Author: Author AIN

ಎಸ್ ಎಸ್ ರಾಜಮೌಳಿ ಈ ಹೆಸರಿಗೆ ಇಂಟ್ರೂಡಕ್ಷನ್ ಕೊಡುವ ಅಗತ್ಯವಿಲ್ಲ ಬಿಡಿ. ಭಾರತೀಯ ಚಿತ್ರರಂಗದಲ್ಲಿ ನಯಾ ಟ್ರೆಂಡ್ ಸೆಟ್ ಮಾಡಿದ ಟ್ರೆಂಡ್ ಸೆಟ್ಟರ್, ಆಸ್ಕರ್ ಗೆದ್ದ ಅದ್ಭುತ ಸಿನಿಮಾ ಮೇಕರ್ ಜಕ್ಕಣ್ಣ ತಾವೇ ಸೆಟ್ ಮಾಡಿದ ಟ್ರೆಂಡ್ ನ್ನು ಬ್ರೇಕ್ ಮಾಡ್ತಿದ್ದಾರಂತೆ. ಎರಡು ಭಾಗದಲ್ಲಿ ಸಿನಿಮಾ ಹೇಳುವ, ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನ್ನು ಹುಟ್ಟುಹಾಕಿದ್ದೇ ಇದೇ ಮೌಳಿ. ಆದ್ರೀಗ ರಾಜಮೌಳಿ ಈ ಕಾನ್ಸೆಪ್ಟ್ ನ್ನು ಬದಲಿಸಲು ಮುಂದಾಗಿದ್ದಾರಂತೆ. ಜಕ್ಕಣ್ಣ ಹಾಗೂ ಪ್ರಿನ್ಸ್ ಕಾಂಬಿನೇಷನ್ ಮೆಗಾ ಪ್ರಾಜೆಕ್ಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಬಾರಿ ಪ್ಯಾನ್ ವರ್ಲ್ಡ್ ಗುರಿ ಇಟ್ಟಿರುವ ಮೌಳಿ ಅದಕ್ಕಾಗಿ ಬೇಜಾನ್ ವರ್ಕೌಟ್ ಮಾಡುತ್ತಿದ್ದಾರೆ. ದೊಡ್ಡದಾಗಿ ಏನೋ ಮಾಡೋದಿಕ್ಕಂತೂ ಹೊರಟ್ಟಿದ್ದಾರೆ ಅನ್ನೋದು ಗೊತ್ತೇ ಇದೆ. ಎಸ್ ಎಸ್ ಎಂಬಿ 29 ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಶೂಟಿಂಗ್ ಗೆ ಬ್ರೇಕ್ ಹಾಕಿ ರಿಲ್ಯಾಕ್ಸ್ ಮೂಡ್ ಗೆ ಜಾರಿದೆ.…

Read More

ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಲಾಂಛನದಲ್ಲಿ ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ “ಯುದ್ಧಕಾಂಡ” ಚಿತ್ರ ಏಪ್ರಿಲ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. “ಯುದ್ಧಕಾಂಡ” ಪ್ರತಿಯೊಬ್ಬ ಮಹಿಳೆಯು ನೋಡಲೇ ಬೇಕಾದ ಚಿತ್ರ. ಮಹಿಳೆಯರ ಮೇಲೆ ಯಾವ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ ಎಂದು ತೋರಿಸುತ್ತಿರುವ ಚಿತ್ರವೂ ಹೌದು. ನೊಂದ ಮಹಿಳೆಯರನ್ನು ಪ್ರತಿನಿಧಿಸುವ ಪಾತ್ರವನ್ನು ಅರ್ಚನಾ ಜೋಯಿಸ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಪವನ್ ಭಟ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಹಿರಿಯ ನಟರಾದ ಟಿ.ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಬೇಬಿ ರಾದ್ನ್ಯ ಸಹ ಈ ಚಿತ್ರದಲ್ಲಿದ್ದಾರೆ. ಇದೊಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದೆ. “ಯುದ್ಧ ಕಾಂಡ” ತೀರಾ ಕಡಿಮೆ ಬಜೆಟ್ ಅಥವಾ ತೀರಾ ಹೆವಿ ಬಜೆಟ್ ನ ಚಿತ್ರವಲ್ಲ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣವಾಗಿರುವ ಚಿತ್ರ. ಇಂತಹ ಚಿತ್ರಗಳು ಹೆಚ್ಚಾಗಿ ಜನರನ್ನು ತಲುಪಬೇಕು. ಉತ್ತಮ ಸಂದೇಶವಿರುವ ಈ ಚಿತ್ರವನ್ನು…

Read More

ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ “ವೀರ ಚಂದ್ರಹಾಸ” ಸಿನಿಮಾದ ಟ್ರೇಲರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಬಿಡುಗಡೆಗೊಳಿಸಿದರು. ತಮಿಳು, ಮಲಯಾಳಂ, ಕನ್ನಡ ಸೇರಿ ಬಹುಭಾಷೆಗಳ ಸಿನಿಮಾಗಳಲ್ಲಿ ತನ್ನ ಕಲಾ ಸಾಮರ್ಥ್ಯ ಪ್ರದರ್ಶಿಸಿ ಜನಮೆಚ್ಚುಗೆ ಕಳಿಸಿದ್ದೀರಿ. ಈ ಸಿನಿಮಾ ಕೂಡ ಯಶಸ್ವಿ ಕಾಣುತ್ತದೆ. ಸರ್ಕಾರದಿಂದ ಅಗತ್ಯ ಇರುವ ಸಹಕಾರ ನೀಡಲಾಗುವುದು. ನಿಮ್ಮ ಇಡೀ ಕಲಾ ತಂಡಕ್ಕೆ ಮತ್ತು ಸಿನಿಮಾ ತಂಡಕ್ಕೆ ಶುಭಾಶಯಗಳು‌ ಎಂದು ಮುಖ್ಯಮಂತ್ರಿಗಳು ಹಾರೈಸಿದರು.  ಮುಖ್ಯಮಂತ್ರಿಗಳ ಆಶೀರ್ವಾದ ಪಡೆದ ರವಿ ಬಸ್ರೂರು ತಂಡ ಅವರನ್ನು ಸಿನಿಮಾ ವೀಕ್ಷಣೆಗೆ ಬರಬೇಕು ಎಂದು ಆಹ್ವಾನಿಸಿದರು. ಬರುತ್ತೇನೆ ಎಂದು ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದರು. ‘ವೀರ ಚಂದ್ರಹಾಸ’ ಯಕ್ಷಗಾನದ ಕತೆ, ಪಾತ್ರಗಳನ್ನು ಹೊಂದಿರುವ ಸಿನಿಮಾ. ರವಿ ಬಸ್ರೂರು ಯಕ್ಷಗಾನದ ಪ್ರಪಂಚದಲ್ಲಿ ನಡೆಯುವ ಕತೆಯನ್ನು ಹರವಿಡಲು ಹೊರಟ್ಟಿದ್ದಾರೆ. 400ಕ್ಕೂ ಅಧಿಕ ಯಕ್ಷಗಾನ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಿವಣ್ಣ ಕೂಡ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.…

Read More

ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ಯಾರು ಅಂದ್ರೆ ತಕ್ಷಣ ಬರುವ ಹೆಸ್ರೇ ಒನ್‌ ಅಂಡ್‌ ಒನ್ಲಿ ತಲೈವರ್‌ ರಜನಿಕಾಂತ್.‌ ಕೋಟ್ಯಾನು ಕೋಟಿ ಅಭಿಮಾನಿಗಳ ನೆಚ್ಚಿನ ಪಡೆಯಪ್ಪ ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌. ಆ ನಂತ್ರ ಕಮಲ್‌ ಹಾಸನ್..ಹೀಗೆ ನಾನಾ ಹೆಸರುಗಳು ಸೇರ್ಪಡೆಯಾಗುತ್ತವೆ. ಕಾಲಿವುಡ್‌ ಸಿನಿದುನಿಯಾದ ಈ ಸೂಪರ್‌ ಸ್ಟಾರ್‌ ಗಳ ಸಂಭಾವನೆ ವಿಚಾರದ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತವೆ. 100 ಕೋಟಿ ಹಣ ಜೇಬಿಗಿಳಿಸಿಕೊಳ್ಳುವ ತಮಿಳು ಚಿತ್ರರಂಗದ ನಟರು ಬೇರೆ ಬೇರೆ ಉದ್ಯಮದಲ್ಲಿಯೂ ಹಣ ಹೂಡಿಕೆ ಮಾಡಿ ಸಾವಿರಾರು ಕೋಟಿ ಆಸ್ತಿ ಒಡೆಯರಾಗಿರುತ್ತಾರೆ. ಫೋರ್ಬ್ಸ್‌ ಭಾರತದ ಅತ್ಯಂತ ಶ್ರೀಮಂತ ನಟರ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಅದರಲ್ಲಿಯೂ ತಮಿಳು ಚಿತ್ರರಂಗದ ಅತ್ಯಂತ ಶ್ರೀಮಂತ ನಟ ಯಾರು ಅನ್ನೋದನ್ನು ತಿಳಿಸಿದೆ. ನಿಮ್ಮ ತಲೆಯಲ್ಲಿ ರಜನಿಕಾಂತ್‌, ಕಮಲ್‌ ಹಾಸನ್‌ ಕಾಲಿವುಡ್‌ ನಂಬರ್‌ 1 ಕುಬೇರರು ಅಂದುಕೊಂಡರೆ ಅದು ತಪ್ಪು. ಯಾಕಂದ್ರೆ ತಮಿಳುಚಿತ್ರರಂಗದ ಶ್ರೀಮಂತ ನಟ ಇಳಯಳಪತಿ ವಿಜಯ್‌. ತಮಿಳುಚಿತ್ರರಂಗದಲ್ಲಿ ರಜನಿಕಾಂತ್‌ ಅವರಷ್ಟೇ ಅಭಿಮಾನಿಗಳು, ವರ್ಚಸ್ಸು ಹೊಂದಿರುವ ನಟ…

Read More

ಮಲಯಾಳಂನ ಎಂಪುರಾನ್‌ ಸಿನಿಮಾವೀವ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. ನಟ ಹಾಗೂ ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ನಟನೆಯ ಈ ಚಿತ್ರ ಬಾಕ್ಸಾಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಇದರ ಹೊರತಾಗಿ ‘ಎಂಪುರಾನ್’ ಚಿತ್ರದಲ್ಲಿ ಹಿಂದೂ ವಿರೋಧಿ ದೃಶ್ಯಗಳು ಇದೆ ಎಂಬ ಆರೋಪ ವ್ಯಕ್ತವಾಗಿತ್ತು. ಇದು ಬಿಜೆಪಿಯವರ ಕಣ್ಣು ಕೆಂಪು ಮಾಡಿತ್ತು. ಈ ಕಾರಣಕ್ಕೆ ಬರೋಬ್ಬರಿ 24 ಕಡೆಗಳಲ್ಲಿ ಕತ್ತರಿ ಹಾಕಲಾಗಿತ್ತು. ಈ ಘಟನೆ ಬೆನ್ನಲ್ಲೇ ಚಿತ್ರದ ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ಗೆ ಐಟಿ ನೋಟಿಸ್‌ ಕಳಿಸಲಾಗಿದೆ ಎನ್ನಲಾಗುತ್ತಿದೆ. ನಿನ್ನೆಯಷ್ಟೇ ಎಂಪುರಾನ್‌ ಚಿತ್ರದ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದರು. ವಿದೇಶಿ ವಿನಿಯಮದಲ್ಲಿ ನಿಯಮ ಉಲ್ಲಂಘನೆ ಆಗಿದೆ ಅವರನ್ನು ವಿಚಾರಣೆ ನಡೆಸಲಾಗಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಪೃಥ್ವಿರಾಜ್ ಅವರಿಗೆ ಐಟಿ ಇಲಾಖೆ ನೋಟಿಸ್ ನೀಡಲಾಗಿದೆಯಂತೆ. ಎಂಪುರಾನ್‌ ಚಿತ್ರ ಬಿಡುಗಡೆಯಾದ ಎರಡು ಮೂರು…

Read More

ಎಕ್ಕ ಮಾರ್‌ ಮಾರ್‌ ಅಂತಾ ಬರೋಬ್ಬರಿ ಕುಣಿದು ದೊಡ್ಮನೆ ಅಭಿಮಾನಿಗಳಲ್ಲಿ ಕಿಕ್‌ ಏರಿಸಿದ್ದ ಯುವರಾಜ್‌ ಕುಮಾರ್‌ ಈಗ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಯುವ ಎರಡನೇ ಹೆಜ್ಜೆ ಎಕ್ಕ ಶೂಟಿಂಗ್‌ ಸದ್ಯ ವಾರಾಣಾಸಿಯಲ್ಲಿ ನಡೆಯುತ್ತಿದೆ. ಹೀಗಾಗಿ ಇಡೀ ತಂಡ ಅಲ್ಲಿಯೇ ಬೀಡುಬಿಟ್ಟಿದೆ. ಶೂಟಿಂಗ್‌ ಬ್ರೇಕ್‌ ನಡುವೆ ಚಿತ್ರದ ನಾಯಕ ಯುವರಾಜ್‌ ಕುಮಾರ್‌, ನಾಯಕಿ ಸಂಪದಾ, ನಿರ್ಮಾಪಕ ಯೋಗಿ ಜಿ ರಾಜ್ ಹಾಗೂ ಪಿಆರ್‌ ಕೆಯ ಸತೀಶ್‌‌ ಸೇರಿದಂತೆ ಚಿತ್ರತಂಡದ ಹಲವರು ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಎಕ್ಕ ಚಿತ್ರದ 80 ರಿಂದ 85ರಷ್ಟು ಚಿತ್ರೀಕರಣ ಮುಕ್ತಾಯವಾಗಿದ್ದು, ಬಾಕಿ ಉಳಿದ 15ರಷ್ಟು ಶೂಟಿಂಗ್ ವಾರಾಣಾಸಿಯಲ್ಲಿ ನಡೆಯುತ್ತಿದೆ. ವಾರಾಣಾಸಿಯಲ್ಲಿ ಬಾಕಿ ಉಳಿದಿರುವ ಆಕ್ಷನ್ ಸೀಕ್ವೆನ್ಸ್ ಹಾಗೂ ಸಾಂಗ್ ಚಿತ್ರೀಕರಣವನ್ನು ಚಿತ್ರತಂಡ ನಡೆಸುತ್ತಿದೆ. ಏಪ್ರಿಲ್ ತಿಂಗಳಾತ್ಯಂತಕ್ಕೆ ಶೂಟಿಂಗ್ ಕಂಪ್ಲೀಟ್ ಮಾಡಿ ಚಿತ್ರತಂಡ ನಂತರ ಪ್ರಚಾರದ ಕಹಳೆ ಮೊಳಗಿಸಲು ಯೋಜನೆ ಹಾಕಿಕೊಂಡಿದೆ. ಇಡೀ ಚಿತ್ರತಂಡ ಹಾಗೂ ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟುಗೂಡಿ…

Read More

ತ್ರಿಬಲ್‌ ಆರ್‌ ಸೂಪರ್‌ ಸಕ್ಸಸ್‌ ಬಳಿಕ ಎಸ್‌ ಎಸ್‌ ರಾಜಮೌಳಿ ಟಾಲಿವುಡ್‌ ಪ್ರಿನ್ಸ್‌ ಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಸೈಲೆಂಟ್‌ ಆಗಿ ಚಿತ್ರದ ಮುಹೂರ್ತ ಮುಗಿಸಿ ಜಕ್ಕಣ್ಣ ತಂಡ ಕಟ್ಟಿಕೊಂಡು ಶೂಟಿಂಗ್‌ ಅಖಾಡಕ್ಕೆ ಇಳಿದಿದ್ದರು. ಶೂಟಿಂಗ್‌ ಹೊರಡೋದಿಕ್ಕೂ ಮುನ್ನ ಮಹೇಶ್‌ ಬಾಬು ಪಾಸ್‌ ಪೋರ್ಟ್‌ ಕಸಿದುಕೊಂಡು, ಸಿಂಹವನ್ನು ಬೋನ್‌ ಗೆ ಹಾಕಿರುವ ಫೋಟೋವನ್ನು ಹಂಚಿಕೊಂಡಿದ್ದರು. ಆದರೀಗ ಸಿಂಹ ಬೋನಿಂದ ಹೊರಬಂದಿದ್ದು, ಏರ್‌ ಪೋರ್ಟ್‌ ನಲ್ಲಿ ಕಾಣಿಸಿಕೊಂಡಿದೆ. ಮಹೇಶ್‌ ಬಾಬು ಆಗಾಗ್ಗೆ ಫ್ಯಾಮಿಲಿ ಜೊತೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಹೀಗಾಗಿ ರಾಜಮೌಳಿ ಸಿಂಹವನ್ನು ಬೋನಿನ ಒಳಗೆ ಹಾಕಿದಂತೆ ಪಾಸ್‌ಪೋರ್ಟ್ ಸೀಜ್ ಆಗಿದೆ ಎಂದು ತೋರಿಸುವಂತೆ ವೀಡಿಯೋ ಪೋಸ್ಟ್ ಮಾಡಿದ್ದರು. ಮಹೇಶ್ ಬಾಬುನ ಸಿಂಹದೊಂದಿಗೆ ಹೋಲಿಸಿದ್ದರು. ಪಾಸ್‌ಪೋರ್ಟ್ ತನ್ನ ಬಳಿ ಇದೆ ಅಷ್ಟು ಸುಲಭವಾಗಿ ವಿದೇಶಕ್ಕೆ ಹೋಗಲು ಬಿಡಲ್ಲ ಎನ್ನುವಂತೆ ಆ ವೀಡಿಯೋದಲ್ಲಿ ತೋರಿಸಿದ್ದರು. ಆದರೀಗ ಪ್ರಿನ್ಸ್‌ ಪಾಸ್‌ ಪೋರ್ಟ್‌ ಸಿಕ್ಕಿದ್ದು, ಫ್ಯಾಮಿಲಿ ಜೊತೆ ವಿದೇಶಕ್ಕೆ ಹಾರಿದ್ದಾರೆ. ‘ಎಸ್‌ಎಸ್‌ಎಂಬಿ 29’ ಚಿತ್ರದ ಶೂಟಿಂಗ್‌ ಶುರುವಾಗಿದ್ದು,…

Read More

ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಧೀಡೀರ್‌ ಅಂತಾ ದಕ್ಷಿಣ ಚಿತ್ರರಂಗದ ಖ್ಯಾತ ಸಿನಿಮಾ ಮೇಕರ್‌ ಎಸ್‌ ಎಸ್‌ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್‌ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಸಿಕಂದರ್‌ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಭಾಯಿಜಾನ್‌ ಗೆ ತಕ್ಷಣ ಗೆಲುವಿನ ಅವಶ್ಯಕತೆಯಂತೂ ಇದೆ. ಹೀಗಾಗಿ ಸಲ್ಲುಮೀಯಾ ವಿಜಯೇಂದ್ರ ಪ್ರಸಾದ್‌ ಅವರನ್ನು ಭೇಟಿಯಾಗಿದ್ದಾರೆ. ಸಲ್ಮಾನ್‌ ಖಾನ್‌ ಸಿನಿಮಾ ಬದುಕಿನಲ್ಲಿ ಮೈಲಿಗಲ್ಲು ಸೃಷ್ಟಿಸಿದ ಚಿತ್ರ ಬಜರಂಗಿ ಭಾಯಿಜಾನ್.‌ ಈ ಸಿನಿಮಾಗೆ ಕಥೆ ಕಟ್ಟಿಕೊಟ್ಟವರೇ ಇದೇ ವಿಜಯೇಂದ್ರ ಪ್ರಸಾದ್‌. ಎಲ್ಲದಕ್ಕಿಂತ ಮುಖ್ಯವಾಗಿ ರಾಜಮೌಳಿ ಹಿಂದಿನ ಶಕ್ತಿ ಇವ್ರೇ. ಜಕ್ಕಣ್ಣ ತೆರೆಮೇಲೆ ತರುವ ಸಿನಿಮಾಗಳ ಕಥೆ ಇವರದ್ದೇ. ಇಂತಹ ವಿಜಯೇಂದ್ರ ಪ್ರಸಾದ್‌ ಎಣೆದ ಬಜರಂಗಿ ಭಾಯಿಜಾನ್‌ ಕಥೆ ಬಾಲಿವುಡ್‌ ಅಂಗಳದಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಕಬೀರ್‌ ಖಾನ್‌ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಹೀರೋ ಆಗಿ ಅಬ್ಬರಿಸಿದರು. ಭಾರತದಲ್ಲಿ ಮಿಸ್ ಆಗುವ ಪಾಕಿಸ್ತಾನದ ಹುಡುಗಿ ಮುನ್ನಿಯನ್ನು ಮರಳಿ ಅವಳ ಊರು ತಲುಪಿಸೋ…

Read More

ಸ್ಯಾಂಡಲ್‌ ವುಡ್‌ ಶ್ಯಾನೆ ಟಾಪಾಗಿರುವ ಬ್ಯೂಟಿ ಅದಿತಿ ಪ್ರಭುದೇವ ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬ ಆಚರಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಬರ್ತಡೇ ಪಾರ್ಟಿಯಲ್ಲಿ ಚಿತ್ರರಂಗದ ಅನೇಕ ತಾರೆಯರು ಭಾಗಿ. ಅದಿತಿ ಹಾಗೂ ಶ್ರೇಯಸ್‌ ದಂಪತಿಯ ಮುದ್ದಾದ ಮಗಳು ನೇಸರಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ನಟಿ ಮೇಘನಾ ರಾಜ್‌ ಫ್ಯಾಮಿಲಿ, ನೆನಪಿರಲಿ ಪ್ರೇಮ್‌ ಫ್ಯಾಮಿಲಿ, ಮಿಲನಾ-ಕೃಷ್ಣ ದಂಪತಿ, ನಟಿಯರಾದ ಅಮೃತಾ ಅಯ್ಯಂಗಾರ್, ಮಲೈಕಾ, ನಿರ್ಮಾಪಕ ಬಾ.ಮಾ.ಹರೀಶ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು. ವೈಟ್‌ ಥೀಮ್‌ ನಲ್ಲಿ ನಡೆದ ಬರ್ತಡೇ ಪಾರ್ಟಿಯಲ್ಲಿ ಅದಿತಿ, ಯಶಸ್ ಹಾಗೂ ಮಗಳು ನೇಸರ ವೈಟ್‌ ಅಂಡ್‌ ವೈಟ್‌ ಡ್ರೆಸ್‌ ತೊಟ್ಟು ಮಿಂಚಿದರು. ಮೂಲತಃ ಬೆಣ್ಣಿ ನಗರಿ ದಾವಣೆಗೆರೆಯವರಾದ ಅದಿತಿ ಪ್ರಭುದೇವ 2022ರಲ್ಲಿ ಉದ್ಯಮಿ ಯಶಸ್‌ ಅವರನ್ನು ವರಿಸಿದ್ದರು. 2024ರ ಏಪ್ರಿಲ್ 4ರಂದು ಈ ದಂಪತಿ ಹೆಣ್ಣು ಮಗವನ್ನು ಸ್ವಾಗತಿಸಿದ್ದರು. ಈ ಮಗುವಿಗೆ ನೇಸರ ಎಂದು ಚೆಂದದ ಹೆಸರಿಟ್ಟಿದರು.

Read More

ಹುಬ್ಬಳ್ಳಿ: ನಗರದ ಸರ್ವ ಧರ್ಮಗಳ ಸಮನ್ವಯದ ಮಠ ಎಂದೇ ಪ್ರಸಿದ್ಧತಾದ ಮೂರು ಸಾವಿರ ಮಠದಲ್ಲಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ವೀರಶೈವ ಸಂಘಟನಾ ಸಮಿತಿ ವತಿಯಿಂದ ಬಸವ ಜಯಂತಿ ಆಚರಣೆ ಪ್ರಯುಕ್ತ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಸಾಮಾಜಿಕ ಕಾರ್ಯಕರ್ತೆ ಸರೋಜಾ ಹೂಗಾರ ಅವರನ್ನ ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಹೋರಾಟಗಾರ ವೀರಶೈವ ಸಮಾಜದ ಮುಖಂಡ ಈರಪ್ಪ ಎಮ್ಮಿ, ಪ್ರಧಾನ ಕಾರ್ಯದರ್ಶಿ ಆಗಿ ಚನ್ನಬಸಪ್ಪ ಧಾರವಾಡಶೆಟ್ರು, ಉಪಾಧ್ಯಕ್ಷರಾಗಿ ಅಂದಪ್ಪ ಹರದಾರಿ, ಸಂಘಟನಾ ಕಾರ್ಯದರ್ಶಿ ಆಗಿ ಸದಾಶಿವ ಚೌಶಿಟ್ಟಿ, ರವಿ, ಬಾಪುಗೌಡ ಎಳವತ್ತಿ, ಮಲ್ಲೇಶಪ್ಪ ಶಿರಗೆಣ್ಣವರ, ತಾರಾದೇವಿ ವಾಲಿ, ಅನಸೂಯಾ ಅರಕೇರಿ, ರತ್ನಾ ಚೌಶೆಟ್ಟಿ,ರತ್ನಾ ಗಂಗಣ್ಣವರ,‌ಮಂಜುಳಾ ಮೇಟಿ,ಕಾರ್ಯದರ್ಶಿ ಆಗಿ ವೀರಣ್ಣ ನೀರಲಗಿ, ತಡಸದಮಠ,ವೀರಣ್ಣ ಅವರನ್ನಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಅಂಗಡಿ, ಮಹಾದೇವಿ ಬಡಕಣ್ಣವರ,ವಿಜಯಲಕ್ಷ್ಮಿ ಉಮಚಗಿ,ಶಕುಂತಲಾ ಮುಂತಾದವರು ಇದ್ದರು. https://ainkannada.com/bhovi-development-corporation-scam-ed-raids-10-locations/ ಈ‌ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಸರೋಜಾ ಹೂಗಾರ ಮೂರು ಸಾವಿರ ಮಠದಲ್ಲಿ ಶ್ರೀ ಬಸವೇಶ್ವರ…

Read More