ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ಕೀರ್ತಿರಾಜ್ ಪುತ್ರ ಧರ್ಮ ಕೀರ್ತಿರಾಜ್ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಣ್ ಕಣ್ ಸಲಿಗೆ ಅಂತಾ ಕನ್ನಡ ಪ್ರೇಕ್ಷಕರನ್ನು ನವಗ್ರಹ ಸಿನಿಮಾ ಮೂಲಕ ಸೆಳೆದಿದ್ದ ಧರ್ಮ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆಗೆ ಹೋಗಿ ಬಂದ್ಮೇಲೆ ಧರ್ಮ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ವಿಶೇಷ ಪಾತ್ರಗಳ ಮೂಲಕ ಗಮನಸೆಳೆದಿರುವ ಧರ್ಮ ಕೀರ್ತಿ ರಾಜ್ ಮೊದಲ ಬಾರಿಗೆ ಟಾಲಿವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಧರ್ಮ ಮೊದಲ ತೆಲುಗು ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಮೆಚ್ಚಿರುವ ಅಪ್ಸರಾ ರಾಣಿ ನಾಯಕಿ ಅನ್ನೋದು ವಿಶೇಷ.. ಬೋಲ್ಡ್ ಪಾತ್ರಗಳ ಮೂಲಕವೇ ಖ್ಯಾತಿ ಗಳಿಸಿರುವ ಅಪ್ಸರಾ ರಾಣಿ ಹಾಗೂ ಧರ್ಮ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈ ಜೋಡಿ ಹೊಸ ಚಿತ್ರಕ್ಕೆ ಬ್ಲಡ್ ರೋಸಸ್ ಎಂಬ ಟೈಟಲ್ ಇಡಲಾಗಿದೆ. 2019ರಲ್ಲಿ ಅಪ್ಸರಾ ಚಿತ್ರರಂಗಕ್ಕೆ ಕಾಲಿಟ್ಟರು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಡೇಂಜರಸ್’ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಗ್ಲಾಮರ್…
Author: Author AIN
ಮಂಡ್ಯ : ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಭೀಕರ ಅಪಘಾತ ಪ್ರಕರಣ ಸಂಭವಿಸಿದ್ದು, ಬೆಂಗಳೂರು ಜೆ.ಪಿ.ನಗರ ಮೂಲದ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಬೆಂಗಳೂರಿನಿಂದ ಪಿರಿಯಾಪಟ್ಟಣಕ್ಕೆ ಹೋಗುವಾಗ ದುರ್ಘಟನೆ ನಡೆದಿದೆ. ಮಂಡ್ಯದ ತೂಬಿನಕೆರೆ ಎಕ್ಸಿಟ್ ಬಳಿ ಕಾರು ಮತ್ತು ಐರಾವತ ಬಸ್ ನಡುವೆ ಡಿಕ್ಕಿಯಾಗಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಸತ್ಯಾನಂದ ರಾಜೇ ಆರಸ್ (51), ಇವರ ಪತ್ನಿ ನಿಶ್ಚಿತಾ (45), ಚಂದ್ರು(62), ಇವರ ಪತ್ನಿ ಸುವೇದಿನಿ ರಾಣಿ(50) ಮೃತರು. https://ainkannada.com/hukkeri-attendant-kidnapping-case-do-you-know-the-dramatic-twist/ ಎಕ್ಸ್ಪ್ರೆಸ್ ವೇ ನಿಂದ ಎಕ್ಸಿಟ್ ಆಗುವಾಗ ಕಾರು ಚಾಲಕನಿಗೆ ಗೊಂದಲವುಂಟಾಗಿದ್ದು, ಗೊಂದಲದಿಂದ ಮತ್ತೆ ಎಕ್ಸ್ಪ್ರೆಸ್ ವೇಗೆ ಕಾರು ತಿರುಗಿಸಿದ್ದಾನೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ KSRTC ಐರಾವತ ಬಸ್ ಗೆ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಐಜಿ ಬೋರಲಿಂಗಯ್ಯ ಹಾಗೂ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮಂಡ್ಯ ಮಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಗಲಕೋಟೆ : ದಿನೇ ದಿನೇ ಹೆಚ್ಚಿದ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು, ನದಿಯಿಂದ ಬೃಹದಾಕಾರದ ಮೊಸಳೆಗಳು ನದಿಯಿಂದ ಹೊರ ಬರುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರ ಆತಂಕ ಹೆಚ್ಚಿಸಿದೆ. ಕೃಷ್ಣಾ ನದಿಯಲ್ಲಿ ನೀರು ವಿರಳವಾಗುತ್ತಿದ್ದಂತೆ ಬೃಹತ್ ಮೊಸಳೆ ಪ್ರತ್ಯಕ್ಷವಾಗಿವೆ, ಬಾಗಲಕೋಟೆ ಜಿಲ್ಲೆಯ ಗಲಗಲಿ ಸಮೀಪದ ರಬಕವಿಯಲ್ಲಿ ಮೊಸಳೆ ಪ್ರತ್ಯಕ್ಷಗೊಂಡಿದೆ. ಗ್ರಾಮದ ಸುರೇಶ ಗುಮ್ಮಡಿ ಎಂಬುವವರ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಮೊಸಳೆಯನ್ನ ನದಿಗೆ ಬಿಟ್ಟಿದ್ದಾರೆ. https://ainkannada.com/massive-march-demanding-release-of-water-to-krishna-right-bank-canal/ ನದಿ ತೀರದ ಹೊಲಗದ್ದೆಗಳ ರೈತರಿಗೆ ದಿನೇ ದಿನೇ ಆತಂಕ ಹೆಚ್ಚಾಗುತ್ತಿದ್ದು, ಮೊಸಳೆಗಳ ಬಗ್ಗೆ ಎಚ್ಚರಿಕೆಯಿಂದಿರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ದಾವಣಗೆರೆ : ಇತ್ತೀಚಿಗಷ್ಟೇ ದಾವಣಗೆರೆ ಪೊಲೀಸರು ನ್ಯಾಮತಿಯ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಿದ್ದು, ಕೋಟಿಗಟ್ಟಲೇ ಚಿನ್ನ ಪತ್ತೆ ಹಚ್ಚಿದ್ದರು. ಇದೀಗ ಇದಾದ ಕೆಲವೇ ದಿನಗಳಲ್ಲೇ ದಾವಣಗೆರೆ ಪೊಲೀಸರಿಗೆ ಮತ್ತೊಂದು ಚಾಲೆಂಜ್ ಎದುರಾಗಿದೆ. https://www.youtube.com/shorts/UXXYKgLtEVc ಬಂಗಾರದ ಅಂಗಡಿಯಲ್ಲಿ ಕಳ್ಳಿಯರ ಕೈಚಳಕ ತೋರಿದ್ದು, ಬಂಗಾದ ಅಂಗಡಿಗೆ ಬೆಳ್ಳಿ ಲೋಟ ಖರೀದಿಸಲು ಬಂದವರು ಒಂದು ಕೋಟಿ ಮೌಲ್ಯದ ಬಂಗಾರ ಕದೊಯ್ದಿದ್ದಾರೆ. ದಾವಣಗೆರೆಯ ಮಂಡಿ ಪೇಟೆಯಲ್ಲಿರುವ ರವಿ ಜ್ಯುವೆಲ್ಲರಿ ಶಾಪ್ನಲ್ಲಿ ಘಟನೆ ನಡೆದಿದೆ. https://ainkannada.com/revenge-for-loan-rejection-watch-the-web-series-robbery-plan-this-is-the-story-of-nyamathi-bank-robbery/ ಐದು ಜನರ ತಂಡವೊಂದು ಅಂಗಡಿಗೆ ಬೆಳ್ಳಿ ಲೋಟ ಕೇಳಿಕೊಂಡು ಬಂದಿದೆ. ಈ ವೇಳೆ ಕೆಲಸಗಾರ ಗಮನ ಬೇರೆಡೆಗೆ ಸೆಳೆದು 1. 13 ಕೋಟಿ ಮೌಲ್ಯದ 1 ಕೆಜಿ 400 ಗ್ರಾಂ ಬಂಗಾರದ ಆಭರಣಗಳನ್ನು ಎಗರಿಸಿದ್ದಾರೆ. ಕೆಲಸದವರು ಬೆಳ್ಳಿ ಲೋಟ ತೋರಿಸುವ ವೇಳೆ ಬಂಗಾರದ ಆಭರಣ ಇರುವ ಬಾಕ್ಸ್ ನ್ನೇ ಕದಿದ್ದಾರೆ..ಈ ಕಳ್ಳಿಯ ಕೈಚಳಕ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,…
ಕಾಂತಾರ-1 ಸಿನಿಮಾಗಾಗಿ ಅಖಂಡ ಸಿನಿಮಾಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಕ್ಟೋಬರ್ 2ರಂದು ಸಿನಿಮಾ ಅಖಾಡಕ್ಕೆ ಇಳಿಸಲು ಕಾಂತಾರ ಸಾರಥಿ ಹಾಗೂ ಅಧಿಪತಿ ರಿಷಬ್ ಶೆಟ್ಟಿ ಬಿಡುವಿಲ್ಲದೇ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕಾಂತಾರ ಪ್ರೀಕ್ವೆಲ್ ಚಿತ್ರದ ಬಹುತೇಕ ಮೇಜರ್ ದೃಶ್ಯಗಳ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸಿನಿಮಾ ಬಗ್ಗೆ ಸಣ್ಣದೊಂದು ಅಪ್ ಡೇಟ್ ಕೂಡ ಚಿತ್ರತಂಡ ರಿವೀಲ್ ಮಾಡಿಲ್ಲ. ಯಾರ್ ಕಾಂತಾರ 1 ಭಾಗವಾಗಿದ್ದಾರೆ ಅನ್ನೋದು ಟಾಪ್ ಸೀಕ್ರೆಟ್ ಆಗಿಯೇ ಉಳಿದೆ. ಈ ಮಧ್ಯೆ ಅಂದುಕೊಂಡ ಟೈಂನಲ್ಲಿ ಕಾಂತಾರಾ ರಿಲೀಸ್ ಆಗಲ್ಲ.. ಬಿಡುಗಡೆ ಲೇಟ್ ಆಗಲಿದೆ ಅನ್ನೋ ಮಾತುಗಳು ಕೇಳಿ ಬರ್ತಿದ್ದು, ಚಿತ್ರತಂಡಕ್ಕೆ ಈ ಗಾಳಿಸುದ್ದಿಗೆ ಗುನ್ ಹೊಡೆದಿದೆ. ಕಾಂತಾರ 1 ಬಿಡುಗಡೆ ಬಗ್ಗೆ ಹಬ್ಬಿರುವ ಎಲ್ಲಾ ಅಂತೆ ಕಂತೆಗಳಿಗೂ ಕಾಂತಾರಾ ಟೀಂ ಫುಲ್ ಸ್ಟಾಪ್ ಹಾಕಿದೆ.. ಈ ಮೊದಲೇ ಅನೌನ್ಸ್ ಮಾಡಿರುವಂತೆ ಅಕ್ಟೋಬರ್ 2 ರಂದು ಬಿಡುಗಡೆ ಮಾಡೇ ಮಾಡ್ತೀವೆ ಎಂದು ಚಿತ್ರತಂಡ ಹೇಳಿದೆ. ಬಿಡುಗಡೆ ದಿನಾಂಕದಲ್ಲಿ ಯಾವುದೇ…
ಬಿಲ್ಗಳನ್ನು ಪಾವತಿಸುವುದರಿಂದ ಹಿಡಿದು ದೈನಂದಿನ ಖರ್ಚುಗಳಿಗಾಗಿ ಶಾಪಿಂಗ್ ಮಾಡುವವರೆಗೆ, ಕ್ರೆಡಿಟ್ ಕಾರ್ಡ್ಗಳು ಇಂದು ಜೀವನದ ಅತ್ಯಗತ್ಯ ಭಾಗವಾಗಿದೆ. ಯುಪಿಐ ಪಾವತಿಯ ಜೊತೆಗೆ, ಕ್ರೆಡಿಟ್ ಕಾರ್ಡ್ಗಳು ಸಹ ಹೆಚ್ಚುತ್ತಿರುವ ಡಿಜಿಟಲ್ ವಹಿವಾಟುಗಳಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ ಕ್ರೆಡಿಟ್ ಕಾರ್ಡ್ಗಳ ಮೂಲಕ ಖರ್ಚು ಕಡಿಮೆಯಾಗುತ್ತಿದೆ. ಕಳೆದ ಎಂಟು ತಿಂಗಳಲ್ಲಿ ಫೆಬ್ರವರಿಯಲ್ಲಿ ಜನರು ಕ್ರೆಡಿಟ್ ಕಾರ್ಡ್ಗಳಿಗಾಗಿ ಕಡಿಮೆ ಹಣವನ್ನು ಖರ್ಚು ಮಾಡಿದ್ದಾರೆ. ರಿಸರ್ವ್ ಬ್ಯಾಂಕ್ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ಗಳ ಮೂಲಕ ಕೇವಲ 1.67 ಲಕ್ಷ ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಲಾಗಿದೆ. ಅನೇಕ ವಿದ್ಯಾರ್ಥಿಗಳು ತಮ್ಮ ಬೋರ್ಡ್ ಪರೀಕ್ಷೆಗಳಲ್ಲಿ ನಿರತರಾಗಿರುವುದರಿಂದ ಕ್ರೆಡಿಟ್ ಕಾರ್ಡ್ಗಳ ಮೂಲಕ ಕಡಿಮೆ ಖರ್ಚು ಮಾಡಿದ್ದಾರೆಂದು ತೋರುತ್ತದೆ. ಆದಾಗ್ಯೂ, ನೀಡಲಾಗುವ ಹೊಸ ಕ್ರೆಡಿಟ್ ಕಾರ್ಡ್ಗಳ ಸಂಖ್ಯೆಯೂ ಅರ್ಧದಷ್ಟು ಕಡಿಮೆಯಾಗಿದೆ. ಎಕನಾಮಿಕ್ ಟೈಮ್ಸ್ ಪ್ರಕಾರ, ಜನವರಿಯಲ್ಲಿ 8.2 ಲಕ್ಷ ಕ್ರೆಡಿಟ್ ಕಾರ್ಡ್ಗಳನ್ನು ನೀಡಲಾಗಿದ್ದರೆ, ಫೆಬ್ರವರಿಯಲ್ಲಿ ಅದು 4.4 ಲಕ್ಷಕ್ಕೆ ಇಳಿದಿದೆ. ಇದಲ್ಲದೆ, ಕಳೆದ ಎರಡು ತಿಂಗಳುಗಳಲ್ಲಿ ಷೇರು ಮಾರುಕಟ್ಟೆಯಲ್ಲಿನ ಕುಸಿತಕ್ಕೆ…
ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡು ಪಂದ್ಯಗಳನ್ನು ಗೆದ್ದು, ತವರಿನಲ್ಲಿ ಮೊದಲ ಪಂದ್ಯವನ್ನು ಸೋತಿತು. ಆರ್ಸಿಬಿ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್ಗಳಿಂದ ಸೋತಿದೆ. ಮೊಹಮ್ಮದ್ ಸಿರಾಜ್ ಮತ್ತು ಆರ್ ಸಾಯಿ ಕಿಶೋರ್ ಅದ್ಭುತ ಬೌಲಿಂಗ್ ಮಾಡಿ ಆರ್ಸಿಬಿಯನ್ನು 169 ರನ್ಗಳಿಗೆ ನಿರ್ಬಂಧಿಸಿದರು. ಲಿಯಾಮ್ ಲಿವಿಂಗ್ಸ್ಟೋನ್ 40 ಎಸೆತಗಳಲ್ಲಿ 54 ರನ್ ಗಳಿಸಿದರು. https://ainkannada.com/attention-diabetics-eat-this-dry-fruit-on-an-empty-stomach-to-control-sugar/ ಕಳೆದ ಸೀಸನ್ವರೆಗೆ ಆರ್ಸಿಬಿ ಪರ ಆಡಿದ್ದ ಸಿರಾಜ್, ಈಗ ಆರ್ಸಿಬಿ ವಿರುದ್ಧ ಕಣಕ್ಕೆ ಇಳಿದು 19 ರನ್ಗೆ 3 ವಿಕೆಟ್ ಕಬಳಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಗುಜರಾತ್ ತಂಡವು 18ನೇ ಓವರ್ನಲ್ಲಿ ಜೋಸ್ ಬಟ್ಲರ್ ಅವರ ಶತಕದ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಇಂಗ್ಲೆಂಡ್ ವಿಕೆಟ್ ಕೀಪರ್ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ಗಳೊಂದಿಗೆ 74 ರನ್ ಗಳಿಸಿ ಅಜೇಯರಾಗುಳಿದರು. ಅವರೊಂದಿಗೆ ಸಾಯಿ ಸುದರ್ಶನ್ 49 ರನ್ಗಳ ಇನ್ನಿಂಗ್ಸ್ ಆಡಿದರು. ಆದಾಗ್ಯೂ, ಈ ಪಂದ್ಯದ ನಂತರ ಪಾಯಿಂಟ್ಗಳ ಪಟ್ಟಿಯಲ್ಲಿ…
ಬೆಂಗಳೂರು: ಹಾಲು, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿನ್ನೆಯಿಂದ ಆರಂಭವಾಗಿದ್ದ ರಾಜ್ಯ ಬಿಜೆಪಿ ಬಿಜೆಪಿಯ ಅಹೋರಾತ್ರಿ ಧರಣಿ ಮುಕ್ತಾಯವಾಗಿದೆ. ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್ ಅಶೋಕ್ ಸೇರಿದಂತೆ ಹಲವು ನಾಯಕರು ಅಹೋರಾತ್ರಿ ಧರಣಿ ನಡೆಸಿದ್ದರು. ಇಂದು ಬೆಳಿಗ್ಗೆ ಧರಣಿ ಅಂತ್ಯಗೊಳಿಸಿದ ಬಿಜೆಪಿ ನಾಯಕರು ಸಿಎಂ ಮನೆ ಮುತ್ತಿಗೆ ಹಾಕಲು ಹೊರಟರು. ಬಿಜೆಪಿ ನಾಯಕರ ಜೊತೆ ನೂರಾರು ಕಾರ್ಯಕರ್ತರು ಸಿಎಂ ಮನೆ ಮುತ್ತಿಗೆಗೆ ಹೊರಟರು. ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿ ಎಲ್ಲಾ ಬಿಜೆಪಿ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು, ಬಸ್ ಗೆ ಹತ್ತಿಸಿ ಸ್ಥಳದಿಂದ ಕರೆದೊಯ್ದಿದ್ದಾರೆ. ಬ್ಯಾರಿಕೇಡ್ ಹಾಕಿ ತಡೆದ ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್ ಮೇಲೆ ಹತ್ತಿ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.…
ರಾಯಚೂರು : ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಜೆಡಿಎಸ್ ನ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ್ ಬೆಂಬಲಿ ನೀಡಿದ್ದಾರೆ. ಕೃಷ್ಣಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಾಯಿತು. ಶಾಸಕಿ ಕರೆಮ್ಮಾ ನಾಯಕ್ ಅವರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ನಡೆದಿದ್ದು, ರಾಯಚೂರು ಹೊರ ಭಾಗದ ಸಾತ್ ಮೈಲ್ ಬಳಿ ಹೆದ್ದಾರಿ ತಡೆದು ಆಕ್ರೋಶವ್ಯಕ್ತಪಡಿಸಿದ್ದರು. ಶಾಸಕಿ ನೇತೃತ್ವದಲ್ಲಿ ರಸ್ತೆ ರೋಖೋ ಚಳುವಳಿ ನಡೆಸಿದರು. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ವರೆಗೂ ಪಾದಯಾತ್ರೆ ನಡೆಸಿದರು. https://ainkannada.com/officials-not-releasing-water-farmers-break-basavasagar-reservoir-canal-gates/ ಕಾಲುವೆಗೆ ನೀರಿಲ್ಲದೇ ಬೆಳೆ ಹಾನಿ ಭೀತಿ ಎದುರಿಸುತ್ತಿರೊ ರಾಯಚೂರು, ಯಾದಗಿರಿ ಜಿಲ್ಲೆ ರೈತರಿಗೆ ಭತ್ತ,ಮೆಣಸಿನಕಾಯಿ, ಶೇಂಗಾ ಬೆಳೆ ಹಾನಿ ಭೀತಿ ಎದುರಾಗಿದೆ. ಸದ್ಯ ಕಟಾವಿನ ಹಂತಕ್ಕೆ ಬಂದಿರುವ ಬೆಳೆಗಳಿಗೆ ಏ.15 ರ ವರೆಗೆ ನೀರು ಹರಿಸುವಂತೆ ಆಗ್ರಹಿಸಿದ್ದು, ನೀರು ಹರಿಸಲು ಡೆಡ್ ಲೈನ್ ನೀಡಿದ್ದಾರೆ.
ಯಾದಗಿರಿ : ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ನೀರು ಬಂದ್ ಮಾಡಿರುವ ಸರ್ಕಾರದ ವಿರುದ್ದ ಅನ್ನದಾತರ ಆಕ್ರೋಶದ ಕಟ್ಟೆ ಹೊಡೆದಿದೆ. ನೀರು ಬಿಡದಕ್ಕೆ ರೊಚ್ಚಿಗೆದ್ದ ರೈತರು, ಕಾಲುವೆಯ ಗೇಟ್ ಗಳನ್ನೇ ಮುರಿದು ನೀರು ಹರಿಸಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ್ ಗ್ರಾಮದ ಬಳಿ ಘಟನೆ ನಡೆದಿದೆ. ರಾತ್ರೋರಾತ್ರಿ ಬಸವಸಾಗರ ಜಲಾಶಯ ಎಡ ದಂಡೆ ಕಾಲುವೆಯ ಉಪ ಕಾಲುವೆ ನಂಬರ್ 10 A ಹಾಗೂ 11 ಗೇಟ್ ಮುರಿದಿದ್ದಾರೆ. https://ainkannada.com/hukkeri-attendant-kidnapping-case-do-you-know-the-dramatic-twist/ ಕಾಲುವೆ ಮುರಿದ ವಿಷಯ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಸಹಿತ ಅಲ್ಲಿಂದ ಓಡಿಸಿದ್ದಾರೆ. ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಹ ನೀರು ಹರಿಸಲಿಲ್ಲ. ಹೀಗಾಗಿ ಕೊನೆಗೆ ಕಾಲುವೆ ಗೇಟ್ ಗಳನ್ನೇ ಮುರಿದು ಜಮೀನುಗಳಿಗೆ ನೀರು ಬಿಟ್ಟುಕೊಂಡಿದ್ದಾರೆ.