Author: Author AIN

ಸ್ಯಾಂಡಲ್ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಸಿನಿಮಾರಂಗಕ್ಕೆ ವಿದಾಯ ಹೇಳಿ ಪತಿ-ಮಕ್ಕಳು ಅಂತಾ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಮಾಲ್ಡೀವ್ಸ್ ನಲ್ಲಿ ಪ್ರತ್ಯಕ್ಷರಾಗಿದ್ದ ಅಮ್ಮು ಈಗ ಹಿಮದ ರಾಶಿ ಮಧ್ಯೆ ಕೂಲ್ ಕೂಲ್ ಪೋಸ್ ಕೊಟ್ಟಿದ್ದಾರೆ. ಬೀಸಿಗೆ ಬಿಸಿಲಿಗೆ ಜನ ಬಸವಳೆದಿದ್ದು, ಇನ್ನೂ ಬೆಂಗಳೂರಿನಲ್ಲಿಯೂ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಹೀಗಾಗಿ ಕೂಲ್ ವೆದರ್ ಬಯಸಿ ಅಮೂಲ್ಯ ಹಿಮ ತುಂಬಿದ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಯಾವುದು ಆ ಹಿಮದ ರಾಶಿಯ ಜಾಗ ಅನ್ನೋದನ್ನು ರಿವೀಲ್ ಮಾಡದ ಹಿಮಗಳ ರಾಶಿ ಮಧ್ಯೆ ನಿಂತು ಚೆಂದದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಳದಿ ಹಾಗೂ ಕಪ್ಪು ಬಣ್ಣದ ಬಟ್ಟೆ ತೊಟ್ಟು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಗೋಲ್ಡನ್ ಕ್ವೀನ್ ಗೆ ಗೆಳತಿ ಕೂಡ ಸಾಥ್ ಕೊಟ್ಟಿದ್ದಾರೆ. ಇಬ್ಬರ ಮಕ್ಕಳ ತಾಯಿಯಾದರೂ ಅಮೂಲ್ಯ ಫಿಟ್ ಅಂಡ್ ಫೈನ್ ಆಗಿದ್ದು, ಅಭಿಮಾನಿಗಳು ಮತ್ತೆ ಸಿನಿಮಾಕಡೆ ಮುಖ ಮಾಡಿ ಅಂತಾ ಬೇಡಿಕೆ ಇಡುತ್ತಿದ್ದಾರೆ.

Read More

ನೀವು ಸೋಂಕುಗಳು, ಮಧುಮೇಹ, ಹೃದ್ರೋಗ ಅಥವಾ ನೋವಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಈಗ ಅವುಗಳನ್ನು ಖರೀದಿಸಲು ನೀವು ಹಿಂದೆಂದಿಗಿಂತಲೂ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಏಪ್ರಿಲ್ 1 ರಿಂದ 900 ಕ್ಕೂ ಹೆಚ್ಚು ಅಗತ್ಯ ಔಷಧಿಗಳು ದುಬಾರಿಯಾಗಿವೆ. ಈ ಔಷಧಿಗಳ ಬೆಲೆಗಳು ಶೇ.1.74 ರಷ್ಟು ಹೆಚ್ಚಾಗಿದೆ. ಔಷಧಿಗಳ ಬೆಲೆಗಳನ್ನು ಸರ್ಕಾರದ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (NPPA) ನಿರ್ಧರಿಸುತ್ತದೆ. ಕಳೆದ ವರ್ಷದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಪ್ರಕಾರ, ಬೆಲೆಗಳು ಪ್ರತಿ ವರ್ಷವೂ ಬದಲಾಗುತ್ತವೆ. https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ ಈ ಎಲ್ಲಾ ಔಷಧಿಗಳು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಭಾಗವಾಗಿದೆ. ಇದರಲ್ಲಿ ಪ್ಯಾರಸಿಟಮಾಲ್, ಅಜಿಥ್ರೊಮೈಸಿನ್, ರಕ್ತಹೀನತೆ ಮತ್ತು ಜೀವಸತ್ವಗಳು ಸೇರಿವೆ, ಇವುಗಳನ್ನು ಅರಿವಳಿಕೆ, ಅಲರ್ಜಿಗಳು, ನರವೈಜ್ಞಾನಿಕ ಅಸ್ವಸ್ಥತೆಗಳು, ಹೃದ್ರೋಗ, ಕಿವಿ, ಮೂಗು ಮತ್ತು ಗಂಟಲು ಮುಂತಾದ ದೈನಂದಿನ ಔಷಧಿಗಳಿಗೆ ಬಳಸಲಾಗುತ್ತದೆ. ಯಾವ ಔಷಧಿಗಳು ಹೆಚ್ಚು ದುಬಾರಿಯಾಗುತ್ತವೆ? ➦ ಪ್ರತಿಜೀವಕ ಅಜಿಥ್ರೊಮೈಸಿನ್: 250 ಮಿಗ್ರಾಂ ಟ್ಯಾಬ್ಲೆಟ್ ಈಗ ರೂ.ಗೆ ಲಭ್ಯವಿದೆ. ೧೧.೮೭, ೫೦೦ ಮಿಗ್ರಾಂ ರೂ. 23.98.…

Read More

ಹುಬ್ಬಳ್ಳಿ: ನೇಹಾ ಹಿರೇಮಠ ಪ್ರಕರಣಕ್ಕೆ ಒಂದು ವರ್ಷ ತುಂಬುವಷ್ಟರಲ್ಲಿ ಮತ್ತೊಂದು ಘಟನೆ ಅದೇ ಹುಬ್ಬಳ್ಳಿಯಲ್ಲಿ ಕೇಳಿ ಬಂದಿದೆ. ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಯುವಕನಿಂದ ಯುವತಿಗೆ ಟಾರ್ಚರ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ಮನನೊಂದು ಯುವತಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಧಾರವಾಡ ಜಿಲ್ಲೆ ಕುಂದಗೋಳ ನಿವಾಸಿ ವಿದ್ಯಾ( ಹೆಸರು ಬದಲಾವಣೆ ಮಾಡಲಾಗಿದೆ) ಎಂಬ ಯುವತಿ ಆತ್ಮಹತ್ಯೆಗೆ ಯತ್ನ ಮಾಡಲಾಗಿದ್ದು, ಕುಂದಗೋಳ ಪಟ್ಟಣದ ಸಿರಾಜ್ ಎಂಬ ಮುಸ್ಲಿಂ ಯುವಕ ‌ಕೊಲೆಗೆ ಯತ್ನಿಸಿದ್ದಾನೆ. ವಿದ್ಯಾನಗರದ ಸುಶ್ರುತ ಕಾಲೇಜಿನಲ್ಲಿ ಮೆಡಿಕಲ್‌ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ನಲ್ಲಿ ವಿದ್ಯಾ ಓದುತ್ತಿದ್ದು, ಸಿರಾಜ್, ವಿದ್ಯಾ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪವಿದೆ. https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ ಅಲ್ಲದೆ ರಂಜಾನ್ ಹಬ್ಬದಂದು ಕಾಲೇಜಿಗೆ ಬಂದು ವಿದ್ಯಾ ಮೇಲೆ ಮಾರಣಾಂತಿಕವಾಗಿ ಸಿರಾಜ್ ಹಲ್ಲೆ ನಡೆಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಸಿರಾಜ್ ಕಾಟಕ್ಕೆ ಬೇಸತ್ತು ವಿದ್ಯಾ (ಬೇರೆ ಹೆಸರು) ಆತ್ಮಹತ್ಯೆಗೆ ಯತ್ನಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ…

Read More

ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಗೆ ಗೆಲುವು ಅನ್ನೋದು ಮರಿಚಿಕೆಯಾಗಿದೆ. ಸಾಲು ಸಾಲು ಸೋಲುಗಳನ್ನು ಕಾಣುತ್ತಿರುವ ಸಲ್ಲುಮೀಯಾ ಬ್ಯಾಕ್ ಟು ಟ್ರ್ಯಾಕ್ ಗೆ ಕರೆದುಕೊಂಡು ಜವಾಬ್ದಾರಿಯನ್ನು ದಕ್ಷಿಣದ ಖ್ಯಾತ ನಿರ್ದೇಶಕ ಎ ಆರ್ ಮುರುಗದಾಸ್ ಹೊತ್ತುಕೊಂಡಿದ್ದರು. ಅದೇ ಭರವಸೆಯಲ್ಲಿ ಸಿಕಂದರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ದಕ್ಷಿಣದ ನಟಿ ರಶ್ಮಿಕಾ ಮಂದಣ್ಣರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಆದ್ರೆ ಈ ಸೌತ್ ಫಾರ್ಮೂಲ ವರ್ಕೌಟ್ ಆಗಿಲ್ಲ. ಟ್ರೆಂಡ್ ಗೆ ತಕ್ಕಂತೆ ಮುರುಗದಾಸ್ ಸಿಕಂದರ್ ಕಥೆಯಲ್ಲಿ ಅಪ್ ಡೇಟ್ ಇಲ್ಲದೇ ಇರುವುದು ಸಿಕಂದರ್ ಸೋಲಿಗೆ ಕಾರಣ ಅನ್ನೊ ಅಭಿಪ್ರಾಯ ಸಿನಿಮಾವಲಯದಲ್ಲಿ ವ್ಯಕ್ತವಾಗುತ್ತಿದೆ. ಸಿಕಂದರ್ ಸೋತು ಸುಣ್ಣವಾಗುತ್ತಿದ್ದಂತೆ ಗೆಲುವಿಗಾಗಿ ಮತ್ತೊಮ್ಮೆ ಸಲ್ಮಾನ್ ಖಾನ್ ದಕ್ಷಿಣ ಚಿತ್ರರಂಗದ ನಿರ್ದೇಶಕನ ಹಿಂದೆ ಬಿದ್ರೆ ಅನ್ನೋ ಟಾಕ್ ಬಾಲಿವುಡ್ ನಿಂದ ಸೌತ್ ಸಿನಿರಂಗದವರೆಗೂ ಹಬ್ಬಿದೆ. ತೆಲುಗಿನ ಖ್ಯಾತ ನಿರ್ದೇಶಕ ಹರೀಶ್ ಶಂಕರ್ ಜೊತೆ ಭಾಜಿಯಾನ್ ಸಿನಿಮಾ ಮಾಡ್ತಿದ್ದಾರೆ ಎಂಬ ಗುಲ್ಲೆದಿದೆ. ಇತ್ತೀಚೆಗೆ ಹರೀಶ್ ಶಂಕರ್ ನಿರ್ದೇಶನದ ಮಿಸ್ಟರ್ ಬಚ್ಚನ್ ಚಿತ್ರ…

Read More

ಚಿತ್ರದುರ್ಗ: ಚಿತ್ರದುರ್ಗ ನಗರದ ಡಿ ಆರ್ ಮೈದಾನದಲ್ಲಿ ಇಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಲಾಯಿತು. ನಾಡಿನ ಹೆಲ್ಲಡೆ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಅದರಂತೆಯೇ ಚಿತ್ರದುರ್ಗ ನಗರದ ಡಿಆರ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಇಡೀ ಸುಧಾಕರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ ಇನ್ನು ಪೋಲಿಸ್ ಪಥಸಂಚಲದಲ್ಲಿ ಪೊಲೀಸರು ವಿಶಿಷ್ಟ ವಸ್ತ್ರವನ್ನು ಧರಿಸಿ ಪಥಸಂಚಲ ನೋಡುಗರಿಗೆ ಸಂತೋಷವನ್ನುಂಟು ಮಾಡಿದೆ. ಸಿವಿಲ್ ಪೊಲೀಸ್, ಡಿಎಆರ್ ಪೊಲೀಸ್, ಗೃಹ ರಕ್ಷಕ ದಳ, ಅರಣ್ಯ ಇಲಾಖೆ ಅಧಿಕಾರಿಗಳು ವಿಶಿಷ್ಟವಾಗಿ ಪಥಸಂಚಲನವನ್ನು ನಡೆಸಿದ್ದಾರೆ.

Read More

ನವದೆಹಲಿ:  ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಮಸೂದೆಯನ್ನು ಮಂಡಿಸಿದರು. ಎರಡೂ ಮನೆಗಳ ಜಂಟಿ ಸಮಿತಿಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಬಗ್ಗೆ ನಡೆದ ಚರ್ಚೆಯನ್ನು ಭಾರತದ ಸಂಸತ್ತಿನ ಇತಿಹಾಸದಲ್ಲಿ ಇಲ್ಲಿಯವರೆಗೆ ಮಾಡಲಾಗಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ.  ಜಂಟಿ ಸಮಿತಿಯ ಎಲ್ಲ ಸದಸ್ಯರಿಗೆ ನಾನು ಧನ್ಯವಾದ ಮತ್ತು ಅಭಿನಂದಿಸುತ್ತೇನೆ. https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ ಇಲ್ಲಿಯವರೆಗೆ, ವಿವಿಧ ಸಮುದಾಯಗಳ ರಾಜ್ಯ ಹೊಂದಿರುವವರ ಒಟ್ಟು 284 ನಿಯೋಗಗಳು ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಸಮಿತಿಯ ಮುಂದೆ ಮಂಡಿಸಿವೆ. 25 ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಪ್ರಾಂತ್ಯಗಳ ವಕ್ಫ್‌ ಮಂಡಳಿಗಳು ಸಹ ತಮ್ಮ ಸಲ್ಲಿಕೆಗಳನ್ನು ಪ್ರಸ್ತುತಪಡಿಸಿವೆ ಎಂದು ರಿಜಿಜು ತಿಳಿಸಿದ್ದಾರೆ. ಭರವಸೆ ಮಾತ್ರವಲ್ಲ, ಈ ಮಸೂದೆಯನ್ನು ವಿರೋಧಿಸುವವರು ಸಹ ತಮ್ಮ ಹೃದಯದಲ್ಲಿ ಬದಲಾವಣೆಯನ್ನು ಹೊಂದಿರುತ್ತಾರೆ ಎಂದು ನನಗೆ ಖಾತ್ರಿಯಿದೆ. ಪ್ರತಿಯೊಬ್ಬರೂ ಈ ಮಸೂದೆಯನ್ನು ಸಕಾರಾತ್ಮಕ ಮನೋಭಾವದಿಂದ ಬೆಂಬಲಿಸುತ್ತಾರೆ ಎಂದು ರಿಜಿಜು ಆಶಯ ವ್ಯಕ್ತಪಡಿಸಿದ್ದಾರೆ.

Read More

ಬೆಂಗಳೂರು: ಐಪಿಎಲ್‌ 2025ರ ಟೂರ್ನಿಯಲ್ಲಿ ತವರಿನಾಚೆ ಆಡಿತ ಎರಡೂ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಆರ್‌ಸಿಬಿ ಇಂದು ತವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲಿದೆ. ಬುಧವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸಜ್ಜಾಗಿದೆ. ಹ್ಯಾಟ್ರಿಕ್‌ ಗೆಲುವಿನ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿ ಆರ್‌ಸಿಬಿ ಇದೆ. https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ ಇನ್ನೂ ಪಂದ್ಯ ನೋಡಲು ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೇವೆ ಒದಗಿಸುವುದಾಗಿ ಘೋಷಣೆ ಬೇಡಿದೆ. ಈಗಾಗಲೇ ನಮ್ಮ ಮೆಟ್ರೋ ಕಾರ್ಯಾಚರಣೆ ಸಮಯವನ್ನು ರಾತ್ರಿ 12:30 ರವರೆಗೆ ವಿಸ್ತರಣೆ ಮಾಡಿದೆ. ಇದೀಗ ಬಿಎಂಟಿಸಿ ಕೂಡ ಟಿಕೆಟ್ ಪ್ರಿಯರಿಗೆ ಶುಭ ಸುದ್ದಿ ನೀಡಿದೆ. ಕೇವಲ ಇಂದಿನ ಪಂದ್ಯಕ್ಕೆ ಮಾತ್ರವಲ್ಲದೆ, ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಐಪಿಎಲ್ ಪಂದ್ಯಗಳ ದಿನ ಕೂಡ ಬಿಎಂಟಿಸಿ ವಿಶೇಷ ಬಸ್ಸುಗಳು ಕಾರ್ಯಚರಣೆ ನಡೆಸಲಿವೆ. ಐಪಿಎಲ್​ಗೆ ಬಿಎಂಟಿಸಿ ವಿಶೇಷ ಬಸ್: ಎಲ್ಲಿಂದ ಎಲ್ಲಿಗೆ ಸ್ಪೆಷಲ್ ಬಸ್? ಎಂ ಚಿನ್ನಸ್ವಾಮಿ…

Read More

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್. ಎಷ್ಟೋ ನಟ-ನಟಿಯರಿಗೆ ಹತ್ತು ವರ್ಷಗಳ ಕಾಲ ಸೈಕಲ್ ಹೊಡೆದ್ರೂ ಸಿಗದ ಸಕ್ಸಸ್ ಶಾರ್ಟ್ ಟೈಮ್ನಲ್ಲಿಯೇ ರಶ್ಮಿಕಾ ಭತ್ತಳಿಕೆ ಸೇರಿಕೊಂಡಿದೆ. ತೆಲುಗಿ ಹಾರಿದ್ಮೇಲೆ ಕನ್ನಡಕ್ಕೆ ಗುಡ್ ಬೈ ಹೇಳಿರುವ ಪುಷ್ಪನ ಶ್ರೀವಲ್ಲಿ ಈಗ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಕ್ಸಸ್ ಸಿಕ್ಸರ್ ಬಾರಿಸ್ತಿದ್ದ ರಶ್ಮಿಕಾಗೆ ಅದ್ಯಾಕೋ ಸಿಕಂದರ್ ಸೋಲಿನ ರುಚಿ ಉಣಿಸಿದೆ. ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದ ಈ ಬೆಡಗಿ ಈಗ ವಯಸ್ಸಿನ ಬಗ್ಗೆ ಮುಕ್ತಾವಾಗಿ ಮಾತನಾಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಈದ್ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದೆ. ಆದರೆ ನಿರೀಕ್ಷೆಗೆ ತಕ್ಕಂತೆ ಈ ಚಿತ್ರ ಗಳಿಕೆ ಕಂಡಿಲ್ಲ. ಪ್ರೇಕ್ಷಕರಿಗೂ ಕಥೆ ಇಷ್ಟವಾಗಿಲ್ಲ. ಒಂದ್ಕಡೆ ಸಿಕಂದರ್ ಸೋಲನ್ನು ಲೆಕ್ಕಕ್ಕೆ ಹಾಕಿಕೊಳ್ಳದ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟುಹಬ್ಬ ಆಚರಣೆಗೆ…

Read More

ನವದೆಹಲಿ: ಕಾಂಗ್ರೆಸ್‌ನವರು ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ವಕ್ಫ್ ಬಿಲ್ 1950ರ ದಶಕದಲ್ಲಿ ಬಂದಿದ್ದು. 1990 ಹಾಗೂ 2013ರಲ್ಲಿ ತಿದ್ದುಪಡಿಯಾಗಿದೆ. ಈಗ ತಿದ್ದುಪಡಿ ಮಾಡುತ್ತಿರುವುರುವುದು ಹೊಸದೇನಲ್ಲ. 2013ಕ್ಕಿಂತ ಮೊದಲು ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಸಮಿತಿ ಕೆಲವು ಶಿಫಾರಸು ಮಾಡಿತ್ತು. ಅವುಗಳಲ್ಲಿ ಆಗಿನ ಯುಪಿಎ ಸರ್ಕಾರ ಕೆಲವೇ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಿ ಕೆಲವು ಅಂಶಗಳನ್ನು ಹಾಗೇ ಬಿಟ್ಟಿತ್ತು ಎಂದರು. https://ainkannada.com/one-cup-of-french-fries-is-equivalent-to-smoking-25-cigarettes-do-you-know-how-dangerous-it-is-for-you/ ಮುಖ್ಯವಾಗಿ ದೇಶದ ಕಾನೂನು ಬಹಳ ದೊಡ್ಡದು, ಸಂವಿಧಾನ ದೊಡ್ಡದು. 1990 ಹಾಗೂ 2013ರ ಕಾಯ್ದೆಯಲ್ಲಿ ಎಲ್ಲಾ ಕಾನೂನಿಗಿಂತ ವಕ್ಫ್ ದೊಡ್ಡದು ಎಂದು ಹೇಳಿದೆ. ಸುಪ್ರೀಂಕೋರ್ಟ್ ಕೂಡಾ ಇದರಲ್ಲಿ ಮಧ್ಯಸ್ಥಿಕೆ ವಹಿಸದಂತೆ ಮಾಡಲಾಗಿದೆ. ಅದನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದರು. ಇನ್ನೊಂದು ಇದರಲ್ಲಿ ಸಾಕಷ್ಟು ವ್ಯಾಜ್ಯಗಳಿವೆ. ಮುಸಲ್ಮಾನರ ಆಸ್ತಿಯೇ ವಕ್ಫ್‌ಗೆ ಹೋಗಿದೆ. ವಕ್ಫ್ ಆಸ್ತಿಯೇ ಕಾಂಗ್ರೆಸ್ ನಾಯಕರ ಕೈಗೆ…

Read More

ಬಾಲಿವುಡ್ ಪವರ್‌ಫುಲ್‌ ಕಪಲ್ ಬೊಂಬೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಕಲಹ ಎದ್ದಿದೆ. ಈ ಜೋಡಿ ಡಿವೋರ್ಸ್ ಪಡೆಯುತ್ತಿದ್ದಾರೆ ಅನ್ನೋ ಬಿಸಿ ಬಿಸಿ ಬ್ರೇಕಿಂಗ್ ಕಳೆದ ಒಂದಷ್ಟು ತಿಂಗಳಿನಿಂದ ಹರಿದಾಡ್ತಿದೆ. ಈ ಚರ್ಚೆ ನಡುವೆಯೇ ಅಭಿ-ಐಸು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳೋದು ಅಪರೂಪವಾಗ್ಬಿಟ್ಟಿತ್ತು. ಆದ್ರೆ ಡಿವೋರ್ಸ್ ಸುದ್ದಿ ಗುಲ್ಲಿನ ನಡುವೆ ಬಾಲಿವುಡ್ ಈ ಜೋಡಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿ ಡಿವೋರ್ಸ್ ಅಂದವರಿಗೆಲ್ಲಾ ಬಾಯಿ ಮುಚ್ಚಿಕೊಳ್ಳುವಂತೆ ಮಾಡಿದ್ದಾರೆ. ಇತ್ತೀಚೆಗೆ ಫ್ಯಾಮಿಲಿ ಮದುವೆಯೊಂದರಲ್ಲಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ., ಮಗಳು ಆರಾಧ್ಯ ಕೂಡ ಅಪ್ಪ ಅಮ್ಮನಿಗೆ ಸಾಥ್ ಕೊಟ್ಟಿದ್ದಾರೆ. ಪುಣೆಯಲ್ಲಿ ನಡೆದ ಮದುವೆಯಲ್ಲಿ ಸಮಾರಂಭದಲ್ಲಿ ‘ಕಜ್ರಾ ರೇ’ ಹಾಡಿಗೆ ಐಸು ಹಾಗೂ ಅಭಿ ಕುಣಿದು ಕುಪ್ಪಳಿಸಿದ್ದಾರೆ. ಮಗಳು ಆರಾಧ್ಯ ಕೂಡ ಅಪ್ಪ ಅಮ್ಮನ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಡಿವೋರ್ಸ್ ಅಂತಿದ್ದವರಿಗೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ. …

Read More