-definitely-not-for-you/ ಈ ಬಗ್ಗೆ ಸರ್ಕಾರ ಏನು ಮಾಡತ್ತದೆ ಎಂದು ನೋಡೋಣ. 10 ವರ್ಷದ ಹಿಂದಿನ ಗಣತಿಯನ್ನು ಈಗ ಬಿಡುಗಡೆ ಮಾಡಲು ಹೊರಟಿದ್ದಾರೆ. ಇದು ಸರಿಯಲ್ಲ ಅಂತ ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಜಾತಿಗಣತಿಯನ್ನು ರಾಜಕೀಯವಾಗಿ ಎಲ್ಲರೂ ಬಳಕೆ ಮಾಡಿಕೊಳ್ಳುವುದು ಗೊತ್ತಿರುವ ವಿಚಾರ. ಆದರೆ ಸರಿಯಾದ ರೀತಿಯಲ್ಲಿ ಗಣತಿ ಆಗಬೇಕು ಎಂದು ಹೇಳಿದ್ದಾರೆ.

Read More

ಸೀತಾ ವಲ್ಲಭ ಧಾರಾವಾಹಿಯಲ್ಲಿ ಖ್ಯಾತಿಯ ನಟಿ ಸುಪ್ರೀತಾ ನಾರಾಯಣ್‌ ಹೊಸ ಬಾಳಿಗೆ ಹೆಜ್ಜೆ ಇಡಲು ರೆಡಿಯಾಗಿದ್ದಾರೆ. ಅದರ ಮೊದಲ ಭಾಗವೆಂಬಂತೆ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಮಾರ್ಚ್‌ ತಿಂಗಳಿನಲ್ಲಿ ಸೀಕ್ರೆಟ್‌ ಆಗಿ ಉಂಗುರ ಬದಲಿಸಿಕೊಂಡಿದ್ದಾರೆ. ಡಿಜಿಟಲ್‌ ಕ್ರಿಯೇಟರ್‌ ಚಂದನ್‌ ಶೆಟ್ಟಿ ಎಂಬುವರ ಜೊತೆ ಸುಪ್ರಿತಾ ಸಪ್ತಪದಿ ತುಳಿಯಲು ಅಣಿಯಾಗಿದ್ದಾರೆ. ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಿದ್ದಾರಾ? ಅನ್ನೋದು ರಿವೀಲ್‌ ಆಗಿಲ್ಲ. ಕನ್ನಡದ ಸೀತಾ ವಲ್ಲಭ ಧಾರಾವಾಹಿಯ ಮೈಥಿಲಿ ಪಾತ್ರ ಮೂಲಕ ಮನೆಮಾತಾದವರು ಸುಪ್ರೀತಾ ನಾರಾಯಣ. ಸಾವಿತ್ರಮ್ಮಗಾರಿ ಅಬ್ಬಾಯಿ ಎಂಬ ತೆಲುಗು ಸೀರಿಯಲ್ ನಲ್ಲಿಯೂ ಅಭಿನಯಿಸಿದ್ದಾರೆ. ಅಲ್ಲದೇ ಒಂದಷ್ಟು ಚಿತ್ರದಲ್ಲಿ ನಾಯಕಿಯಾಗಿಯೂ ಮಿಂಚಿದ್ದಾರೆ. ಮೂಲತಃ ಮೈಸೂರಿನವರಾದ ಸುಪ್ರೀತಾ ಚಂದನ್‌ ಯಾವಾಗ ವರಿಸಲಿದ್ದಾರೆ ಅನ್ನೋದನ್ನು ಹೇಳಿಕೊಂಡಿಲ್ಲ.

Read More

ಬೆಂಗಳೂರು: RSS ಮತ್ತು BJP ಪರಿವಾರ ಹೇಳುವ ಸುಳ್ಳುಗಳನ್ನು ಮೆಟ್ಟಿ ನಿಂತು, ಸತ್ಯ ಹೇಳುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿದರು. ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ 134ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಕಾರ್ಯಕರ್ತರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು. ಸೈದ್ದಾಂತಿಕ‌ ಹೋರಾಟವನ್ನು ಮುನ್ನಡೆಸಬೇಕು ಎಂದು ಸಿಎಂ ಕರೆ ನೀಡಿದರು. ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸಿದ್ದನ್ನು, ಅಂಬೇಡ್ಕರ್ ಮನುಸ್ಮೃತಿಗೆ ಬೆಂಕಿ ಹಾಕಿ ಸುಟ್ಟಿದ್ದು ಏಕೆ ಎನ್ನುವುದನ್ನು ನಮ್ಮ ಕಾರ್ಯಕರ್ತರು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಜನರಿಗೆ, ಇವತ್ತಿನ ಯುವ ಸಮುದಾಯಕ್ಕೆ ಸತ್ಯವನ್ನು ಅರ್ಥ ಮಾಡಿಸಬೇಕು ಎಂದರು. ಬಿಜೆಪಿಯವರಿಗೆ ಸಾರ್ವಕರ್ ಮತ್ತು ಗಾಂಧಿಯನ್ನು ಕೊಲೆ ಮಾಡಿದ ಗೋಡ್ಸೆ ಬಿಟ್ಟು ಉಳಿದ ಯಾರೂ ಬೇಕಾಗಿಲ್ಲ. ಆದರೆ ನಮಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎನ್ನುವ ಮೂರು ಮಂತ್ರಗಳನ್ನು ನಮಗೆ ನೀಡಿದ ಅಂಬೇಡ್ಕರ್ ನಮ್ಮವರು, ಇವರು ನಮಗೆ ಬೇಕು ಎಂದರು. ಬೆಂಗಳೂರಿನಲ್ಲಿ ಅಂಬೇಡ್ಕರ್ ಮ್ಯೂಸಿಯಮ್ ರಚಿಸಲಾಗುವುದು ಮತ್ತು ಇಡೀ ದೇಶದಲ್ಲೇ…

Read More

ಗದಗ: ಜಾತಿಗಣತಿ ವಿಚಾರದಲ್ಲಿ ಸಿಎಂ ರಾಜಕೀಯ ಲಾಭ-ನಷ್ಟ ಲೆಕ್ಕ ಹಾಕಿಲ್ಲ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ವಿಚಾರದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಏನು ಬದ್ಧತೆ ಇದೆ. ಆ ಬದ್ಧತೆಯನ್ನು ಸಿಎಂ ಅಭಿವ್ಯಕ್ತ ಮಾಡಿದ್ದಾರೆ. ಸಿಎಂ ರಾಜಕೀಯ ಲಾಭ-ನಷ್ಟ ಲೆಕ್ಕ ಹಾಕಿಲ್ಲ ಎಂದರು. ಜಾತಿ-ಉಪಜಾತಿಗಳ ವಿಂಗಡನೆ ಮಾಡಿದ್ದು, ಮುಸ್ಲಿಂ ವಿಂಗಡನೆ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರು ಮುಸ್ಲಿಂ ಅಂತ ಬರೆದುಕೊಟ್ಟಿದ್ದಾರೆ. ನಿಮ್ಮ ಜಾತಿ ಯಾವುದು ಎಂಬುದನ್ನು ನೀವೇ ಬರೆದು ಕೊಟ್ಟಿದ್ದಿರಲ್ಲ. https://ainkannada.com/girls-are-you-also-using-medimix-soap-this-is-definitely-not-for-you/ ನೀವೇ ಜಾತಿ-ಉಪಜಾತಿಗಳನ್ನು ವಿಂಗಡನೆ ಮಾಡಿಕೊಂಡರೇ ಯಾರು ಏನು ಮಾಡಬೇಕು. ನೀವೇ ಹೇಳಿದ್ದನ್ನು ತೆಗೆದುಕೊಂಡರೇ ಅದು ಅವೈಜ್ಞಾನಿಕನಾ ಎಂದು ಬಿಜೆಪಿ ನಾಯಕರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಇಷ್ಟೆಲ್ಲಾ ಅವಕಾಶ ಕೊಟ್ಟಾಗಲೂ ರಾಜಕೀಯ ಮಾಡುವುದು ಸರಿಯಾದ ಕ್ರಮವಲ್ಲ. ಅವೈಜ್ಞಾನಿಕ ಯಾವುದು ಇದೆ. ವರದಿ ಓದದೇ ಅವೈಜ್ಞಾನಿಕ ಅಂದ್ರೆ ಹೇಗೆ? ನಿಮ್ಮ ಮನೆಗಳಲ್ಲಿ ಗಣತಿ ಮಾಡಿದ್ದರೆ ನಮ್ಮದು ಈ…

Read More

ಕೋಲಾರ: ಜಾತಿ ಜನಗಣತಿ ಜಾರಿ ವಿಚಾರದಲ್ಲಿ ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಕೋಲಾರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾನ ಮರ್ಯಾದೆ ಏನು ಇಲ್ಲ, ಇಷ್ಟು ದಿವಸ ಜಾತಿ ಜನಗಣತಿಯನ್ನು ಪ್ರೀಸರ್ ನಲ್ಲಿಟ್ಟಿದ್ದಾರೆ ಎಂದರು. https://ainkannada.com/girls-are-you-also-using-medimix-soap-this-is-definitely-not-for-you/ ರಾಜ್ಯದ 95% ರಷ್ಟು ಜನರಿಗೆ ಜಾತಿಗಣತಿಯಿಂದ ಖುಷಿ ಆಗಿದೆ. ಆದರೆ ಬಿಜೆಪಿಯವರಿಗೆ ಮಾಡುವ ಯೋಗ್ಯತೆ ಇಲ್ಲ,  ಏನಾದರೂ ಮಾಡಿದ್ರೆ ಸಹಿಸಿಕೊಳ್ಳಲ್ಲ. ಈ ಹಿಂದೆ ಗ್ಯಾರಂಟಿಗಳನ್ನು ಕೊಟ್ಟಾಗ ಹೀಗೆಯೇ ಮಾತನಾಡಿದ್ದರು. ಲೋಕಸಭೆ ಚುನಾವಣೆಗೆ ನಿಲ್ಲುತ್ತದೆ ಎಂದು ಹೇಳಿದ್ದರು. ಆದರೆ ಈಗ ಎಲ್ಲರಿಗೂ ಗ್ಯಾರಂಟಿ ಸಿಗುತ್ತಿದೆ. ರಾಜ್ಯದ ಜನರೆಲ್ಲರೂ ಖುಷಿಯಾಗಿದ್ದಾರೆ, ನನ್ನ ವೈಯುಕ್ತಿಕವಾಗಿ ಇದು ಸರಿಯಿದೆ ಎಂದರು. ಜಾತಿಗಣತಿಗೆ ನನ್ನ ಒಪ್ಪಿಗೆ ಇದೆ. ಇದೇ 17ರಂದು ಎಲ್ಲಾ ಸಚಿವರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಇದರಲ್ಲಿ ನನ್ನ ಒಪ್ಪಿಗೆ ಇದೆ. ಅಲ್ಲದೇ ಇದೇ ತಿಂಗಳ 17ರಂದು ವಿಶೇಷ ಸಚಿವ ಸಂಪುಟ ಸಭೆಯನ್ನ ಕರೆಯಲಾಗಿದೆ. ಇದರಲ್ಲಿ ಎಲ್ಲಾ ಸಚಿವರು ಜಾತಿಗಣತಿಗೆ ಒಪ್ಪಿಗೆ…

Read More

ರಾಮನಗರ: ಏಕಾಏಕಿ ಜಾತಿಗಣತಿ ಸ್ವೀಕಾರ ಮಾಡುವುದಕ್ಕಿಂತ ಮೊದಲು ಚರ್ಚೆ ಆಗಬೇಕು ಎಂದು ಸಂಸದ ಡಾ.ಮಂಜುನಾಥ್ ಹೇಳಿದ್ದಾರೆ. ರಾಮನಗರದಲ್ಲಿ ಜಾತಿಗಣತಿ ವರದಿ ಸ್ವೀಕಾರಕ್ಕೆ ಮುಂದಾಗಿರುವ ವಿಚಾರದ ಕುರಿತು ಮಾತನಾಡಿದ ಅವರು, ಸಾಮಾಜಿಕ ಹಾಗೂ ಶೈಕ್ಷಣಿಕ ಮಟ್ಟದ ಬಗ್ಗೆ ಸಮೀಕ್ಷೆ ಮಾಡಿ. ಆದರೆ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡಬೇಡಿ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಎಲ್ಲರನ್ನೂ ಮೇಲೆತ್ತುವ ಕೆಲಸ ಆಗಬೇಕು. ಏಕಾಏಕಿ ಜಾತಿಗಣತಿ ಸ್ವೀಕಾರ ಮಾಡುವುದಕ್ಕಿಂತ ಮೊದಲು ಚರ್ಚೆ ಆಗಬೇಕು. https://ainkannada.com/girls-are-you-also-using-medimix-soap-this-is-definitely-not-for-you/ ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಚರ್ಚೆ ಮಾಡಬೇಕು. ತಜ್ಞರು, ಚಿಂತಕರು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು. ಶಾಸಕಾಂಗ ಸಮಿತಿ ರಚನೆ ಮಾಡಿ ಈ ಬಗ್ಗೆ ಪರಿಶೀಲನೆ ಮಾಡಬೇಕು. ಸರ್ಕಾರದ ಆತುರದ ನಿರ್ಧಾರ ಸರಿಯಲ್ಲ ಎಂದು ತಿಳಿಸಿದರು.

Read More

ಬೆಂಗಳೂರು: 10 ವರ್ಷಗಳಲ್ಲಿ ಯಾರು ಹುಟ್ಟಿಲ್ಲವಾ, ಸತ್ತಿಲ್ಲವಾ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ವಿಧಾನ್ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಿಂದ ಕೇಂದ್ರ ಸರ್ಕಾರ ಜಾತಿಗಣತಿ ಪ್ರಾರಂಭ ಮಾಡುತ್ತಿದೆ. ಹೀಗಿರುವಾಗ ನೀವು ಯಾಕೆ ಜಾತಿಗಣತಿ ಬಿಡುಗಡೆ ಮಾಡಿದ್ದೀರಿ? ಈ ವರದಿ 10 ವರ್ಷಗಳ ಹಿಂದಿನ ವರದಿನಾ? ಹೊಸದಾಗಿ ಮಾಡಿರೋದಾ? 10 ವರ್ಷಗಳಲ್ಲಿ ಯಾರು ಹುಟ್ಟಿಲ್ಲವಾ, ಸತ್ತಿಲ್ಲವಾ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕು. https://ainkannada.com/girls-are-you-also-using-medimix-soap-this-is-definitely-not-for-you/ ಈ ಕಾಂಗ್ರೆಸ್ ಸರ್ಕಾರ ಜಾತಿ ಹಿಂದೆ ಬಿದ್ದಿದೆ. ರಾಹುಲ್ ಗಾಂಧಿ ತೃಪ್ತಿ ಮಾಡಲು ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಒಕ್ಕಲಿಗ, ಲಿಂಗಾಯತ ಮತ ಒಡೆದು ಮುಸ್ಲಿಮರನ್ನ ಒಲೈಕೆ ಮಾಡಲು ಹೋಗಿದ್ದಾರೆ. ನಮ್ಮ ಜನಾಂಗವನ್ನು ಕಡಿಮೆ ತೋರಿಸಿದ್ದಾರೆ. ನಮ್ಮ ನಮ್ಮ ಜನಾಂಗದ ನಡುವೆ ಹೋರಾಟ ಮಾಡುವ ಸ್ಥಿತಿಗೆ ಈ ಸರ್ಕಾರ ತಂದಿದೆ ಎಂದು ಕಿಡಿಕಾರಿದರು. ಜಾತಿಗಣತಿ ವರದಿ ವಿರೋಧ ಮಾಡಲು ಕಾರಣಗಳಿವೆ. ಸ್ವಾಗತಿಸಲು ಕೆಲವು ಕಾರಣಗಳಿವೆ. ಮುಸ್ಲಿಮರನ್ನು ಒಲೈಕೆ…

Read More

ಮಂಡ್ಯ : ಇಡೀ ವಿಶ್ವವೇ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ರವರ ಸಾಧನೆ ಗುರುತಿಸಿ ಇಬ್ಬರೂ ವಿಶ್ವನಾಯಕರನ್ನಾಗಿ ಒಪ್ಪಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಹೇಳಿದರು. ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 134 ನೇ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಬೋದಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಉನ್ನತ ವ್ಯಕ್ತಿಯಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಭಾರತೀಯ ಸಂವಿಧಾನವನ್ನು ಡಾ: ಬಿ‌. ಆರ್.ಅಂಬೇಡ್ಕರ್ ಅವರು ರಚಿಸಿದ್ದಾರೆ, ಭಾರತೀಯ ಸಂವಿಧಾನ ಯಾವುದೇ ವರ್ಗ ಮತ್ತು ಸಮಾಜಕ್ಕೆ ಸಿಮಿತವಾಗಿಲ್ಲ ಎಂದು ಹೇಳಿದರು. https://ainkannada.com/girls-are-you-also-using-medimix-soap-this-is-definitely-not-for-you/ ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಭಾರತೀಯ ಸಂವಿಧಾನವನ್ನು ಅತ್ಯಂತ ಶ್ರೇಷ್ಠ ಸಂವಿಧಾನವೆಂದು ವಿಶ್ವವೇ ಹೇಳಿತು, ಸೂರ್ಯ ಚಂದ್ರ ಇರುವವರೆಗೂ ಅವರು ನೀಡಿರುವ ಕೊಡುಗೆಗಳು ಮತ್ತು ಸಾಧನೆ ಅಜರಾಮರ, ತುಳಿತಕ್ಕೊಳಗಾದವರಿಗೆ ಶಕ್ತಿ ತುಂಬುವ ಕೆಲಸವನ್ನು ಬಾಬಾ ಸಾಹೇಬ್ ಮಾಡಿದ್ದಾರೆ ಎಂದು ತಿಳಿಸಿದರು.…

Read More