Author: Author AIN

ಬಳ್ಳಾರಿ : ಬಳ್ಳಾರಿಯ ಕಣೇಕಲ ರಸ್ತೆಯ ರಾಣಿತೋಟ ಏರಿಯಾದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ. 37 ವರ್ಷದ ವೆಂಕಟೇಶ ಎಂಬಾತನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿದ್ದಾರೆ. ರಾಣಿತೋಟದ ಜುಮ್ಮಾಮಸೀದಿ ಮುಂಭಾಗದಲ್ಲೇ ಘಟನೆ ನಡೆದಿದ್ದು, ಮೃತ ವೆಂಕಟೇಶ್‌ ಗೊಲ್ಲರ್‌ ಆರ್ ಜೆ ಕಾಟನ್ ಮಿಲ್ ಇಂಡಸ್ಟ್ರಿನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಮೂವರು ಮಕ್ಕಳು ಇದ್ದರು ಎಂಬ ಮಾಹಿತಿ ಇದೆ. https://ainkannada.com/young-man-commits-suicide-after-being-questioned-about-taking-iphone/ ಇನ್ನೂ ಕೊಲೆಗೆ ಕಾರಣ ಇನ್ನೂ ಸಹ ಪತ್ತೆಯಾಗಿಲ್ಲ.ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  ಸ್ಥಳದಲ್ಲಿ ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ ಮುಗಿಲು ಮುಟ್ಟಿದೆ.

Read More

ಬೆಳಗಾವಿ : ಐಫೋನ್‌ ತಗೊಂಡಿದ್ದನ್ನ ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯಗೆ ಶರಣಾಗಿರುವ ಘಟನೆ ಬೆಳಗಾವಿಯ ನ್ಯೂ ವೈಭವ ನಗರದಲ್ಲಿ ನಡೆದಿದೆ. ಮನೆಯಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಸ್ತಫೀಸ್ ಅಬ್ದುಲ್ ರಶೀದ್ ಶೇಖ್(24) ಆತ್ಮಹತ್ಯೆ. ಇಎಂಐ ಮಾಡಿಸಿ 70 ಸಾವಿರ ಬೆಲೆಯ ಐಫೋನ್‌ ತಂದಿದ್ದ ಮುಸ್ತಫೀಸ್ ಶೇಖ್, ಈ ವಿಚಾರ ಗೊತ್ತಾಗಿ ಇಷ್ಟೊಂದು ಹಣ ಕೊಟ್ಟು ಯಾಕೆ ಮೊಬೈಲ್ ತಗೊಂಡಿದ್ಯಾ. ಕಡಿಮೆ ದರದ ಮೊಬೈಲ್ ತಗೋಬೇಕಿತ್ತು ಎಂದು ತಂದೆ  ಬುದ್ದಿ ಹೇಳಿದ್ದದ್ದಾರೆ. ಇದರಿಂದ ಮನನೊಂದು ಯುವಕ ಮನೆಯಲ್ಲೇ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾನೆ. https://ainkannada.com/heavy-rain-likely-in-14-districts-of-karnataka-today-where/ ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More

ಬೀದರ್‌ : ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದ್ದರಿಂದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ತೊಗರಿ ಖರೀದಿಗೆ ಸರಕಾರ ಮುಂದಾಗಿದೆ. ಆದರೆ ಅಧಿ ಕಾರಿಗಳ ನಿರ್ಲಕ್ಷ್ಯದಿಂದ ಖರೀದಿ ಕೇಂದ್ರವೊಂದರಲ್ಲಿ ಪ್ರತಿ ಕ್ವಿಂಟಾಲ್‌ಗೆ 2.56 ಕೆಜಿ ತೊಗರಿ ರೈತರಿಂದ ಹೆಚ್ಚುವರಿ ಪಡೆಯುತ್ತಿರುವುದು ಸಾಬೀತಾದರೂ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. https://ainkannada.com/shiv-sena-mp-arvind-sawant-raised-the-border-dispute-in-the-house/ ಜಿಲ್ಲೆಯ ಭಾಲ್ಕಿ ತಾಲೂಕಿನ ಕೇಸರ ಜವಳಗಾ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿರುವ ತೊಗರಿ ಖರೀದಿ ಕೇಂದ್ರದಲ್ಲಿ ನೋಂದಾಯಿತ ರೈತರು ತೊಗರಿ ಮಾರಾಟಕ್ಕೆ ಹೋದಾಗ ತೂಕದಲ್ಲಿ ಗೋಲ್‌ ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಇದನ್ನು ವಿರೋಧಿಸಿ ರೈತರು ಪ್ರತಿಭಟಿಸಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಅಧಿಕಾರಿಗಳು 50 ಕೆ.ಜಿ. ಬ್ಯಾಗ್‌ನಲ್ಲಿ ಬರೋಬ್ಬರಿ 1.260 ಗ್ರಾಂ ತೂಕದಲ್ಲಿ ವ್ಯಾತ್ಯಾಸ ಕಂಡುಬಂದಿದೆ ಎಂದು ವರದಿ ನೀಡಿದರೂ ಇದುವರೆಗೆ ಯಾರೊಬ್ಬರ ಮೇಲೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ ಡಿಸಿ ಮೋರೆ ಹೋದ ರೈತರು ಇನ್ನೂ ಕೇಸರಜವಳಗಾ ತೊಗರಿ ಖರೀದಿ…

Read More

ಬೆಳಗಾವಿ : ಮಹಾರಾಷ್ಟ್ರ ಉದ್ಧವ ಠಾಕ್ರೆ ಬಣದ ಶಿವಸೇನೆ ಸಂಸದ ಅರವಿಂದ ಸಾವಂತ ಇದೀಗ ಗಡಿ ವಿವಾದ ಕೆದಕಿ ಉದ್ಧಟತನ ಮೆರೆದಿದ್ದಾರೆ. ಶಿವಸೇನೆ ಸಂಸದ ಲೋಕಸಭೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಪ್ರಸ್ತಾಪಿಸಿದ್ದು, ಬೆಳಗಾವಿ ಸೇರಿ ಗಡಿ ವಿವಾದ ಇರುವ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದ್ದಾರೆ. ಲೋಕಸಭೆಯಲ್ಲೂ ಶಿವಸೇನೆ ಸಂಸದ ಗಡಿ ವಿಚಾರ ಪ್ರಸ್ತಾಪಿಸಿದರೂ ಕರ್ನಾಟಕದ ಸಂಸದರು ಮೌನಕ್ಕೆ ಶರಣಾಗಿದ್ದು ಮಾತ್ರ ವಿಪರ್ಯಾಸ. ಮಹಾರಾಷ್ಟ್ರ ರಾಜ್ಯದ ನಿರ್ಮಾಣ ಮೇ 1, 1960 ರಲ್ಲಿ ಆಗಿದೆ. ಆಗಿನಿಂದಲೂ ಬೆಳಗಾವಿ, ಕಾರವಾರ, ನಿಪ್ಪಾಣಿ, ಬಾಲ್ಕಿ, ಬೀದರನ ಬಹು ಭಾಷಿಕ ಮರಾಠಿ ಭಾಷಿಕರು ಮಹಾರಾಷ್ಟ್ರ ಸೇರ್ಪಡೆಗೆ ಹೋರಾಟ ಮಾಡುತ್ತಿದ್ದಾರೆ. ಈಗಲೂ ಮಹಾರಾಷ್ಟ್ರ ಸೇರಿಸುವಂತೆ ಹೋರಾಟ ಜೀವಂತವಿದೆ. ಆದರೂ ಅಲ್ಲಿನ ಮರಾಠಿ ಭಾಷಿಕರ‌ ಮೇಲೆ ಅನ್ಯಾಯ ಆಗುತ್ತಿದೆ https://ainkannada.com/sexual-harassment-case-against-4-year-old-girl-sentence-announced-for-accused/ ಸದನದಲ್ಲಿ ಮಾತನಾಡಿರುವ ಸಂದ ಅರವಿಂದ್‌ ಸಾವಂತ್‌, ಬಾಳಾಸಾಹೇಬ್ ಠಾಕ್ರೆ ದಿವಂಗತರಾದ್ರು ಗಡಿ ವಿವಾದ ಇತ್ಯರ್ಥವಾಗಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಎರಡು ರಾಜ್ಯದ ಮುಖ್ಯಮಂತ್ರಿಗಳನ್ನ ಆಹ್ವಾನಿಸಿದರು. ಆಗ…

Read More

ಬೆಳಗಾವಿ : ಬೆಳಗಾವಿಯಲ್ಲಿ 4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ ನಡೆಸಿದ್ದ ಪ್ರಕರಣ ಸಂಬಂಧ ಇದೀಗ ಕೋರ್ಟ್‌ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಘಟನೆ ನಡೆದ ಒಂದೇ ವರ್ಷದಲ್ಲಿ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ಬೆಳಗಾವಿಯ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಅವರು ಅತ್ಯಾಚಾರದ ಆರೋಪಿಗೆ 20 ವರ್ಷ ಜೈಲು ಮತ್ತು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆಗೊಳಗಾದ ವ್ಯಕ್ತಿಯನ್ನು ನಿಸಾರ್ ಅಹ್ಮದ್ ಫಕ್ರುಸಾಬ್ ಚಾಪ್ಗಾವ್ ಎಂದು ಗುರುತಿಸಲಾಗಿದೆ. https://ainkannada.com/unrelenting-microfinance-harassment-a-person-hangs-himself-in-gadag/ ಘಟನೆಯ ವಿವರ : ಕಳೆದ ವರ್ಷ 2024ರ ಫೆ.27ರಂದು ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ ಬಾಲಕಿಗೆ ಚಾಕೊಲೇಟ್ ಕೊಡುವುದಾಗಿ ಪುಸಲಾಯಿಸಿದ್ದ ಆರೋಪಿ ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ.  ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಿಂಗಳಲ್ಲಿ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದರು. ಇದೀಗ ಒಂದೇ ವರ್ಷದಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

Read More

ಸತ್ತವಳು 5 ವರ್ಷದ ಬಳಿಕ ಬದುಕಿ ಬಂದಳು ; ಪತ್ನಿಯ ಕೊಲೆ ಆರೋಪದಡಿ ಜೈಲುಪಾಲಾಗಿದ್ದ ಪತಿಗೆ ಶಾಕ್‌ ಮಡಿಕೇರಿ: ಆಕೆಯನ್ನು ಗಂಡನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಭಾವಿಸಲಾಗಿತ್ತು. ಆ ತಪ್ಪಿಗಾಗಿ ಗಂಡ ಎರಡು ವರ್ಷ ಜೈಲುಶಿಕ್ಷೆಯನ್ನು ಅನುಭವಿಸಿದ್ದ. ಆದರೆ ಇದೀಗ ಆತನಿಗೆ ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಅದೇ ಹೆಂಡತಿ ಹೋಟೆಲ್​​ನಲ್ಲಿ ಕುಳಿತುಕೊಂಡು ತಿಂಡಿ ತಿನ್ನುತ್ತಿರುವುದು ಕಾಣಿಸಿದೆ.. ಅದೂ ಕೂಡ ಲವರ್​ ಜೊತೆ.. ಇದು ಸಿನಿಮಾ ಕಥೆಯಲ್ಲ ಖಂಡಿತಾ ಅಲ್ಲ. ಕೊಡಿಗನಲ್ಲಿ ಮಲ್ಲಿಗೆ ಎಂಬ ಮಹಿಳೆಯ ಕಥೆ. ಹೌದು. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿದ್ದ ಕೊಲೆ ಪ್ರಕರಣವೊಂದಕ್ಕೆ ಇದೀಗ ಊಹಿಸಲಾಗದ ತಿರುವು ಸಿಕ್ಕಿದೆ. ಅಷ್ಟೇ ಅಲ್ಲ, ಯಾವ ಸಸ್ಪೆನ್ಸ್​, ಹಾರರ್, ಥ್ರಿಲ್ಲರ್, ರೊಮ್ಯಾಂಟಿಕ್ ಸಿನಿಮಾಗೂ ಕಡಿಮೆ ಇಲ್ಲ ಅನ್ನೋ ರೀತಿಯಲ್ಲಿ ಅನಾವರಣಗೊಂಡಿದೆ. https://ainkannada.com/love-birds-tied-the-knot-at-shidlaghatta-police-station/ ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಲ್ಲಿಗೆ ಬಸವನಹಳ್ಳಿ ಗ್ರಾಮದ ಆದಿವಾಸಿ ಜನಾಂಗದ ಯುವಕ ಸುಮಾರು…

Read More

ಬೆಂಗಳೂರು: ಬಿಜೆಪಿಯಿಂದ ಉಚ್ಛಾಟಬೆ ಮಾಡಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬೆಂಕಿ ಉಗುಳುತ್ತಿರುವ ರೆಬೆಲ್‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಯತ್ನಾಳ್‌, ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಸಿಗೋದಿಲ್ಲವೋ ಅಲ್ಲಿವರೆಗೆ ನಾನು ಬಿಜೆಪಿಗೆ ಹೋಗೊಲ್ಲ ಅಂತ ಶಪಥ ಮಾಡಿದ್ದಾರೆ. ವಿಜಯೇಂದ್ರ  ಅವರನ್ನ ಇಟ್ಟುಕೊಂಡು ಯತ್ನಾಳ್ ರನ್ನು ಬಿಜೆಪಿಗೆ ತೆಗೆದುಕೊಳ್ಳಲು ಆಗಲ್ಲ. ಆದರೆ ಯತ್ನಾಳ್ ವಾಪಸ್ ಬಿಜೆಪಿಗೆ ತರಲು ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಜೊತೆ ಮಾತುಕತೆ ಮಾಡಿಲ್ಲ. ಆದರೆ, ರಮೇಶ್ ಜಾರಕಿಹೋಳಿ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡುವಂತೆ ಫಡ್ನವಿಸ್ ಭೇಟಿಯಾಗಿದ್ದು. ನನ್ನ ಸಲುವಾಗಿ ಚರ್ಚೆ ಮಾಡೋದು ಅವಶ್ಯಕತೆ ಇಲ್ಲ.  ಯಾಕೆಂದರೆ 6 ವರ್ಷ ಹೊರಗೆ ಹಾಕಿದ್ದಾರೆ. ಮಾಧ್ಯಮಗಳ ಯತ್ನಾಳ್ ಹಿಂದೆ ಸರಿದ್ರು ಅಂತ ವಿಜಯೇಂದ್ರ ಪರ ಹೊಡೆಯಬೇಡಿ. ಮಾಧ್ಯಮಗಳು ಸುಮ್ಮನೆ ಚರ್ಚೆ ಮಾಡಿ ಟೈಂ ವೇಸ್ಟ್ ಮಾಡಬೇಡಿ. ರೈತರು, ನೀರಾವರಿ,…

Read More

ಚಿಕ್ಕಬಳ್ಳಾಪುರ : ಪೊಲೀಸ್ ಠಾಣೆಯಲ್ಲಿ ಪೊಲೀಸರೇ ಮುಂದೆ ನಿಂತು ಪ್ರೇಮಿಗಳ ಮದುವೆ ಮಾಡಿಸಿದ್ದಾರೆ. ಶಿಡ್ಲಘಟ್ಟ ನಗರ ಠಾಣೆಯಲ್ಲಿ ಪ್ರೀತಿಸಿದ್ದ ಜೋಡಿಯೊಂದು ವಿವಾಹವಾಗಿದೆ. ಕಾರ್ತಿಕ್ (22), ಅಂಕಿತಾ (22) ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರೂ ಸಹ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಜಾತಿ ಬೇರೆ ಬೇರೆಯಾಗಿದ್ದ ಕಾರಣ ಪೋಷಕರು ಮದುವೆಗೆ ಒಪ್ಪಿಸರಲಿಲ್ಲ. https://ainkannada.com/constant-torture-by-a-foreign-young-man-for-rejecting-love-young-woman-attempts-suicide/ ಹೀಗಾಗಿ ಇಬ್ಬರು ಸಹ ಪೊಲೀಸರ ಸಹಾಯ ಕೋರಿದ್ದು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್,ಪದ್ಮಾವತಮ್ಮ ಅವರ ನೇತೃತ್ವದಲ್ಲಿ ಇಬ್ಬರ ಪೋಷಕರನ್ನು ಸಂಧಾನ ಮಾಡಿದ್ದು, ಜೋಡಿಗೆ ಮದುವೆ ಮಾಡಿಸಿದ್ದಾರೆ.

Read More

ತುಮಕೂರು : ಎಂ ಎಲ್ ಸಿ ರಾಜೇಂದ್ರ ರಾಜಣ್ಣರ ಕೊಲೆಗೆ ಸುಪಾರಿ ಪ್ರಕರಣದ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಆದರೆ ಈ ಪ್ರಕರಣ ತನಿಖೆಯ ವೇಳೆ ಹಲವು ಅನುಮಾನಗಳು ಪೊಲೀಸರಿಗೆ ಮೂಡಿವೆ ಎನ್ನಲಾಗುತ್ತಿದೆ.   ರಾಜೇಂದ್ರ ಅವರಿಗೆ ಆಡಿಯೋ ನೀಡಿದ್ದ ಪುಷ್ಪಾ ಮೇಲೆ ಪೊಲೀಸರಿಗೆ ಒಂದು ಅನುಮಾನ ಶುರುವಾಗಿದೆ. ಪುಷ್ಪಾ ತನ್ನ ಗೆಳೆಯ ಸೋಮನ ವಿರುದ್ದ ಸೇಡು ತೀರಿಸಿಕೊಳ್ಳಲು ಈ ಸಂಚು ರೂಪಿಸಿದ್ದಳಾ..? ಸೋಮ ವ್ಯವಹಾರದಲ್ಲಿ ಮಾಡಿದ್ದ ಮೋಸಕ್ಕೆ ರಿವೇಂಜ್ ತೀರಿಸಿಕೊಳ್ಳಲು ಸುಪಾರಿ ಕಥೆ ಕಟ್ಟಿದಳಾ..? ಸಂಶಯ ಮೂಡಿದೆ. ಕಥೆಯಲ್ಲಿ ದೊಡ್ಡ ದೊಡ್ಡವರ ಹೆಸರು ಪ್ರಸ್ತಾಪಿಸಿದರೆ  ಸೋಮ ಒಂದಿಷ್ಟು ದಿನ ಕಂಬಿ ಎಣಿಸಬಹುದು ಎಂದುಕೊಂಡಿರಬಹುದು, ಹೀಗಾಗಿ ಈ ರೀತಿ ಕಥೆ ಕಟ್ಟಿದ್ದಾಳೆ ಎನ್ನಲಾಗುತ್ತಿದೆ. https://ainkannada.com/mlc-rajendra-murder-supari-case-main-accused-arrested/ ಪುಷ್ಪಾ ಈ ಆಡಿಯೋ ನೀಡುವಾಗ ರಾಜೇಂದ್ರ ಹತ್ಯೆ ಸಂಚಿಗೆ ಸುಪಾರಿ ನೀಡಿದ್ದವರು ಈಗಾಗಲೇ ಮುಂಗಡವಾಗಿ ೫ ಲಕ್ಷ ಹಣ ಮನು ಅಕೌಂಟಿಗೆ ಹಾಕಿದ್ದಾರೆ ಎಂದಿದ್ದಳು. ಆದರೆ ಸೋಮ ಮತ್ತು ಮನು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಯಾವುದೇ ಹಣ…

Read More

ಹಾವೇರಿ : ಆಕಸ್ಮಿಕವಾಗಿ ಬೆಂಕಿ ತಗುಲಿ ಎಂಟು ಮೇವಿನ ಬಣವೆಗಳು ಸುಟ್ಟು ಕರಕಲಾಗಿದ್ದು,  ನಾಲ್ಕು ಮನೆಗಳು ಹಾಗೂ ಕೃಷಿಉಪಕರಣಗಳು ಹಾನಿಗೊಳಗಾಗಿವೆ. ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಈ ಅವಘಡ ನಡೆದಿದೆ. ನಾಗಪ್ಪ ಮಣ್ಣೂರು, ಪುಟ್ಟಪ್ಪ, ಚನ್ನಪ್ಪ ದೊಡ್ಡ ನಿಂಗಪ್ಪ ಕಡೆಮನಿ, ಬಸಪ್ಪ ಬರಮಪ್ಪ ಮಣ್ಣೂರ ಮತ್ತು ಮುತ್ತಣ್ಣ ಎಂಬ ರೈತರಿಗೆ ಸೇರಿದ ಮೇವಿನ ಬಣವೆಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ಮೇವಿನ ಬಣವೆಗಳ ಸಮೀಪದಲ್ಲಿಯೇ ಇದ್ದ ಮನೆಗಳಿಗೆ ಬೆಂಕಿ ಆವರಿಸಿ ಸಾಕಷ್ಟು ಹಾನಿ ಸಂಭವಿಸಿದೆ. https://ainkannada.com/upalokayukta-makes-surprise-visit-to-mulbagilu-municipal-council/ ಮೊದಲಿಗೆ ಮೇವಿನ ಬಣವೆಗಳಿಗೆ ಬೆಂಕಿ ತಗಲಿದ್ದು, ನಂತರ ಪಕ್ಕದಲ್ಲೇ ಇದ್ದ ರೈತರ ಮನೆಗಳಿಗೂ ಬೆಂಕಿ ವ್ಯಾಪಿಸಿದೆ.

Read More