ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಧೀಡೀರ್ ಅಂತಾ ದಕ್ಷಿಣ ಚಿತ್ರರಂಗದ ಖ್ಯಾತ ಸಿನಿಮಾ ಮೇಕರ್ ಎಸ್ ಎಸ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಸಿಕಂದರ್ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಭಾಯಿಜಾನ್ ಗೆ ತಕ್ಷಣ ಗೆಲುವಿನ ಅವಶ್ಯಕತೆಯಂತೂ ಇದೆ. ಹೀಗಾಗಿ ಸಲ್ಲುಮೀಯಾ ವಿಜಯೇಂದ್ರ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ. ಸಲ್ಮಾನ್ ಖಾನ್ ಸಿನಿಮಾ ಬದುಕಿನಲ್ಲಿ ಮೈಲಿಗಲ್ಲು ಸೃಷ್ಟಿಸಿದ ಚಿತ್ರ ಬಜರಂಗಿ ಭಾಯಿಜಾನ್. ಈ ಸಿನಿಮಾಗೆ ಕಥೆ ಕಟ್ಟಿಕೊಟ್ಟವರೇ ಇದೇ ವಿಜಯೇಂದ್ರ ಪ್ರಸಾದ್. ಎಲ್ಲದಕ್ಕಿಂತ ಮುಖ್ಯವಾಗಿ ರಾಜಮೌಳಿ ಹಿಂದಿನ ಶಕ್ತಿ ಇವ್ರೇ. ಜಕ್ಕಣ್ಣ ತೆರೆಮೇಲೆ ತರುವ ಸಿನಿಮಾಗಳ ಕಥೆ ಇವರದ್ದೇ. ಇಂತಹ ವಿಜಯೇಂದ್ರ ಪ್ರಸಾದ್ ಎಣೆದ ಬಜರಂಗಿ ಭಾಯಿಜಾನ್ ಕಥೆ ಬಾಲಿವುಡ್ ಅಂಗಳದಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಕಬೀರ್ ಖಾನ್ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಹೀರೋ ಆಗಿ ಅಬ್ಬರಿಸಿದರು. ಭಾರತದಲ್ಲಿ ಮಿಸ್ ಆಗುವ ಪಾಕಿಸ್ತಾನದ ಹುಡುಗಿ ಮುನ್ನಿಯನ್ನು ಮರಳಿ ಅವಳ ಊರು ತಲುಪಿಸೋ…
Author: Author AIN
ಸ್ಯಾಂಡಲ್ ವುಡ್ ಶ್ಯಾನೆ ಟಾಪಾಗಿರುವ ಬ್ಯೂಟಿ ಅದಿತಿ ಪ್ರಭುದೇವ ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬ ಆಚರಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಬರ್ತಡೇ ಪಾರ್ಟಿಯಲ್ಲಿ ಚಿತ್ರರಂಗದ ಅನೇಕ ತಾರೆಯರು ಭಾಗಿ. ಅದಿತಿ ಹಾಗೂ ಶ್ರೇಯಸ್ ದಂಪತಿಯ ಮುದ್ದಾದ ಮಗಳು ನೇಸರಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ನಟಿ ಮೇಘನಾ ರಾಜ್ ಫ್ಯಾಮಿಲಿ, ನೆನಪಿರಲಿ ಪ್ರೇಮ್ ಫ್ಯಾಮಿಲಿ, ಮಿಲನಾ-ಕೃಷ್ಣ ದಂಪತಿ, ನಟಿಯರಾದ ಅಮೃತಾ ಅಯ್ಯಂಗಾರ್, ಮಲೈಕಾ, ನಿರ್ಮಾಪಕ ಬಾ.ಮಾ.ಹರೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ವೈಟ್ ಥೀಮ್ ನಲ್ಲಿ ನಡೆದ ಬರ್ತಡೇ ಪಾರ್ಟಿಯಲ್ಲಿ ಅದಿತಿ, ಯಶಸ್ ಹಾಗೂ ಮಗಳು ನೇಸರ ವೈಟ್ ಅಂಡ್ ವೈಟ್ ಡ್ರೆಸ್ ತೊಟ್ಟು ಮಿಂಚಿದರು. ಮೂಲತಃ ಬೆಣ್ಣಿ ನಗರಿ ದಾವಣೆಗೆರೆಯವರಾದ ಅದಿತಿ ಪ್ರಭುದೇವ 2022ರಲ್ಲಿ ಉದ್ಯಮಿ ಯಶಸ್ ಅವರನ್ನು ವರಿಸಿದ್ದರು. 2024ರ ಏಪ್ರಿಲ್ 4ರಂದು ಈ ದಂಪತಿ ಹೆಣ್ಣು ಮಗವನ್ನು ಸ್ವಾಗತಿಸಿದ್ದರು. ಈ ಮಗುವಿಗೆ ನೇಸರ ಎಂದು ಚೆಂದದ ಹೆಸರಿಟ್ಟಿದರು.
ಹುಬ್ಬಳ್ಳಿ: ನಗರದ ಸರ್ವ ಧರ್ಮಗಳ ಸಮನ್ವಯದ ಮಠ ಎಂದೇ ಪ್ರಸಿದ್ಧತಾದ ಮೂರು ಸಾವಿರ ಮಠದಲ್ಲಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ವೀರಶೈವ ಸಂಘಟನಾ ಸಮಿತಿ ವತಿಯಿಂದ ಬಸವ ಜಯಂತಿ ಆಚರಣೆ ಪ್ರಯುಕ್ತ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಸಾಮಾಜಿಕ ಕಾರ್ಯಕರ್ತೆ ಸರೋಜಾ ಹೂಗಾರ ಅವರನ್ನ ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಹೋರಾಟಗಾರ ವೀರಶೈವ ಸಮಾಜದ ಮುಖಂಡ ಈರಪ್ಪ ಎಮ್ಮಿ, ಪ್ರಧಾನ ಕಾರ್ಯದರ್ಶಿ ಆಗಿ ಚನ್ನಬಸಪ್ಪ ಧಾರವಾಡಶೆಟ್ರು, ಉಪಾಧ್ಯಕ್ಷರಾಗಿ ಅಂದಪ್ಪ ಹರದಾರಿ, ಸಂಘಟನಾ ಕಾರ್ಯದರ್ಶಿ ಆಗಿ ಸದಾಶಿವ ಚೌಶಿಟ್ಟಿ, ರವಿ, ಬಾಪುಗೌಡ ಎಳವತ್ತಿ, ಮಲ್ಲೇಶಪ್ಪ ಶಿರಗೆಣ್ಣವರ, ತಾರಾದೇವಿ ವಾಲಿ, ಅನಸೂಯಾ ಅರಕೇರಿ, ರತ್ನಾ ಚೌಶೆಟ್ಟಿ,ರತ್ನಾ ಗಂಗಣ್ಣವರ,ಮಂಜುಳಾ ಮೇಟಿ,ಕಾರ್ಯದರ್ಶಿ ಆಗಿ ವೀರಣ್ಣ ನೀರಲಗಿ, ತಡಸದಮಠ,ವೀರಣ್ಣ ಅವರನ್ನಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಅಂಗಡಿ, ಮಹಾದೇವಿ ಬಡಕಣ್ಣವರ,ವಿಜಯಲಕ್ಷ್ಮಿ ಉಮಚಗಿ,ಶಕುಂತಲಾ ಮುಂತಾದವರು ಇದ್ದರು. https://ainkannada.com/bhovi-development-corporation-scam-ed-raids-10-locations/ ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಸರೋಜಾ ಹೂಗಾರ ಮೂರು ಸಾವಿರ ಮಠದಲ್ಲಿ ಶ್ರೀ ಬಸವೇಶ್ವರ…
ಬೆಂಗಳೂರು : ಕರ್ನಾಟಕ ಭೋವಿ ಅಭಿವೃದ್ದಿ ನಿಗಮದ ಹಗರಣ ಸಂಬಂಧ ಇಡಿ ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ ಸೇರಿ 10 ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಒಂಬತ್ತು ಕಡೆ ಮತ್ತು ಶಿವಮೊಗ್ಗದಲ್ಲಿ ಒಂದು ಕಡೆ ಏಕ ಕಾಲದಲ್ಲಿ ನಡೆಸಲಾಗಿದೆ. ಶುಕ್ರವಾರ ಬೆಳಗ್ಗೆ ಈ ಹಿಂದೆ ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ.ಬಿ.ಕೆ.ನಾಗರಾಜಪ್ಪ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿ ಅವರಿಗೆ ಸೇರಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ವಿಜಯನಗರದಲ್ಲಿರುವ ನಾಗರಾಜಪ್ಪ ಮತ್ತು ಜಾಲಹಳ್ಳಿಯಲ್ಲಿರುವ ಲೀಲಾವತಿಯವರ ನಿವಾಸ ಸೇರಿ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ. ಭೋವಿ ನಿಗಮದ ಅಧೀಕ್ಷಕರಾಗಿದ್ದ ಪಿ.ಡಿ.ಸುಬ್ಬಪ್ಪ ಅವರ ಸರಸ್ವತಿ ನಗರದಲ್ಲಿನ ನಿವಾಸದ ಮೇಲೂ ಇಡಿ ರೇಡ್ ಮಾಡಿದೆ. https://ainkannada.com/a-mob-of-thugs-attacked-a-young-man-with-a-knife-and-fled-for-a-trivial-reason/ ಭೋವಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರು. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು…
ರಾಯಚೂರು : ಕಂಪನಿಯ ಅಧಿಕಾರಿಗಳ ನಿರ್ಲಕ್ಷದಿಂದ ಒಂದು ಯುವಕ ಬಲಿಯಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ನಡೆದಿದೆ. ಡೆಮಾಲಿಷನ್ ಮಾಡಿರುವ ಕಾರ್ಮಿಕರ ಮನೆಗಳಲ್ಲಿ ಕರೆಂಟ್ ಡಿಸ್ಕನೆಟ್ ಮಾಡದ ಕಾರಣ ಅಮಾಯಕ ಜೀವ ಬಲಿಯಾಗಿದೆ. ಅಲ್ಲಿದ್ದ ಪ್ಲಾಸ್ಟಿಕ್ ಸೇರಿದಂತೆ ಗುಜರಿ ಸಾಮಾನುಗಳ ತೆಗೆದುಕೊಳ್ಳಲು ಬಂದಿದ್ದ ಅಂಬರೀಶ್ (19) ಯುವಕ ಕರೆಂಟ್ ವೈರ್ ತುಳಿದು, ಸಾವನ್ನಪ್ಪಿದ್ದಾನೆ. ಕರೆಂಟ್ ಡಿಸ್ ಕನೆಕ್ಟ್ ಮಾಡದೆ ಹಾಗೆ ಬಿಟ್ಟಿರುವ ಕಂಪನಿಯ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. https://ainkannada.com/a-mob-of-thugs-attacked-a-young-man-with-a-knife-and-fled-for-a-trivial-reason/ ನಿರ್ಲಕ್ಷ ವಹಿಸಿರುವ ಕಂಪನಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಸ್ಥಳೀಯರ ಪಟ್ಟು ಹಿಡಿದಿದ್ದಾರೆ.
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪುಡಿರೌಡಿಗಳು ತಡರಾತ್ರಿ ಅಟ್ಟಹಾಸ ಮೆರೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ಸಾರ್ವಜನಿಕ ಸ್ಥಳದಲ್ಲೇ ಚಾಕು ಇರಿದು ಪರಾರಿಯಾಗಿರುವ ಘಟನೆ ನಗರದ ಬಾಕಳೆ ಗಲ್ಲಿಯಲ್ಲಿ ನಡೆದಿದೆ. ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಕಳೆ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬು ಸಿತಾರವಾಲೆ ಎಂಬ ಯುವಕನಿಗೆ ಮೂವರು ಯುವಕರು ಚಾಕು ಇರಿದು ಪರಾರಿಯಾಗಿದ್ದಾರೆ. ಬಾಕಳೆ ಗಲ್ಲಿಯಲ್ಲಿರುವ ಬೇಕರಿಯೊಂದಕ್ಕೆ ಕೇಕ್ ತರಲು ತೆರಳಿದ್ದ ಇಬ್ಬು ಸಿತಾರವಾಲೆ ಮೇಲೆ ಏಕಾಏಕಿ ಅಟ್ಯಾಕ್ ಮಾಡಿರುವ ಮೂವರು ಯುವಕರು ಚಾಕುವಿನಿಂದ ತಲೆ ಮತ್ತು ಕಿವಿ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆ. ಪರಿಣಾಮ ಯುವಕನ ತಲೆ ಹಾಗೂ ಕಿವಿಗೆ ಗಂಭೀರವಾಗಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. https://ainkannada.com/action-to-prevent-consumption-and-supply-of-drugs-parade-led-by-commissioner/ ದುಷ್ಕರ್ಮಿಗಳನ್ನ ಪತ್ತೆಹಚ್ಚುವ ನಿಟ್ಟಿನಲ್ಲಿ ಶಹರ ಠಾಣೆ ಪೊಲೀಸರು ಮುಂದಾಗಿದ್ದು, ಹಲ್ಲೆಗೆ ಪ್ರಮುಖ ಕಾರಣ ಹಾಗೂ ಯಾರು ಈ ಕೃತ್ಯ ಎಸಗಿದ್ದಾರೆ ಎಂಬ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಒಟ್ಟಿನಲ್ಲಿ ಇಂದು ಒಂದೇ ದಿನದಲ್ಲಿ ನಗರದ ಮೂರು ಕಡೆಗಳಲ್ಲಿ ಕ್ಷುಲ್ಲಕ…
ತುಮಕೂರು : ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾಗಿ ಮಹಿಳೆ ಸಾವನ್ನಪ್ಪಿದ್ದಾಳೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಘಟನೆ ನಡೆದಿದೆ. ನೂತನವಾಗಿ ನಿರ್ಮಾಣವಾಗಿರುವ ಚಿಕ್ಕನಹಳ್ಳಿ ಬ್ರಿಡ್ಜ್ ಬಳಿ ಘಟನೆ ನಡೆದಿದ್ದು, ಅವೈಜ್ಞಾನಿಕವಾಗಿ ಉಬ್ಬು ಇರುವ ಕಾರಣ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮತ್ತೋರ್ವ ಬೈಕ್ ಸವಾರನಿಗೆ ಗಾಯಗಳಾಗಿದ್ದು, ಆತನನ್ನು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. https://ainkannada.com/tempo-traveler-collides-with-stationary-lorry-five-killed/ ನವೀನ್ 35 ಗಾಯಾಳು, ಪತ್ನಿ ಪೂರ್ಣಿಮಾ 30 ಮೃತ ಮಹಿಳೆಯಾಗಿದ್ದು, ಇಬ್ಬರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ರುದ್ರಾಪುರ ಗ್ರಾಮದವರು ಎನ್ನಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಲಬುರಗಿ : ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಐವರು ಮೃತಪಟ್ಟಿರುವ ದುರ್ಘಟನೆ ಕಲಬುರಗಿ ಜಿಲ್ಲೆಯ ಸೊನ್ನ ಕ್ರಾಸ್ ಬಳಿ ಘಟನೆ ನಡೆದಿದೆ.ಈ ಡೆಡ್ಲಿ ಆಕ್ಸಿಡೆಂಟ್ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದರೆ, ಹನ್ನೊಂದು ಜನಕ್ಕೆ ಗಾಯಗಳಾಗಿವೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಟೆಂಪೋ ಟ್ರಾವಲ್ಲೆರ್ ಡಿಕ್ಕಿಯಾಗಿದೆ. ವಾಜೀದ್, ಮೆಹಬೂಬಿ ಸೇರಿ ಐವರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. https://ainkannada.com/action-to-prevent-consumption-and-supply-of-drugs-parade-led-by-commissioner/ ಮೃತರು ಬಾಗಲಕೋಟೆ ಮೂಲದ ಒಂದೇ ಕುಟುಂಬದವರಾಗಿದ್ದು, ಕಲಬುರಗಿ ಕಡೆ ಟೆಂಪೋದಲ್ಲಿ ಬರ್ತಿದ್ದರು ಎನ್ನಲಾಗಿದೆ. ಈ ಸಂಬಂಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯಾದಗಿರಿ : ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುವ ವಿಚಾರವಾಗಿ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕೊನೆಗೂ ಮೌನಮುರಿದಿದ್ದಾರೆ. ರೈತರ ಮನವಿಗೆ ಸ್ಪಂದಿಸಿರುವ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಡ್ಯಾಂನಿಂದ ಕಾಲುವೆಗಳಿಗೆ ನೀರು ಬಿಡುವ ಬಗ್ಗೆ ಘೋಷಿಸಿದ್ದಾರೆ. ಹೀಗಾಗಿ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆಯಿಂದಲೇ ನೀರು ಬಿಡುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಶರಣಬಸಪ್ಪಗೌಡ ದರ್ಶನಾಪುರ ಅವರು, ರೈತರು ಆತಂಕ ಪಡುವ ಅಗತ್ಯವಿಲ್ಲ. ಸಿಎಂ ಹಾಗೂ ಡಿಸಿಎಂ ರೈತರು ಬಡವರ ಪರವಾಗಿದ್ದಾರೆ. ರೈತರ ಸಲಹೆ ಮೇರೆಗೆ ಮಾರ್ಚ್ 22 ರ ತನಕ ನೀರು ಬಿಟ್ಟು ಬಂದ್ ಮಾಡಲಾಗಿತ್ತು. ಬಳಿಕ ಇನ್ನು ಎರಡ್ಮೂರು ದಿನ ನೀರು ಬೇಕು ಅಂತ ಹೇಳಿದ್ದರಿಂದ ಮಾರ್ಚ್ 25 ರ ರಾತ್ರಿ ವರೆಗೆ ನೀರು ಬಿಡಲಾಗಿತ್ತು. ನೀರಾವರಿ ಸಲಹ ಸಮಿತಿ ನಿರ್ಧಾರದಂತೆ ನೀರು ಬಿಡಲಾಗಿತ್ತು https://ainkannada.com/government-stopped-narayanpura-dam-from-releasing-water-former-minister-rajugowda-kidi/ ನೀರಿನ ಅವಶ್ಯಕತೆ ಮನಗೊಂಡು ಏಫ್ರಿಲ್ 1 ರಂದು ನಾನು ಶಾಸಕರು ಹಾಗೂ ರೈತ ಮುಖಂಡರು ಡಿಸಿಎಂ ಅವರಿಗೆ…
ಹುಬ್ಬಳ್ಳಿ : ಹಾಲು, ಮೊಸರು ಸೇರಿದಂತೆ ಪೆಟ್ರೋಲ್ ಡಿಸೇಲ್ ದರ ಏರಿಕೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಗೋಕುಲ ರಸ್ತೆಯಲ್ಲಿನ ಅಕ್ಷಯ ಪಾರ್ಕ್ ಬಳಿರಸ್ತೆ ತಡೆದು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ದಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕರು, ಹಿರಿಯ ನಾಯಕರು, ಬಿಜೆಪಿ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು. https://ainkannada.com/action-to-prevent-consumption-and-supply-of-drugs-parade-led-by-commissioner/ ಇದೇ ವೇಳೆ ಮಾತನಾಡಿದ ಮಹೇಶ್ ಟೆಂಗಿನಕಾಯಿ, ರಾಜ್ಯದಲ್ಲಿ ಇನ್ಮುಂದೆ ಅಭಿವೃದ್ಧಿ ಆಗುವುದೇ ಇಲ್ಲ, ಕೇವಲ ಬೆಲೆ ಏರಿಕೆ ಮಾತ್ರ. ಈಗ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷವೂ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಿದ್ದರು. ಮಕ್ಕಳ ಕುಡಿಯುವ ಹಾಲಿನ ದರವನ್ನೂ ಈ ಸರ್ಕಾರ ಹೆಚ್ಚಿಸಿದೆ ಎಂದು ರಾಜ್ಯ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.