Author: Author AIN

ಬೆಂಗಳೂರು: ನಟಿ ರನ್ಯಾ ರಾವ್ ಅವರನ್ನು ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ.ನಟಿ ರನ್ಯಾ ರಾವ್ ಬಂಧನ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ. ಇನ್ನೂ  ಪ್ರಕರಣದಲ್ಲಿ ಪೊಲೀಸ್ ಪ್ರೋಟೋಕಾಲ್ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಸರ್ಕಾರ, ಈ ಪ್ರಕರಣದಲ್ಲಿ ಪ್ರೋಟೋಕಾಲ್ ದುರ್ಬಳಕೆಯ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಗೆ ಆದೇಶಿಸಿತ್ತು. ಈಗ ವರದಿ ಸಿದ್ದವಾಗಿದ್ದು ಇಂದು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಶಿಷ್ಟಾಚಾರ ಬಳಕೆ ದುರ್ಬಳಕೆ ಹಾಗೂ ಇದರಲ್ಲಿ ರಾಮಚಂದ್ರರಾವ್‌ ಅವರ ಪಾತ್ರದ ಕುರಿತು ತನಿಖೆ ಪೂರ್ಣಗೊಳಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ನೇತೃತ್ವದ ವಿಚಾರಣಾ ಸಮಿತಿ 230 ಪುಟಗಳ ವರದಿಯನ್ನು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಸಲ್ಲಿಸಿದೆ. https://ainkannada.com/today-is-the-celebration-of-the-festival-of-ugadi-dont-do-these-things-even-if-you-make-a-mistake/ ತಮ್ಮ ಮಲಮಗಳು ರನ್ಯಾ ರಾವ್‌ ಶಿಷ್ಟಾಚಾರ ನಿಯಮಗಳಡಿ ಸಿಗುವ ಸೌಲಭ್ಯವನ್ನು ಏರ್‌ಪೋರ್ಟ್‌ನಲ್ಲಿ ಬಳಸುತ್ತಿರುವ ಬಗ್ಗೆ ಡಿಜಿಪಿ ರಾಮಚಂದ್ರರಾವ್‌ಗೆ ಗೊತ್ತಿತ್ತು. ಆದರೆ, ಮಲಮಗಳಿಗೆ ಶಿಷ್ಟಾಚಾರ ಸೌಲಭ್ಯ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಿಲ್ಲ’…

Read More

ಕೋಲಾರ: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪಘಾತಗಳಿಂದ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ವಾಹನ ಚಾಲಕರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಇದೀಗ ಓವರ್‌ಟೇಕ್ ಮಾಡಲು ಹೋಗಿ ಬೈಕ್, ಕಾರಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದು, ಹಿಂಬದಿ ಸವಾರನಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕೊತ್ತೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಮೃತ ಬೈಕ್ ಸವಾರನನ್ನು ಕೋಲಾರದ ಗಾಂಧಿನಗರ ನಿವಾಸಿ ಚಂದ್ರಶೇಖರ್ (50) ಎಂದು ಗುರುತಿಸಲಾಗಿದೆ. https://ainkannada.com/today-is-the-celebration-of-the-festival-of-ugadi-dont-do-these-things-even-if-you-make-a-mistake/ ಘಟನೆಯಲ್ಲಿ ಮತ್ತೊಬ್ಬ ಬೈಕ್ ಸವಾರ ಸುರೇಶ್‌ಗೆ ಕಾಲು ಮುರಿದಿದ್ದು, ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅತಿ ವೇಗವಾಗಿ ಓವರ್‌ಟೇಕ್ ಮಾಡಲು ಹೋಗಿ ಬೈಕ್ ಕಾರಿಗೆ ಡಿಕ್ಕಿಯಾಗಿದೆ. ಘಟನೆ ಬಳಿಕ ಕಾರನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಸುಮಾರು ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ನಟಿ ತಮನ್ನಾ ಭಾಟಿಯಾ ಮತ್ತು ನಟ ವಿಜಯ್ ವರ್ಮಾ ಈಗ ಬೇರ್ಪಟ್ಟಿದ್ದಾರೆ ಎಂಬ ವದಂತಿಗಳಿವೆ. ಆದರೆ, ಬ್ರೇಕ್ ಅಪ್ ನಂತರವೂ ಇಬ್ಬರೂ ತಮ್ಮ ಸ್ನೇಹವನ್ನು ಮುಂದುವರೆಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ ವಿಜಯ ವರ್ಮಾ, ಸಂಬಂಧಗಳ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದರು. “ಸಂಬಂಧವನ್ನು ಐಸ್ ಕ್ರೀಂನಂತೆ ಪೂರ್ಣವಾಗಿ ಆನಂದಿಸಬೇಕು.” ನೀವು ಹಾಗೆ ಮಾಡಿದಾಗ ಮಾತ್ರ ನೀವು ಸಂತೋಷ ಮತ್ತು ಆನಂದದಿಂದಿರಲು ಸಾಧ್ಯ. ಸಂತೋಷ, ದುಃಖ, ಕೋಪ, ಹತಾಶೆ… ಪ್ರತಿಯೊಂದು ಅಂಶವನ್ನೂ ನೀವು ಒಪ್ಪಿಕೊಳ್ಳಬೇಕು. “ನಾವು ಇವುಗಳೊಂದಿಗೆ ಮುಂದುವರಿಯಬೇಕು” ಎಂದು ವಿಜಯ್ ವರ್ಮಾ ಹೇಳಿದರು. ಇದೇ ಬಗ್ಗೆ ಮಾತನಾಡಿದ ತಮನ್ನಾ, ಸಂದರ್ಶನವೊಂದರಲ್ಲಿ, “ನನ್ನ ಜೀವನದಲ್ಲಿ ನಾನು ಆರಿಸಿಕೊಂಡದ್ದರಲ್ಲಿ ನನಗೆ ಸಂತೋಷವಾಗಿದೆ. ಹೊಸ ಜನರನ್ನು ಭೇಟಿಯಾಗುವುದು ನನಗೆ ಇಷ್ಟ. ಅದೇ ಸಮಯದಲ್ಲಿ, ಅನಿರೀಕ್ಷಿತ ಸಂದರ್ಭಗಳು ನನ್ನ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ನನಗೆ ಸಂತೋಷವನ್ನುಂಟುಮಾಡುವ ವಿಷಯಗಳನ್ನು ಮಾತ್ರ ನಾನು ಎಲ್ಲರಿಗೂ ಹೇಳಬಲ್ಲೆ. ಇದು ನನ್ನ ವೈಯಕ್ತಿಕ ಮತ್ತು ವೃತ್ತಿಪರ…

Read More

ನಟ ಪ್ರಭಾಸ್ ಅವರ ಪಿಆರ್‌ಒ ಎಂದು ಹೇಳಿಕೊಳ್ಳುವ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯೂಟ್ಯೂಬರ್ ಒಬ್ಬರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ದೂರಿನ ಮೇರೆಗೆ ಜುಬಿಲಿ ಹಿಲ್ಸ್ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿವರಗಳು ಈ ಕೆಳಗಿನಂತಿವೆ. ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ 44 ರಲ್ಲಿ ಒಂದು ಯೂಟ್ಯೂಬ್ ಚಾನೆಲ್ ಇದೆ. ಅವರಲ್ಲಿ ಒಬ್ಬರು ಸಹಾಯಕ ಸಂಪಾದಕರಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರು. ಆ ಪತ್ರಕರ್ತ ಇತ್ತೀಚೆಗೆ ತಮ್ಮ ಸುದ್ದಿ ವಾಹಿನಿಯಲ್ಲಿ ಪ್ರಭಾಸ್ ಅವರ ಆರೋಗ್ಯದ ಬಗ್ಗೆ ವೀಡಿಯೊ ಪೋಸ್ಟ್ ಮಾಡಿದ್ದರು. “ಡಾರ್ಲಿಂಗ್ ಇನ್ ಡೇಂಜರ್” ಎಂಬ ಶೀರ್ಷಿಕೆಯ ಈ ವೀಡಿಯೊವನ್ನು ಪ್ರಭಾಸ್ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಿಕೊಂಡು ಪೋಸ್ಟ್ ಮಾಡಿದ ನಂತರ ಈ ತಿಂಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮರುದಿನ, ಸುರೇಶ್ ಕೊಂಡಿ ಎಂಬ ವ್ಯಕ್ತಿ ಪತ್ರಕರ್ತನಿಗೆ ಕರೆ ಮಾಡಿ ತನ್ನನ್ನು ಪ್ರಭಾಸ್ ಅವರ ಪ್ರೊ ಎಂದು ಪರಿಚಯಿಸಿಕೊಂಡ. https://ainkannada.com/today-is-the-celebration-of-the-festival-of-ugadi-dont-do-these-things-even-if-you-make-a-mistake/ ಪ್ರಭಾಸ್ ದೊಡ್ಡ…

Read More

ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮಾಣಿಕೇಶ್ವರ ಗ್ರಾಮದಲ್ಲಿ ಮಾಂಜ್ರಾ ನದಿಯಲ್ಲಿ ಮರಳು ಅಕ್ರಮ ಗಣಿಗಾರಿಕೆಗೆ ಬಳಸುತ್ತಿದ್ದ ಯಂತ್ರಚಾಲಿತ ದೋಣಿಯನ್ನು ಜಪ್ತಿ ಮಾಡಿದ ಅಧಿಕಾರಿಗಳು ಅದಕ್ಕೆ ಬೆಂಕಿ ಹಚ್ಚಿ ಯಂತ್ರಚಾಲಿತ ದೋಣಿಯನ್ನು ನಾಶಪಡಿಸಿದ್ದಾರೆ. ಡಿವೈಎಸ್ಪಿ ಶಿವಾನಂದ ಪಾವಡಶೆಟ್ಟಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಿರಿಯ ವಿಜ್ಞಾನಿ ಧನರಾಜ ಬಲ್ಲೂರಕರ ಅವರ ನೇತೃತ್ವದ ತಂಡ ಮಾಂಜ್ರಾ ನದಿಗೆ ಭೇಟಿ ನೀಡಿ, ಯಂತ್ರಚಾಲಿತ ದೋಣಿಯೊಂದನ್ನು ಜಪ್ತಿ ಮಾಡಿದೆ. ಮತ್ತೊಂದು ದೋಣಿಗೆ ಬೆಂಕಿ ಹಚ್ಚಿ ನಾಶಪಡಿಸಿದೆ. https://ainkannada.com/today-is-the-celebration-of-the-festival-of-ugadi-dont-do-these-things-even-if-you-make-a-mistake/ ಹಲವು ದಿನಗಳಿಂದ ಅಕ್ರಮ ಮರಳು ದಂಧೆಕೋರರ ಕುರಿತು ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಾರಾದರೂ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದರೆ ಅಂತಹವರ ಬಗ್ಗೆ ಮಾಹಿತಿ ನೀಡಿ, ಪೊಲೀಸರಿಗೆ ಸಹಕಾರ ನೀಡಬೇಕು’ ಎಂದು ಡಿವೈಎಸ್ಪಿ ಶಿವಾನಂದ ಪಾವಡಶೆಟ್ಟಿ ಮನವಿ ಮಾಡಿದ್ದಾರೆ. ಈ ಸಂಧರ್ಭದಲ್ಲಿ ಭೂ ವಿಜ್ಞಾನಿ ಲೋಕೇಶ, ಸಿಪಿಐ ಹನುಮರೆಡ್ಡಿ, ಪಿಎಸ್‌ಐ ಶಿವಕುಮಾರ ಬಳತೆ ಸೇರಿ ಹಲವರು ಸಿಬ್ಬಂದಿ ಹಾಜರಿದ್ದರು.ಘಟನೆಗೆ ಸಂಬಂಧಿಸಿದಂತೆ ಮೆಹಕರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ…

Read More

ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ಟೀಮ್‌ಗಳ ನಡುವಿನ ಐಪಿಎಲ್ 2025-ರ 10ನೇ ಮ್ಯಾಚ್ ಆರಂಭವಾಗಿದೆ. ಎರಡು ಟೀಮ್‌ಗಳು ಪೈಪೋಟಿ ನಡೆಸೋದ್ರಿಂದ ಇಂದು ಸ್ಪೆಷಲ್ ಆಗಿರುತ್ತೆ. ಡೆಲ್ಲಿ ಟೀಮ್ ಲಕ್ನೋ ಸೂಪರ್ ಜೈಂಟ್ಸ್‌ನ ಒಂದು ವಿಕೆಟ್‌ನಿಂದ ಸೋಲಿಸಿತು. ಹೈದರಾಬಾದ್ ಟೀಮ್ ಲಕ್ನೋ ವಿರುದ್ಧ 4 ವಿಕೆಟ್‌ನಿಂದ ಸೋತಿತು. ಆದರೂ, SRH ತನ್ನ ಫಸ್ಟ್ ಮ್ಯಾಚ್‌ನಲ್ಲಿ ರಾಜಸ್ಥಾನ ಎದುರು ಗೆಲುವು ಸಾಧಿಸಿತ್ತು. https://ainkannada.com/today-is-the-celebration-of-the-festival-of-ugadi-dont-do-these-things-even-if-you-make-a-mistake/ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವು ಡಾ. ವೈ. ಎಸ್. ರಾಜಶೇಖರ ರೆಡ್ಡಿ ಅವರ ಮೈದಾನದಲ್ಲಿ ನಡೆಯುತ್ತಿದ್ದು, ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಒಂದೆಡೆ ದೆಹಲಿ, ಲಕ್ನೋ ತಂಡವನ್ನು ಸೋಲಿಸಿದರೆ, ಲಕ್ನೋ ಹೈದರಾಬಾದ್ ತಂಡವನ್ನು ಸೋಲಿಸಿದೆ. ಆದ್ದರಿಂದ ದೆಹಲಿ-ಹೈದರಾಬಾದ್ ಪಂದ್ಯದಲ್ಲಿ ಏನಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಜ್ಯಾಕ್ ಫ್ರೇಸರ್ ಮೆಗ್​ಕುರ್ಕ್​, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್…

Read More

ಹುಬ್ಬಳ್ಳಿ : ಕೇಂದ್ರ ಸರ್ಕಾರ ಗೋಧಿ ದಾಸ್ತಾನು ಮೇಲೆ ನಿಗಾ ವಹಿಸಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವರ್ತಕರು ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಗೋಧಿ ದಾಸ್ತಾನು ವಿವರ ದಾಖಲಿಸಬೇಕು ಕೇಂದ್ರ ಆಹಾರ ಇಲಾಖೆ ಸೂಚನೆ ನೀಡಿದೆ. ದೇಶದಲ್ಲಿ ಆಹಾರ ಭದ್ರತೆ ಕಲ್ಪಿಸಲು ಮತ್ತು ಅಪಪ್ರಚಾರದ ಊಹಾಪೋಹಗಳನ್ನು ತಡೆಗಟ್ಟುವ ಸಲುವಾಗಿ ಈ ಪಾರದರ್ಶಕ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪಾರಿಗಳು/ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ವರ್ತಕರು ಮತ್ತು ಸಂಸ್ಕರಣಾಕಾರರು ಏಪ್ರಿಲ್‌ 1ರಿಂದ ಗೋಧಿ ದಾಸ್ತಾನು ಘೋಷಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. https://ainkannada.com/today-is-the-celebration-of-the-festival-of-ugadi-dont-do-these-things-even-if-you-make-a-mistake/ ಕೇಂದ್ರ ಸರ್ಕಾರ ಎಲ್ಲಾ ವರ್ಗದ ಘಟಕಗಳಿಗೆ ಗೋಧಿ ದಾಸ್ತಾನು ಮಿತಿಯನ್ನು ಇದೇ ಮಾರ್ಚ್‌ 31ಕ್ಕೆ ಅಂತ್ಯಗೊಳಿಸಲಿದ್ದು, ನಂತರ ಹೊಸದಾಗಿ ಪೋರ್ಟಲ್‌ನಲ್ಲಿ ಗೋಧಿ ದಾಸ್ತಾನು ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಬೇಕು. ಪೋರ್ಟಲ್‌ನಲ್ಲಿ ಇನ್ನೂ ನೋಂದಣಿ ಮಡಿಕೊಳ್ಳದ ಘಟಕಗಳು ತ್ವರಿತವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಪ್ರತಿ ಶುಕ್ರವಾರ ಗೋಧಿ ದಾಸ್ತಾನು ಬಗ್ಗೆ ಮಾಹಿತಿ ದಾಖಲಿಸಬೇಕು ಎಂದು ಸೂಚಿಸಿದೆ. ಪೋರ್ಟಲ್‌:…

Read More

ಒಡಿಶಾದ ಕಟಕ್ ಜಿಲ್ಲೆಯಲ್ಲಿ ನೆರ್ಗುಂಡಿ ನಿಲ್ದಾಣದ ಬಳಿ ಬೆಂಗಳೂರು – ಕಾಮಾಕ್ಯ ಎಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ 11 ಬೋಗಿಗಳು ಹಳಿ ತಪ್ಪಿವೆ. ಖುರ್ದಾ ರಸ್ತೆ ವಿಭಾಗದ ಈಸ್ಟ್ ಕೋಸ್ಟ್ ರೈಲ್ವೆಯ ಕಟಕ್-ನೆರ್ಗುಂಡಿ ರೈಲ್ವೆ ಸೆಕ್ಷನ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸೂಪರ್‌ಫಾಸ್ಟ್ ರೈಲಿನ ಸುಮಾರು 11 ಬೋಗಿಗಳು ಹಳಿತಪ್ಪಿವೆ. ಸದ್ಯದ ಮಾಹಿತಿ ಪ್ರಕಾರ, ಯಾವುದೇ ಗಾಯ ಅಥವಾ ಸಾವು ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸ್ಥಳೀಯ ಮೂಲಗಳ ಪ್ರಕಾರ, ಕೆಲ ಪ್ರಯಾಣಿಕ ಮೃತಪಟ್ಟಿರಬಹುದು ಮತ್ತು ಹಲವರಿಗೆ ಗಾಯಗೊಂಡಿರಬಹುದು ಎಂದು ಹೇಳಲಾಗುತ್ತಿದೆ. https://ainkannada.com/today-is-the-celebration-of-the-festival-of-ugadi-dont-do-these-things-even-if-you-make-a-mistake/ ಡಿಆರ್‌ಎಂ ಖುರ್ದಾ ರಸ್ತೆ ಮತ್ತು ಜನರಲ್ ಮ್ಯಾನೇಜರ್ ಈಸ್ಟ್ ಕೋಸ್ಟ್ ರೈಲ್ವೆ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತ ಪರಿಹಾರ ಮತ್ತು ವೈದ್ಯಕೀಯ ಪರಿಹಾರ ರೈಲನ್ನು ಸಹ ಸ್ಥಳಕ್ಕೆ ಕಳುಹಿಸಲಾಗಿದೆ. ಅಪಘಾತದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲಾಗಿದೆ ಎಂದು ರೈಲ್ವೆ ತಿಳಿಸಿದೆ. ಈಸ್ಟ್ ಕೋಸ್ಟ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಅಶೋಕ್…

Read More

ನಟ ಸಲ್ಮಾನ್ ಖಾನ್ ಅವರ ‘ಸಿಕಂದರ್’ ಚಿತ್ರ ಬಿಡುಗಡೆಯಾದ ದಿನದಂದು ಅವರಿಗೆ ದೊಡ್ಡ ಹಿನ್ನಡೆಯಾಯಿತು. ಅಭಿಮಾನಿಗಳಿಂದ ಭಾರಿ ನಿರೀಕ್ಷೆಗಳ ನಡುವೆ ಈ ಚಿತ್ರ ಭಾನುವಾರ (ಮಾರ್ಚ್ 30) ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ ‘ಸಿಕಂದರ್’ ಚಿತ್ರ ಬಿಡುಗಡೆಗೆ ಒಂದು ದಿನ ಮೊದಲು ಶನಿವಾರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಎ. ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರವನ್ನು ವಿವಿಧ ಪೈರೇಟೆಡ್ ಸೈಟ್‌ಗಳಲ್ಲಿ ನೋಡಲಾಗುತ್ತಿದೆ. ‘ತಮಿಳು ರಾಕರ್ಸ್’, ‘ಮೂವಿ ರೂಲ್ಸ್’ ಮತ್ತು ‘ಫಿಲ್ಮಿಜಿಲ್ಲಾ’ ಸೇರಿದಂತೆ ವಿವಿಧ ಟೆಲಿಗ್ರಾಮ್ ಗುಂಪುಗಳಲ್ಲಿ ಇಡೀ ಚಿತ್ರವು HD ಯಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಈ ಪೈರಸಿ ಸೈಟ್‌ಗಳು ಆನ್‌ಲೈನ್‌ನಲ್ಲಿ ಚಲನಚಿತ್ರಗಳನ್ನು ಅಕ್ರಮವಾಗಿ ಡೌನ್‌ಲೋಡ್ ಮಾಡಲು ಅಗತ್ಯವಾದ ಲಿಂಕ್‌ಗಳನ್ನು ಒದಗಿಸುತ್ತವೆ. https://ainkannada.com/today-is-the-celebration-of-the-festival-of-ugadi-dont-do-these-things-even-if-you-make-a-mistake/ ಪೈರಸಿ ವಿರೋಧಿ ಕಾನೂನುಗಳು ಮತ್ತು ಅಕ್ರಮ ಸ್ಟ್ರೀಮಿಂಗ್ ಸೈಟ್‌ಗಳ ವಿರುದ್ಧ ಕಠಿಣ ಕ್ರಮಗಳ ಹೊರತಾಗಿಯೂ, ಪೈರಸಿ (ಕಾನೂನುಬಾಹಿರವಾಗಿ ಚಲನಚಿತ್ರಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುವುದು) ಬಾಲಿವುಡ್‌ಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ‘ಸಿಕಂದರ್’ ಚಿತ್ರವು ಚಿತ್ರಮಂದಿರಗಳಲ್ಲಿನ ಕ್ಯಾಮ್‌ಕಾರ್ಡರ್ ರೆಕಾರ್ಡಿಂಗ್‌ನಿಂದ ಸೋರಿಕೆಯಾಗಿರಬಹುದು ಎಂಬ…

Read More

ಆರ್‌ಸಿಬಿ ತಂಡವನ್ನು ಸದಾ ಅಪಹಾಸ್ಯ ಮಾಡುವ ಭಾರತ ಕ್ರಿಕೆಟ್‌ ತಂಡದ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ನ ಮಾಜಿ ಆಟಗಾರ ಅಂಬಾಟಿ ರಾಯುಡು ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಮತ್ತೆ ಗೇಲಿ ಮಾಡಿದ್ದರು. ಇದೀಗ CSK ವಿರುದ್ಧ RCB ಗೆಲ್ಲತ್ತಿದ್ದಂತೆ ತಮ್ಮ ವರಸೆಯನ್ನು ಬದಲಿಸಿದ್ದಾರೆ. https://ainkannada.com/today-is-the-celebration-of-the-festival-of-ugadi-dont-do-these-things-even-if-you-make-a-mistake/ ಹೌದು ಪ್ರಮುಖ ಸ್ಪೋರ್ಟ್ಸ್​ ವೆಬ್​ಸೈಟ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಂಬಾಟಿ ರಾಯುಡು, ಈ ಬಾರಿಯ ಆರ್​ಸಿಬಿ ತಂಡವು ಸ್ವಲ್ಪ ಭಿನ್ನವಾಗಿ ಕಾಣಿಸುತ್ತಿದೆ. ಅದರಲ್ಲೂ ತಂಡ ಅದ್ಭುತವಾಗಿದೆ ಎಂದೆನಿಸುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ತುಂಬಾ ವಿಶೇಷವಾಗಿದ್ದು, ಏನೋ ಸಾಧಿಸುವ ಹಂಬಲ ಆರ್​ಸಿಬಿ ತಂಡದಲ್ಲಿ ಕಾಣಿಸುತ್ತಿದೆ. ಹೀಗಾಗಿ ಆರ್​ಸಿಬಿ ತಂಡದಿಂದ ಈ ವರ್ಷ ಏನಾದರೂ ನಿರೀಕ್ಷಿಸಬಹುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

Read More