ರಶ್ಮಿಕಾ ಮಂದಣ್ಣ ಹ್ಯಾಟ್ರಿಕ್ ಗೆಲುವು ಬಳಿಕ ಸಿಕಂದರ್ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಪುಷ್ಪ, ಅನಿಮಲ್ ಹಾಗೂ ಛಾವಾ ರೀತಿ ಸಿಕಂದರ್ ಸೂಪರ್ ಡೂಪರ್ ಹಿಟ್ ಆಗುತ್ತೇ ಎಂಬ ಭರವಸೆ ಸುಳ್ಳಾಗಿದೆ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಪ್ರೇಕ್ಷಕರಿಂದ ಸೈ ಎನಿಸಿಕೊಳ್ಳುವಲ್ಲಿ ಸೋತಿದೆ. ಇದು ರಶ್ಮಿಕಾ ಕರಿಯರ್ ಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ ಎಂಬ ಮಾತು ಕೇಳಿ ಬರ್ತಿದೆ. ಸಿಕಂದರ್ ಸೋಲಿನ ನಡುವೆ ಶ್ರೀವಲ್ಲಿ ಅನಿಮಲ್ ಡೈರೆಕ್ಟರ್ ಶಾಕ್ ಕೊಟ್ಟಿದ್ದಾರೆ. ಪ್ರಭಾಸ್ ಚಿತ್ರದಿಂದ ರಶ್ಮಿಕಾ ಕಿಕ್ ಔಟ್? ಸಿಕಂದರ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹೀನಾಯ ಸೋತಿದೆ. ಹೀಗಾಗಿ ರಶ್ಮಿಕಾ ಕೈಯಲ್ಲಿದ್ದ ಪ್ರಾಜೆಕ್ಟ್ ವೊಂದರು ಜಾರಿ ಹೋಗಿದೆ. ಅನಿಮಲ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪ್ರಭಾಸ್ ಗೆ ಸ್ಪಿರಿಟ್ ಎಂಬ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೆ ರಶ್ಮಿಕಾ ಮಂದಣ್ಣರನ್ನು ನಾಯಕಿಯಾಗಿ ಸಂದೀಪ್ ಆಯ್ಕೆ ಮಾಡಿದ್ದಾರಂತೆ. ಆದರೀಗ ಸಿಕಂದರ್ ಸೋಲಿನ ಬಳಿಕ ರಶ್ಮಿಕಾ ಕೈಬಿಟ್ಟು ಚಿತ್ರತಂಡ ಬೇರೆ ನಾಯಕಿಯರ…
Author: Author AIN
ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಕಾಮಗಾರಿ ಆಗುತ್ತಿಲ್ಲ. ಇದೊಂದು ಭ್ರಷ್ಟವಾದ ರಾಜ್ಯವಾದ ವ್ಯವಸ್ಥೆ ಆಗಿದೆ ಎಂದು ರಾಜ್ಯ ಸರ್ಕಾರವನ್ನೇ ಭ್ರಷ್ಟ ಸರ್ಕಾರ ಎಂದು ಟೀಕಿಸಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಉಲ್ಟಾ ಹೊಡೆದಿದ್ದಾರೆ. ನಾನು ನಿನ್ನೆ ದಿನ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಮ್ಮ ಸರ್ಕಾರದಲ್ಲಿ ಡಾ. ನಂಜುಂಡಪ್ಪ ವರದಿಯ ಅನುಷ್ಠಾನ ಆದ ಮೇಲೆ ಏನೆಲ್ಲಾ ಆಗಿದೆ ಎಂದು ಹೇಳಿದ್ದೆ. ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಕಾಮಗಾರಿ ಆಗ್ತಿಲ್ಲ. ಹಳೇ ಮೈಸೂರು ಭಾಗದಲ್ಲಿ ಗುಣಮಟ್ಟ ಆಗ್ತಿದೆ ಅಂತಾ ಹೇಳಿದೆ. ಇದೊಂದು ಭ್ರಷ್ಟವಾದ ರಾಜ್ಯವಾದ ವ್ಯವಸ್ಥೆ ಆಗಿದೆ ಅಂತಾ ಹೇಳಿದ್ದೇನೆ. ಈ ವ್ಯವಸ್ಥೆ ಸರಿಯಲ್ಲ, ಸರಿಯಾಗಿ ಕೆಲಸ ಮಾಡಿ ಅಂತಾ ಅಧಿಕಾರಿಗಳಿಗೆ ಹೇಳಿದೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ರಾಯರಡ್ಡಿ ಸಮರ್ಥನೆ ಮಾಡಿಕೊಂಡಿದ್ದಾರೆ. ನಾನು ಹೇಳಿದ್ದು ಭ್ರಷ್ಟಾಚಾರ ಕ್ಕೆ ಆಸ್ಪದವಿಲ್ಲದಂತೆ ಉತ್ತಮ ವ್ಯವಸ್ಥೆ ಕೊಡಿ ಎಂದು ಹೇಳಿದ್ದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಡಿತಿದೆ, ಅದನ್ನು ಹತೋಟಿಗೆ ತರಬೇಕು. ಕರ್ನಾಟಕಕ್ಕೆ…
ಬಾಲಿವುಡ್ ಚಿತ್ರರಂಗದ ಮೋಸ್ಟ್ ಕಾಂಟ್ರವರ್ಸಿಯಲ್ ಕ್ವೀನ್ ಅಂದ್ರೆ ಎಲ್ಲರೂ ಬೊಟ್ಟು ಮಾಡೋದು ಕ್ವೀನ್ ಕಂಗನಾ ರಣಾವತ್ ಕಡೆಗೆ. ಕಂಗನಾ ಈಗಂತೂ ನಟಿ ಜೊತೆಗೆ ಸಂಸದೆಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇದರ ಜೊತೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹೊಸ ಕೆಫೆ ತೆರೆದಿದ್ದಾರಂತೆ. ಆದರೆ ಬಿಜೆಪಿಯ ಸಂಸದೆಗೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ಕರೆಂಟ್ ಶಾಕ್ ಕೊಟ್ಟಿದೆ. ಮನಾಲಿಯ ಕಂಗಾನ ಮನೆ ಇದೆ. ಆದರೆ ಅವರು ಅಲ್ಲಿ ವಾಸವಿಲ್ಲ. ಆದರೂ ಒಂದು ಲಕ್ಷ ಕರೆಂಟ್ ಬಿಲ್ ಬಂದಿದೆ. ಇದನ್ನು ನೋಡಿ ಕಂಗನಾ ರಂಗ್ ಆಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಅಲ್ಲಿನ ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಈ ತಿಂಗಳು ನಾನು ವಾಸಿಸದ ಮನಾಲಿಯ ನನ್ನ ಮನೆಗೆ 1 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ. ಇದು ತುಂಬಾ ಶೋಚನೀಯ ಸ್ಥಿತಿಯಾಗಿದೆ. ನಾನು ಅದನ್ನು ನೋಡಿದೆ. ಇಲ್ಲಿ ಏನಾಗುತ್ತಿದೆಯೋ ಅದು ನಾಚಿಗೆ ಪಡುವ ಸಂಗತಿ. ಆದರೆ…
ಬೆಂಗಳೂರು: ನಂದಿನಿ ಹಾಲು, ಪೆಟ್ರೋಲ್, ಡೀಸೆಲ್ ಬಳಿಕ, ಬೆಂಗಳೂರು ನಗರದ ನಿವಾಸಿಗಳಗೆ ರಾಜ್ಯ ಸರ್ಕಾರ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಿದೆ. ಬಹಳ ದಿನಗಳಿಂದ ಚರ್ಚೆಯಲ್ಲಿದ್ದ ಕಾವೇರಿ ಕುಡಿಯೋ ನೀರಿನ ದರ ಏರಿಕೆ ಬಹುತೇಕ ಫಿಕ್ಸ್ ಆಗಿದ್ದು ನಾಳೆ ಅಧಿಕೃತ ಆದೇಶ ಹೊರಬೀಳಲಿದೆ. ಒಂದು ಲೀಟರ್ ನೀರಿಗೆ 1ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. 50 ಸಾವಿರದಿಂದ 1ಲಕ್ಷ ಲೀಟರ್ ನೀರಿಗೆ 1 ಲೀಟರ್ ಹೆಚ್ಚಳವಾಗಲಿದೆ. ಏಪ್ರಿಲ್ 1ರಿಂದಲೇ ಕಾವೇರಿ ನೀರಿನ ದರ ಏರಿಕೆಯಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ. ಇದರಿಂದ ಇನ್ನು ಮುಂದೆ ಕಾವೇರಿ ನೀರು ಬಳಕೆ ಮಾಡುವ ಮನೆಗಳಿಗೆ ಪ್ರತಿ ತಿಂಗಳೂರು 30-ರಿಂದ 40ರೂ. ಹೆಚ್ಚುವರಿ ಹೊರೆಯಾಗಲಿದೆ. ಒಟ್ಟು ನಾಲ್ಕು ಸ್ಲಾಬ್ ಗಳಲ್ಲಿ ನೀರಿನ ದರ ಏರಿಕೆ ಮಾಡಲಾಗಿದೆ. 2014 ಬಳಿಕ ಸುಮಾರು 11 ವರ್ಷದ ಬಳಿಕ ನೀರಿನ ದರ ಏರಿಕೆ ಮಾಡಲಾಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ಕುಡಿಯುವ ನೀರಿನ ದರ ಏರಿಕೆ…
ಅರಳು ಹುರಿದಂಗೆ ಪಟ ಪಟ ಅಂತಾ ಮಾತನಾಡುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ. ಕಿರುತೆರೆ, ಹಿರಿತೆರೆ ಎರಡರಲ್ಲಿಯೂ ಮಿಂಚಿರುವ ಮಿಂಚುತ್ತಿರು ಮಂಗಳೂರಿನ ಈ ಸುಂದರಿ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅನುಶ್ರೀಗೆ ಹೋದಲ್ಲಿ ಬಂದಿಲ್ಲ ಸದಾ ಎದುರಾಗುತ್ತಿದ್ದ ಪ್ರಶ್ನೆ ನಿಮ್ಮ ಮದುವೆ ಯಾವಾಗ ಎಂದು? ಅದಕ್ಕೀಗ ಅನುಶ್ರೀ ಉತ್ತರ ಕೊಟ್ಟಿದ್ದಾರೆ. ವಿದ್ಯಾಪತಿ ಸಿನಿಮಾ ಪ್ರಚಾರದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಆಂಕರ್ ಅನುಶ್ರೀ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿದ್ಯಾಪತಿ ಚಿತ್ರದ ಬಗ್ಗೆ ನಟ ನಾಗಭೂಷಣ್ ಹಾಗೂ ನಟಿ ಮಲೈಕಾ ಜೊತೆ ಅನುಶ್ರೀ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಮಲೈಕಾ ಅಕ್ಕ ನಿಮ್ಮ ಮದುವೆ ಯಾವಾಗ ? ಹೇಗೆ ಇರಬೇಕು ನಿಮ್ಮ ಹುಡುಗ ಎಂದು ಅನುಶ್ರೀಗೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಅನುಶ್ರೀ “ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು…
ಕನ್ನಡ ಕಿರುತೆರೆಯ ಪ್ರಮುಖ ಧಾರಾವಾಹಿಗಳಲ್ಲಿ ಒಂದಾಗಿರುವ ಭಾಗ್ಯಲಕ್ಷ್ಮೀ ಎಲ್ಲರ ಮನೆ ಮನ ಗೆದ್ದಿದೆ. ಭಾಗ್ಯಲಕ್ಷ್ಮೀಯಾಗಿ ನಟಿ ಕಂ ಆಂಕರ್ ಸುಷ್ಮಾ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಭಾಗ್ಯ ಪಾತ್ರದಲ್ಲಿ ಗೃಹಿಣಿಯರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಭಾಗ್ಯನಿಗೆ ಇಬ್ಬರು ಮಕ್ಕಳು. ತನ್ವಿ ಪಾತ್ರವನ್ನೂ ಅಮೃತಾ ಗೌಡ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಓದೋದ್ರಲ್ಲಿ ಸ್ವಲ್ಪ ಹಿಂದೆ ಇದ್ದಾರೆ. ಆದರೆ ರಿಯಲ್ ಲೈಫ್ ನಲ್ಲಿ ತನ್ವಿ ಊರೂಫ್ ಅಮೃತಾ ಗೌಡ ಬ್ರಿಲಿಯೆಂಟ್ ಸ್ಟುಡೆಂಟ್. ದ್ವೀತಿಯ ಪಿಯುಸಿಯಲ್ಲಿ ಅಮೃತಾ ಗೌಡ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದ ನಟಿ ಅಮೃತಾ , ಬಳಿಕ ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದರು. ತಮ್ಮ ವಿದ್ಯಾಭ್ಯಾಸದ ಜೊತೆಗೆ ನಟನೆಯನ್ನು ಆಯ್ಕೆ ಮಾಡಿಕೊಂಡು ಎರಡೂ ಕ್ಷೇತ್ರವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಅನ್ನೋದಕ್ಕೆ ಈಗ ಹೊರಬಿದ್ದಿರುವ ದ್ವೀತಿಯ ಪಿಯುಸಿ ಫಲಿತಾಂಶ. ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ನಟಿ ಅಮೃತಾ ಗೌಡ 600 ಅಂಕಗಳಲ್ಲಿ 543 ಅಂಕ ಗಳಿಸಿ ಶೇಕಡಾ 91ರಷ್ಟು ಅಂಕ ಪಡೆಯುವ…
ನೆಲಮಂಗಲ: ಇನ್ಸ್ಟಾಗ್ರಾಂನಲ್ಲಿ ಒಂದು ವಾರದ ಪ್ರೀತಿ, ಮದುವೆಯಲ್ಲಿ ಅಂತ್ಯವಾದ ಘಟನೆ ನೆಲಮಂಗಲದಲ್ಲಿ ನಡೆದಿದೆ. 13 ವರ್ಷದ ಹಿಂದೆ ಮದುವೆಯಾಗಿ ಸಂಸಾರ ನಡೆಸಿದವಳು ಗಂಡನ ಜೊತೆ ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿ ಮತ್ತೊಂದು ಮದುವೆಯಾಗಿದ್ದಾಳೆ. ವಿಶೇಷ ಅಂದ್ರೆ ತನ್ನ ಬಿಟ್ಟು ಓಡಿ ಹೋದ ಪತ್ನಿ ಮತ್ತೊಂದು ಮದುವೆ ಮಾಡಿಕೊಂಡಿರುವುದನ್ನ ಇನ್ಸ್ಟಾಗ್ರಾಂನಲ್ಲೇ ವಿಡಿಯೋ ಮದುವೆ ವಿಡಿಯೋ ನೋಡಿ ಪತಿ ಶಾಕ್ ಆಗಿದ್ದಾನೆ. ನೆಲಮಂಗಲ ನಗರದ ಜಕ್ಕಸಂದ್ರದ ರಾಘವೇಂದ್ರನಗರದಲ್ಲಿ ಡ್ರ್ಯೆವರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ರಮೇಶ್ ಎಂಬುವವರ ಜೊತೆಗೆ 13 ವರ್ಷದ ಹಿಂದೆ ನೇತ್ರಾವತಿ ಎಂಬಾಕೆ ಮದುವೆಯಾಗಿದ್ದು, ಮಕ್ಕಳು ಸಹ ಇವೆಯಂತೆ. ಆದರೆ, ವಾರದ ಹಿಂದೆ ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಸಂತೋಷ್ ಎಂಬುವನ ಜೊತೆ ನಾಪತ್ತೆಯಾಗಿದ್ದ ಪತ್ನಿ, ಆತನ ಜತೆ ಮದುವೆ ಮಾಡಿಕೊಂಡ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ ಹಾಕಿಕೊಂಡಿದ್ದಾಳೆ. ಮಕ್ಕಳು ಗಂಡನನ್ನು ಬಿಟ್ಟು ಹೋಗಿ ಓಡಿಹೋಗಿದ್ದ ನೇತ್ರಾವತಿ, ಪೊಲೀಸರ ಭದ್ರತೆಯಲ್ಲಿ ಗಂಡನ ಮನೆಯಲ್ಲಿದ್ದ ಬಟ್ಟೆ ತೆಗೆದುಕೊಳ್ಳಲು ಬಂದಿದ್ದಳಂತೆ. ಈ ವೇಳೆ ರಮೇಶ್ ಹಾಗೂ…
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ಆನೆಗಳ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದ ಬಾಳೆ ಬೆಳೆ ಹಾಗೂ ತೆಂಗಿನ ಗಿಡಗಳನ್ನು ನಾಶ ಮಾಡಿವೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಓಂಕಾರ ಅರಣ್ಯ ವಲಯದ ಮಂಚಳ್ಳಿ ಗ್ರಾಮದ ವಿರೂಪಾಕ್ಷ ಎಂಬುವರ ಬಾಳೆ ತೋಟಕ್ಕೆ ಮಂಗಳವಾರ ತಡರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಜಮೀನಿನಲ್ಲಿ ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ ಮಾಡಿವೆ. ಹೀಗಾಗಿ ಅರಣ್ಯ ಇಲಾಖೆ ರೈತರಿಗೆ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. https://www.youtube.com/shorts/E7lfyu8Bo54
ರಾಜ್ಯದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ಭಕ್ತರಿಗೆ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದೇ ತಿಂಗಳ 12ನೇ ತಾರೀಖಿನಿಂದ ಬೆಂಗಳೂರು ಕುಕ್ಕೆ ಸುಬ್ರಹ್ಮಣ್ಯ ಮಧ್ಯೆ ಹೊಸ ರೈಲು ಸಂಚರಿಸಲಿದ್ದು, ದಿನಕ್ಕೆ ನಾಲ್ಕು ಬಾರಿ ಸಂಚಾರ ನಡೆಸಲಿದೆ ಎಂದು ಘೋಷಿಸಿದ್ದಾರೆ. ತುಮಕೂರಿನಲ್ಲಿ ರೈಲ್ವೆ ಗೇಟ್ ಮೇಲ್ಸತುವೆಗೆ ಗುದ್ದಲಿ ಪೂಜೆ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಇದ್ದತಂಹ 33 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳನ್ನ ನಾವು ಕೈಗೆತ್ತಿಕೊಂಡಿದ್ದೇವೆ. ಇದೇ 11 ರಂದು ಹಾವೇರಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲಿಗೆ ಚಾಲನೆ ಕೊಡುತ್ತಿದ್ದೇವೆ. ಮುಂದಿನ 15 ದಿನಗಳಲ್ಲಿ ಗದಗ, ವಾಡಿ, ಕುಷ್ಠಗಿ, ಯಲಬುರ್ಗಾ ರೈಲು ಸಂಚಾರ ಲೋಕಾರ್ಪಣೆ ಮಾಡುತ್ತೇವೆ. ಅನೇಕ ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಮಾಡುವಂತಹ ಕೆಲಸ ಈಗಾಗಲೇ ಆಗಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಬಂದ ಮೇಲೆ ರೈಲ್ವೆ ಇಲಾಖೆಗೆ ಒಂದು ಕಾಯಕಲ್ಪ ಕೊಟ್ಟಿದ್ದಾರೆ ಎಂದು…
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡಾನೆಗಳ ಹಾವಳಿ ಮಾಮೂಲು. ಇದೀಗ ಹುಲಿರಾಯನ ಕಾಟ ಶುರುವಾಗಿದೆ. ಇಷ್ಟು ದಿನ ಕಾಡಿನಲ್ಲಿ ಓಡಾಡಿಕೊಂಡಿ ವ್ಯಾಘ್ರ್ಯರಾಜ ಹುಲಿಗೆ ಕಾಡು ಜೀವ ಜೀವ ಸಾಕಾಗಿ ಬೇಕಾಯ್ತಾ ನಾಡಿನ ನಂಟು ಎಂಬ ಸ್ಥಳೀಯರಲ್ಲಿ ಕೇಳಿ ಬರ್ತಿದೆ. ಹೌದು, ದೇಶದಲ್ಲಿಯೇ ಹೆಚ್ಚು ಹುಲಿ ವಾಸಸ್ಥಾನ ಎಂಬ ಪ್ರಸಿದ್ದಿ ಪಡೆದಿರುವ ಚಾಮರಾಜನಗರ ಜಿಲ್ಲೆ ಹೆಸರು ಉಳಿಸಲು ಬಂತಾ ಹುಲಿ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ. ಚಾಮರಾಜನಗರ ಪಟ್ಟಣದ ಕಾಳನಹುಂಡಿ ಸಮೀಪದ ಕಟ್ಟೆಪುರದ ಎಸ್ ಪಿ ಕೆ ತೋಟ ಹಾಗೂ ಎಸ್ಪಿಎಸ್ ತೋಟ ಮಧ್ಯದಲ್ಲಿ ಭಾರಿ ಗಾತ್ರದ ಹುಲಿಯೊಂದು ಓಡಿ ಹೋಗಿರೋದನ್ನ ಗ್ರಾಮಸ್ಥರು ಕಣ್ಣಾರೆ ನೋಡಿದ್ದಾರಂತೆ. ಕಳೆದ ಹಲವು ದಿನಗಳಿಂದಲೂ ಚಾಮರಾಜನಗರ ಜಿಲ್ಲಾ ಕೇಂದ್ರದ ಐದಾರು ಕಿಲೋಮಿಟರ್ ಹತ್ತಿರದ ಪ್ರದೇಶದಲ್ಲಿಯೇ ಭಾರಿ ಗಾತ್ರದ ಹುಲಿ ಬೀಡು ಬಿಟ್ಟಿದೆ. ಸುತ್ತಮುತ್ತಲಿನ ಜಮೀನುಗಳಲ್ಲಿ ಜಾನುವಾರುಗಳನ್ನು ತಿಂದು ಹಳ್ಳ ಹಾಗೂ ಪೊದೆಗಳಲ್ಲಿ ಅವಿತು ಕುಳಿತಿದೆಯಂತೆ. ಒಂದು ವರ್ಷದಿಂದಲೂ ಕೂಡ ಚಾಮರಾಜನಗರ ಜಿಲ್ಲಾಸ್ಪತ್ರೆ ಸಿಮ್ಸ್ ಸುತ್ತಾಮುತ್ತಾ ಕಾಣಿಸಿಕೊಂಡು ಜಾನುವಾರುಗಳನ್ನು ಕೊಂದು…