Author: Author AIN

2025 ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ನಿರಾಶಾದಾಯಕ ಆರಂಭವನ್ನು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಅವರ ವಿರುದ್ಧ ಜಯಗಳಿಸಿತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಿತು, ತಮ್ಮ ಮೊದಲ ಸೋಲನ್ನು ಮರೆತು ಟೂರ್ನಿಯ ಮೊದಲ ಗೆಲುವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿತ್ತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಿಷೇಧದಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿಯೂ ಮುಂಬೈ ತಂಡವನ್ನು ಮುನ್ನಡೆಸಿದರು. ಐದು ಬಾರಿ ಐಪಿಎಲ್ ವಿಜೇತ ಮುಂಬೈ ತಂಡದ ನಾಯಕನಾಗಿ ಅವರು ಮರಳಿದರು ಮತ್ತು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಪಂದ್ಯದ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಹಾರ್ದಿಕ್ ಪಾಂಡ್ಯ ಮೈದಾನಕ್ಕೆ ಪ್ರವೇಶಿಸಿದಾಗ ಅವರ ಗೆಳತಿ ಜಾಸ್ಮಿನ್ ವಾಲಿಯಾ ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡರು. ಬ್ರಿಟಿಷ್ ಗಾಯಕ ಮತ್ತು ಟಿವಿ ಸೆಲೆಬ್ರಿಟಿ ವಾಲಿಯಾ, ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಪತ್ನಿ…

Read More

ದೊಡ್ಡಬಳ್ಳಾಪುರ: ತಾಯಿ ಸತ್ತ ನೋವಿನಲ್ಲಿದ್ದ ಮಗ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ ನಂದಿಮೋರಿ ಬಳಿ ನಡೆದಿದೆ. ಕೊನ್ನಘಟ್ಟ‌ ನಿವಾಸಿಯಾದ ರಕ್ಷಿತ್ ಬಾಬು (26) ನೇಣಿಗೆ ಶರಣಾದ ಯುವಕನಾಗಿದ್ದು, https://ainkannada.com/see-the-importance-history-and-method-of-celebrating-ramadan/ ಎರಡು ತಿಂಗಳ‌ ಹಿಂದೆ ತಾಯಿ ಕೂಡ ನೇಣಿಗೆ ಶರಣಾಗಿದ್ದರು. ತಾಯಿ ಸತ್ತ ನೋವಿನಲ್ಲಿದ್ದ ಮಗ ಮನನೊಂದು ನೇಣಿಗೆ ಶರಣಾಗಿರುವ ಶಂಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬಾಲಿವುಡ್‌ ಭಾಯಿಜಾನ್‌ ಸಲ್ಮಾನ್‌ ಖಾನ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್‌ ಸಿನಿಮಾ ಈದ್‌ ಹಬ್ಬದ ವಿಶೇಷವಾಗಿ ನಿನ್ನೆ ತೆರೆಗೆ ಬಂದಿದೆ. ದೊಡ್ಡ ಮಟ್ಟದಲ್ಲಿಯೇ ರಿಲೀಸ್‌ ಆಗಿರುವ ಸಿಕಂದರ್‌ ಸಿನಿಮಾ ಸೋಲಿನ ಸುಳಿಯಲ್ಲಿ ಸಿಲುಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ನಿರೀಕ್ಷಿಸಿದಷ್ಟು ಕಲೆಕ್ಷನ್‌ ನಿರ್ಮಾಪಕ ಜೇಬಿಗೆ ಬಿದ್ದಿಲ್ಲ. ಮೊದಲ ದಿನದ ಕಲೆಕ್ಷನ್‌ ನಲ್ಲಿಯೇ ಸಿಕಂದರ್‌ ಕಂಪ್ಲೀಟ್‌ ಡಲ್ ಹೊಡೆದಿದೆ. ನಿನ್ನೆ ಬಿಡುಗಡೆಯಾದ ‘ಸಿಕಂದರ್’ ಚಿತ್ರ ಬಿಡುಗಡೆಯಾದ ಚಿತ್ರದ ಬಜೆಟ್‌ನ ಶೇಕಡಾ 20ರಷ್ಟು ಮೊತ್ತವನ್ನೂ ಸಂಗ್ರಹಿಸಿಲ್ಲವಂತೆ. ಚಿತ್ರ ನೋಡಿದವರಿಗೂ ಇಷ್ಟವಾಗಿಲ್ಲ. ಇನ್ನೂ, ಆನ್‌ಲೈನ್‌ ನಲ್ಲಿ ಇಡೀ ಚಿತ್ರ ಸೋರಿಕೆ ಕಂಡಿದ್ದು, ಇದು ನಿರ್ಮಾಪಕರಿಗೆ ದೊಡ್ಡ ಪೆಟ್ಟು ಬಿದ್ದಂತಿದೆ. ಸಾಜಿದ್‌ ನಾಡಿಯಾಡ್ವಾಲಾ ‌ 200 ಕೋಟಿ ಬಜೆಟ್‌ನಲ್ಲಿ ಸಿಕಂದರ್ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಮೊದಲ ದಿನ ಭಾರತದಲ್ಲಿ ಕೇವಲ 26 ಕೋಟಿ ರೂಪಾಯಿಗಳನ್ನು ಗಳಿಸಿದೆ. ಸಲ್ಮಾನ್‌ ಖಾನ್‌ ಅವರ ಈ ಹಿಂದಿನ ಅಂದರೆ 2023ರಲ್ಲಿ ತೆರೆಗೆ ಬಂದಿದ್ದ ಟೈಗರ್‌ 3 ಸಿನಿಮಾ…

Read More

ಕಾವ್ಯಾ ಮಾರನ್‌, ಐಪಿಎಲ್‌ ಕ್ರಿಕೆಟ್‌ ಪ್ರೇಮಿಗಳಿಗೆ ಚಿರಪರಿತ ಹೆಸರು..ಸನ್‌ ರೈಸರ್ಸ್ ಹೈದ್ರಾಬಾದ್‌ ತಂಡದ ಮಾಲಕಿ. ಎಸ್‌ ಆರ್‌ ಹೆಚ್‌ ಪಂದ್ಯದ ಸಮಯದಲ್ಲಿ ಕಾವ್ಯಾ ನೀಡುವ ಎಕ್ಸ್‌ ಪ್ರೆಶ್‌ ಗೆ ಕ್ರೀಡಾಭಿಮಾನಿಗಳಿಗೆ ಬಲು ಇಷ್ಟ..ತಮಿಳುನಾಡಿನ ಖ್ಯಾತ ಬ್ಯುಸಿನೆಸ್‌ ಮೆನ್‌ ಕಲಾನಿಧಿ ಮಾರನ್‌ ಪುತ್ರಿಯೇ ಈ ಕಾವ್ಯಾ ಮಾರಾನ್.‌ ತಂದೆ ಹಾದಿಯಲ್ಲಿ ಸಾಗುತ್ತಿರುವ ಕಾವ್ಯಾ ಉದ್ಯಮ ಕ್ಷೇತ್ರದಲ್ಲಿ ಛಾಪೂ ಮೂಡಿಸಿದ್ದಾರೆ. ಬರೋಬ್ಬರಿ 400 ಕೋಟಿ ಒಡೆತಿಯಾಗಿರುವ ಕಾವ್ಯಾ ಮಾರಾನ್‌ ಪ್ರೇಮಕಥೆಗಳು ಆಗಾಗಾ ಸುದ್ದಿ ಮನೆ ಅಂಗಳಕ್ಕೆ ಬರುತ್ತವೆ. ಕಾವ್ಯಾ ತಮಿಳಿನ ಖ್ಯಾತ ಸಂಗೀತ ನಿರ್ದೇಶಕನ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ತಮಿಳು ಚಿತ್ರರಂಗದ ರಾಕ್‌ ಸ್ಟಾರ್‌ ಅಂತಾನೇ ಖ್ಯಾತಿ ಪಡೆದಿರುವ ಅನಿರುದ್ಧ್‌ ರವಿಚಂದರ್‌ ಹಾಗೂ ಕಾವ್ಯಾ ಸಂಥಿಂಗ್‌ ಸಂಥಿಂಗ್‌ ಇದೆ ಅನ್ನೋ ಮಾತಿದೆ. ಈ ಜೋಡಿ ಡೇಟಿಂಗ್‌ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಕಾವ್ಯಾ ಮಾರನ್‌ ತಂದೆ ಕಲಾನಿಧಿ ಮಾರಾನ್‌ ಒಡೆತನದ ಸನ್‌ ಪಿಕ್ಚರ್ಸ್‌ ನಡಿ ಮೂಡಿಬಂದ ‘ತಿರುಚಿತ್ರಾಂಬಲಂ’, ‘ಬೀಸ್ಟ್’, ‘ಜೈಲರ್’ ರೀತಿಯ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ…

Read More

ತೆಲುಗಿನ ಡ್ಯಾಷಿಂಗ್‌ ಡೈರೆಕ್ಟರ್‌ ಪುರಿ ಜಗನ್ನಾಥ್ ಮೊದಲ ಬಾರಿಗೆ ಮಕ್ಕಳ್ ಸೆಲ್ವನ್  ಖ್ಯಾತಿಯ ವಿಜಯ್ ಸೇತುಪತಿ ಜೊತೆ ಕೈ ಜೋಡಿಸಿದ್ದಾರೆ. ಯುಗಾದಿ ಹಬ್ಬದ ವಿಶೇಷವಾಗಿ ಪುರಿ ಜಗನ್ನಾಥ್‌ ತಮ್ಮ ಮುಂದಿನ ಚಿತ್ರದ ಬಗ್ಗೆ ಬಿಗ್‌ ಅಪ್‌ ಕೊಟ್ಟಿದ್ದಾರೆ. ಸಾಲು ಸಾಲು ಸೋಲುಗಳನ್ನು ಕಾಣುತ್ತಿರುವ ಪುರಿ ಜಗನ್ನಾಥ್‌ ಗೆ ತಕ್ಷಣ ಗೆಲುವಿನ ಅವಶ್ಯಕಥೆ ಇದೆ. ಹೀಗಾಗಿ ಈ ಬಾರಿ ತೆಲುಗು ಬಿಟ್ಟು ತಮಿಳು ನಟನ ಹಿಂದೆ ಬಿದ್ದಿದ್ದಾರೆ. ಬಹಳ ದಿನಗಳಿಂದಲೂ ಈ ಡೆಡ್ಲಿ ಕಾಂಬಿನೇಷನ್‌ ಒಂದಾಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಅದರಂತೆ ಇಂದು ಪುರಿ ಜಗನ್ನಾಥ್‌ ತಮ್ಮ ಮುಂದಿನ ಚಿತ್ರವನ್ನು ವಿಜಯ್‌ ಸೇತುಪತಿ ಜೊತೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ವಿಜಯ್‌ ಸೇತುಪತಿಯವರಿಗಾಗಿಯೇ ಪುರಿ ಒಂದೊಳ್ಳೆ ಅದ್ಭುತ ಕಥೆಯನ್ನು ಸಿದ್ದಪಡಿಸಿಕೊಂಡಿದ್ದು, ಹಿಂದೆಂದೂ ಕಾಣದ ಲುಕ್‌ ನಲ್ಲಿ ಅವರನ್ನು ಪ್ರೇಕ್ಷಕರಿಗೆ ತೋರಿಸಲಿದ್ದಾರೆ. ಪುರಿ ಕನೆಕ್ಟ್ಸ್‌ ಬ್ಯಾನರ್‌ ನಡಿ ಪುರಿ ಜಗನ್ನಾಥ್‌ ಹಾಗೂ ಚಾರ್ಮಿ     ಕೌರ್‌ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದು ಪ್ಯಾನ್‌ ಇಂಡಿಯಾ ಪ್ರಾಜೆಕ್ಟ್‌…

Read More

ಯುಗಾದಿ ಹಬ್ಬಕ್ಕೆ ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್ ನಲ್ಲಿಂದು ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಚಿತ್ರಕ್ಕೆ ವಿಕ್ಟರಿ ವೆಂಕಟೇಶ್ ಕ್ಲ್ಯಾಪ್ ಮಾಡಿದರು. ನಿರ್ಮಾಪಕ ಅಲ್ಲು ಅರವಿಂದ್ ಕ್ಯಾಮೆರಾಗೆ ಚಾಲನೆ ನೀಡಿದರು. ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ಫಸ್ಟ್ ಶಾಟ್ ಗೆ ಆಕ್ಷನ್ ಕಟ್ ಹೇಳಿದರು. ಖ್ಯಾತ ನಿರ್ಮಾಪಕರಾದ ದಿಲ್ ರಾಜು ಹಾಗೂ ಸಿರೀಶ್ ಸ್ಕ್ರಿಪ್ಟ್ ಹಸ್ತಾಂತರಿಸಿದರು. ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕರಾದ ಬಾಬಿ, ವಸಿಷ್ಠ, ಶ್ರೀಕಾಂತ್ ಒಡೆಲಾ, ಖ್ಯಾತ ಕಥೆಗಾರ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಚಿರು 157ನೇ ಚಿತ್ರಕ್ಕೆ ಸಂಕ್ರಾಂತಿಕಿ ವಸ್ತುನ್ನಾಂ ಖ್ಯಾತಿಯ ನಿರ್ದೇಶಕ‌ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಮೆಗಾ ಸ್ಟಾರ್ ಅವರನ್ನು ಹೊಸ ಅವತಾರದಲ್ಲಿ ಪರಿಚಯಿಸಲು ರೆಡಿಯಾಗಿದ್ದಾರೆ. ಶಂಕರ್ ವರಪ್ರಸಾದ್ ಎಂಬ ಪಾತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ.ಅನಿಲ್ ರವಿಪುಡಿ ಮನರಂಜನೆಗೆ ಎಮೋಷನ್ ಟಚ್ ಕೊಟ್ಟು ಕಥೆ ರೂಪಿಸಿದ್ದಾರಂತೆ. ಶೈನ್ ಸ್ಕ್ರೀನ್‌ಗಳು ಮತ್ತು ಗೋಲ್ಡ್ ಬಾಕ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್…

Read More

ರಶ್ಮಿಕಾ ಮಂದಣ್ಣ ಏನೇ ಮಾಡಿದ್ರೂ, ಏನೂ ಮಾಡದೇ ಇದ್ದರೂ ಸದಾ ಸುದ್ದಿಯಲ್ಲಿರುವ ನಟಿ..ಸದ್ಯ ಕನ್ನಡ ಚಿತ್ರರಂಗಕ್ಕೆ ಬೈ ಬೈ ಹೇಳಿ ತೆಲುಗು, ತಮಿಳು, ಹಿಂದಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ಪಂಚ ಭಾಷೆ ತಾರೆ. ಕಿರಿಕ್‌ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್‌ ಕ್ರಶ್‌. ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಕೊಟ್ಟು ಲಕ್ಕಿ ಗರ್ಲ್‌ ಎನಿಸಿಕೊಂಡಿರುವ ಮಂದಣ್ಣನಿಗೆ ತಾವು ಎಲ್ಲಿಯವರೂ ಅನ್ನೋದು ಜ್ಞಾನೋದಯವಾಗಿದೆ. ರಶ್ಮಿಕಾ ಮಂದಣ್ಣ ಕನ್ನಡದ ಪ್ರೀತಿ ವ್ಯಕ್ತಪಡಿಸಿದ್ದಾರೆ. ಸಲ್ಮಾನ್‌ ಖಾನ್‌ ಜೊತೆ ಸಿಕಂದರ್‌ ಸಿನಿಮಾದ ಪ್ರಚಾರದ ವೇಳೆ ಪುಷ್ಪ ಶ್ರೀವಲ್ಲಿ, ನಾನು ಕರ್ನಾಟಕದವಳು. ನಾನು ಬೆಳೆದಿದ್ದು ಕರ್ನಾಟಕದಲ್ಲಿ. ಅಲ್ಲಿ ನಾನು ಮಾತನಾಡುತ್ತಿದ್ದಿದ್ದು ಕನ್ನಡ ಮತ್ತು ಇಂಗ್ಲೀಷ್ ಎಂದಿದ್ದಾರೆ. ನಾನು ಹೈದರಾಬಾದ್‌ಗೆ ಬಂದ ಬಳಿಕ ತೆಲುಗು ಭಾಷೆ ಕಲಿಯುವುದು ನನಗೆ ಅನಿವಾರ್ಯವಾಗಿತ್ತು. ಏಕೆಂದರೆ ನನ್ನ ಮನೆ, ಆಫೀಸ್‌ ಸಿಬ್ಬಂದಿ, ಸೆಕ್ಯುರಿಟಿ ಎಲ್ಲರೂ ತೆಲುಗು ಭಾಷೆಯವರೇ ಆಗಿರುವುದರಿಂದ ನಾನು ಅವರೊಂದಿಗೆ ಅಲ್ಲಿ ತೆಲುಗು ಭಾಷೆಯಲ್ಲೇ ಮಾತನಾಡಬೇಕಾಗಿತ್ತು. ಈ ಕಾರಣದಿಂದಲೇ ನಾನು ತೆಲುಗು ಭಾಷೆಯನ್ನು ಕಲಿತುಕೊಂಡಿದ್ದೇನೆ…

Read More

ರಂಜಾನ್ ಮುಸ್ಲಿಮರ ಪವಿತ್ರ ಹಬ್ಬ. ರಂಜಾನ್ ಕೋಮು ಸೌಹಾರ್ದತೆಯ ತಿಂಗಳಾಗಿದ್ದು, ಆಧ್ಯಾತ್ಮಿಕ ಅನ್ವೇಷಣೆಯ ಸಮಯದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡಲಾಗುತ್ತದೆ. ಪವಿತ್ರ ಗ್ರಂಥ ಕುರಾನ್‌ನ ತೀವ್ರವಾದ ಪಠಣಗಳು ಮತ್ತು ದಾನ ಕಾರ್ಯಗಳನ್ನು ಮಾಡಲಾಗುತ್ತದೆ. ಚಂದ್ರನ ದರ್ಶನವನ್ನು ಅವಲಂಬಿಸಿ ರಂಜಾನ್ ಸಾಮಾನ್ಯವಾಗಿ 29 ಅಥವಾ 30 ದಿನಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಎಲ್ಲಾ ವಯಸ್ಕ ಮುಸ್ಲಿಮರು ಉಪವಾಸ ಮಾಡುವುದು ಕಡ್ಡಾಯವಾಗಿದೆ. ಈದ್-ಉಲ್-ಫಿತರ್ ಇತಿಹಾಸ ಈದ್-ಉಲ್-ಫಿತರ್ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರಿಂದ ಹುಟ್ಟಿಕೊಂಡಿತು ಎನ್ನಲಾಗಿದೆ. ಕೆಲವು ಸಂಪ್ರದಾಯಗಳ ಪ್ರಕಾರ, ಮೆಕ್ಕಾದಿಂದ ಮುಹಮ್ಮದ್ ವಲಸೆ ಬಂದ ನಂತರ ಈ ಹಬ್ಬಗಳನ್ನು ಮದೀನಾದಲ್ಲಿ ಪ್ರಾರಂಭಿಸಲಾಯಿತು. ಇಸ್ಲಾಮಿಕ್ ಪ್ರವಾದಿಯ ಪ್ರಸಿದ್ಧ ಒಡನಾಡಿಯಾದ ಅನಸ್, ಮುಹಮ್ಮದ್ ಮದೀನಾಕ್ಕೆ ಆಗಮಿಸಿದಾಗ, ಜನರು ಎರಡು ನಿರ್ದಿಷ್ಟ ದಿನಗಳನ್ನು ಆಚರಿಸುವುದನ್ನು ಕಂಡುಕೊಂಡರು. ಈದ್-ಉಲ್-ಫಿತರ್ ಮತ್ತು ಈದ್-ಅಲ್-ಅಧಾ. ಇನ್ನು ಈ ಹಬ್ಬಕ್ಕೆ ಅದರದೇ ಆದ ಮಹತ್ವ ಇದೆ. ಈ ತಿಂಗಳಲ್ಲಿ ಆಚರಿಸುವ ಆಚರಣೆಗಳು ಮಹತ್ವದ ವೈಜ್ಞಾನಿಕ ಕಾರಣಗಳನ್ನು ಒಳಗೊಂಡಿವೆ. ಈದ್-ಉಲ್-ಫಿತರ್ ಆಚರಣೆ ಹೇಗಿರುತ್ತದೆ ? ರಂಜಾನ್…

Read More

ತಮ್ಮ ಗಳಿಕೆಯನ್ನು ಉಳಿಸುವ ವಿಷಯಕ್ಕೆ ಬಂದಾಗ, ಜನರು ತಮ್ಮ ಹಣವನ್ನು ಉತ್ತಮ ಆದಾಯವನ್ನು ಗಳಿಸುವ ಸ್ಥಳಗಳಲ್ಲಿ ಹೂಡಿಕೆ ಮಾಡುತ್ತಾರೆ. ಉತ್ತಮ, ಲಾಭದಾಯಕ ಆದಾಯದ ಬಗ್ಗೆ ಮಾತನಾಡುವಾಗ, ಮೊದಲು ಮನಸ್ಸಿಗೆ ಬರುವುದು ಷೇರು ಮಾರುಕಟ್ಟೆ. ಷೇರು ಮಾರುಕಟ್ಟೆಯಲ್ಲಿ ಲಾಭವಿದೆ. ಆದರೆ ಅಪಾಯ ತುಂಬಾ ಹೆಚ್ಚಾಗಿದೆ. ಷೇರು ಮಾರುಕಟ್ಟೆಯಲ್ಲಿ ಪ್ರಸ್ತುತ ಮಾರಾಟದ ಒತ್ತಡವಿದೆ. ಕಳೆದ 5 ತಿಂಗಳಿನಿಂದ ಮಾರುಕಟ್ಟೆ ಕುಸಿಯುತ್ತಿದೆ. ಪಿಪಿಎಫ್‌ನಂತಹ ಸರ್ಕಾರಿ ಯೋಜನೆಗಳು ಉತ್ತಮ ಆದಾಯವನ್ನು ನೀಡುತ್ತವೆ. ಇಲ್ಲಿ ಹೂಡಿಕೆದಾರರು ಸ್ಥಿರ ಆದಾಯವನ್ನು ಪಡೆಯುತ್ತಿದ್ದಾರೆ. ಮಾರುಕಟ್ಟೆಯ ಏರಿಳಿತಗಳು ಅವರ ಠೇವಣಿ ಹಣದ ಮೇಲೆ ಪರಿಣಾಮ ಬೀರುವುದಿಲ್ಲ. ಈ ಯೋಜನೆಯಡಿಯಲ್ಲಿ, ರೂ. 3 ಸಾವಿರ, 6 ಸಾವಿರ, ಮತ್ತು 12 ಸಾವಿರ ಠೇವಣಿ ಇಡುವ ಮೂಲಕ 25 ವರ್ಷಗಳಲ್ಲಿ ನೀವು ಎಷ್ಟು ಹಣವನ್ನು ಉಳಿಸಬಹುದು ಎಂಬುದನ್ನು ಕಂಡುಹಿಡಿಯೋಣ. ಇದಕ್ಕೆ ನಿಮಗೆ ಎಷ್ಟು ಬಡ್ಡಿ ಸಿಗುತ್ತದೆ? ನಿಮ್ಮ ಹಣವನ್ನು ನೀವು ಯಾವಾಗ ಪಡೆಯಬಹುದು? ರೂ. ನೀವು 3000 ಠೇವಣಿ ಇಟ್ಟರೆ ಸ್ವೀಕರಿಸಿದ ಹಣ: ನೀವು ರೂ.…

Read More

ಮೋಹನ್​ಲಾಲ್ ನಟನೆಯ ‘ಎಲ್2 ಎಂಪುರಾನ್’ ಸಿನಿಮಾ ನಿನ್ನೆಯಷ್ಟೆ ದೇಶದಾದ್ಯಂತ ಬಿಡುಗಡೆ ಆಗಿದೆ. ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ ಸಿನಿಮಾಕ್ಕೆ ರಾಜಕೀಯ ಬಿಸಿ ಸಹ ತಟ್ಟುತ್ತಿದೆ. ಸಿನಿಮಾ ಕೆಲ ದೃಶ್ಯಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಚಿತ್ರತಂಡ 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ. ಈ ಬೆನ್ನಲ್ಲೇ ನಾಯಕ ನಟ ಮೋಹನ್‌ ಲಾಲ್‌ ತಮ್ಮ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ. ಮಾರ್ಚ್ 27ರಂದು ತೆರೆ ಕಂಡ ಮೋಹನ್ ಲಾಲ್, ಪೃಥ್ವಿರಾಜ್‌ ಸುಕುಮಾರನ್‌ ಅಭಿನಯದ ಎಲ್2: ಎಂಪುರಾನ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಿಲೀಸ್‌ ಆದ 2ನೇ ದಿನದಲ್ಲಿ 100 ಕೋಟಿ ಬಾಚಿಕೊಂಡಿದ್ದು, ಬಾಕ್ಸ್‌ ಆಫೀಸ್‌ ಸೇರಿದೆ. ಸದ್ಯ ಈ ಸಿನಿಮಾದಲ್ಲಿ 2002ರ ಗುಜರಾತ್ ಗಲಭೆಯನ್ನು ಉಲ್ಲೇಖ ಮಾಡಲಾಗಿದೆ. https://ainkannada.com/today-is-the-celebration-of-the-festival-of-ugadi-dont-do-these-things-even-if-you-make-a-mistake/ ಜೊತೆಗೆ ಈ ಘಟನೆಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೋಹನ್‌…

Read More