ಬೆಂಗಳೂರು: ರಾಜ್ಯದ ಸಾಮಾಜಿಕ, ಶೈಕ್ಷಣಿಕ ವರದಿ ಬಗ್ಗೆ ರಾಜ್ಯದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದ್ದು, ಒಕ್ಕಲಿಗ-ಲಿಂಗಾಯತ ಸಮುದಾಯದಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಏ.17ರಂದು ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿಯ ಬಗ್ಗೆ ಚರ್ಚಿಸಲೆಂದೇ ಕರೆಯಲಾಗಿದೆ. ಚರ್ಚೆ ಮಾಡಿದ ನಂತರ ಈ ಬಗ್ಗೆ ಮಾತನಾಡುವುದಾಗಿ ಹೇಳಿದ್ದಾರೆ. ಜಾತಿಗಣತಿ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. ಸುದೀರ್ಘ ವಾದ ವರದಿ ಬಂದಿರುವ ಹಿನ್ನೆಲೆಯಲ್ಲಿ ನ.17ರ ಸಂಪುಟ ಸಭೆಯಲ್ಲಿ ಕೂಲಂಕಶ ಚರ್ಚೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. https://www.youtube.com/watch?v=UMfctdL1BwA
Author: Author AIN
ಶಿವಮೊಗ್ಗ: ಅನುಮಾನಾಸ್ಪದವಾಗಿ ಉದ್ಯಮಿಯ ಶವ ಪತ್ತೆಯಾಗಿರುವ ಘಟನೆ ನಗರದ ಬಿಹೆಚ್ ರಸ್ತೆಯ ಲಾಡ್ಜ್ ಒಂದರಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಬಸವರಾಜ್ (50) ಮೃತ ದುರ್ಧೈವಿಯಾಗಿದ್ದು, ಏ.10 ರಂದು ಅವರು ಲಾಡ್ಜ್ನಲ್ಲಿ ರೂಮ್ ಮಾಡಿದ್ದರು. ರೂಮ್ನಿಂದ ಹೊರ ಬರದ ಕಾರಣ ಲಾಡ್ಜ್ ಸಿಬ್ಬಂದಿ ಅನುಮಾನದಿಂದ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಸಮ್ಮುಖದಲ್ಲಿ ರೂಮ್ ಬಾಗಿಲು ಒಡೆದಾಗ, ಬಾತ್ ರೂಮ್ನಲ್ಲಿ ಅವರ ಶವ ಪತ್ತೆಯಾಗಿದೆ. https://ainkannada.com/girls-are-you-also-using-medimix-soap-this-is-definitely-not-for-you/ ಬಸವರಾಜ್ ಆಟೋ ಮೊಬೈಲ್ಸ್ ವ್ಯವಹಾರ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಚಿತ್ರ ಹಂಚಿಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದಲ್ಲಿ ಪ್ಲಾಸ್ಟಿಕ್ ಉದ್ಯಮವು ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ ಅದರ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ನೀಲಿ ಪ್ಲಾಸ್ಟಿಕ್ ಡ್ರಮ್ಗಳನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಡ್ರಮ್ಗಳನ್ನು ಹೇಗೆ ತಯಾರಿಸಲಾಗುತ್ತದೆ? ಅವುಗಳಲ್ಲಿ ಯಾವ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ? ಇವುಗಳನ್ನು ಯಾವ ಕಂಪನಿಗಳು ತಯಾರಿಸುತ್ತವೆ? ಅವುಗಳ ಬೆಲೆ ಎಷ್ಟು? ಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ. ಈ ಡ್ರಮ್ ಯಾವುದರಿಂದ ಮಾಡಲ್ಪಟ್ಟಿದೆ? ಐಟಿಪಿ ಪ್ಯಾಕೇಜಿಂಗ್ ಪ್ರಕಾರ, ಈ ಡ್ರಮ್ಗಳನ್ನು HDPE (ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್) ಎಂಬ ವಿಶೇಷ ಪ್ಲಾಸ್ಟಿಕ್ನಿಂದ ತಯಾರಿಸಲಾಗುತ್ತದೆ. HDPE ಒಂದು ಬಲವಾದ, ಬಾಳಿಕೆ ಬರುವ, ರಾಸಾಯನಿಕವಾಗಿ ಸ್ಥಿರವಾದ ಪ್ಲಾಸ್ಟಿಕ್ ಆಗಿದೆ. ಇದು ಅನೇಕ ವಸ್ತುಗಳೊಂದಿಗೆ ಪ್ರತಿಕ್ರಿಯಿಸುವುದಿಲ್ಲ. https://ainkannada.com/girls-are-you-also-using-medimix-soap-this-is-definitely-not-for-you/ ಇದು ಆಹಾರ, ಔಷಧಿಗಳು, ರಾಸಾಯನಿಕಗಳು ಮತ್ತು ಅಪಾಯಕಾರಿ ತ್ಯಾಜ್ಯವನ್ನು ಸಂಗ್ರಹಿಸಲು ಸೂಕ್ತವಾಗಿದೆ. HDPE ಡ್ರಮ್ಗಳನ್ನು ವಿಶೇಷ ಮೋಲ್ಡಿಂಗ್ ಯಂತ್ರಗಳ ಸಹಾಯದಿಂದ ತಯಾರಿಸಲಾಗುತ್ತದೆ. ಇದು ಅವುಗಳನ್ನು ಏಕರೂಪದ, ದುಂಡಗಿನ ಆಕಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಕ್ರಿಯೆಯು ಅವುಗಳ ವೆಚ್ಚವನ್ನು…
ಪಿಎಸ್ಎಲ್ ಐಪಿಎಲ್ ಜೊತೆ ಸ್ಪರ್ಧಿಸಲು ಪ್ರಯತ್ನಿಸುತ್ತಿದೆ. ಅದು ಐಪಿಎಲ್ ಅನ್ನು ಎಲ್ಲಾ ರೀತಿಯಲ್ಲಿ ನಕಲು ಮಾಡುವ ಮೂಲಕ ಅದನ್ನು ಅಪಹಾಸ್ಯ ಮಾಡುತ್ತಿದೆ. ಐಪಿಎಲ್ ಸಮಯದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನಡೆಯುತ್ತಿರುವುದು ಇದೇ ಮೊದಲು. ಆದರೆ, ಈ ಲೀಗ್ ನಿರೀಕ್ಷೆಯಂತೆ ಪ್ರಭಾವಶಾಲಿಯಾಗಿಲ್ಲ. ಏಪ್ರಿಲ್ 11 ರಂದು ಪ್ರಾರಂಭವಾದ ಪಾಕಿಸ್ತಾನ ಸೂಪರ್ ಲೀಗ್ನ 10 ನೇ ಆವೃತ್ತಿಯು ಪ್ರೇಕ್ಷಕರ ಕೊರತೆಯನ್ನು ಎದುರಿಸಿತು. ಈ ಲೀಗ್ನಲ್ಲಿ ಕೆಲವು ಸ್ಟಾರ್ ಕ್ರಿಕೆಟಿಗರು ಆಡುತ್ತಿದ್ದರೂ, ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುತ್ತಿಲ್ಲ. ಹೀಗಾಗಿ, ಈ ಲೀಗ್ ನಷ್ಟದಲ್ಲಿ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಮತ್ತೊಂದು ವಿಡಿಯೋ ಮೂಲಕ ಪಾಕಿಸ್ತಾನಕ್ಕೆ ಅವಮಾನ ಮಾಡಲಾಗಿದೆ. ಇದರೊಂದಿಗೆ ನೆಟಿಜನ್ಗಳು ಪಾಕಿಸ್ತಾನ ಸೂಪರ್ ಲೀಗ್ ಅನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದರು. https://ainkannada.com/girls-are-you-also-using-medimix-soap-this-is-definitely-not-for-you/ ಪಾಕಿಸ್ತಾನ ಸೂಪರ್ ಲೀಗ್ 2025 ರ ಮೂರನೇ ಪಂದ್ಯವು ಮುಲ್ತಾನ್ ಸುಲ್ತಾನ್ಸ್ ಮತ್ತು ಕರಾಚಿ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ ಪರ ಮೊಹಮ್ಮದ್ ರಿಜ್ವಾನ್ 63 ಎಸೆತಗಳಲ್ಲಿ 105…
ವಿಜಯಪುರ: ಜಾತಿಗಣತಿ ಮುಂದಿಟ್ಟಿಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸೋಕೆ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಇಳಿಸೋಕೆ ಪ್ಲಾನ್ ನಡೆದಿದೆ. ಹಾಗೇ ನನ್ನ ಉಚ್ಚಾಟನೆ ಹಿಂದೆಯೂ ಷಡ್ಯಂತ್ರ ಇದೆ. ನನ್ನ ಉಚ್ಚಾಟನೆ ಹಿಂದೆ ಕಾಂಗ್ರೆಸ್ ಮಹಾನಾಯಕ ಇದ್ದಾನೆ. ಕಾಂಗ್ರೆಸ್ ಒಡೆದು ಬರ್ತಿವಿ ಎಂದು ಭರವಸೆ ಕೊಟ್ಟ ಬಳಿಕ ನನ್ನ ಉಚ್ಚಾಟನೆ ಆಗಿದೆ ಎಂದು ಯತ್ನಾಳ್ ಹೊಸ ಬಾಂಬ್ ಹಾಕಿದ್ದಾರೆ. ಯತ್ನಾಳ್ ಪಕ್ಷದಲ್ಲಿ ಇರೋತನ ಬರೋಕೆ ಆಗೋದಿಲ್ಲ. ಯತ್ನಾಳ್ ಕಟ್ಟಾ ಹಿಂದೂ, ಅವನನ್ನ ಹೊರಹಾಕುವ ವರೆಗೂ ಬರೊಲ್ಲ ಎಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ. ಆದ್ರೆ ಅದು ಫೇಲ್ ಆಗಿದೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಇದೆ. ಮಹಾನಾಯಕನ ಹಿಂದೆ ಯಾರಿಲ್ಲ ಎಂದು ಕೈ ಬಿಟ್ಟಿದ್ದಾರೆ. ಆ ಮಹಾನಾಯಕ ಹಿಂದೆ 10 ಜನ ಶಾಸಕರು ಇಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದು ಟಚ್ ಈಜಿ ಇಲ್ಲ ಸಿದ್ದರಾಮಯ್ಯ…
ಬ್ಯಾಂಕ್ ವಂಚನೆ ಪ್ರಕರಣ ಮತ್ತು ದೇಶ ಬಿಟ್ಟು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಸಿಬಿಐ ಕೋರಿಕೆಯ ಮೇರೆಗೆ ಬೆಲ್ಜಿಯಂ ಪೊಲೀಸರು ಅವರನ್ನು ಬಂಧಿಸಿದರು. 2018 ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನ್ನು ಮುಳುಗಿಸಿದ ಹಗರಣ ಬೆಳಕಿಗೆ ಬಂದಾಗ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ದೇಶದಿಂದ ಪಲಾಯನ ಮಾಡಿದರು. ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾಗೆ ಪಲಾಯನ ಮಾಡಿದರೆ, ನೀರವ್ ಮೋದಿ ಬ್ರಿಟಿಷ್ ಜೈಲಿನಲ್ಲಿದ್ದಾರೆ. ಅವರನ್ನು ಮರಳಿ ಕರೆತರಲು ಭಾರತ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ಬೆಲ್ಜಿಯಂಗೆ ಪಲಾಯನ ಮಾಡಿದರು. ಆದರೆ, ಇತ್ತೀಚೆಗೆ ಬೆಲ್ಜಿಯಂ ಸರ್ಕಾರ ಚೋಕ್ಸಿ ತಮ್ಮ ದೇಶದಲ್ಲಿದ್ದಾರೆ ಎಂದು ಘೋಷಿಸಿತು. ಇದರ ಪರಿಣಾಮವಾಗಿ ಅವರನ್ನು ಬಂಧಿಸಲು ಸಿಬಿಐ ಪ್ರಯತ್ನಗಳು ಆರಂಭವಾದವು. ಬೆಲ್ಜಿಯಂನಲ್ಲಿ ಪೊಲೀಸ್ ವಶದಲ್ಲಿರುವ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಪೊಲೀಸರು ಪ್ರಯತ್ನಗಳನ್ನು ಪ್ರಾರಂಭಿಸಿರುವಂತೆ ತೋರುತ್ತಿದೆ. https://ainkannada.com/girls-are-you-also-using-medimix-soap-this-is-definitely-not-for-you/ 2018 ರಲ್ಲಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,000 ಕೋಟಿ…
ಮುಂಬೈ: ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (59) ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಕರೆ ಬಂದಿದೆ. ಈ ಬಾರಿ ದಾಳಿಕೋರರು ಸಲ್ಮಾನ್ ಅವರ ಕಾರನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವುದು ಗಮನಾರ್ಹ. ಮುಂಬೈ ಪೊಲೀಸ್ ಸಂಚಾರ ಇಲಾಖೆಯ ವಾಟ್ಸಾಪ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಗಳು ಈ ಕುರಿತು ಸಂದೇಶ ಕಳುಹಿಸಿದ್ದಾರೆ. ಆ ಸಂದೇಶದಲ್ಲಿ ಸಲ್ಮಾನ್ ಮನೆಗೆ ನುಗ್ಗಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿಯೂ ಹೇಳಲಾಗಿತ್ತು. ಈ ಘಟನೆಯಲ್ಲಿ ಮುಂಬೈ ಪೊಲೀಸರ ದೂರಿನ ಆಧಾರದ ಮೇಲೆ ವರ್ಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಅದರಂತೆ, ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾರಿಗೆ ಇಲಾಖೆಯ ವಾಟ್ಸಾಪ್ ಸಂಖ್ಯೆ ಸಾರ್ವಜನಿಕವಾಗಿರುವುದರಿಂದ, ಯಾರಾದರೂ ಅದರ ಮೇಲೆ ದೂರು ದಾಖಲಿಸಬಹುದು. ಆದ್ದರಿಂದ, ಈ ಸಂಖ್ಯೆಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆಗಳು ಬರುವುದು ಸಾಮಾನ್ಯ ಅಭ್ಯಾಸವಾಗಿದೆ. ಸಲ್ಮಾನ್ಗೆ ಈ ಹಿಂದೆಯೂ ಹಲವು ಬಾರಿ ಇದೇ ರೀತಿಯ ಬೆದರಿಕೆ ಕರೆಗಳು ಬಂದಿದ್ದವು. ಅದಾದ ನಂತರ, ಮುಂಬೈ ಪೊಲೀಸರು ಅವರ…
ರಾಮನಗರ: ಜಾತಿಗಣತಿ ವರದಿಗೆ ಬೆಂಗಳೂರು ಸಂಸದ ಡಾ.ಸಿ ಎನ್ ಮಂಜುನಾಥ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತ ಜ್ಯಾತ್ಯಾತೀತ ರಾಷ್ಟ್ರವಾಗಿದೆ. ಇಲ್ಲಿ ಜಾತಿಗಣತಿಗೆ ಯಾವುದೇ ಮಹತ್ವವಿಲ್ಲ. ಈ ವಿಚಾರವನ್ನ ಜನಾಭಿಪ್ರಾಯಕ್ಕೆ ಬಿಡಬೇಕು ಎಂದು ಹೇಳಿದರು. ಬಾಬಾ ಸಾಹೇಬ್ ಅಂಬೇಡ್ಕರ್ ದೇಶದಲ್ಲಿ ಜಾತಿ ಭಿನ್ನಾಭಿಪ್ರಾಯ ಇರಬಾರದು ಎಂದು ಹೇಳಿದ್ರು. ಸಂವಿಧಾನ ಕೂಡ ಜಾತಿ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತೆ. ಹೀಗಾಗಿ ಜಾತಿಗಣತಿ ಯಾಕೆ ಎಂಬುದು ಗೊತ್ತಿಲ್ಲ. ಈ ವಿಚಾರವನ್ನ ಜನಾಭಿಪ್ರಾಯಕ್ಕೆ ಬಿಡಬೇಕು ಎಂದರು. ಭಾರತ ಜ್ಯಾತ್ಯಾತೀತ ರಾಷ್ಟ್ರವಾಗಿದೆ. ಜಾತಿಗಣತಿಗೆ ಯಾವುದೇ ಮಹತ್ವವಿಲ್ಲ. https://ainkannada.com/bidar-airport-flight-services-to-start-from-tomorrow-cm-sidhu-to-issue-boarding-passes-on-april-17/ ಸಾಮಾಜಿಕ, ಶೈಕ್ಷಣಿಕವಾಗಿ ಬಂದ ಗಣತಿಯನ್ನ ಜಾತಿಗೆ ಹೋಲಿಕೆ ಮಾಡಬಾರದು. ಸಂವಿಧಾನ ಎಲ್ಲ ಜಾತಿ ಒಂದೇ ಎಂದು ಹೇಳುವಾಗ ಜಾತಿಗಣತಿ ಯಾಕೆ ಬೇಕು. ಇದರಿಂದ ಜಾತಿಜಾತಿಗಳ ನಡುವೆ ವೈಮನಸ್ಸು, ಕಂದಕಗಳು ಇನ್ನು ಜಾಸ್ತಿ ಆಗುತ್ತದೆ. ಎಲ್ಲಾ ಜಾತಿಗಳಲ್ಲೂ ಬಡವರು ಇದ್ದಾರೆ. ಜಾತಿಗಣತಿ ವಿಧಾನಸಭೆ, ವಿಧಾನಪರಿಷತ್ ನಲ್ಲಿ ಚರ್ಚೆ ಆಗಬೇಕು. ಸಾಮಾಜಿಕ ಕಳಕಳಿ, ತಜ್ಞರ ಜೊತೆ ಚರ್ಚೆ ಆಗಬೇಕು. ಆತುರದ ನಿರ್ಧಾರದ ಸರಿ…
ವಿಜಯಪುರ: ಸಿದ್ದರಾಮಯ್ಯರನ್ನು ಟಚ್ ಮಾಡೋದು ಸುಲಭವಲ್ಲ ಎಂದು ಸಿದ್ದರಾಮಯ್ಯ ಪರ ಶಾಸಕ ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಇಳಿಸ್ತೀನಿ ಅನ್ನೋದು ಅಷ್ಟು ಸುಲಭವಿಲ್ಲ, ಅವರನ್ನ ಟಚ್ ಮಾಡೋಕೂ ಇವನಿಗೆ ಆಗೋದಿಲ್ಲ. ಕಾಂಗ್ರೆಸ್ ಪಕ್ಷದ ಕೊನೆಯ ಮೊಳೆ ಸಿದ್ದರಾಮಯ್ಯ, ಅವರ ಹಿಂದೆ ಎಲ್ಲ ಶಾಸಕರು ಇದ್ದಾರೆ ಎಂದು ಸಿದ್ದರಾಮಯ್ಯ ಪರ ಶಾಸಕ ಯತ್ನಾಳ್ ಬ್ಯಾಟ್ ಬೀಸಿದ್ದಾರೆ. https://ainkannada.com/girls-are-you-also-using-medimix-soap-this-is-definitely-not-for-you/ ಇನ್ನೂ ಯತ್ನಾಳ್ ಪಕ್ಷದಲ್ಲಿ ಇರೋತನ ಅವರಿಗೆ ಬರೋಕೆ ಆಗೋದಿಲ್ಲ. ಯತ್ನಾಳ್ ಕಟ್ಟಾ ಹಿಂದೂ ಅವನನ್ನ ಹೊರಹಾಕುವವರೆಗೂ ಬರೊಲ್ಲ ಎಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಇದೆ. ಆದ್ರೆ ಅದು ಫೇಲ್ ಆಗಿದೆ ಏಕೆಂದರೆ ಆ ಮಹಾನಾಯಕನ ಹಿಂದೆ ಯಾರಿಲ್ಲ ಎಂದು ಗೊತ್ತಾಗಿ ಕೈ ಬಿಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಬೀದರ್: ರಾಜ್ಯದ ತುತ್ತತುದಿಯ ಗಡಿ ಜಿಲ್ಲೆ ಬೀದರ್ ನ ವಿಮಾನ ನಿಲ್ದಾಣಕ್ಕೆ ಕೊನೆಗೂ ಮುಕ್ತಿ ಸಿಗಲು ಕ್ಷಣಗಣನೆ ಆರಂಭವಾಗಿದೆ. ಈ ಮೂಲಕ ಗಡಿ ಜಿಲ್ಲೆ ಜನರ ದಶಕಗಳ ಕನಸು ನಾಳೆ ನನಸಾಗಲಿದೆ. ನಾಳೆಯಿಂದ ಬೀದರ್ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಯಾನ ಸೇವೆ ಆರಂಭವಾಗಲಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಏ.16ರಂದು ಬೀದರ್ ಬರಲಿದ್ದು, ಏ.17ರ ಬೆಳಿಗ್ಗೆ ಐದು ಜನ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ವಿತರಿಸಿ ವಿಮಾನ ಸಂಚಾರಕ್ಕೆ ಚಾಲನೆ ನೀಡುವರು. ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಕನಸು ಬೀದರ್ ಏರ್ಪೋರ್ಟ್. ದಶಕಗಳ ಕಾಲ ನಡೆದ ಕಾಮಾಗಾರಿ ಪೂರ್ಣಗೊಂಡಿದ್ದು, ಮುಂಬೈ, ಬೆಂಗಳೂರು, ಹೈದರಾಬಾದ್, ದೆಹಲಿಗೆ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಬುಧವಾರ ಬೀದರ್ ಗೆ ಬರಲಿರುವ ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಏ.16ರ ಸಂಜೆ 4ಕ್ಕೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ…