ರಾಯಚೂರು : ಮೊಲಗಳ ಬೇಟೆಯಾಡಿ ವಿಜೃಂಭಿಸಿದ ಮಸ್ಕಿ ಕ್ಷೇತ್ರದ ಬಸನಗೌಡ ತುರವಿಹಾಳ ಪುತ್ರ ಹಾಗೂ ಸಹಹೋದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗ್ರಾಮದಲ್ಲಿ ನಡೆದ ಶಂಕರಲಿಂಗೇಶ್ವರ ಜಾತ್ರೆ ಸಂದರ್ಭ ಶಾಸಕ ಬಸನಗೌಡ ತುರುವಿಹಾಳ ಅವರ ಕುಟುಂಬದ ಸದಸ್ಯರು ಮೊಲಗಳ ಬೇಟೆಯಾಡಿದ್ದು, ಮಾರಕಾಸ್ತ್ರಗಳನ್ನು ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದಾರೆ. . ಸಹೋದರ ಸಿದ್ದನಗೌಡ ಹಾಗೂ ಪುತ್ರ ಸತೀಶ್ ಗೌಡ ಮೊಲಗಳನ್ನ ಕೊಂದು ಕಟ್ಟಿಗೆಗೆ ನೇತು ಹಾಕಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಿಸಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. https://ainkannada.com/chitradurga-driver-loses-control-car-overturns-two-dead-three-seriously-injured/ ಅರಣ್ಯ ಇಲಾಖೆ ಕಾಯ್ದೆಯಡಿ ಮೊಲಗಳ ಬೇಟೆಯಾಡುವುದು ಅಪರಾಧ ಕೃತ್ಯವಾದರೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ. ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನ ಹಿಡಿದು ಮೆರವಣಿಗೆ ಮಾಡಿದರೂ ಪೊಲೀಸ್ ಇಲಾಖೆ ಸಹ ಕಣ್ಮುಚ್ಚಿ ಕುಳಿತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Author: Author AIN
ಕೊಪ್ಪಳ ; ವಿಜಯೇಂದ್ರ ಪರ ಕೆಲ ಮಾಧ್ಯಮದವರು ಇದ್ದಾರೆ ಎಂದ ಬಿಜೆಪಿ ಉಚ್ಚಾಟಿತ ನಾಯಕ ಯತ್ನಾಳ್ ಅವರಿಗೆ ಮಾಧ್ಯಮದವರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ವಿಜಯಪುರ ನಗರ ಬಸನಗೌಡ ಪಾಟೀಲ ಯತ್ನಾಳ ಕೊಪ್ಪಳದ ಗವಿಮಠಕ್ಕೆ ಆಗಮಿಸಿದ್ದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ವಿಜಯಪುರದಲ್ಲಿ ಈ ಜೀವನದಲ್ಲಿ ನಾನು ಕಾಂಗ್ರೆಸ್ ಗೆ ಹೋಗುವುದಿಲ್ಲ. ವಿಜಯೇಂದ್ರ ನಕಲಿ ಫೋಟೋ ಹರಿ ಬಿಡುತ್ತಿದ್ದಾರೆ. ವಿಜಯೇಂದ್ರ ಹಣವಿದೆ. ಸಾವಿರಾರು ಕೋಟಿ ರೂಪಾಯಿ ಗಳಿಸಿದ್ದಾನೆ. ಕೆಲವು ಮಾಧ್ಯಮದವರು ಸಹ ಅವರ ಬೆಂಬಲಿಸುತ್ತಾರೆ ಎಂದಿದ್ದು, ಯತ್ನಾಳರ ಮಾತಿಗೆ ಮಾಧ್ಯಮದವರು ಆಕ್ರೋಶ ವ್ಯಕ್ತಪಡಿಸಿದರು. https://ainkannada.com/basanagowada-patil-yatnal-gavimath/ ಇನ್ನೂ ಕೊಪ್ಪಳಕ್ಕೆ ಭೇಟಿ ನೀಡಿದ ವೇಳೆ ಅವರ ಬೆಂಬಲಿಗರು ಯತ್ನಾಳ್ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು.
ಬಿಜೆಪಿಯಿಂದ ಉಚ್ಛಾಟನೆ ಬಳಿಕ ಕೊಪ್ಪಳದ ಗವಿ ಮಠಕ್ಕೆ ಯತ್ನಾಳ್ ಭೇಟಿ | AIN Kannada https://www.youtube.com/watch?v=FyHEMvANau0
ಕೋಲಾರ : ಕೊರಿಯರ್ ಪಾರ್ಸೆಲ್ ಕೊಡುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದ ಘಟನೆ ಕೋಲಾರ ತಾಲ್ಲೂಕಿನ ಮುದುವಾಡಿ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೇತನ್ ಹಾಗೂ ಯುವರಾಜ್ ಹಲ್ಲೆಗೊಳಗಾಗಿದ್ದು, ನಗರದ ಕೀಲುಕೋಟೆ ನಿವಾಸಿ ಕೊರಿಯರ್ ಬಾಯ್ ಪವನ್ ಹಾಗೂ ಆತನ ಸೋದರ ಮೋಹನ್ ಎಂಬುವರಿಂದ ಹಲ್ಲೆ ನಡೆದಿದೆ. ಕೊರಿಯರ್ ಬಾಯ್ ಪವನ್ ಹಾಗೂ ಹೊಸಹಳ್ಳಿ ಯುವಕನ ಮಧ್ಯೆ ಪೋನ್ ನಲ್ಲಿ ಮಾತಿನ ಚಕಮಕಿ ನಡೆದಿದೆ. ಮಾತು ಅತಿರೇಕಕ್ಕೆ ತಿರುಗಿ ಗ್ರಾಮಕ್ಕೆ ಹುಡುಕಿಕೊಂಡು ಬಂದು ಗಲಾಟೆ ಮಾಡಿದ ಕೊರಿಯರ್ ಬಾಯ್ ಪವನ್ ಮತ್ತು ಆತನ ಸಹೋದರ ಮೋಹನ್ ಚೇತನ್ ಮತ್ತು ಯುವರಾಜ್ಗೆ ಚಾಕುವಿನಿಂದ ಇರಿದಿದ್ದಾರೆ. https://ainkannada.com/clash-between-two-groups-in-belgaum-city/ ಇನ್ನೂ ಚಾಕು ಇರಿತದಿಂದ ಉದ್ರಿಕ್ತರಾದ ಗ್ರಾಮದ ಜನರು ಕೂಡಲೇ ಪವನ್ ಹಾಗೂ ಮೋಹನ್ ಬಟ್ಟೆ ಬಿಚ್ಚಿ ಕಟ್ಟಿಹಾಕಿ ಥಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಚಾಕು ಇರಿತಕ್ಕೆ ಒಳಗಾದ ಗಾಯಾಳುಗಳಿಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ…
45 Teaser Launch Even | ಉಪ್ಪಿ ಊಟ ಮಾಡೋ ಸ್ಟೈಲ್ ತೋರಿಸಿಕೊಟ್ಟ ಶಿವಣ್ಣ..! | AIN kannada https://www.youtube.com/watch?v=BQ8-Djn770Q
ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಮಹಿಳೆಯೊಬ್ಬರು ಸುಮಾರು 17 ವರ್ಷಗಳ ಕಾಲ ಹೊಟ್ಟೆ ನೋವನ್ನು ಸಹಿಸಬೇಕಾಯಿತು. 17 ವರ್ಷಗಳ ಹಿಂದೆ ಹೆರಿಗೆಯ ಸಮಯದಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸಾ ಕತ್ತರಿಗಳು ಪತ್ತೆಯಾಗಿವೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಆಕೆಯ ಪತಿ ಹೇಳುವಂತೆ ತನ್ನ ಹೆಂಡತಿ 17 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಅವರು ಎಲ್ಲಿಗೆ ಹೋದರೂ ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕೊನೆಗೆ, ಲಕ್ನೋದ ವೈದ್ಯಕೀಯ ಕಾಲೇಜಿನಲ್ಲಿ ಮಾಡಿದ ಎಕ್ಸ್-ರೇ ಪರೀಕ್ಷೆಯಲ್ಲಿ ಹೊಟ್ಟೆಯಲ್ಲಿ ಕತ್ತರಿ ಇರುವುದು ಪತ್ತೆಯಾಗಿದೆ. https://ainkannada.com/see-the-importance-history-and-method-of-celebrating-ramadan/ ಉತ್ತರ ಪ್ರದೇಶದ ಲಕ್ನೋದ ಸಂಧ್ಯಾ ಪಾಂಡೆ ಎಂಬ ಮಹಿಳೆಯನ್ನು ಫೆಬ್ರವರಿ 28, 2008 ರಂದು ಶ್ರೋಣಿಯ ನೋವಿನಿಂದಾಗಿ ಶೀ ಮೆಡಿಕಲ್ ಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಅವಳಿಗೆ ಸಿ-ಸೆಕ್ಷನ್ ಮಾಡಿದಾಗ, ಅವರು ಅವಳ ಹೊಟ್ಟೆಯಲ್ಲಿ ಕತ್ತರಿಯನ್ನು ಮರೆತರು. ವರ್ಷಗಳ ಕಾಲ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಸ್ಕ್ಯಾನ್ ಮಾಡಲು ಕೆಜಿಎಂಯು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಮತ್ತು ಸತ್ಯ ಹೊರಬಂದಿತು.…
ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರು ರನ್ಗಳಿಂದ ಸೋಲಿಸಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೊದಲ ಗೆಲುವು ದಾಖಲಿಸಿತು. ಆದರೆ, ಗೆಲುವಿನ ಹೊರತಾಗಿಯೂ, ತಮ್ಮ ಸ್ಕೋರ್ ಅನ್ನು ರಕ್ಷಿಸಿಕೊಳ್ಳುವಾಗ ನಿಧಾನಗತಿಯ ಓವರ್ ದರವನ್ನು ಕಾಯ್ದುಕೊಂಡಿದ್ದಕ್ಕಾಗಿ ಅವರ ನಾಯಕ ರಿಯಾನ್ ಪರಾಗ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಆವೃತ್ತಿಯಲ್ಲಿ ಸ್ಲೋ ಓವರ್ ರೇಟ್ ತಪ್ಪಿತಸ್ಥನೆಂದು ಸಾಭೀತಾದ ಎರಡನೇ ನಾಯಕ ರಿಯಾನ್ ಪರಾಗ್. ಅವರಿಗಿಂತ ಮೊದಲು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಈ ನಿಯಮವನ್ನು ಉಲ್ಲಂಘಿಸಿದಕ್ಕಾಗಿ 12 ಲಕ್ಷ ರೂಗಳನ್ನು ದಂಡ ಕಟ್ಟಿದ್ದಾರೆ. ನಿಧಾನಗತಿಯ ಓವರ್ ದರದಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಐಪಿಎಲ್ ತಂಡದ ನಾಯಕರು ಪಾವತಿಸಬೇಕಾದ ಮೊತ್ತ ಇದು. https://ainkannada.com/see-the-importance-history-and-method-of-celebrating-ramadan/ ಐಪಿಎಲ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ನಿಧಾನಗತಿಯ ಓವರ್ ದರಕ್ಕೆ ಸಂಬಂಧಿಸಿದಂತೆ ರಿಯಾನ್ ಪರಾಗ್ ತಂಡದ ಮೊದಲ ತಪ್ಪು ಇದಾಗಿರುವುದರಿಂದ, ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.22 ರ ಅಡಿಯಲ್ಲಿ…
ಬೆಂಗಳೂರು: ನಾಳೆಯಿಂದ ಲೈಫು ದುಬಾರಿಯಾಗಲಿದೆ. ಈಗಲೇ ಬರೋ ಸಂಬಳದಲ್ಲಿ ಜೀವನ ನಡೆಸೋದು ಹೆಂಗಪ್ಪ ಅನ್ನೋರಿಗೆ ಮುಂದಿನ ತಿಂಗಳ ಬಜೆಟ್ ಮತ್ತಷ್ಟು ದುಬಾರಿಯಾಗಲಿದೆ.. ಇದಕ್ಕೆ ಕಾರಣ ಎಲ್ಲರದ ಬೇರೆ ಏರಿಕೆ.. ಎಸ್… ಸರ್ಕಾರ ಜನರಿಗೆ ಶಾಕ್ ಮೇಲೆ ಶಾಕ್ ಕೊಡ್ತಾನೇ ಇದೆ.. ಮೊದಲಿಗೆ ಮೆಟ್ರೋ ಆಮೇಲೆ ಹಾಲು ಮೊಸರು, ವಿದ್ಯುತ್ ದರ ಏರಿಸಿ, ಜನರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದೇ. ಇದೆಲ್ಲದರ ದರ ನಾಳೆ ಅಂಧರೆ ಏ.1ರಿಂದಲೇ ಏರಿಕೆಯಾಗಲಿದೆ.. ಬರೀ ಹಾಲೂ ಮೊಸರಲ್ಲ ಸ್ವಾಮಿ ನೀವು ಬಿಸಾಡೋ ಕಟ್ಟಕ್ಕೂ ಏಪ್ರಿಲ್ 1ರಿಂದ ಕಸಕ್ಕೂ ಸೆಸ್ ಕಟ್ಬೇಕಿದೆ. ಎಸ್.. ಇಂಧನ ಇಲಾಖೆ ನೌಕರರ ಪಿಂಚಣಿ ಗ್ರಾಚ್ಯೂಟಿಗೋಸ್ಕರ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಿಸಿದ್ದ ಸರ್ಕಾರ ಅದೇ ಮಾದರಿಯಲ್ಲಿ ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರೋತ್ಸಾಹ ಧನ ಕೊಡಲು ಹೊರಟಿದೆ. ನಂದಿನಿ ಹಾಲು-ಮೊಸರಿನ ಪರಿಷ್ಕೃತ ದರ ಏ.1ರಿಂದ ಜಾರಿಯಾಗಲಿದೆ. ಇನ್ನೂ ಹಾಲು ಮತ್ತು ಮೊಸರು ಬೆಲೆ ಹೆಚ್ಚಳವಾಗಿರೋದರಿಂದ ಸದ್ಯದಲ್ಲೇ ಇದರಿಂದ ಹೋಟೆಲ್ನಲ್ಲಿ ಕಾಫಿ, ಟೀ ಸದ್ಯದಲ್ಲೇ…
ಬೆಳಗಾವಿ : ಬೆಳಗಾವಿ ನಗರದಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಹೊಡೆದಾಟ ಸಂಭವಿಸಿದೆ. ರಂಜಾನ್ ಪ್ರಾರ್ಥನೆ ಮುಗಿಸಿ ಉಪಹಾರ ಸೇವಿಸಲು ಹೋಟೆಲ್ಗೆ ಹೋಗಿದ್ದಾಗ ಗಲಾಟೆಯಾಗಿದ್ದು, ಸೋಡಾ ಬಾಟಲಿ ಹಾಗೂ ನೀರಿನ ಬಾಟಲಿಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬೆಳಗಾವಿಯ ಕೃಷ್ಣ ದೇವರಾಯ ಸರ್ಕಲ್ ಬಳಿಯಿರುವ ಸಾಯಿ ಹೋಟೆಲ್ನಲ್ಲಿ ಘಟನೆ ನಡೆದಿದೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. https://ainkannada.com/attempt-to-escape-by-attacking-police-robber-shot/ ಇನ್ನೂ ಎರಡು ಗುಂಪುಗಳ ಯುವಕರು ಪರಸ್ಪರ ಹೊಡೆದಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಏಕಾಏಕಿ ಘರ್ಷಣೆ ಉಂಟಾದ ಹಿನ್ನೆಲೆ ಸಿಬ್ಬಂದಿ ಹೋಟೆಲ್ನ ಬಾಗಿಲು ಮುಚ್ಚಿದ್ದಾರೆ.
ನವದೆಹಲಿ: ಮಹಾಕುಂಭದ ವೈರಲ್ ಸೆನ್ಸೇಶನ್ ಮೊನಾಲಿಸಾಗೆ ಚಿತ್ರದಲ್ಲಿ ಪಾತ್ರ ನೀಡುವ ಆಫರ್ ನೀಡಿದ್ದ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ದೆಹಲಿ ಪೊಲೀಸರು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿದ್ದಾರೆ. ದೆಹಲಿ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಈ ಬಂಧನ ನಡೆದಿದೆ. 28 ವರ್ಷದ ಮಹತ್ವಾಕಾಂಕ್ಷಿ ನಟಿ, ಮಿಶ್ರಾ ತಮ್ಮ ಚಿತ್ರದಲ್ಲಿ ಪಾತ್ರ ನೀಡುವ ನೆಪದಲ್ಲಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ ಮಾರ್ಚ್ 30, 2024 ರಂದು, ದೆಹಲಿ ಪೊಲೀಸರು ಗುಪ್ತಚರ ಸಂಗ್ರಹಣೆ ಮತ್ತು ತಾಂತ್ರಿಕ ಕಣ್ಗಾವಲು ಒಳಗೊಂಡ ತನಿಖೆಯ ನಂತರ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಬಂಧಿಸಿದರು. ಅವರನ್ನು ಗಾಜಿಯಾಬಾದ್ನಲ್ಲಿ ವಶಕ್ಕೆ ತೆಗೆದುಕೊಂಡು ನಂತರ ಹೆಚ್ಚಿನ ಕಾನೂನು ಕ್ರಮಗಳಿಗಾಗಿ ನಬಿ ಕರೀಮ್ ಪೊಲೀಸ್ ಠಾಣೆಗೆ ಕರೆತರಲಾಯಿತು. ಆರೋಪಗಳು ಮತ್ತು ತನಿಖೆ ಸಣ್ಣ ಪಟ್ಟಣದ 28 ವರ್ಷದ ಮಹಿಳೆಯೊಬ್ಬರು ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಅವರ ಮೇಲೆ ಪದೇ…