ಬೆಂಗಳೂರು: ಮೆಡಿಕಲ್, ಇಂಜಿನಿಯರಿಂಗ್, ಐಐಟಿ, ಐಐಎಂ ಸೇರಿದಂತೆ ಪ್ರತಿಷ್ಟಿತ ಕೋರ್ಸ್ ಮಾಡೋ ಕನಸು ಹೊಂದಿದ್ದ ಲಕ್ಷಾಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕಾತರ, ಕುತೂಹಲಕ್ಕೆ ತೆರೆ ಬಿದ್ದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ. ಉಡುಪಿ ಜಿಲ್ಲೆಗೆ ಶೇ.93.90ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನ ಸಿಕ್ಕರೆ, ಯಾದಗಿರಿ ಜಿಲ್ಲೆಗೆ 48.45ಕೊನೆಯ ಸ್ಥಾನ ಸಿಕ್ಕಿದೆ. 2ನೇ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ 3ನೇ ಸ್ಥಾನ ಬೆಂಗಳೂರು ದಕ್ಷಿಣಕ್ಕೆ ಸಿಕ್ಕಿದೆ. ಒಟ್ಟು ಶೇ.73.54ರಷ್ಟು ಫಲಿತಾಂಶ ವಿಜ್ಞಾನ : ಅಮೂಲ್ಯ ಕಾಮತ್ ಫಸ್ಟ್, 600/599, ಉಡುಪಿ ಎಕ್ಸ್ ಪರ್ಟ್ ಕಾಲೇಜು ವಿಜ್ಷಾನ-ದೀಕ್ಷಾ, ಫಸ್ಟ್ 600/599, ತೀರ್ಥಹಳ್ಳಿ ವಾಗ್ದೇವಿ ಕಾಲೇಜು, ಶಿವಮೊಗ್ಗ ವಾಣಿಜ್ಯ : ದೀಪಶ್ರೀ ಫಸ್ಟ್, 600/599 ದಕ್ಷಿಣ ಕನ್ನಡದ ಕೆನರಾ ಕಾಲೇಜು ಕಲಾ ವಿಭಾಗ:ಸಂಜನಾ ಭಾಯಿ ಫಸ್ಟ್, 600/597 ಬಳ್ಳಾರಿ ಇಂದು ಪಿಯು ಕಾಲೇಜು, 600ಕ್ಕೆ 597 ಅಂಕ ಉಡುಪಿ-ಮೊದಲ ಸ್ಥಾನ – ಶೇ.93.90 ದಕ್ಷಿಣ ಕನ್ನಡ-2ನೇ…
Author: Author AIN
ರಾಮನವಮಿಯ ಶುಭದಿನದಂದು ಬಸವೇಶ್ವರ ನಗರದಲ್ಲಿರುವ ಗಣೇಶನ ದೇವಸ್ಥಾನದಲ್ಲಿ ಎಸ್ ಎನ್ ಟಿ ಎಂಟರ್ಪ್ರೈಸ್ ಲಾಂಛನದಲ್ಲಿ ಎಸ್ ಸಿ ರವಿ ಭದ್ರಾವತಿ ಅವರು ನಿರ್ಮಿಸುತ್ತಿರುವ, ಖ್ಯಾತ ಗೀತಸಾಹಿತಿ ಅರಸು ಅಂತಾರೆ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ನಿರ್ಮಾಪಕ ರವಿ ಅವರ ಸಹೋದರಿಯರು “ಪ್ರೊಡಕ್ಷನ್ ನಂ ೧” ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು. ನಿರ್ಮಾಪಕ ಉದಯ್ ಕೆ ಮೆಹ್ತಾ ಸೇರಿದಂತೆ ಸಾಕಷ್ಟು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. “ಲವ್ ಇನ್ ಮಂಡ್ಯ” ಚಿತ್ರದ ನಂತರ ಒಂದು ದಶಕದ ಬಳಿಕ ಮತ್ತೆ ನಿರ್ದೇಶನ ಮಾಡುತ್ತಿದ್ದೇನೆ ಎಂದು ಮಾತನಾಡಿದ ನಿರ್ದೇಶಕ ಅರಸು ಅಂತಾರೆ, ಸಿನಿಮಾವನ್ನು ಅಂದುಕೊಂಡ ಹಾಗೆ ಮಾಡಬೇಕು ಎನ್ನುವುದು ನನ್ನ ಉದ್ದೇಶ. ಹಾಗಾಗಿ ಎರಡನೇ ಚಿತ್ರವನ್ನು ನಿರ್ದೇಶಿಸಲು ಇಷ್ಟು ಸಮಯವಾಯಿತು. ಈ ಚಿತ್ರದ ಕಥೆ ವಿಭಿನ್ನವಾಗಿದೆ. ಗಣೇಶ್ ಅವರು ಈವರೆಗೂ ಮಾಡಿರದ ಪಾತ್ರ…
ಪುಷ್ಪ ಸರಣಿ ಸಿನಿಮಾಗಳು ಸೂಪರ್ ಡೂಪರ್ ಸಕ್ಸಸ್ ಕಂಡಿವೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಧಮಾಲ್ ಮಾಡಿಯಾಗಿದೆ. ಈಗ ಸ್ಟೈಲೀಶ್ ಸ್ಟಾರ್ ಗುರಿ ಹಾಲಿವುಡ್..ರಾಕಿಭಾಯ್ ಯಶ್ ತಮ್ಮ ಟಾಕ್ಸಿಕ್ ಚಿತ್ರಕ್ಕೆ ಹಾಲಿವುಡ್ ಟಚ್ ಕೊಟ್ಟಿದ್ದಾರೆ. ಅಟ್ ದಿ ಸೇಮ್ ಟೈಮ್ ಯಶ್ ಸೂತ್ರವನ್ನೇ ಅಲ್ಲು ಅರ್ಜುನ್ ತಮ್ಮ ಸಿನಿಮಾಗೆ ಅಪ್ಲೈ ಮಾಡ್ತಿದ್ದಾರೆ ಅನ್ನೋದು ಪ್ರೋವ್ ಆಗಿದೆ, ಅದಕ್ಕೆ ಈಗ ರಿಲೀಸ್ ಆಗಿರುವ ಒಂದು ಸ್ಪೆಷಲ್ ವಿಡಿಯೋ. ಇಂದು ಐಕಾನ್ ಸ್ಟಾರ್ ಅಲ್ಲು ಅರ್ಜುನ್ 43ನೇ ಹುಟ್ಟುಹಬ್ಬದ ಸಂಭ್ರಮ. ಬನ್ನಿ ಬರ್ತಡೇಗೆ ವಿಶೇಷವಾಗಿ ಮುಂದಿನ ಚಿತ್ರದ ಮೆಗಾ ಅಪ್ ಡೇಟ್ ಸಿಕ್ಕಿದೆ. ಶಾರುಖ್ ಖಾನ್ ಗೆ ಜವಾನ್ ಸಿನಿಮಾ ಮಾಡಿ ಗೆದ್ದಿರುವ, ದಳಪತಿ ನೆಚ್ಚಿನ ಡೈರೆಕ್ಟರ್ ಅಟ್ಲಿ ಅಲ್ಲು ಮುಂದಿನ ಸಿನಿಮಾದ ಸಾರಥಿ. ಈ ಡೆಡ್ಲಿ ಕಾಂಬೋದ ಹೊಸ ಚಿತ್ರದ ಫಸ್ಟ್ ಝಲಕ್ ರಿಲೀಸ್ ಆಗಿದ್ದು, ಹಾಲಿವುಡ್ ಮಂದಿಯೇ ದಂಗಾಗುವಂತೆ ಮಾಡಿದೆ. ಅಲ್ಲು ಅರ್ಜುನ್-ಅಟ್ಲಿ ಸಿನಿಮಾಗೆ AA22xA6 ಅಂತ ಟೈಟಲ್…
ಬೆಂಗಳೂರು: ಮೆಡಿಕಲ್, ಇಂಜಿನಿಯರಿಂಗ್, ಐಐಟಿ, ಐಐಎಂ ಸೇರಿದಂತೆ ಪ್ರತಿಷ್ಟಿತ ಕೋರ್ಸ್ ಮಾಡೋ ಕನಸು ಹೊಂದಿದ್ದ ಲಕ್ಷಾಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕಾತರ, ಕುತೂಹಲಕ್ಕೆ ತೆರೆ ಬಿದ್ದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ. ಉಡುಪಿ ಜಿಲ್ಲೆಗೆ ಶೇ.93.90ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನ ಸಿಕ್ಕರೆ, ಯಾದಗಿರಿ ಜಿಲ್ಲೆಗೆ 48.45ಕೊನೆಯ ಸ್ಥಾನ ಸಿಕ್ಕಿದೆ. 2ನೇ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ 3ನೇ ಸ್ಥಾನ ಬೆಂಗಳೂರು ದಕ್ಷಿಣಕ್ಕೆ ಸಿಕ್ಕಿದೆ.
ನೀವು ದಿನನಿತ್ಯ ತುಪ್ಪಾ ತಿಂದೀರಾ? ನೀವು ಮಿನರಲ್ ವಾಟರೇ ಕುಡಿಯೋದಾ? ಹಾಗಿದ್ದರೇ ಹುಷಾರ್. ಆರೋಗ್ಯ ಇಲಾಖೆ ಇಂದು ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುಪ್ಪ ಹಾಗೂ ಮಿನರಲ್ ವಾಟರ್ ಅಸುರಕ್ಷತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ತುಪ್ಪದ ಮಾದರಿಗಳನ್ನು ಪರೀಕ್ಷೆ ನಡೆಸಿದೆ. ಇದರಲ್ಲಿ 49 ಸ್ಯಾಂಪಲ್ಸ್ ಪರೀಕ್ಷೆಗೆ ಒಳಪಟ್ಟಿದ್ದು, ಎಲ್ಲವೂ ಸುರಕ್ಷಿತಲ್ಲ ಅನ್ನೋದನ್ನು ತಿಳಿದು ಬಂದಿದೆ. 296 ಮಿನೆರಲ್ ವಾಟರ್ ಬಾಟೆಲ್ ಸ್ಯಾಂಪಲ್ಸ್ ಮಾಡಲಾಗಿತ್ತು. ಈ ಪೈಕಿ 72 ನೀರಿನ ಬಾಟೆಲ್ ಸುರಕ್ಷಿತವಾಗಿದ್ದು, 95 ಅಸುರಕ್ಷಿತವಲ್ಲ ಹಾಗೂ 88 ಕಳಪೆ ನೀರಿನ ಬಾಟೆಲ್ ಎಂದು ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚಿತ್ರದುರ್ಗ ಮೂಲಕದ ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಜನ ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾಗಬೇಕಿತ್ತು. ಬೆಂಗಳೂರಿನ ಸಿಸಿಹೆಚ್ 57ನೇ ಕೋರ್ಟ್ಗೆ ಪವಿತ್ರಾ ಗೌಡ ಹಾಜರಾಗಿದ್ದು, ಆದ್ರೆ ದರ್ಶನ್ ಗೈರಾಗಿದ್ದಾರೆ. ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ದ ದಚ್ಚು ಇಂದು ಅದೇ ಕಾರಣ ಹೇಳಿ ಕೋರ್ಟ್ ಗೆ ಬಂದಿಲ್ಲ. ಬೆನ್ನು ನೋವಿನ ನೀಡಿ ಅವರು ವಿನಾಯಿತಿ ಕೇಳಿದ್ದಾರೆ. ಅವರ ಪರ ವಕೀಲರು ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ರೇಣುಕಾ ಸ್ವಾಮಿ ಮರ್ಡರ್ ಕೇಸ್ ನ ಎ1 ಆರೋಪಿ ಪವಿತ್ರಾ ಗೌಡ, ಇತರೆ ಆರೋಪಿಗಳಾದ ವಿನಯ್, ನಾಗರಾಜ್, ನಂದಿಶ್, ಜಗದೀಶ್, ಪವನ್, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತಿಕ್, ಕೇಶವ ಮೂರ್ತಿ ಸೇರಿ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ನಟ ದರ್ಶನ್ ಮಾತ್ರ ಅಬ್ಸೆಂಟ್ ಆಗಿದ್ದಾರೆ. ʼಡೆವಿಲ್ʼ ಶೂಟಿಂಗ್ ನಲ್ಲಿ ದಾಸ ಬ್ಯುಸಿ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಸಿನಿಮಾ ಡೆವಿಲ್ ಶೂಟಿಂಗ್…
2025ರ ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಕರ್ನಾಟಕ ಪದವಿ ಪೂರ್ವ-ವಿಶ್ವವಿದ್ಯಾಲಯ ಶಿಕ್ಷಣ ಇಲಾಖೆಯೂ ಫಲಿತಾಂಶ ಪ್ರಕಟಿಸಲಿದೆ. ನಾಳೆ 12.30ಕ್ಕೆ ಮಧ್ಯಾಹ್ನ ಶಿಕ್ಷಣ ಸಚಿವ ಮಧು ಬಂಗಾರ ಸುದ್ದಿಗೋಷ್ಠಿ ನಡೆ ಫಲಿತಾಂಶ ಪ್ರಕಟಿಸಲಿದ್ದಾರೆ. ಆ ಬಳಿಕ 1.30 ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 1ರಿಂದ ಮಾರ್ಚ್ 20ರವೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಣಿ ಮಾಡಿಕೊಂಡಿದ್ದರು. ಒಟ್ಟು 1,171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ವಿದ್ಯಾರ್ಥಿಗಳು, 18,317 ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು ಫಲಿತಾಂಶ ವೀಕ್ಷಣೆಗೆ ವೆಬ್ ಸೈಟ್! ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ karresults.nic.in ಅಥವಾ kseab.karnataka.gov.inಗೆ ಭೇಟಿ ನೀಡಬೇಕು. * ಹೋಂ ಪೇಜ್ನಲ್ಲಿ Second PU Results 2025 ಲಿಂಕ್ ಕ್ಲಿಕ್ ಮಾಡಬೇಕು. * ನೋಂದಣು ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಬೇಕು. * Second PU Results 2025 ಎಂಬುದು…
ಧಾರವಾಡ: ಕೂಡಲಸಂಗಮದ ಪಂಚಮಸಾಲಿ ಪೀಠದಿಂದ ಜಯಮೃತ್ಯುಂಜಯ ಸ್ವಾಮೀಜಿ ಬದಲಾವಣೆ ಬಗ್ಗೆ ಸುಳಿವು ನೀಡಿದ್ದ ಕಾಂಗ್ರೆಸ್ ಶಾಸಕ ಹಾಗೂ ಕರ್ನಾಟಕ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರನ್ನು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಂದಿಗೆ ಹೋಲಿಕೆ ಮಾಡಿದ್ದಾರೆ. ಕೆಲ ಹೊತ್ತನ ಹಿಂದಷ್ಟೆ ಬಾಗಲಕೋಟೆ ಜಿಲ್ಲೆ ಹುನಗುಂದಲ್ಲಿ ಮಾತನಾಡಿದ್ದ ಕಾಶಪ್ಪನರ್, ಗುರುಗಳು ಸ್ವಯಂಘೋಷಿತರಾಗಿ ನೇಮಕವಾಗಿಲ್ಲ. ಕಾಲ ಕಾಲಕ್ಕೆ ಏನೇನು ಆಗಬೇಕೋ ಅದೆಲ್ಲಾ ಆಗುತ್ತದೆ. ಬದಲಾವಣೆ ಕಾಲ ಬಂದಾಗ ಯಾರೂ ತಡೆಯುವುದಿಲ್ಲ. ಭೂಮಂಡಲದಲ್ಲೇ ಯಾರನ್ನು ಉಳಿಸಲು ಆಗುವುದಿಲ್ಲ. ಸುನಾಮಿ ಯಾರನ್ನಾದ್ರೂ ಕೇಳಿ ಬರುತ್ತಾ?. ಇವರ ಕಾಲ ಮುಗಿದಿದೆ, ಬದಲಾವಣೆ ಆಗಿಯೇ ಆಗುತ್ತದೆ ಎಂದಿದ್ದರು. ವಿಜಯಾನಂದ ಕಾಶಪ್ಪನವರ್ ಹೇಳಿಕೆಗೆ ಹಿಂದಷ್ಟೇ ಕಲಘಟಿಯಲ್ಲಿ ಕಿಡಿಕಾರಿದ ಯತ್ನಾಳ್, ಇದು ಹಂದಿ ಇದ್ದ ಹಾಗ. ಕೂಡಲಸಂಗಮ ಶ್ರೀಗಳನ್ನು ಟಿಕೆಟ್ ಕೊಡಿಸ ಎಂದು ಎಂದೂ ದೆಹಲಿಗೆ ಕರೆದುಕೊಂಡು ಹೋಗಿಲ್ಲ. ಆದರೆ, ವಿನಯಕುಲಕರ್ಣಿ, ಲಕ್ಷ್ಮಿ ಹೆಬ್ಬಾಳಕರ್ ರಾಜಕೀಯವಾಗಿ ಶ್ರೀಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗ ಅಂತಹ ಅಯೋಗ್ಯರ…
ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ತಾಲೂಕು ವೀರಮಹೇಶ್ವರ ಜಂಗಮಾಭಿವೃದ್ಧಿ ಸಂಘದಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನ ಅದ್ಧೂರಿಯಾಗಿ ಆಚರಿಸಲಾಯಿತು. ಜಯಂತಿ ಹಿನ್ನೆಲೆಯಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಮುಂಡರಗಿ ಸಂಸ್ಥಾನಮಠದ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಚಾಲನೆ ನೀಡಿದರು. ಹಲವು ವಾದ್ಯ ಮೇಳಗಳೊಂದಿಗೆ ನಡೆದ ಮೆರವಣಿಗೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅನ್ನದಾನೀಶ್ವರ ಮಠಕ್ಕೆ ಆಗಮಿಸಿತು. ನಂತರ ಧರ್ಮಸಭೆ ಜರುಗಿತು. ಸಭೆಯಲ್ಲಿ ಹಂಪಸಾಗರ, ವಿರುಪಾಪುರ, ಹಿರೇವಡ್ಡಟ್ಟಿ ಹಾಗೂ ಅಳವಂಡಿಯ ಪೂಜ್ಯರು ನೇತೃತ್ವ ವಹಿಸಿದ್ದರು.
ಒಟ್ಟಿಗೆ ಹೋಗಿಲ್ಲ, ಒಟ್ಟಿಗಿರುವ ಒಂದು ಫೋಟೋ ಕೂಡ ಆಗಿಲ್ಲ. ಹೀಗಿದ್ರೂ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ದೂರದ ಓಮನ್ ನಲ್ಲಿ ರಶ್ಮಿಕಾ 29ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಡಲತೀರದಲ್ಲಿ ಕ್ಯೂಟ್ ಕ್ಯೂಟ್ ಪೋಸ್ ಕೊಟ್ಟು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ರಶ್ಮಿಕಾ ಫೋಟೋ ಸೆರೆ ಹಿಡಿದಿದ್ದು ವಿಜಯ್ ಅನ್ನೋದು ಸಿನಿಮಾಪ್ರೇಮಿಗಳ ಡೌಟ್. ಹೀಗಿರುವಾಗಲೇ ವಿಜಯ್ ಕೂಡ ಅದೇ ಬೀಚ್ ನಲ್ಲಿರುವ ಫೋಟೋಗಳನ್ನು ಹಾಕಿದ್ದು, ನೆಟ್ಟಿಗರು ಇವರಿಬ್ಬರ ಫೋಟೋ ಹೋಲಿಕೆ ಮಾಡಿದ್ದಾರೆ. ಆಗಲೇ ನೋಡಿ ಈ ಜೋಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ರಶ್ಮಿಕಾ ಶೇರ್ ಮಾಡಿರುವ ಫೋಟೋದಲ್ಲಿ ಬ್ಯಾಕ್ಗ್ರೌಂಡ್ನಲ್ಲಿ ರೆಡ್ ಕಲರ್ ಬಾವುಟವಿದೆ. ವಿಜಯ್ ಶೇರ್ ಮಾಡಿರೋ ಪೋಸ್ಟ್ನಲ್ಲಿ ಇದೇ ರೀತಿಯ ಬಾವುಟ ಕಾಣಿಸಿದೆ. ಇದರಿಂದ ಇಬ್ಬರೂ ಜೊತೆಯಾಗಿ ಒಮನ್ನಲ್ಲಿ ಕಾಲ ಕಳೆಯುತ್ತಿದ್ದಾರೆ ಅನ್ನೋದು ಕನ್ಫರ್ಮ್ ಆಗಿದೆ. ಜಾಲಿಯಾಗಿ ಓಮನ್ ನಲ್ಲಿ ಜೋಡಿ ವೆಕೇಷನ್ ಎಂಜಾಯ್ ಮಾಡ್ತಿದ್ದು, ಈ ನಡುವೆ ಸಮುದ್ರಕಡಲ ತೀರದಲ್ಲಿಯೇ ಇವರಿಬ್ಬರು ಉಂಗುರ ಬದಲಿಸಿಕೊಂಡಿದ್ದಾರೆ…