ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ-1 ಸಿನಿಮಾದ ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಗೆ ಬರ್ತಿದೆ. ಅದಕ್ಕಾಗಿ ಚಿತ್ರತಂಡ ಭರದಿಂದ ಶೂಟಿಂಗ್ ನಡೆಸುತ್ತಿದೆ. ಆದರೆ ಕಾಂತಾರ ಪ್ರೀಕ್ವೆಲ್ ಸೆಟ್ಟೇರಿ ಶೂಟಿಂಗ್ ಅಖಾಡಕ್ಕೆ ಇಳಿದಾಗಿನಿಂದಲೂ ಭಾರೀ ವಿಘ್ನಗಳು ಎದುರಾಗುತ್ತಿವೆ. ಈ ವಿಘ್ನಗಳ ನಿವಾರಣೆಗೆ ರಿಷಬ್ ಶೆಟ್ಟಿ ಮುಂದಾದ್ರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಬಹು ನಿರೀಕ್ಷಿತ ಕಾಂತಾರ- 2 ಚಿತ್ರಕ್ಕೆ ಎದುರಾಗಿರುವ ವಿಘ್ನಗಳ ದಮನಕ್ಕೆ ರಿಷಬ್ ಶೆಟ್ಟಿ ಪಂಜುರ್ಲಿ ನೇಮಕ್ಕೆ ಬಂದು ಬೇಡಿಕೊಂಡಿದ್ದಾರೆ. ನಸುಕಿನ ಜಾವ 4 ಗಂಟೆವರೆಗೂ ದೈವದ ಉತ್ಸವದಲ್ಲಿ ರಿಷಬ್ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಭಾಗಿಯಾಗಿದ್ದಾರೆ. ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ಉತ್ಸವದಲ್ಲಿ ರಿಷಬ್ ದಂಪತಿ ಮಕ್ಕಳ ಸಮೇತ ಪಾಲ್ಗೊಂಡಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ, ವಾರಾಹಿ ಪಂಜುರ್ಲಿ ದೈವದ ಬಳಿ ಕಷ್ಟ ಹೇಳಿಕೊಂಡಿದ್ದಾರೆ. ʼನಿನಗೆ ದುಶ್ಮನ್ಗಳಿದ್ದಾರೆ, ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ. ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ,…
Author: Author AIN
ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪೆದ್ದಿ. ರಾಷ್ಟ್ರ ಪ್ರಶಸ್ತಿ ವಿಜೇತ ಬುಚ್ಚಿ ಬಾಬು ಸನ ನಿರ್ದೇಶನದ ಈ ಚಿತ್ರದ ಫಸ್ಟ್ ಲುಕ್ ಈಗಾಗಲೇ ಭಾರೀ ಸದ್ದು ಮಾಡಿದೆ. ಇದೀಗ ಚಿತ್ರತಂಡ ರಾಮನವಮಿ ಪ್ರಯುಕ್ತ ಫಸ್ಟ್ ಝಲಕ್ ರಿಲೀಸ್ ಮಾಡಿದ್ದು, ಜೊತೆಗೆ ಬಿಡುಗಡೆ ದಿನಾಂಕ ಕೂಡ ರಿವೀಲ್ ಮಾಡಲಾಗಿದೆ. ಪವರ್ ಫುಲ್ ಡೈಲಾಗ್ ಹೊಡೆಯುತ್ತಾ ಸಿಗರೇಟ್ ಬಾಯಲ್ಲಿ ಕಚ್ಚಿಕೊಂಡು ಭರ್ಜರಿ ಆಕ್ಷನ್ ಮಾಡುತ್ತಾ ರಗಡ್ ಲುಕ್ ನಲ್ಲಿ ರಾಮ್ ಚರಣ್ ಎಂಟ್ರಿ ಕೊಟ್ಟಿದ್ದಾರೆ. ರಾಮ್ ಅಬ್ಬರ ನೋಡಿ ಫ್ಯಾನ್ಸ್ ಪೆದ್ದಿ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಚೆರ್ರಿ ಹುಟ್ಟುಹಬ್ಬದ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ, ಮುಂದಿನ ವರ್ಷದ ಮಾರ್ಚ್ 27ಕ್ಕೆ ಪೆದ್ದಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ರಾಮ್ ಚರಣ್ ಗೆ ಜೋಡಿಯಾಗಿ ಪೆದ್ದಿಯಲ್ಲಿ ಜಾನ್ವಿ ಕಪೂರ್ ಅಭಿನಯಿಸುತ್ತಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ಜಗಪತಿ ಬಾಬು, ದಿವ್ಯೆಂದು ಶರ್ಮಾ ತಾರಾ ಬಳಗದಲ್ಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್, ಸುಕುಮಾರ್ ರೈಟಿಂಗ್…
ರಶ್ಮಿಕಾ ಮಂದಣ್ಣ ನಿನ್ನೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದೂರದ ಓಮನ್ ದೇಶದಲ್ಲಿ ತಮ್ಮ 29ನೇ ಜನ್ಮೋತ್ಸವವನ್ನು ಸೆಲೆಬ್ರೆಟ್ ಮಾಡ್ಕೊಂಡಿದ್ದಾರೆ. ಸಿಕಂದರ್ ಸಿನಿಮಾ ಸೋಲಿಗೆ ತಲೆಕೆಡಿಸಿಕೊಳ್ಳದೇ ಧಾಮ್ ಧೂಮಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಬೀಚ್ ನಲ್ಲಿ ಕುಳಿತು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಅಷ್ಟಕ್ಕೂ ಈ ಫೋಟೋಗಳನ್ನು ಸೆರೆಹಿಡಿದವರು ವಿಜಯ್ ದೇವರಕೊಂಡನಾ ಎಂದು ಕೇಳುತ್ತಿದ್ದಾರೆ. ರಶ್ಮಿಕಾ ವಿಜಯ್ ನಡುವೆ ಏನೋ ಇದೆ ಅನ್ನೋದು ಸಿನಿರಸಿಕರು ಕುತೂಹಲ. ಕದ್ದು ಮುಚ್ಚಿ ಟ್ರಿಪ್, ಡೇಟಿಂಗ್, ಔಟಿಂಗ್ ಹೋಗುವ ಜೋಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದು ಇದೇ. ಹೀಗಾಗಿ ರಶ್ಮಿಕಾ ವಿಜಯ್ ಪ್ರೀತಿಯಲ್ಲಿ ಬಿದಿದ್ದಾರೆ ಎಂಬ ಗುಲ್ಲಿದೆ. ಸದ್ಯ ಓಮನ್ ನಲ್ಲಿರುವ ರಶ್ಮಿಕಾಗೆ ವಿಜಯ್ ಸಾಥ್ ಕೊಟ್ಟಿದ್ದಾರೆ ಅನ್ನೋ ಮಾತಿದೆ. ಕೆಲ ದಿನಗಳ ಹಿಂದಷ್ಟೇ ಮುಂಬೈ ಹೋಟೆಲ್ ವೊಂದರಲ್ಲಿ ಲಾಂಚ್ ಡೇಟಿಂಗ್ ನಲ್ಲಿ ಈ ಜೋಡಿ ತಗ್ಲಾಕೊಂಡಿದ್ದರು. ಆದ್ರೂ ನಮ್ಮ ನಡುವೆ ಏನೂ ಇಲ್ಲ ಅಂತಾನೇ ಅವರು ಪ್ಯಾಚಪ್ ಮಾಡಿಕೊಳ್ಳುತ್ತಾರೆ. ಕಿಂಗ್ ಡಮ್ ಚಿತ್ರದಲ್ಲಿ…
ಎಸ್ ಎಸ್ ರಾಜಮೌಳಿ ಈ ಹೆಸರಿಗೆ ಇಂಟ್ರೂಡಕ್ಷನ್ ಕೊಡುವ ಅಗತ್ಯವಿಲ್ಲ ಬಿಡಿ. ಭಾರತೀಯ ಚಿತ್ರರಂಗದಲ್ಲಿ ನಯಾ ಟ್ರೆಂಡ್ ಸೆಟ್ ಮಾಡಿದ ಟ್ರೆಂಡ್ ಸೆಟ್ಟರ್, ಆಸ್ಕರ್ ಗೆದ್ದ ಅದ್ಭುತ ಸಿನಿಮಾ ಮೇಕರ್ ಜಕ್ಕಣ್ಣ ತಾವೇ ಸೆಟ್ ಮಾಡಿದ ಟ್ರೆಂಡ್ ನ್ನು ಬ್ರೇಕ್ ಮಾಡ್ತಿದ್ದಾರಂತೆ. ಎರಡು ಭಾಗದಲ್ಲಿ ಸಿನಿಮಾ ಹೇಳುವ, ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನ್ನು ಹುಟ್ಟುಹಾಕಿದ್ದೇ ಇದೇ ಮೌಳಿ. ಆದ್ರೀಗ ರಾಜಮೌಳಿ ಈ ಕಾನ್ಸೆಪ್ಟ್ ನ್ನು ಬದಲಿಸಲು ಮುಂದಾಗಿದ್ದಾರಂತೆ. ಜಕ್ಕಣ್ಣ ಹಾಗೂ ಪ್ರಿನ್ಸ್ ಕಾಂಬಿನೇಷನ್ ಮೆಗಾ ಪ್ರಾಜೆಕ್ಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಬಾರಿ ಪ್ಯಾನ್ ವರ್ಲ್ಡ್ ಗುರಿ ಇಟ್ಟಿರುವ ಮೌಳಿ ಅದಕ್ಕಾಗಿ ಬೇಜಾನ್ ವರ್ಕೌಟ್ ಮಾಡುತ್ತಿದ್ದಾರೆ. ದೊಡ್ಡದಾಗಿ ಏನೋ ಮಾಡೋದಿಕ್ಕಂತೂ ಹೊರಟ್ಟಿದ್ದಾರೆ ಅನ್ನೋದು ಗೊತ್ತೇ ಇದೆ. ಎಸ್ ಎಸ್ ಎಂಬಿ 29 ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಶೂಟಿಂಗ್ ಗೆ ಬ್ರೇಕ್ ಹಾಕಿ ರಿಲ್ಯಾಕ್ಸ್ ಮೂಡ್ ಗೆ ಜಾರಿದೆ.…
ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಲಾಂಛನದಲ್ಲಿ ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ “ಯುದ್ಧಕಾಂಡ” ಚಿತ್ರ ಏಪ್ರಿಲ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. “ಯುದ್ಧಕಾಂಡ” ಪ್ರತಿಯೊಬ್ಬ ಮಹಿಳೆಯು ನೋಡಲೇ ಬೇಕಾದ ಚಿತ್ರ. ಮಹಿಳೆಯರ ಮೇಲೆ ಯಾವ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ ಎಂದು ತೋರಿಸುತ್ತಿರುವ ಚಿತ್ರವೂ ಹೌದು. ನೊಂದ ಮಹಿಳೆಯರನ್ನು ಪ್ರತಿನಿಧಿಸುವ ಪಾತ್ರವನ್ನು ಅರ್ಚನಾ ಜೋಯಿಸ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಪವನ್ ಭಟ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಹಿರಿಯ ನಟರಾದ ಟಿ.ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಬೇಬಿ ರಾದ್ನ್ಯ ಸಹ ಈ ಚಿತ್ರದಲ್ಲಿದ್ದಾರೆ. ಇದೊಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದೆ. “ಯುದ್ಧ ಕಾಂಡ” ತೀರಾ ಕಡಿಮೆ ಬಜೆಟ್ ಅಥವಾ ತೀರಾ ಹೆವಿ ಬಜೆಟ್ ನ ಚಿತ್ರವಲ್ಲ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣವಾಗಿರುವ ಚಿತ್ರ. ಇಂತಹ ಚಿತ್ರಗಳು ಹೆಚ್ಚಾಗಿ ಜನರನ್ನು ತಲುಪಬೇಕು. ಉತ್ತಮ ಸಂದೇಶವಿರುವ ಈ ಚಿತ್ರವನ್ನು…
ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ “ವೀರ ಚಂದ್ರಹಾಸ” ಸಿನಿಮಾದ ಟ್ರೇಲರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಬಿಡುಗಡೆಗೊಳಿಸಿದರು. ತಮಿಳು, ಮಲಯಾಳಂ, ಕನ್ನಡ ಸೇರಿ ಬಹುಭಾಷೆಗಳ ಸಿನಿಮಾಗಳಲ್ಲಿ ತನ್ನ ಕಲಾ ಸಾಮರ್ಥ್ಯ ಪ್ರದರ್ಶಿಸಿ ಜನಮೆಚ್ಚುಗೆ ಕಳಿಸಿದ್ದೀರಿ. ಈ ಸಿನಿಮಾ ಕೂಡ ಯಶಸ್ವಿ ಕಾಣುತ್ತದೆ. ಸರ್ಕಾರದಿಂದ ಅಗತ್ಯ ಇರುವ ಸಹಕಾರ ನೀಡಲಾಗುವುದು. ನಿಮ್ಮ ಇಡೀ ಕಲಾ ತಂಡಕ್ಕೆ ಮತ್ತು ಸಿನಿಮಾ ತಂಡಕ್ಕೆ ಶುಭಾಶಯಗಳು ಎಂದು ಮುಖ್ಯಮಂತ್ರಿಗಳು ಹಾರೈಸಿದರು. ಮುಖ್ಯಮಂತ್ರಿಗಳ ಆಶೀರ್ವಾದ ಪಡೆದ ರವಿ ಬಸ್ರೂರು ತಂಡ ಅವರನ್ನು ಸಿನಿಮಾ ವೀಕ್ಷಣೆಗೆ ಬರಬೇಕು ಎಂದು ಆಹ್ವಾನಿಸಿದರು. ಬರುತ್ತೇನೆ ಎಂದು ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದರು. ‘ವೀರ ಚಂದ್ರಹಾಸ’ ಯಕ್ಷಗಾನದ ಕತೆ, ಪಾತ್ರಗಳನ್ನು ಹೊಂದಿರುವ ಸಿನಿಮಾ. ರವಿ ಬಸ್ರೂರು ಯಕ್ಷಗಾನದ ಪ್ರಪಂಚದಲ್ಲಿ ನಡೆಯುವ ಕತೆಯನ್ನು ಹರವಿಡಲು ಹೊರಟ್ಟಿದ್ದಾರೆ. 400ಕ್ಕೂ ಅಧಿಕ ಯಕ್ಷಗಾನ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಿವಣ್ಣ ಕೂಡ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.…
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಯಾರು ಅಂದ್ರೆ ತಕ್ಷಣ ಬರುವ ಹೆಸ್ರೇ ಒನ್ ಅಂಡ್ ಒನ್ಲಿ ತಲೈವರ್ ರಜನಿಕಾಂತ್. ಕೋಟ್ಯಾನು ಕೋಟಿ ಅಭಿಮಾನಿಗಳ ನೆಚ್ಚಿನ ಪಡೆಯಪ್ಪ ತಮಿಳು ಚಿತ್ರರಂಗದ ಸೂಪರ್ ಸ್ಟಾರ್. ಆ ನಂತ್ರ ಕಮಲ್ ಹಾಸನ್..ಹೀಗೆ ನಾನಾ ಹೆಸರುಗಳು ಸೇರ್ಪಡೆಯಾಗುತ್ತವೆ. ಕಾಲಿವುಡ್ ಸಿನಿದುನಿಯಾದ ಈ ಸೂಪರ್ ಸ್ಟಾರ್ ಗಳ ಸಂಭಾವನೆ ವಿಚಾರದ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತವೆ. 100 ಕೋಟಿ ಹಣ ಜೇಬಿಗಿಳಿಸಿಕೊಳ್ಳುವ ತಮಿಳು ಚಿತ್ರರಂಗದ ನಟರು ಬೇರೆ ಬೇರೆ ಉದ್ಯಮದಲ್ಲಿಯೂ ಹಣ ಹೂಡಿಕೆ ಮಾಡಿ ಸಾವಿರಾರು ಕೋಟಿ ಆಸ್ತಿ ಒಡೆಯರಾಗಿರುತ್ತಾರೆ. ಫೋರ್ಬ್ಸ್ ಭಾರತದ ಅತ್ಯಂತ ಶ್ರೀಮಂತ ನಟರ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಅದರಲ್ಲಿಯೂ ತಮಿಳು ಚಿತ್ರರಂಗದ ಅತ್ಯಂತ ಶ್ರೀಮಂತ ನಟ ಯಾರು ಅನ್ನೋದನ್ನು ತಿಳಿಸಿದೆ. ನಿಮ್ಮ ತಲೆಯಲ್ಲಿ ರಜನಿಕಾಂತ್, ಕಮಲ್ ಹಾಸನ್ ಕಾಲಿವುಡ್ ನಂಬರ್ 1 ಕುಬೇರರು ಅಂದುಕೊಂಡರೆ ಅದು ತಪ್ಪು. ಯಾಕಂದ್ರೆ ತಮಿಳುಚಿತ್ರರಂಗದ ಶ್ರೀಮಂತ ನಟ ಇಳಯಳಪತಿ ವಿಜಯ್. ತಮಿಳುಚಿತ್ರರಂಗದಲ್ಲಿ ರಜನಿಕಾಂತ್ ಅವರಷ್ಟೇ ಅಭಿಮಾನಿಗಳು, ವರ್ಚಸ್ಸು ಹೊಂದಿರುವ ನಟ…
ಮಲಯಾಳಂನ ಎಂಪುರಾನ್ ಸಿನಿಮಾವೀವ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದರ ಹೊರತಾಗಿ ‘ಎಂಪುರಾನ್’ ಚಿತ್ರದಲ್ಲಿ ಹಿಂದೂ ವಿರೋಧಿ ದೃಶ್ಯಗಳು ಇದೆ ಎಂಬ ಆರೋಪ ವ್ಯಕ್ತವಾಗಿತ್ತು. ಇದು ಬಿಜೆಪಿಯವರ ಕಣ್ಣು ಕೆಂಪು ಮಾಡಿತ್ತು. ಈ ಕಾರಣಕ್ಕೆ ಬರೋಬ್ಬರಿ 24 ಕಡೆಗಳಲ್ಲಿ ಕತ್ತರಿ ಹಾಕಲಾಗಿತ್ತು. ಈ ಘಟನೆ ಬೆನ್ನಲ್ಲೇ ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಗೆ ಐಟಿ ನೋಟಿಸ್ ಕಳಿಸಲಾಗಿದೆ ಎನ್ನಲಾಗುತ್ತಿದೆ. ನಿನ್ನೆಯಷ್ಟೇ ಎಂಪುರಾನ್ ಚಿತ್ರದ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದರು. ವಿದೇಶಿ ವಿನಿಯಮದಲ್ಲಿ ನಿಯಮ ಉಲ್ಲಂಘನೆ ಆಗಿದೆ ಅವರನ್ನು ವಿಚಾರಣೆ ನಡೆಸಲಾಗಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಪೃಥ್ವಿರಾಜ್ ಅವರಿಗೆ ಐಟಿ ಇಲಾಖೆ ನೋಟಿಸ್ ನೀಡಲಾಗಿದೆಯಂತೆ. ಎಂಪುರಾನ್ ಚಿತ್ರ ಬಿಡುಗಡೆಯಾದ ಎರಡು ಮೂರು…
ಎಕ್ಕ ಮಾರ್ ಮಾರ್ ಅಂತಾ ಬರೋಬ್ಬರಿ ಕುಣಿದು ದೊಡ್ಮನೆ ಅಭಿಮಾನಿಗಳಲ್ಲಿ ಕಿಕ್ ಏರಿಸಿದ್ದ ಯುವರಾಜ್ ಕುಮಾರ್ ಈಗ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಯುವ ಎರಡನೇ ಹೆಜ್ಜೆ ಎಕ್ಕ ಶೂಟಿಂಗ್ ಸದ್ಯ ವಾರಾಣಾಸಿಯಲ್ಲಿ ನಡೆಯುತ್ತಿದೆ. ಹೀಗಾಗಿ ಇಡೀ ತಂಡ ಅಲ್ಲಿಯೇ ಬೀಡುಬಿಟ್ಟಿದೆ. ಶೂಟಿಂಗ್ ಬ್ರೇಕ್ ನಡುವೆ ಚಿತ್ರದ ನಾಯಕ ಯುವರಾಜ್ ಕುಮಾರ್, ನಾಯಕಿ ಸಂಪದಾ, ನಿರ್ಮಾಪಕ ಯೋಗಿ ಜಿ ರಾಜ್ ಹಾಗೂ ಪಿಆರ್ ಕೆಯ ಸತೀಶ್ ಸೇರಿದಂತೆ ಚಿತ್ರತಂಡದ ಹಲವರು ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಎಕ್ಕ ಚಿತ್ರದ 80 ರಿಂದ 85ರಷ್ಟು ಚಿತ್ರೀಕರಣ ಮುಕ್ತಾಯವಾಗಿದ್ದು, ಬಾಕಿ ಉಳಿದ 15ರಷ್ಟು ಶೂಟಿಂಗ್ ವಾರಾಣಾಸಿಯಲ್ಲಿ ನಡೆಯುತ್ತಿದೆ. ವಾರಾಣಾಸಿಯಲ್ಲಿ ಬಾಕಿ ಉಳಿದಿರುವ ಆಕ್ಷನ್ ಸೀಕ್ವೆನ್ಸ್ ಹಾಗೂ ಸಾಂಗ್ ಚಿತ್ರೀಕರಣವನ್ನು ಚಿತ್ರತಂಡ ನಡೆಸುತ್ತಿದೆ. ಏಪ್ರಿಲ್ ತಿಂಗಳಾತ್ಯಂತಕ್ಕೆ ಶೂಟಿಂಗ್ ಕಂಪ್ಲೀಟ್ ಮಾಡಿ ಚಿತ್ರತಂಡ ನಂತರ ಪ್ರಚಾರದ ಕಹಳೆ ಮೊಳಗಿಸಲು ಯೋಜನೆ ಹಾಕಿಕೊಂಡಿದೆ. ಇಡೀ ಚಿತ್ರತಂಡ ಹಾಗೂ ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟುಗೂಡಿ…
ತ್ರಿಬಲ್ ಆರ್ ಸೂಪರ್ ಸಕ್ಸಸ್ ಬಳಿಕ ಎಸ್ ಎಸ್ ರಾಜಮೌಳಿ ಟಾಲಿವುಡ್ ಪ್ರಿನ್ಸ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಸೈಲೆಂಟ್ ಆಗಿ ಚಿತ್ರದ ಮುಹೂರ್ತ ಮುಗಿಸಿ ಜಕ್ಕಣ್ಣ ತಂಡ ಕಟ್ಟಿಕೊಂಡು ಶೂಟಿಂಗ್ ಅಖಾಡಕ್ಕೆ ಇಳಿದಿದ್ದರು. ಶೂಟಿಂಗ್ ಹೊರಡೋದಿಕ್ಕೂ ಮುನ್ನ ಮಹೇಶ್ ಬಾಬು ಪಾಸ್ ಪೋರ್ಟ್ ಕಸಿದುಕೊಂಡು, ಸಿಂಹವನ್ನು ಬೋನ್ ಗೆ ಹಾಕಿರುವ ಫೋಟೋವನ್ನು ಹಂಚಿಕೊಂಡಿದ್ದರು. ಆದರೀಗ ಸಿಂಹ ಬೋನಿಂದ ಹೊರಬಂದಿದ್ದು, ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದೆ. ಮಹೇಶ್ ಬಾಬು ಆಗಾಗ್ಗೆ ಫ್ಯಾಮಿಲಿ ಜೊತೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಹೀಗಾಗಿ ರಾಜಮೌಳಿ ಸಿಂಹವನ್ನು ಬೋನಿನ ಒಳಗೆ ಹಾಕಿದಂತೆ ಪಾಸ್ಪೋರ್ಟ್ ಸೀಜ್ ಆಗಿದೆ ಎಂದು ತೋರಿಸುವಂತೆ ವೀಡಿಯೋ ಪೋಸ್ಟ್ ಮಾಡಿದ್ದರು. ಮಹೇಶ್ ಬಾಬುನ ಸಿಂಹದೊಂದಿಗೆ ಹೋಲಿಸಿದ್ದರು. ಪಾಸ್ಪೋರ್ಟ್ ತನ್ನ ಬಳಿ ಇದೆ ಅಷ್ಟು ಸುಲಭವಾಗಿ ವಿದೇಶಕ್ಕೆ ಹೋಗಲು ಬಿಡಲ್ಲ ಎನ್ನುವಂತೆ ಆ ವೀಡಿಯೋದಲ್ಲಿ ತೋರಿಸಿದ್ದರು. ಆದರೀಗ ಪ್ರಿನ್ಸ್ ಪಾಸ್ ಪೋರ್ಟ್ ಸಿಕ್ಕಿದ್ದು, ಫ್ಯಾಮಿಲಿ ಜೊತೆ ವಿದೇಶಕ್ಕೆ ಹಾರಿದ್ದಾರೆ. ‘ಎಸ್ಎಸ್ಎಂಬಿ 29’ ಚಿತ್ರದ ಶೂಟಿಂಗ್ ಶುರುವಾಗಿದ್ದು,…