ರೆಕಾರ್ಡ್, ರೆಕಾರ್ಡ್, ರೆಕಾರ್ಡ್ ಅಂತಾ ಹಳೆ ದಾಖಲೆಗಳೆಲ್ಲವನ್ನೂ ಧೂಳಿಪಟ ಮಾಡಿದ ಕೆಜಿಎಫ್ 2 ಸಿನಿಮಾಗೆ 3 ವರ್ಷದ ಸಂಭ್ರಮ. 1000 ಕೋಟಿ ಲೂಟಿ ಮಾಡಿ ಬಾಕ್ಸಾಫೀಸ್ ಅಂಗಳದಲ್ಲಿ ಹೊಸ ದಾಖಲೆ ಬರೆದ ಚಾಪ್ಟರ್ 2 ನಲ್ಲಿ ರಾಕಿ ವರ್ಸಸ್ ಅಧೀರನ ಕಾಳಗ ಎಲ್ಲರಿಗೂ ಥ್ರಿಲ್ ಕೊಟ್ಟಿತ್ತು. ಪ್ರಶಾಂತ್ ನೀಲ್ ಟೇಕಿಂಗ್, ಯಶ್ ಟೇಕಿಂಗ್ ಗೆ ಇಡೀ ಇಂಡಸ್ಟ್ರೀಗೆ ಸಲಾಂ ಹೊಡೆದಿತ್ತು. ಭಾರತೀಯ ಚಿತ್ರರಂಗದ ಹೊಸ ಇತಿಹಾಸ ಸೃಷ್ಟಿಸಿ ಕೆಜಿಎಫ್ 2ಗೆ 3 ವರ್ಷದ ಸಂಭ್ರಮದಲ್ಲಿ ಹೊಂಬಾಳೆ ಸ್ಪೆಷಲ್ ವಿಡಿಯೋ ರಿವೀಲ್ ಮಾಡಿದೆ. ಈ ವಿಡಿಯೋದಲ್ಲಿ ಸಿನಿಮಾಪ್ರೇಮಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೆಜಿಎಫ್ 3 ಬಗ್ಗೆ ಹೊಂಬಾಳೆ ಸುಳಿವು ಕೊಟ್ಟಿದೆ. ಕೆಜಿಎಫ್ 2 ಸಿನಿಮಾಗೆ ಭರ್ತಿ 3 ವರ್ಷ ತುಂಬಿರುವ ಸಮಯದಲ್ಲಿ ಹೊಂಬಾಳೆ ಹಂಚಿಕೊಂಡಿರುವ ವಿಡಿಯೋದಲ್ಲಿ ಕೆಜಿಎಫ್ ಚಾಪ್ಟರ್ 3 ಬಗ್ಗೆ ಇಂಟ್ ಕೊಡಲಾಗಿದೆ. ಆದ್ರೆ ಸದ್ಯಕ್ಕೆ ಕೆಜಿಎಫ್ 3 ಬರೋದು ಅಸಾಧ್ಯ. ಯಾಕೆಂದರೆ ಪ್ರಶಾಂತ್ ನೀಲ್ ಜೂನಿಯರ್ ಎನ್ ಟಿಆರ್ ಜೊತೆ…
Author: Author AIN
ಫ್ಲೋರಿಡಾದ ಮಿಯಾಮಿಯಲ್ಲಿ ನಡೆದ ಯುಎಫ್ಸಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಭ್ರಮಿಸಿದರು. ಅಭಿಮಾನಿಗಳು ಟ್ರಂಪ್ ಕ್ಯಾಪ್ ಧರಿಸಿ ಭವ್ಯ ಸ್ವಾಗತ ನೀಡಿದಾಗ, ಟ್ರಂಪ್ ತಮ್ಮದೇ ಆದ ಶೈಲಿಯಲ್ಲಿ ಅಭಿಮಾನಿಗಳೊಂದಿಗೆ ಕೈಕುಲುಕಿದರು. ಅವರ ಜೊತೆಗೆ ಎಲಾನ್ ಮಸ್ಕ್, ರಾಬರ್ಟ್ ಎಫ್. ಕೆನಡಿ, ಕಾಶ್ ಪಟೇಲ್, ಮಾರ್ಕೊ ರುಬಿಯೊ, https://x.com/MargoMartin47/status/1911250759250812940?ref_src=twsrc%5Etfw%7Ctwcamp%5Etweetembed%7Ctwterm%5E1911250759250812940%7Ctwgr%5E55c5cc86460724afce6d198f84c2e58170b0c208%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fwatch-donald-trumps-dance-moves-at-ufc-event-in-miami-8153781 ತುಳಸಿ ಗಬ್ಬಾರ್ಡ್, ಟ್ರಂಪ್ ಮೊಮ್ಮಗಳು ಕೇ ಟ್ರಂಪ್ ಮತ್ತು ಇತರರು ಸದ್ದು ಮಾಡಿದರು. ಟ್ರಂಪ್ ಅವರು ಅಖಾಡಕ್ಕೆ ಪ್ರವೇಶಿಸುತ್ತಿದ್ದಂತೆ ಜನಸಮೂಹ ಎದ್ದು ನಿಂತು ಚಪ್ಪಾಳೆ ತಟ್ಟಿತು. ಅವರೊಂದಿಗೆ ಯುಎಫ್ಸಿ ಸಿಇಒ ಡಾನಾ ವೈಟ್ ಇದ್ದರು. ಏತನ್ಮಧ್ಯೆ, ನೃತ್ಯದ ವಿಡಿಯೋ ವೈರಲ್ ಆಗುತ್ತಿದೆ. https://ainkannada.com/girls-are-you-also-using-medimix-soap-this-is-definitely-not-for-you/ ಟ್ರಂಪ್ ಅವರ ಪ್ರದರ್ಶನಕ್ಕೆ ಜೋರಾದ ಹರ್ಷೋದ್ಗಾರಗಳು ವ್ಯಕ್ತವಾದವು. ಇದು ಯುವ ಪುರುಷ ಮತದಾರರಲ್ಲಿ ಅವರ ಜನಪ್ರಿಯತೆಯನ್ನು ಎತ್ತಿ ತೋರಿಸಿತು. ಅವರ ಕುಟುಂಬ ಮತ್ತು ಪ್ರಮುಖ ಸಹಾಯಕರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟ್ರಂಪ್ ಅಧಿಕಾರಕ್ಕೆ ಮರಳಿದ ನಂತರ ಅವರು ನಡೆಸುತ್ತಿರುವ ಸಾರ್ವಜನಿಕ ಪ್ರದರ್ಶನಗಳ ಒಂದು ಭಾಗವಾಗಿ ಈ ಕಾರ್ಯಕ್ರಮವಿದೆ.
ಉಕ್ರೇನ್ನ ಕೈವ್ನಲ್ಲಿರುವ ಭಾರತೀಯ ಔಷಧ ಕಂಪನಿಯ ಗೋಡೌನ್ಗೆ ರಷ್ಯಾದ ಕ್ಷಿಪಣಿ ಡಿಕ್ಕಿ ಹೊಡೆದಿದೆ ಎಂದು ಭಾರತದಲ್ಲಿರುವ ಉಕ್ರೇನಿಯನ್ ರಾಯಭಾರ ಕಚೇರಿ ಆರೋಪಿಸಿದೆ. ಭಾರತದೊಂದಿಗೆ ‘ವಿಶೇಷ ಸ್ನೇಹ’ ಹೊಂದಿರುವುದಾಗಿ ಹೇಳಿಕೊಳ್ಳುತ್ತಾ, ಉಕ್ರೇನ್ನಲ್ಲಿರುವ ಭಾರತೀಯ ವ್ಯವಹಾರಗಳನ್ನು ರಷ್ಯಾ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಅದು ಆರೋಪಿಸಿದೆ. ನಾಶವಾದ ಗೋದಾಮು ಉಕ್ರೇನ್ನ ಅತಿದೊಡ್ಡ ಔಷಧ ಕಂಪನಿಗಳಲ್ಲಿ ಒಂದಾದ ಕುಸುಮ್ ಎಂಬ ಔಷಧ ಕಂಪನಿಗೆ ಸೇರಿದೆ. ವರದಿಗಳ ಪ್ರಕಾರ, ಕುಸುಮ್ ಹೆಲ್ತ್ಕೇರ್ ಮಾನವೀಯ ಉದ್ದೇಶಗಳಿಗಾಗಿ ಬಳಸಲು ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಸಂಗ್ರಹಿಸಿದೆ. ಈ ಕಂಪನಿಯು ಭಾರತೀಯ ಉದ್ಯಮಿ ರಾಜೀವ್ ಗುಪ್ತಾ ಅವರ ಒಡೆತನದಲ್ಲಿದೆ. https://ainkannada.com/girls-are-you-also-using-medimix-soap-this-is-definitely-not-for-you/ ” ರಷ್ಯಾದ ಕ್ಷಿಪಣಿಯು ಉಕ್ರೇನ್ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್ನ ಗೋದಾಮಿನ ಮೇಲೆ ಅಪ್ಪಳಿಸಿತು. ಭಾರತದೊಂದಿಗೆ ‘ವಿಶೇಷ ಸ್ನೇಹ’ ಎಂದು ಹೇಳಿಕೊಳ್ಳುತ್ತಾ, ಮಾಸ್ಕೋ ಉದ್ದೇಶಪೂರ್ವಕವಾಗಿ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ. ಮಕ್ಕಳು ಮತ್ತು ವೃದ್ಧರಿಗಾಗಿ ಉದ್ದೇಶಿಸಲಾದ ಔಷಧಿಗಳನ್ನು ಅದು ನಾಶಪಡಿಸುತ್ತಿದೆ” ಎಂದು ಉಕ್ರೇನಿಯನ್ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕೆ ಭಾರತ ಸರ್ಕಾರ ಹೇಗೆ…
ಬೆಂಗಳೂರು: ಪ್ರಸಿದ್ಧ ಕನ್ನಡ ನಟ ಬ್ಯಾಂಕ್ ಜನಾರ್ಧನ್ ಅವರು 76 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇನ್ನೂ ಜನಪ್ರಿಯ ನಟನ ನಿಧನಕ್ಕೆ ಕನ್ನಡ ಚಿತ್ರರಂಗ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. https://ainkannada.com/girls-are-you-also-using-medimix-soap-this-is-definitely-not-for-you/ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ”ಕನ್ನಡ ಚಿತ್ರರಂಗದ ಹಿರಿಯ ನಟರು, ಸುಮಾರು ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅನೇಕ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ಧ ಬ್ಯಾಂಕ್ ಜನಾರ್ಧನ್ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ತಮ್ಮ ಅಭಿನಯದಿಂದ ಪ್ರೇಕ್ಷಕರಲ್ಲಿ ಕಚಗುಳಿಯ ಕಡಲನ್ನೇ ಉಕ್ಕಿಸುತ್ತಿದ್ದ ಜನಾರ್ಧನ್ ಅವರು, ಪ್ರತೀ ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಆ ಪಾತ್ರದ ಮೂಲಕ ಎಲ್ಲರನ್ನೂ ಸಮ್ಮೋಹನಗೊಳಿಸುತ್ತಿದ್ದರು. ಅವರ ನಿಧನ ನಮ್ಮ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.
ತಾಯಿ ಕರುಳೇ ಹಾಗೇ. ತನ್ನ ಮಕ್ಕಳಿಗೆ ಏನಾದ್ರೂ ಸಂಕಷ್ಟ ಎದುರಾದರೇ ಮೊದಲು ಬೇಡಿಕೊಳೋದು ದೇವರನ್ನು. ಕಾಪಾಡಪ್ಪ ತಂದೆ ನನ್ನ ಮಕ್ಕಳನ್ನು ರಕ್ಷಿಸು ಅಂತಾ ಆ ತಾಯಿ ಹೃದಯ ದೇವರಲ್ಲಿ ಮೊರೆ ಇಡುತ್ತಿದ್ದೆ. ಮೊನ್ನೆ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಪುತ್ರ ಸಿಂಗಾಪುರದ ಬೆಂಕಿ ಅವಘಡದಲ್ಲಿ ಸಣ್ಣ ಪುಟ್ಡ ಗಾಯದೊಂದಿಗೆ ಜೀವಪಾಯದಿಂದ ಪಾರಾಗಿದ್ದ. ಸಿಂಗಾಪುರಕ್ಕೆ ತೆರಳಿ ಪವನ್ ಹಾಗೂ ಪತ್ನಿ ಮಗ ಮಾರ್ಕ್ ಶಂಕರ್ ನನ್ನು ವಾಪಸ್ ಇಂಡಿಯಾಗೆ ಕರೆದು ತಂದಿದ್ದರು. ಮಗ ತಾಯ್ನಾಡಿಗೆ ಬಂದಿಳಿಯುತ್ತಿದ್ದಂತೆ ಅನ್ನಾ ಜಿನೇವಾ ಪುತ್ರನ ಆರೋಗ್ಯ ಕ್ಷೇಮಕ್ಕಾಗಿ ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟಿದ್ದಾರೆ. ಪುತ್ರ ಮಾರ್ಕ್ ಶಂಕರ್ ಅಗ್ನಿ ಅವಘಡದಲ್ಲಿ ಸಿಲುಕಿ ಗಾಯಗೊಂಡಿದ್ದರಿಂದ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ತಿರುಪತಿ ತಿಮ್ಮಪ್ಪನ ಬಳಿ ಹರಕೆಯನ್ನ ಹೊತ್ತುಕೊಂಡಿದ್ದರಂತೆ. ಹೀಗಾಗಿ ಸಿಂಗಾಪುರದಿಂದ ಭಾರತಕ್ಕೆ ಹಿಂತಿರುಗುತ್ತಿದ್ದಂತೆ ತಿರುಮಲಕ್ಕೆ ಬಂದು ಮುಡಿ ನೀಡಿ ಹರಕೆ ತೀರಿಸಿದ್ದಾರೆ. ಇಂದು ಬೆಳಗ್ಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ, ತಮ್ಮ ಮಗನ ರಕ್ಷಣೆ ಮಾಡುವಂತೆ…
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ 134ನೇ ಜನ್ಮದಿನ ಆಚರಣೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಮಂಡ್ಯದ ಡಿಸಿ ಕಚೇರಿ ಎದುರಿನ ಕಾವೇರಿವನದಲ್ಲಿರವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶಾಸಕ ಗಣಿಗ ರವಿಕುಮಾರ್ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು. ಬಳಿಕ ಬೆಳ್ಳಿರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆಗೆ ಗಣಿಗ ರವಿಕುಮಾರ್ ಚಾಲನೆ ಕೊಟ್ಟರು. ಮೆರವಣೆಗೆಯಲ್ಲಿ ಯುವಕ, ಯುವತಿಯರು ಸಂವಿಧಾನ ಪೀಠಿಕೆ ಹಿಡಿದು ಸಾಗಿದರು. ನಗರದ ಪ್ರಮುಖ ರಸ್ತೆಯಲ್ಲಿ ನಡೆದ ಮೆರವಣಿಗೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಿಇಓ ನಂದಿನಿ, ಮುಡಾ ಅಧ್ಯಕ್ಷ ನಹೀಮ್ ಸೇರಿ ಹಲವರು ಭಾಗಿಯಾಗಿದ್ರು.. ಬಳಿಕ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜನೆ ಮಾಡಿದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಜ್ಯೋತಿ ಬೆಳಗುವ ಮೂಲಕ ಸಚಿವ ಎನ್.ಚಲುವರಾಯಸ್ವಾಮಿ. ಉದ್ಘಾಟಿಸಿದರು. https://www.youtube.com/watch?v=FcmXnywUlbs
ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಾಲಕಿಯ ಹತ್ಯೆ ಹಾಗೂ ಎನ್ಕೌಂಟರ್ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಹೊರ ರಾಜ್ಯಗಳಿಂದ ಬಂದವರಿಂದಲೇ ಕರ್ನಾಟಕದಲ್ಲಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ ಎಂದಿದ್ದಾರೆ. ಬೆಂಗಳೂರಿಗೆ ಹೊರರಾಜ್ಯಗಳಿಂದ ಸಾಕಷ್ಟು ಜನ ಬರುತ್ತಾರೆ. ಹೀಗೆ ಹೊರಗಿನಿಂದ ಬಂದವರು ಇಲ್ಲಿನ ಸಂಸ್ಕೃತಿ ತಿಳಿದುಕೊಳ್ಳಲ್ಲ. ಇಲ್ಲಿನ ಜನರ ಭಾವನೆ ಅರ್ಥ ಮಾಡಿಕೊಳ್ಳದೆ ಈ ರೀತಿ ವರ್ತಿಸುತ್ತಾರೆ ಎಂದು ಹೇಳಿದ್ದಾರೆ. https://ainkannada.com/girls-are-you-also-using-medimix-soap-this-is-definitely-not-for-you/ ಹೊರರಾಜ್ಯಗಳಿಂದ ಬಂದವರಿಂದಲೇ ಹೆಚ್ಚು ಅಪರಾಧ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಹೆಚ್ಚು ಕಡೆಗಳಲ್ಲಿ ಕಟ್ಟಡ ಕಾರ್ಮಿಕರಿಂದಲೇ ಅಪರಾಧ ಕೃತ್ಯಗಳು ನಡೆಯುವುದು ಕಂಡುಬರುತ್ತಿದೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಭೆ ನಡೆಸುತ್ತೇವೆ. ಕಾರ್ಮಿಕ ಇಲಾಖೆ ಜೊತೆ ನಾವು ಜಂಟಿಯಾಗಿ ಸಭೆ ನಡೆಸುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರರಂಗಕ್ಕೆ ಬಂದು 10 ವರ್ಷ ಕಳೆದಿದೆ. ದಶಕ ಕಳೆದರೂ ರಚಿತಾ ಇಂದಿಗೂ ಬಹುಬೇಡಿಕೆ ನಟಿ. ದರ್ಶನ್, ಸುದೀಪ್ ನಂತಹ ಟಾಪ್ ಹೀರೋ ಜೊತೆ ನಟಿಸಿ ಸೈ ಎನಿಸಿಕೊಂಡಿರುವ ಬುಲ್ ಬುಲ್ ಬೊಂಬೆಗೆ 32 ವಯಸ್ಸು. ಹೀಗಾಗಿ ರಚ್ಚುಗೆ ಹೋದಲ್ಲಿ ಬಂದಿಲ್ಲ ಮದುವೆ ಬಗ್ಗೆ ಪ್ರಶ್ನೆಗಳು ತೂರಿ ಬರ್ತಾವೆ. ನಿಮ್ಮ ಮದುವೆ ಯಾವಾಗ? ಈ ವರ್ಷನಾ? ಕೈ ಹಿಡಿಯುವ ಹುಡ್ಗ ಹೇಗೆ ಇರಬೇಕು ಅಂತಾ ರಚಿತಾ ಮಾತ್ರ ಈ ಬಗ್ಗೆ ಸ್ವಲ್ಪವೂ ಗುಟ್ಟುಬಿಟ್ಟು ಕೊಟ್ಟಿಲ್ಲ. ಆದರೆ ರಚ್ಚು ಮದುವೆ ಬಗ್ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ರೇಜಿಯೆಸ್ಟ್ ನ್ಯೂಸ್ ಕೊಟ್ಟಿದ್ದಾರೆ. ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಲ್ಲಿ ರಚಿತಾ ರಾಮ್, ರವಿಚಂದ್ರನ್ ಜಡ್ಟ್ ಗಳಾಗಿ ಹೊಸಬರಿಗೆ ನಟನೆ ಬಗ್ಗೆ ಗೈಡ್ ಮಾಡುತ್ತಿದ್ದಾರೆ. ಈ ವೇದಿಕೆಗೆ ಮೊನ್ನೆಯಷ್ಟೇ ವಿದ್ಯಾಪತಿ ಚಿತ್ರತಂಡ ಎಂಟ್ರಿ ಕೊಟ್ಟಿತ್ತು. ಚಿತ್ರದ ನಿರ್ಮಾಪಕ ಧನಂಜಯ್ ಕೂಡ ತಮ್ಮ ಪ್ರಚಾರದ ಕಾರ್ಯಕ್ಕೆ ಜೀ ವೇದಿಕೆ ಏರಿದ್ದರು.…
ಭಾರತೀಯ ಕ್ರಿಕೆಟ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ತಮ್ಮ ಸ್ಪಷ್ಟ ದೃಷ್ಟಿಕೋನದಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜರ್ಮನ್ ಕ್ರೀಡಾ ಉಡುಪು ಬ್ರ್ಯಾಂಡ್ ಪೂಮಾದಿಂದ 300 ಕೋಟಿ ರೂಪಾಯಿಗಳ ಲಾಭದಾಯಕ ಕೊಡುಗೆಯನ್ನು ಅವರು ತಿರಸ್ಕರಿಸಿದ್ದು ಕ್ರಿಕೆಟ್ ಪ್ರಿಯರನ್ನು ಮಾತ್ರವಲ್ಲದೆ ವ್ಯಾಪಾರ ಸಮುದಾಯವನ್ನೂ ಅಚ್ಚರಿಗೊಳಿಸಿತು. ಪೂಮಾ ಜೊತೆಗಿನ ಎಂಟು ವರ್ಷಗಳ ಪಾಲುದಾರಿಕೆಯಿಂದ ವಿರಾಮ ತೆಗೆದುಕೊಂಡಿರುವ ಕೊಹ್ಲಿ, ತಮ್ಮದೇ ಆದ ಬ್ರ್ಯಾಂಡ್ ‘ಒನ್8’ ಅನ್ನು ಜಾಗತಿಕವಾಗಿ ಪ್ರಚಾರ ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ೨೦೧೭ ರಲ್ಲಿ ೧೧೦ ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಪೂಮಾ ಜೊತೆ ಬ್ರಾಂಡ್ ರಾಯಭಾರಿಯಾಗಿ ಉಳಿದಿದ್ದ ಕೊಹ್ಲಿ, ಈಗ ಅದರ ಮೂರು ಪಟ್ಟು ಮೌಲ್ಯದ ಹೊಸ ಒಪ್ಪಂದವನ್ನು ತಿರಸ್ಕರಿಸಿದ್ದಾರೆ, ಇದಕ್ಕೆ ಕಾರಣ ತಮ್ಮದೇ ಆದ ಬ್ರಾಂಡ್ ನಿರ್ಮಾಣ ದೃಷ್ಟಿಕೋನ. ಈ ನಿರ್ಧಾರದಿಂದ ಕೊಹ್ಲಿ ತಮ್ಮದೇ ಆದ ಬ್ರ್ಯಾಂಡ್ ಅಭಿವೃದ್ಧಿಪಡಿಸಲು ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಪೂಮಾ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ ಸಹ-ಸ್ಥಾಪಿಸಿದ ಕ್ರೀಡಾ ಉಡುಪು ಕಂಪನಿ ‘ಅಜಿಲಿಟಾಸ್’ ಜೊತೆ…
ಹುಬ್ಬಳ್ಳಿ: ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದಲ್ಲಿ ಮನೆಗಳ ಯಾವುದೇ ಅಭಿವೃದ್ಧಿ ಆಗಿಲ್ಲ. ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಈ ಹಿಂದೆ ನಾವೇ ಮಂಜೂರು ಮಾಡಿರುವ ಮನೆ ನಿರ್ಮಾಣ ಮಾಡಲು 8 ವರ್ಷ ಬೇಕಾಯಿತು ಎಂದು ಕಿಡಿಕಾರಿದರು. https://ainkannada.com/girls-are-you-also-using-medimix-soap-this-is-definitely-not-for-you/ ಮುಂದಿನ ತಿಂಗಳು ರಾಜ್ಯ ವ್ಯಾಪ್ತಿಯಲ್ಲಿ ಒಟ್ಟು 42 ಸಾವಿರ ಮನೆಗಳನ್ನು ನೀಡುತ್ತಿದ್ದೇವೆ. ಹುಬ್ಬಳ್ಳಿ ಒಂದಕ್ಕೆ ಒಂದು ಸಾವಿರಕ್ಕೂ ಅಧಿಕ ಮನೆ ನೀಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಈ ತಿಂಗಳ ಅಂತ್ಯದಲ್ಲಿ ಹುಬ್ಬಳ್ಳಿಯಲ್ಲಿ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ ಎಂದರು.